ಸ್ಯಾಂಡಲ್ ವುಡ್ ಬಿಟ್ಟು ಹೊರಟ ಸ್ವೀಟಿ….! ರಾಧಿಕಾ ಕುಮಾರಸ್ವಾಮಿ ಮುಂದಿನ ಪಯಣ ಎಲ್ಲಿಗೆ?!

ಒಂದಿಷ್ಟು ಕಾಲ ಸ್ಯಾಂಡಲ್ ವುಡ್ ನಿಂದ ಅಂತರ ಕಾಯ್ದುಕೊಂಡು ಬಳಿಕ ಅದ್ದೂರಿ ಎಂಟ್ರಿಕೊಟ್ಟಿದ್ದ ರಾಧಿಕಾ ಕುಮಾರಸ್ವಾಮಿ ಈಗ ಸ್ಯಾಂಡಲ್ ವುಡ್ ಬಿಟ್ಟು ಹೊರಟಿದ್ದಾರೆ. ಅಯ್ಯೋ ರಾಧಿಕಾ ಇನ್ಮೇಲೆ ಸಿನಿಮಾ ಮಾಡಲ್ಲವಾ? ಅಂತಿದ್ದೀರಾ? ವಿಷ್ಯ ಅದಲ್ಲ. ರಾಧಿಕಾ ಕುಮಾರಸ್ವಾಮಿ ಕನ್ನಡದ ಜೊತೆ ತೆಲುಗಿಗೆ ಹಾರಿದ್ದಾರೆ.

ಇತ್ತೀಚಿಗೆ ನಾಯಕಿ ಪ್ರಧಾನ ಸಿನಿಮಾದಲ್ಲಿ ಮಾತ್ರ ನಟಿಸುತ್ತಿದ್ದ ರಾಧಿಕಾ ಕುಮಾರಸ್ವಾಮಿ ನಟ ಅರ್ಜುನ್ ಸರ್ಜಾ ಜೊತೆಗೆ ಕಾಂಟ್ರ್ಯಾಕ್ಟ್ ಸಿನಿಮಾಗೆ ಜೈ ಎಂದಿದ್ದರು. ಕನ್ನಡದಲ್ಲಿ ನಿರ್ಮಾಣವಾಗುತ್ತಿದ್ದ  ಈ ಸಿನಿಮಾ ತೆಲುಗಿನಲ್ಲೂ ತೆರೆ ಕಾಣಲಿದ್ದು, ಅದರಲ್ಲೂ ಸ್ವೀಟಿಯೇ ನಾಯಕಿಯಾಗಲಿದ್ದಾರೆ.

ಸಮೀರ್ ನಿರ್ದೇಶನದಲ್ಲಿ ತೆರೆಗೆ ಬರುತ್ತಿರುವ ಈ ಸಿನಿಮಾವನ್ನು ಕನ್ನಡದ ಜೊತೆ ತೆಲುಗಿನಲ್ಲೂ ನಿರ್ಮಿಸಲು ಸಜ್ಜಾಗಿದೆ ಚಿತ್ರತಂಡ.

ತೆಲುಗಿನಲ್ಲಿ ಕಾಂಟ್ರ್ಯಾಕ್ಟ್ ಸಿನಿಮಾಗೆ ಇದ್ದರು ಎಂದು ಹೆಸರಿಡಲಾಗಿದೆ. ಕನ್ನಡದಲ್ಲಿ ಅರ್ಜುನ್ ಸರ್ಜಾ ನಾಯಕರಾಗಿದ್ದರೇ, ತೆಲುಗಿನಲ್ಲಿ ಅಲ್ಲೂ ಅರ್ಜುನ್ ರಾಧಿಕಾಗೆ ಜೋಡಿಯಾಗಲಿದ್ದಾರಂತೆ.

ಆಕ್ಷ್ಯನ್ ಹಾಗೂ ಕೌಟುಂಬಿಕ ಕತೆಯನ್ನು ಹೊಂದಿರೋ ಈ ಸಿನಿಮಾ ಶೂಟಿಂಗ್ ನಡೆದಿದ್ದು, ಹಲವು ಪೋಟೋಗಳು ವೈರಲ್ ಆಗಿದೆ.

ರಾಧಿಕಾ ಕುಮಾರಸ್ವಾಮಿ ಅಭಿನಯದ ಭೈರಾದೇವಿ ಸಿನಿಮಾ ರಿಲೀಸ್ ಗೆ ಸಿದ್ಧವಾಗಿದ್ದು, ರವಿಚಂದ್ರನ್ ನಿರ್ದೇಶನದ  ರಾಜೇಂದ್ರ್ ಪೊನ್ನಪ್ಪ ಸಿನಿಮಾದಲ್ಲೂ ನಟಿಸಿದ್ದು, ಬಳಿಕ ತೆಲುಗಿನ ಇದ್ದರು ಹಾಗೂ ಕಾಂಟ್ರಾಕ್ಟ್ ನಲ್ಲಿ ಮಿಂಚಲು ಸಿದ್ಧವಾಗಿದ್ದಾರೆ.  

Comments are closed.