ಮಂಗಳೂರಿಗೆ ಹೈದ್ರಾಬಾದ್ ನಿಂದ ಗಾಜಾ ಸಾಗಾಟ : ಇಬ್ಬರ ಬಂಧನ

ಮಂಗಳೂರು : ಹೈದ್ರಾಬಾದ್ ನಿಂದ ಮಂಗಳೂರಿನ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವಿಕಾಸ್ ಅವರು ತಿಳಿಸಿದ್ದಾರೆ.

ಕೇರಳದ ಕಾಸರಗೋಡಿನ ಇಬ್ರಾಹಿಂದ ಮಡನ್ನೂರ ಮತ್ತು ಅಬ್ದುಲ್ ನಿಜಾದ್ ಬಂಧಿತ ಆರೋಪಿಗಳು. ಮಂಗಳೂರಿನ ಪಡೀಲ್ ಜಂಕ್ಷನ್ ನಿಂದ ಬಿಕರ್ನಕಟ್ಟೆಗೆ ಬರುವ ರಸ್ತೆಯಲ್ಲಿ ಪಡು ಮರೋಲಿ ಸೂರ್ಯ ನಾರಾಯಣ ದೇವಸ್ಥಾನದ ದ್ವಾರದ ಬಳಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರ ನೋಂದಣಿಯ ಕಾರಿನಲ್ಲಿ ಹೈದ್ರಾಬಾದ್ ನಿಂದ ಮಂಗಳೂರು ಹಾಗೂ ಕೇರಳಕ್ಕೆ ಗಾಂಜಾವನ್ನು ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ. ಬಂಧಿತರಿಂದ ಸುಮಾರು 3.6 ಲಕ್ಷ ಮೌಲ್ಯದ 24 ಕೆ.ಜಿ ಗಾಂಜಾ ಹಾಗೂ 2 ಲಕ್ಷ ಮೌಲ್ಯದ ಟೂರಿಸ್ಟ್ ಕಾರು ಹಾಗೂ 13 ಸಾವಿರ ಮೌಲ್ಯದ 3 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

Comments are closed.