Jothe Jotheyali Serial :ಮುಕ್ತಾಯವಾಗುತ್ತಿದೆಯಾ ‘ಜೊತೆ ಜೊತೆಯಲಿ’ ಧಾರವಾಹಿ : ಸುಳಿವು ಬಿಚ್ಚಿಟ್ಟಿದೆ ಈ ವಿಡಿಯೋ

Jothe Jotheyali Serial : ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರವಾಹಿ ಎಂದರೆ ಗೊತ್ತಿಲ್ಲ ಎನ್ನುವವರು ಯಾರೂ ಇಲ್ಲ. ಧಾರವಾಹಿಯ ಟೈಟಲ್​​ ಟ್ರ್ಯಾಕ್​ನಿಂದ ಹಿಡಿದು ಆರ್ಯವರ್ಧನ್​ ಹಾಗೂ ಅನು ನಟನೆ, ಧಾರವಾಹಿ ತಂಡ ಹೀಗೆ ಎಲ್ಲವೂ ಧಾರವಾಹಿ ವೀಕ್ಷಕರಿಗೆ ಅಚ್ಚು ಮೆಚ್ಚು ಎಂಬಂತಾಗಿತ್ತು. ಆದರೆ ಇದೀಗ ಈ ಧಾರವಾಹಿ ಕೊನೆಯಾಗುತ್ತಿದೆ ಎಂಬ ಸುದ್ದಿಯೊಂದು ಹೊರ ಬಿದ್ದಿದೆ. ಈ ಮಾತಿಗೆ ಪುಷ್ಠಿ ಎಂಬಂತೆ ಜೊತೆ ಜೊತೆಯಲಿ ಧಾರವಾಹಿ ತಂಡ ಒಟ್ಟಾಗಿ ಕೇಕ್​ ಕಟ್​ ಮಾಡುತ್ತಿರುವ ವಿಡಿಯೋವೊಂದು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗ್ತಿದೆ.


ಧಾರವಾಹಿ ಅಂದರೆ ಯುವಕ – ಯುವತಿ ಪ್ರೀತಿಸುವುದು, ಬಳಿಕ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗುವುದು. ಅಥವಾ ಮನೆಯವರ ಒತ್ತಾಯಕ್ಕೆ ಮಣಿದು ಮದುವೆಯಾಗುವ ಇಬ್ಬರು ಶತ್ರುಗಳು ಬಳಿಕ ಹೇಗೆ ಒಬ್ಬರನ್ನೊಬ್ಬರು ಹೇಗೆ ಪ್ರೀತಿಸ್ತಾರೆ ಎಂಬ ಕತೆಯನ್ನೇ ಸಾಮಾನ್ಯವಾಗಿ ಹೊಂದಿರುತ್ತದೆ. ಆದರೆ ಈ ವಾಡಿಕೆಗಳನ್ನು ಮೀರಿ ನಿರ್ಮಾಣವಾದ ಧಾರವಾಹಿಯೇ ಜೊತೆ ಜೊತೆಯಲಿ. ಯಾವ ಧಾರವಾಹಿಗಳನ್ನು ಹೊಂದಿರದ ಡಿಫರೆಂಟ್​ ಕತೆಯನ್ನು ಈ ಧಾರವಾಹಿ ಹೊತ್ತು ತಂದಿತ್ತು.


45 ವರ್ಷದ ಆರ್ಯವರ್ಧನ್​ ಎಂಬ ಯಶಸ್ವಿ ಉದ್ಯಮಿ 20 ವರ್ಷದ ಅನು ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗುವುದೇ ಈ ಧಾರವಾಹಿ ಕತೆಯ ಎಳೆಯಾಗಿತ್ತು. ಕಾಲಾಂತರದಲ್ಲಿ ಆರ್ಯವರ್ಧನ್​ನನ್ನು ವಿಲನ್​ ರೀತಿಯಲ್ಲಿ ತೋರಿಸಲಾಗುತ್ತಿದೆ. ಆರ್ಯವರ್ಧನ್​ ಪಾತ್ರದಲ್ಲಿ ಸಾಹಸಸಿಂಹ ವಿಷ್ಣು ವರ್ಧನ್​ ಅಳಿಯ ಅನಿರುದ್ಧ ಬಣ್ಣ ಹಚ್ಚಿದ್ದು ವಿಶೇಷ. ಹಾಗೂ ನಾಯಕ ನಟಿಯಾಗಿ ಮೇಘಾ ಶೆಟ್ಟಿ ಪಾತ್ರ ನಿರ್ವಹಿಸುತ್ತಿದ್ದಾರೆ.


ಮೂಲಗಳಿಂದ ಸಿಕ್ಕಿರುವ ಮಾಹಿತಿಯ ಪ್ರಕಾರ ಧಾರವಾಹಿಯನ್ನು ಸುಮ್ಮನೇ ಯಾವುದೋ ಕತೆಯನ್ನು ಹಿಡಿದು ಎಳೆಯುವ ಬದಲು ಸುಂದರ ಕತೆಯ ಮೂಲಕವೇ ಅಂತ್ಯ ಕಾಣಿಸಲು ಧಾರವಾಹಿ ತಂಡ ನಿರ್ಧರಿಸಿದೆ ಎನ್ನಲಾಗಿದೆ. ಅಲ್ಲದೇ ಈಗಾಗಲೇ ಈ ಧಾರವಾಹಿಯ ಶೂಟಿಂಗ್​ ಕೂಡ ಮುಕ್ತಾಯಗೊಂಡಿದೆ ಎಂತಲೂ ಹೇಳಲಾಗ್ತಿದೆ. ಹೀಗಾಗಿ ಕೇಕ್​ ಮಾಡಲಾಗಿದೆ ಎಂಬ ಸುದ್ದಿ ಕೂಡ ಎಲ್ಲೆಡೆ ಹರಿದಾಡಿದೆ. ಆದರೆ ಈ ಯಾವುದರ ಬಗ್ಗೆಯೂ ಧಾರವಾಹಿ ತಂಡ ಅಥವಾ ಜೀ ಕನ್ನಡ ವಾಹಿನಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಇದನ್ನು ಓದಿ : Ravi Shastri : ಒಂದೇ ಸರಣಿ… 2 ಟೂರ್… ಹೊಸ ಅವತಾರದಲ್ಲಿ ಟೀಮ್ ಇಂಡಿಯಾ ಮಾಜಿ ಕೋಚ್ ಶಾಸ್ತ್ರಿ !

ಇದನ್ನೂ ಓದಿ : ಟೀಮ್ ಇಂಡಿಯಾ ಹೊಸ ಕ್ಯಾಪ್ಟನ್ ಬುಮ್ರಾಗೆ ಧೋನಿಯೇ ಸ್ಫೂರ್ತಿ

Will Jothe Jotheyali Serial Air Off Soon

Comments are closed.