ಉಡುಪಿ : MLA Raghupathi Bhatt : ಮಣಿಪಾಲ -ಅಂಬಾಗಿಲು ಗುಂಡಿಬೈಲು, ಕಲ್ಸಂಕ ರಸ್ತೆ ಅವ್ಯವಸ್ಥೆ ಬಗ್ಗೆ ಅಸಮಾಧಾನ ಹೊರಹಾಕಿದ ಯುವತಿಯೊಬ್ಬಾಕೆ ಶಾಸಕ ರಘುಪತಿ ಭಟ್ ವಿರುದ್ಧ ಆರೋಪ ಮಾಡಿ ವಿಡಿಯೋ ಹರಿಬಿಟ್ಟಿದ್ದು ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಕೋಮಲ್ ಜೆನಿಫರ್ ಎಂಬಾಕೆ ಶಾಸಕ ರಘುಪತಿ ಭಟ್ ಯಾವುದೇ ಕೆಲಸವನ್ನು ಸರಿಯಾಗಿ ಮಾಡೋದಿಲ್ಲ ಎಂದು ವಿಡಿಯೋದಲ್ಲಿ ಆರೋಪಿಸಿದ್ದಾರೆ.
ಯುವತಿಯ ವಿಡಿಯೋ ಉಡುಪಿ ಜಿಲ್ಲೆಯಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಾವು ರೋಡ್ ಟ್ಯಾಕ್ಸ್, ವೆಹಿಕಲ್ ಟ್ಯಾಕ್ಸ್, ಟೋಲ್ಗೇಟ್ ಟ್ಯಾಕ್ಸ್ ಹೀಗೆ ಎಲ್ಲಾ ಶುಲ್ಕಗಳನ್ನೂ ಪಾವತಿ ಮಾಡ್ತೇವೆ. ಆದರೂ ನಮಗೆ ಸೂಕ್ತ ಸೌಲಭ್ಯ ಸಿಗುತ್ತಿಲ್ಲ. ರಘುಪತಿ ಭಟ್ ಮನೆಗೆ ಹೋಗುವ ರಸ್ತೆ ಸಂಪೂರ್ಣ ಹೊಂಡಗುಂಡಿಗಳಿಂದ ತುಂಬಿ ಹೋಗಿದೆ ಎಂದು ಯುವತಿ ವಿಡಿಯೋದಲ್ಲಿ ಕಿಡಿಕಾರಿದ್ದಾರೆ.
ದುಬಾರಿ ವಾಹನಗಳಲ್ಲಿ ತೆರಳುವವರಿಗೆ ಇದು ಗೊತ್ತಾಗೋದಿಲ್ಲ. ಆದರೆ ಕಷ್ಟಪಟ್ಟು ದುಡಿದು ಬೈಕ್ ತೆಗೆದುಕೊಂಡವರಿಗೆ ಈ ಸಮಸ್ಯೆಯ ನಿಜವಾದ ನೋವು ಅರ್ಥವಾಗುತ್ತೆ ಎಂದು ತುಳುವಿನಲ್ಲಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
ಯುವತಿ ಆರೋಪ ಮಾಡಿರುವ ವಿಡಿಯೋ ವೈರಲ್ ಆದ ಬಳಿಕ ಈ ಸಂಬಂಧ ಉಡುಪಿಯಲ್ಲಿ ಸ್ಪಷ್ಟನೆ ನೀಡಿದ ಶಾಸಕ ರಘುಪತಿ ಭಟ್, ಸೋಶಿಯಲ್ ಮೀಡಿಯಾದಲ್ಲಿ ಮಹಿಳೆಯೊಬ್ಬರು ರಸ್ತೆಯ ಅವ್ಯವಸ್ಥೆ ಬಗ್ಗೆ ನನ್ನ ಗಮನವನ್ನು ಸೆಳೆದಿದ್ದಾರೆ. ನಾನು ಇದೇ ರಸ್ತೆಯಲ್ಲಿ ಮನೆಗೆ ಹೋಗುತ್ತೇನೆ. ಹೀಗಾಗಿ ರಸ್ತೆ ಸಮಸ್ಯೆಯ ಗಂಭೀರತೆಯ ಬಗ್ಗೆ ನನಗೂ ಅರಿವಿದೆ. ಈಗಾಗಲೇ ಒಂದು ಬಾರಿ ಪ್ಯಾಚ್ವರ್ಕ್ ಮಾಡಿದ್ದೆವು. ಆದರೆ ಕಳೆದ ಬಾರಿ ಬಂದ ಮಳೆಯಿಂದಾಗಿ ರಸ್ತೆ ಮತ್ತೆ ಹಾಳಾಗಿದೆ. ಇದು ಕಳಪೆ ಕಾಮಗಾರಿಯಲ್ಲ. ಮಳೆಯಿಂದಾಗಿ ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲ ಎಂದು ಹೇಳಿದರು.
ಇದನ್ನೂ ಓದಿ : ನಕಲಿ ಪೊಲೀಸ್, ಪತ್ರಕರ್ತರ ಖತರ್ನಾಕ್ ಗ್ಯಾಂಗ್ ಅಂದರ್
ಇದನ್ನೂ ಓದಿ : potholes on roads : ಗುಂಡಿ ಹುಡುಕಿ ಬಹುಮಾನ ಗೆಲ್ಲಿ : ಸರ್ಕಾರದ ಗಮನಸೆಳೆಯಲು ಮಂಗಳೂರಿನಲ್ಲೊಂದು ವಿಶಿಷ್ಟ ಸ್ಪರ್ಧೆ
ಇದನ್ನೂ ಓದಿ : Noida Supertech Twin Towers : ಕೊನೆಗೂ ನೆಲಸಮಗೊಂಡ ನೋಯ್ಡಾದ ಅವಳಿ ಕಟ್ಟಡಗಳು : ವಿಡಿಯೋ ವೈರಲ್
A woman who vented her anger against MLA Raghupathi Bhatt on social media
Comments are closed.