ಕೋಟ : ಊಟದಲ್ಲಿ ಗಾಜಿನ ಚೂರು ಬೆರೆಸಿ ಸಂಬಂಧಿಕರ ಕೊಲೆಗೆ ಯತ್ನ, ಆರೋಪಿ ಅರೆಸ್ಟ್‌

ಕೋಟ: ಅನ್ನ ಸಾಂಬಾರಿಗೆ ಗಾಜಿನ ಚೂರನ್ನು ಹಾಕಿ (mixing broken glass) ಸಂಬಂಧಿಕರ ಮನೆಯಲ್ಲಿ ಕೊಲೆಗೆ ಯತ್ನಿಸಿದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟತಟ್ಟು ಎಂಬಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿಯನ್ನು ಕೋಟ (Kota ) ಠಾಣೆಯ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಉಡುಪಿ ಜಿಲ್ಲೆಯ ಕೋಟತಟ್ಟು ಪಡುಕೆರೆಯ ನಿವಾಸಿ ವಿಜೇಂದ್ರ (28 ವರ್ಷ) ಎಂಬಾತನೇ ಬಂಧಿತ ಆರೋಪಿ. ಮಾರ್ಚ್‌ 12ರಂದು ಗೀತಾ ಎಂಬವರ ಮನೆಯವರು ಊಟ ಮಾಡುವ ವೇಳೆಯಲ್ಲಿ ಅನ್ನ ಹಾಗೂ ಸಾಂಬಾರ್‌ನಲ್ಲಿ ಗಾಜಿನ ಚೂರುಗಳು ಪತ್ತೆಯಾಗಿದ್ದವು. ಅಲ್ಲದೇ ನಂತರ ಎರಡು ದಿನಗಳ ಕಾಲವೂ ಗಾಜಿನ ಚೂರು ಪತ್ತೆಯಾಗುತ್ತಲೇ ಇತ್ತು. ಇದರಿಂದ ಮನೆಯವರೆಲ್ಲಾ ಆತಂಕಕ್ಕೆ ಒಳಗಾಗಿದ್ದರು.

ಈ ಮೂರು ದಿನಗಳ ಕಾಲ ಗೀತಾ ಅವರ ಮನೆಗೆ ವಿಜಯೇಂದ್ರ ಬಂದಿದ್ದ ಎನ್ನಲಾಗಿದೆ. ಹೀಗಾಗಿ ಗೀತಾ ಅನುಮಾನಗೊಂಡು ತನ್ನ ಅಡುಗೆ ಮನೆಯಲ್ಲಿ ಮೊಬೈಲ್‌ ಕ್ಯಾಮರಾ ಅವರನ್ನು ಅಡಗಿಸಿ ಇಟ್ಟಿದ್ದರು. ಎ.17 ರಂದು ಸಂಜೆ ವಿಜಯೇಂದ್ರ ಗೀತಾ ಅವರ ಮನೆಗೆ ಬಂದಿದ್ದ. ನೀರು ಕುಡಿಯುವ ನೆಪದಲ್ಲಿ ವಿಜಯೇಂದ್ರ ಅಡುಗೆ ಮನೆಗೆ ತೆರಳಿದ್ದಾನೆ. ಈ ವೇಳೆಯಲ್ಲಿ ತಾನು ತಂದಿದ್ದ ಗಾಜಿನ ಪುಡಿಯನ್ನು (mixing broken glass) ಅನ್ನ ಹಾಗೂ ಸಾಂಬಾರ್‌ಗೆ ಬರೆಸಿದ್ದಾನೆ. ವಿಜಯೇಂದ್ರ ಅಡುಗೆ ಮನೆಯಿಂದ ಹೊರಗೆ ಬರುತ್ತಲೇ ಗೀತಾ ತಾವು ಇಟ್ಟಿದ್ದ ಮೊಬೈಲ್‌ ಪರಿಶೀಲಿಸಿದ್ದಾರೆ. ಈ ವೇಳೆಯಲ್ಲಿ ಮೊಬೈಲ್‌ನಲ್ಲಿ ವಿಜಯೇಂದ್ರನ ಖತರ್‌ನಾಕ್‌ ಕೆಲಸ ಬೆಳಕಿಗೆ ಬಂದಿದೆ. ಈ ಕುರಿತು ಗೀತಾ ಅವರು ಕೋಟ (Kota) ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ವಿಜಯೇಂದ್ರ ಯಾವ ಕಾರಣಕ್ಕೆ ಈ ರೀತಿ ಕೃತ್ಯ ಎಸಗಿದ್ದಾನೆ ಅನ್ನೋದು ತಿಳಿದು ಬಂದಿಲ್ಲ.

ಇದನ್ನು ಓದಿ ; ಹುಬ್ಬಳ್ಳಿ : ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ಕಮ್ಮಾರ್‌ನ್ನು ಚಾಕುವಿನಿಂದ ಇರಿದು ಕೊಲೆ : 3 ಬಂಧನ

ಇದನ್ನೂ ಓದಿ : Actress Aarti Arrest : ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಕಿರುತೆರೆ ನಟಿ ಅರೆಸ್ಟ್

12 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ : 2 ಮಂದಿ ಅರೆಸ್ಟ್‌

12 ವರ್ಷದ ಬಾಲಕಿಯ ಮೇಲೆ ಓರ್ವ ಹೋಂಗಾರ್ಡ್ ಸೇರಿದಂತೆ ಇಬ್ಬರು ಸೇರಿ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಗಾಜಿಯಾಬಾದ್‌ ನಲ್ಲಿ ನಡೆದಿದೆ. ಇದೀಗ ಇಬ್ಬರು ಆರೋಪಿಗಳನ್ನು ಅತ್ಯಾಚಾರ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.

ತನ್ನ ಸಹೋದರನ ಮೊಬೈಲ್ ಒಡೆದಿದ್ದಕ್ಕೆ ತಾಯಿ ಆಕೆಯನ್ನು ನಿಂದಿಸಿದ್ದು, ಇದರಿಂದ ಕೋಪಗೊಂಡ ಬಾಲಕಿ ಮನೆ ಬಿಟ್ಟು ಹೋಗಿದ್ದಳು. ನಂತರ ಆಕೆ ಅಂಗಡಿಯೊಂದರಲ್ಲಿ ಮೊಬೈಲ್ ರಿಪೇರಿ ಮಾಡಿಸಿ ಇ-ರಿಕ್ಷಾವನ್ನು ಹತ್ತಿದ್ದಳು. ಅದೇ ರಿಕ್ಷಾದಲ್ಲಿ ಆರೋಪಿಯೋರ್ವ ಕೂಡ ಪ್ರಯಾಣಿಸುತ್ತಿದ್ದ. ಈ ವೇಳೆ ಆರೋಪಿಯು ಬಾಲಕಿಯನ್ನು ಹೋಮ್‌ ಗಾರ್ಡ್‌ ನ ಮನೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಹೋಮ್‌ ಗಾರ್ಡ್ ಹಾಗೂ ಇನ್ನೋರ್ವ ಆರೋಪಿ ಸೇರಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

ಅಲ್ಲದೇ ಅತ್ಯಾಚಾರದ ವಿಚಾರವನ್ನು ಯಾರಿಗಾದರು ಬಹಿತಂಗಪಡಿಸಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಕೂಡ ಹಾಕಿದ್ದಾರೆ. ಘಟನೆಯ ಬಳಿಕ ಮನೆಗೆ ತೆರಳಿದ ಬಾಲಕಿ ತನ್ನ ತಂದೆಗೆ ಘಟನೆಯ ಬಗ್ಗೆ ವಿವರಿಸಿದ್ದು, ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 ಡಿ (ಗ್ಯಾಂಗ್ ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Comments are closed.