ಉಡುಪಿಯಲ್ಲಿ ಮನೆಯೆದುರು ನಿಲ್ಲಿಸಿದ್ದ ರಿಕ್ಷಾ, ಬೈಕ್ ಗೆ ಬೆಂಕಿ ಇಟ್ಟ ದುಷ್ಕರ್ಮಿಗಳು..!!!

ಉಡುಪಿ : ಮನೆ ಎದುರು ನಿಲ್ಲಿಸಿದ್ದ ಬೈಕ್ ಹಾಗೂ ಆಟೋ ರಿಕ್ಷಾಕ್ಕೆ ಬೆಂಕಿ ಇಟ್ಟಿರುವ ಘಟನೆ ಉಡುಪಿಯ ಬಡಗಬೆಟ್ಟು ಎಂಬಲ್ಲಿ ನಡೆದಿದೆ.

ಬಡಗುಬೆಟ್ಟುವಿನ ಎನ್.ಜಿ.ಒ ಕಾಲನಿ ನಿವಾಸಿ ಅಬ್ದುಲ್ ರಶೀದ್  ಅವರು ಬಜಾಜ್ ಆಟೋ ರಿಕ್ಷಾವನ್ನು ತನ್ನ ಮನೆ ಗೇಟಿನ ಎದುರು ನಿಲ್ಲಿಸಿದ್ದರು. ಆದರೆ ರಾತ್ರಿಯ ಹೊತ್ತಲ್ಲಿ ದುಷ್ಕರ್ಮಿಗಳು ಆಟೋ ರಿಕ್ಷಾಕ್ಕೆ ಬೆಂಕಿ ಇಟ್ಟು ಪರಾರಿಯಾಗಿದ್ದಾರೆ. ಆಟೋ ರೀಕ್ಷಾ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ಇನ್ನು ಬಡಗುಬೆಟ್ಟು ಬೈಲೂರುನಲ್ಲಿ ಹರೀಶ್ ಕುಮಾರ್ ಭಟ್ ಎಂಬವರು ಬಜಾಜ್ ಡಿಸ್ಕವರಿ ಮೋಟಾರ್ ಬೈಕನ್ನು ಮನೆಯ ಅಂಗಳದಲ್ಲಿ ನಿಲ್ಲಿಸಿದ್ದರು. ಅಪರಿಚಿತ ದುಷ್ಕರ್ಮಿಗಳು ಬೈಕ್‌ ಗೆ ಬೆಂಕಿ ಇಟ್ಟು ಪರಾರಿಯಾಗಿ ದ್ದಾರೆ. ಹರೀಶ್ ಅವರು ಮನೆಯಿಂದ ಹೊರ ಬಾರ ದಂತೆ ಮನೆಯ ಬಾಗಿಲಿನ ಚಿಲಕವನ್ನು ಹೊರಗಿನಿಂದ ಹಾಕಿ ಮೋಟಾರ್ ಬೈಕಿಗೆ ಬೆಂಕಿ ಹಚ್ಚಿದ್ದಾರೆ.

https://kannada.newsnext.live/asha-worker-panchayat-member-romance/amp/

ಎರಡೂ ಘಟನೆಯ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Comments are closed.