ಮೈಸೂರು ಪಬ್‌ನಲ್ಲಿ ಅಂದು ನಡೆದಿದ್ದೇನು? ದರ್ಶನ್‌ರ ವೈರಲ್ ವಿಡಿಯೋ ಹಿಂದಿನ ಅಸಲಿ ಕತೆ ಬಿಚ್ಚಿಟ್ಟ ರಚಿತಾ ರಾಮ್

ಸ್ಯಾಂಡಲ್‌ವುಡ್‌ನಲ್ಲಿ ನಟ ದರ್ಶನ್‌ಗೆ ವಿವಾದಗಳು ಹೊಸದಲ್ಲ. ಆಗಾಗ್ಗೆ ನಾನಾ ಕಾರಣಗಳಿಂದ ದರ್ಶನ್ ವಿವಾದಗಳಿಗೆ ಗುರಿಯಾಗುತ್ತಿರುತ್ತಾರೆ. ನಟ ದರ್ಶನ್‌ ಅವರ ನೇರ ಮಾತನ್ನು ಜನರು ಬೇರೆ ರೀತಿಯಲ್ಲಿ ವ್ಯಕ್ತಪಡಿಸಿ ವಿವಾದಕ್ಕೆ ಗುರಿ ಮಾಡಿಸುತ್ತಿದ್ದರು. ಅದೇ ರೀತಿ ಇತ್ತೀಚೆಗೆ ದರ್ಶನ್ ಅವರದ್ದು ಎನ್ನಲಾದ ವಿಡಿಯೋ ಒಂದು ಸಖತ್‌ ವೈರಲ್ ಆಗಿತ್ತು. ಮೈಸೂರಿನ ಸೋಷಿಯಲ್ಸ್‌ನ ಪಬ್‌ನಲ್ಲಿ ದರ್ಶನ್ ಮೈಕ್‌ನಲ್ಲಿ ಯಾರಿಗೋ ಅವಾಚ್ಯವಾಗಿ ಬೈಯ್ಯುತ್ತಿರುವ ವಿಡಿಯೋ ಅದಾಗಿತ್ತು. ಅದನ್ನು ಯಾರೋ ಕೆಳಗೆ ನಿಂತುಕೊಂಡು ದೂರದಿಂದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.

ಆ ವಿಡಿಯೋ ಇಟ್ಟುಕೊಂಡು ಹಲವರು ದರ್ಶನ್‌ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಆ ವಿಡಿಯೋದಲ್ಲಿ ಸಹ ದರ್ಶನ್ ಅವಾಚ್ಯವಾಗಿ ಯಾರನ್ನೋ ಬೈಯ್ಯುತ್ತಿದ್ದಿದ್ದು ಸ್ಪಷ್ಟವಾಗಿತ್ತು. ಆದರೆ ಆ ವಿಡಿಯೋದ ಅಸಲಿಯತ್ತೇನು? ದರ್ಶನ್‌ ಆ ದಿನ ಹಾಗೆ ಯಾರನ್ನೋ ಬೈಯ್ಯಲು ಕಾರಣವೇನು? ಎಂದು ಪ್ರತ್ಯಕ್ಷದರ್ಶಿ ನಟಿ ರಚಿತಾ ರಾಮ್ (Actress Rachita Ram) ಇದೀಗ ವಿವರಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ರಚಿತಾ ರಾಮ್, ”ನಮ್ಮ ‘ಕ್ರಾಂತಿ’ ಸಿನಿಮಾದ ಮೊದಲ ಹಾಡು ಬಿಡುಗಡೆ ಆಗಿ ಚೆನ್ನಾಗಿ ಹೋಗುತ್ತಿತ್ತು. ಹಾಗಾಗಿ ನಾವೆಲ್ಲರೂ ಸೇರಿ ಪಾರ್ಟಿ ಮಾಡೋಣವೆಂದು ದರ್ಶನ್‌ರ ಆಪ್ತರದ್ದೇ ಆಗಿರುವ ಮೈಸೂರಿನ ಸೋಷಿಯಲ್ಸ್‌ಗೆ ಹೋಗಿದ್ದೆವು. ದರ್ಶನ್‌ರ ಆಪ್ತರು, ಇಡೀ ಸೋಷಿಯಲ್ಸ್‌ ಅನ್ನು ನಮಗೆ ಮಾತ್ರ ನೀಡಲು ಮುಂದಾದರು. ಆದರೆ ದರ್ಶನ್ ಒಪ್ಪದೆ, ಹಾಗೆ ಮಾಡಿದರೆ ನಿಮ್ಮ ವ್ಯಾಪಾರಕ್ಕೆ ತೊಂದರೆ ಆಗುತ್ತದೆ. ಸಾರ್ವಜನಿಕರಿಗೂ ಅವಕಾಶ ಕೊಡಿ, ನಾವು ಸಿನಿತಂಡದವರು ಪ್ರತ್ಯೇಕವಾಗಿ ಇರ್ತೀವಿ, ಅವರು ಪ್ರತ್ಯೇಕವಾಗಿ ಇರಲಿ ಎಂದರು” ಎಂದು ಅಂದು ನಡೆದ ಘಟನೆ ವಿವರಿಸಿದ್ದಾರೆ.

”ಸೆಲೆಬ್ರೇಷನ್ ನಡೆಯುತ್ತಿತ್ತು. ನಾವು, ದರ್ಶನ್‌ರ ಗೆಳೆಯರು, ಸಿನಿತಂಡ ಎಲ್ಲರೂ ಇದ್ವಿ, ಪಾರ್ಟಿ ರಾತ್ರಿ ಒಂದು ಗಂಟೆವರೆಗೆ ನಡೆಯುತ್ತಲೇ ಇತ್ತು. ಅಂದು ಶನಿವಾರ ಸಹ ಆಗಿದ್ದರಿಂದ ಸೋಷಿಯಲ್ಸ್‌ನಲ್ಲಿ ಬೇರೆಯವರು ಸಹ ಹೆಚ್ಚಾಗಿಯೇ ಇದ್ದರು. ಎಲ್ಲರಿಗೂ ಒಂದೇ ಫ್ಲೋರ್ ಇತ್ತು. ನಾವೆಲ್ಲ ಡ್ಯಾನ್ಸ್ ಮಾಡ್ತಾ ಇದ್ವಿ. ಆಗ ಯಾರೋ ಒಬ್ಬ ಹುಡುಗ ಒಬ್ಬ ಹುಡುಗಿಯ ಫೋಟೊ ತೆಗೆದಿದ್ದಾನೆ. ನಮ್ಮ ಫೋಟೊ, ವಿಡಿಯೋ ಸಹ ಮಾಡಿದ. ಅದನ್ನು ಬೌನ್ಸರಗಳು ನೋಡಿ ದರ್ಶನ್‌ ಅವರಿಗೆ ವಿಷಯ ಮುಟ್ಟಿಸಿದರು” ಎಂದು ದರ್ಶನ್ ಮಾತನಾಡುವ ಮುಂಚೆ ಏನು ನಡೆಯಿತು ಎಂದು ರಚಿತಾ ರಾಮ್‌ ವಿವರಿಸಿದ್ದಾರೆ.

ಇದನ್ನೂ ಓದಿ : ಕಿರಿಕ್‌ ಪಾರ್ಟಿಯ ಸಾನ್ವಿ ಪಾತ್ರ ಅಪಾರ ಪ್ರೀತಿ ,ಮೆಚ್ಚುಗೆ ತಂದುಕೊಟ್ಟಿದೆ ಎಂದ ರಶ್ಮಿಕಾ ಮಂದಣ್ಣ

ಇದನ್ನೂ ಓದಿ : ನಟಿ ರಶ್ಮಿಕಾ, ಶ್ರೀಲೀಲಾ ಹಾದಿ ಹಿಡಿದ ಪ್ರಶಾಂತ್‌ ನೀಲ್‌ : ಬೇಸರ ವ್ಯಕ್ತಪಡಿಸಿದ ನೆಟ್ಟಿಗರು

ಇದನ್ನೂ ಓದಿ : ಶಿವಮೊಗ್ಗ ಶಿಲ್ಪಿ ಕೈಯಲ್ಲಿ ಅರಳಿದ ಅಪ್ಪು ಪ್ರತಿಮೆ : ಗಣಿನಾಡಿನಲ್ಲಿ ಲೋಕಾರ್ಪಣೆ

ಯಾರೋ ಕೆಳಗಿನ ಫ್ಲೋರ್‌ನಲ್ಲಿ ಸ್ವಿಮ್ಮಿಂಗ್ ಪೂಲ್‌ ಬಳಿ ನಿಂತ ವ್ಯಕ್ತಿ ಆ ವಿಡಿಯೋವನ್ನು ಚಿತ್ರೀಕರಣ ಮಾಡಿದ್ದಾನೆ. ಘಟನೆಯ ಹಿಂದೆ ಮುಂದೆ ತಿಳಿದುಕೊಳ್ಳದೆ ವಿಡಿಯೋ ನೋಡಿ ದರ್ಶನ್‌ ಬಹಳ ಅಬ್ಯೂಸಿವ್ ಮನಸ್ಥಿತಿಯವರು, ಕೆಟ್ಟ ವ್ಯಕ್ತಿ ಎಂದೆಲ್ಲ ಪ್ರಚಾರ ಮಾಡುವುದು ತಪ್ಪು. ಆಡಿಯೋ ವಿಷಯದಲ್ಲಿ ಸಹ ಹೀಗೆಯೇ ಆಗಿದೆ. ದರ್ಶನ್ ಮಾತನಾಡಿರುವ ಪಾರ್ಟ್ ಅನ್ನು ಮಾತ್ರವೇ ವೈರಲ್ ಮಾಡಿ ದರ್ಶನ್ ಕೆಟ್ಟದಾಗಿ ಮಾತನಾಡಿದ್ದಾರೆ ಎನ್ನಲಾಗಿದೆ. ಆದರೆ ದರ್ಶನ್ ಹಾಗೆ ಮಾತನಾಡುವುದಕ್ಕೆ ಕಾರಣವೇನು? ಎಂಬುದನ್ನು ಯೋಚಿಸಿ, ದರ್ಶನ್‌ ಅವರು ಹಾಗೆ ಮಾತನಾಡಿದ್ದಾರೆಂದರೆ ಎದುರಿಗಿದ್ದ ವ್ಯಕ್ತಿ ಏನು ಮಾತನಾಡಿರಬಹುದು. ಏನು ಪ್ರವೋಕ್ ಮಾಡಿರಬಹುದು ಎಂದು ನಟಿ ರಚಿತಾ ರಾಮ್, ದರ್ಶನ್ ಪರವಾಗಿ ಮಾತನಾಡಿದ್ದಾರೆ.

What happened in Mysore pub that day? Actress Rachita Ram revealed the real story behind Darshan’s viral video

Comments are closed.