ಮನೆ ಬಿಟ್ಟು ಬರಲು ಒಪ್ಪದ ಯುವತಿ : ಚಾಕುವಿನಿಂದ ಇರಿದ ಭಗ್ನ ಪ್ರೇಮಿ

ಬೆಳ್ತಂಗಡಿ : ಪ್ರೀತಿಸಿದ ಹುಡುಗಿ ಮನೆ ಬಿಟ್ಟು ಬರಲು ಒಪ್ಪದ ಹಿನ್ನಲೆಯಲ್ಲಿ ಭಗ್ನ ಪ್ರೇಮಿಯೊರ್ವ ಚಾಕುವಿನಿಂದ ಇರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಲಾಯಿಲ ಎಂಬಲ್ಲಿ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿ‌ ಪೂಂಜಾಲಕಟ್ಟೆಯ ನಿವಾಸಿ ಶಮೀರ್ (22 ವರ್ಷ) ಎಂಬಾತನೇ ಚಾಕುವಿನಿಂದ ಇರಿದ ಭಗ್ನ ಪ್ರೇಮಿ. ಲಾಯಿಲ ನಿವಾಸಿಯಾಗಿರುವ 21 ವರ್ಷದ ಯುವತಿ ಯೇ ಚಾಕು ಇರಿತಕ್ಕೆ ಒಳಗಾದವಳು.

ಶಮೀರ್ ಸುಮಾರು 5 ವರ್ಷಗಳಿಂದಲೂ ಯುವತಿಯನ್ನು ಪ್ರೀತಿಸುತ್ತಿ ದ್ದ. ಪದೇ ಪದೇ ಯುವತಿಯ ಬಳಿಯಲ್ಲಿ ಮನೆಬಿಟ್ಟು ಬರುವಂತೆ ಪೀಡಿಸಿತ್ತಿದ್ದ. ಆದರೆ ಯುವತಿ ಮನೆ ಬಿಟ್ಟು ಬರಲು ಒಪ್ಪಿರಲಿಲ್ಲ. ಇದರಿಂದ ಕೋಪಗೊಂಡ ಶಮೀರ್ ಯುವತಿಯ ಮನೆಗೆ ನುಗ್ಗಿ ಚಾಕು ವಿನಿಂದ ಮನಬಂದಂತೆ ಹಲ್ಲೆ ನಡೆಸಿದ್ದಾನೆ.

ಹಲ್ಲೆಗೊಳಗಾಗಿರುವ ಯುವತಿಯನ್ನು ಬೆಳ್ತಂಗಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಮನೆಯವರು ಶಮೀರ್ ನನ್ನು ಹಿದಿಡು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಬೆಳ್ತಂಗಡಿ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments are closed.