ಗಾಂಧಿನಗರದಲ್ಲಿ ಸದ್ದುಮಾಡ್ತಿದೆ ವಿರಾಟ ಪರ್ವ ಟೀಸರ್

0

ಮುದ್ದು ಮನಸ್ಸೇ ವಂತರ ಅರುಗೌಡ ಮತ್ತು ಅನಂತ್ ಶೈನ್ ಜೊತೆಯಾಗಿ ಬರ್ತಿರೋ ಸಿನಿಮಾ ವಿರಾಟಪರ್ವ. ಸಾಕಷ್ಟು ವಿಚಾರಗಳಿಂದ ಸುದ್ದಿ ಮಾಡ್ತಿರೋ ಸಿನಿಮಾ ಸದ್ಯ ಬಿಡುಗಡೆಯಾಗಿರೋ ಚಿತ್ರದ ಟೀಸರ್ ಗೆ ಎಲ್ಲೆಡೆ ಪ್ರಶಂಸೆಗೊಳ್ಳುತ್ತಿದೆ.

ಸ್ಕೆಚ್ ಪೋಸ್ಟರ್ ಗಳ ಮೂಲಕ ತುಂಬಾನೇ ಸದ್ದು ಮಾಡಿ ವೈರಲ್ ಆಗಿದ್ದ ಈ ವಿರಾಟ ಪರ್ವ ಮತ್ತೆ ಉತ್ಕೃಷ್ಟ ಟೀಸರ್ ಮೂಲಕ ಚಂದನವನದಲ್ಲಿ ಮತ್ತೊಮ್ಮೆ ಸೌಂಡ್ ಮಾಡ್ತಿದೆ. ಈ ಸಿನಿಮಾದಲ್ಲಿ ಪ್ರತಿಭಾವಂತ ಕಲಾವಿದರೆಲ್ಲಾ ಒಂದೆಡೆ ಸೇರಿ ಮಾಡಿರೋ ತರ ಇದೆ.


ಅನಂತ್ ಶೈನ್ ಆಕ್ಷನ್ ಕಟ್ ಹೇಳಿರೋ ಈ ಸಿನಿಮಾದ ಟೀಸರ್ ತುಂಬಾ ವಿಶೇಷವಾಗಿದ್ದು, ಹಲವಾರು ಪಾತ್ರಗಳು ಪ್ರೇಕ್ಷಕನ ತಲೆಯಲ್ಲಿ ಸಿನಿಮಾ ನೋಡುವ ಕುತೂಹಲ ಹುಟ್ಟಿಸುತ್ತದೆ. ಟೀಸರ್ ನೋಡಿದ್ರೆ ಅರು ಗೌಡ ಅವರಿಗೆ ಈ ಸಿನಿಮಾ ಬ್ರೇಕ್ ಕೊಡೊದ್ರಲ್ಲಿ ಡೌಟೇ ಇಲ್ಲ.

ಹಾಗೇನೆ ಅವರ ಜೊತೆ ಚಂದನವನದಲ್ಲಿ ಸದ್ಯ ಬ್ಯೂಸಿ ಇರೋ ಪ್ರತಿಭಾವಂತ ಕಲಾವಿದ ಯಶ್ ಶೆಟ್ಟಿ ಮತ್ತು ಮತ್ತೊರ್ವ ರಂಗಭೂಮಿ ಪ್ರತಿಭೆ ಸಾಕಷ್ಟು ಸಿನಿಮಾಗಳಲ್ಲಿ ನಟನೆ ಮೂಲಕ ಜೈ ಅನಿಸಿಕೊಂಡಿದ್ದ ಹೇಮಂತ್ ಸುಶೀಲ್ ಸಹ ಸಿನಿಮಾದಲ್ಲಿ ಬಹುಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಇನ್ನುಳಿದಂತೆ ಹರಿವು ಮತ್ತು ನಾತಿಚರಾಮಿ ಸಿನಿಮಾ ನಿರ್ದೇಶಕ ಮನ್ಸೋರೆ, ಬಲರಾಜ್ ವಾಡಿ, ಬಿಗ್ ಬಾಸ್ ಖ್ಯಾತಿಯ ಚೈತ್ರ ಕೊಟೂರು, ಪ್ರಕಾಶ್ ಹೆಗ್ಗೋಡು, ರಮೇಶ್ ಪಂಡಿತ್, ಪುಂಗ, ಅನ್ವಿತ ಸಾಗರ್, ವಿನಾಯಕ್ ಜೋಶಿ, ಸಿದ್ದು, ಹರಿಣಿ, ಸ್ಪಂಧನ, ಪ್ರಾಣ್ಯ ಹೀಗೆ ಸಾಕಷ್ಟು ಕಲಾವಿದರು ನಟಿಸಿದ್ದು, ಕುತೂಹಲ ಮೂಡಿಸಿದೆ.

ಎಸ್ ಆರ್ ಮೀಡಿಯಾ ಪ್ರೊಡಕ್ಷನ್ಸ್ ಅಡಿಯಲ್ಲಿ ಸುನಿಲ್ ರಾಜ್ ಬಂಡವಾಳ ಹೂಡಿದ್ದು, 60 ಕ್ಕೂ ಹೆಚ್ಚು ಕಲಾವಿದರು ಅಭಿನಯಿಸಿದ್ದಾರೆ. ಸಂದೀಪ್ ಬಿ ಹೆಚ್ , ರಘು ನಿಡುವಳ್ಳಿ ಮತ್ತು ನಿರ್ದೇಶಕ ಅನಂತ್ ಶೈನ್ ಮೂವರು ಚಿತ್ರಕ್ಕೆ ಸಂಭಾಷಣೆ ಬರೆದಿದ್ದು, ಕುಮಾರ್ ಮತ್ತು ಶಿವಸೇನಾ ಚಿತ್ರಕ್ಕೆ ಕ್ಯಾಮೆರಾ ಕೈಚಳಕ ತೋರಿಸಿದ್ದಾರೆ.

ಚಿತ್ಕಕ್ಕೆ ವಿನೀತ್ ರಾಜ್ ಮೆನನ್ ಸಂಗೀತವಿದ್ದು, ಚಿತ್ರದ ನಾಲ್ಕು ಹಾಡುಗಳಿಗೆ ಕವಿರಾಜ್, ನಾಗೇಂದ್ರ ಪ್ರಸಾದ್, ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ.

ಏಪ್ರಿಲ್ ತಿಂಗಳ ಅಂತ್ಯಕ್ಕೆ ಚಿತ್ರ ತೆರೆಗೆ ತಲರಲು ತಂಡ ಸಿದ್ಧವಾಗಿದ್ದು, ಇಡೀ ತಂಡಕ್ಕೆ ನಮ್ ಕಡೆಯಿಂದ ಶುಭಹಾರೈಕೆ.

Leave A Reply

Your email address will not be published.