ಮಂಗಳೂರು ಕಾರಾಗೃಹದಲ್ಲಿ ಖೈದಿಗಳ ನಡುವೆ ಮಾರಾಮಾರಿ : ಇಬ್ಬರು ಖೈದಿಗಳು ಗಂಭೀರ

ಮಂಗಳೂರು : ದರೋಡೆ ಪ್ರಕರಣದಲ್ಲಿ  ಬಂಧಿತನಾಗಿದ್ದ ಆರೋಪಿಯೋರ್ವ ಖೈದಿಗಳ ಮೇಲೆ ಹಲ್ಲೆ ನಡೆಸಿದ್ದು, ಘಟನೆಯಲ್ಲಿ ಇಬ್ಬರು ಖೈದಿಗಳು ಗಾಯಗೊಂಡಿರುವ ಘಟನೆ ಮಂಗಳೂರಿನ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.

ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಸಮೀರ್ ಹಾಗೂ ಅನ್ಸಾರ್ ಎಂಬವರು ಹಲ್ಲೆ ಮಾಡಿಕೊಂಡಿ ದ್ದಾರೆ. ಜೈಲಿನಲ್ಲಿದ್ದ ಚಮಕ ಹಾಗೂ ಅಡುಗೆ ಸಾಮಗ್ರಿ ಗಳನ್ನು ಬಳಸಿ ಹಲ್ಲೆ ನಡೆಸಲಾಗಿದೆ. ಘಟನೆಯಲ್ಲಿ ಮೂಲ್ಕಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಅನ್ಸಾರ್ ಹಾಗೂ ಮೂಡಬಿದರೆ ದರೋಡೆ ಪ್ರಕರಣ ದಲ್ಲಿ ಬಂಧಿತನಾಗಿದ್ದ ಜೈನುದ್ದೀನ್ ಎಂಬವರು ಗಾಯಗೊಂಡಿದ್ದಾರೆ.

ಗಾಯಗಳುಗಳನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಘಟನೆಗೆ ಕಾರಣ ತಿಳಿದುಬಂದಿಲ್ಲ‌‌. ಈ ಕುರಿತು ಜೈಲು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

Comments are closed.