Udupi bike accident: ಉಡುಪಿಯಲ್ಲಿ ಭೀಕರ ರಸ್ತೆ ಅಪಘಾತ: ಬೈಕ್‌ ಸವಾರ ಸಾವು

ಉಡುಪಿ: (Udupi bike accident) ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಸ್ಕೂಟರ್‌ಗೆ ಢಿಕ್ಕಿ ಹೊಡೆದಿದ್ದು, ಪರಿಣಾಮ ಸ್ಕೂಟರ್‌ ಸವಾರ ಮಹೀಂದ್ರ ಪಿಕ್‌ ಅಪ್‌ ವಾಹನದ ಚಕ್ರದಡಿಗೆ ಸಿಲುಕಿ ಮೃತಪಟ್ಟ ಘಟನೆ ಪಡುಬಿದ್ರಿಯ ಜಂಕ್ಷನ್‌ ನಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ನೇಪಾಳ ಮೂಲದ ಲೋಕ್‌ ಬಹಾದ್ದೂರ್‌ ಕಡ್ಕ(42 ವರ್ಷ) ಎಂದು ಗುರುತಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಮೃತ ಲೋಕ್‌ ತನ್ನ ಪತ್ನಿಯೊಂದಿಗೆ ಬೈಕ್‌ ನಲ್ಲಿ ತೆರಳುತ್ತಿದ್ದು, ಈ ವೇಳೆ ಅದೇ ಕಡೆಗೆ ತೆರಳುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಸ್ಕೂಟರ್‌ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟರ್‌ ಸವಾರ ಮಹೀಂದ್ರ ಪಿಕ್‌ ಅಪ್‌ ವಾಹನದ ಚಕ್ರದಡಿಗೆ ಸಿಲುಕಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನೂ ಆತನ ಪತ್ನಿ ಮೀನಾ ಕಡ್ಕಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನೂ ಘಟನೆಯಲ್ಲಿ ಪಿಕ್‌ ಅಪ್‌ ನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ಅವರನ್ನು ಪಡುಬಿದ್ರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೇರಾದಲ್ಲಿ ಸೆರೆಯಾಗಿದೆ. ಇನ್ನೂ ಅಪಘಾತದಲ್ಲಿ ಸಾವನ್ನಪ್ಪಿದ ಲೋಕ್‌ ಬಹಾದ್ದೂರ್‌ ಕಡ್ಕ ದಂಪತಿ ಹದಿನೇಳು ವರ್ಷಗಳ ಹಿಂದೆ ಮಂಗಳೂರಿಗೆ ಬಂದು ನೆಲೆಸಿ ಪಿಜಿಗಳಲ್ಲಿ ಆಹಾರ ತಯಾರಿಸುವ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಸದ್ಯ ಘಟನೆಯ ಕುರಿತು ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

ಇದನ್ನೂ ಓದಿ : Child fell into washing machine: ನೀರು ತುಂಬಿದ ವಾಷಿಂಗ್‌ ಮೆಷಿನ್‌ ಗೆ ಬಿದ್ದ ಒಂದೂವರೆ ವರ್ಷದ ಮಗು

ಕೋಟೇಶ್ವರ: ಬೀಜಾಡಿ ಕ್ರಾಸ್‌ ಬಳಿ ಸರಣಿ ಅಪಘಾತ: ಇಬ್ಬರಿಗೆ ಗಾಯ

ವಕ್ವಾಡಿಯಿಂದ ಆಂಬುಲೆನ್ಸ್‌ ನಲ್ಲಿ ರೋಗಿಯನ್ನು ಮಣಿಪಾಲಕ್ಕೆ ಕರೆದೊಯ್ಯುವ ಸಂದರ್ಭ ಬೀಜಾಡಿ ಕ್ರಾಸ್‌ ಬಳಿ ಸರ್ವಿಸ್‌ ರಸ್ತೆಯಲ್ಲಿ ಅಂಬುಲೆನ್ಸ್‌ ಹಾದು ಹೋಗುತ್ತಿತ್ತು. ಬೀಜಾಡಿ ಕ್ರಾಸ್‌ ಬಳಿ ಅಂಬುಲೆನ್ಸ್‌ ಸರ್ವಿಸ್‌ ರಸ್ತೆಯಿಂದ ಹೆದ್ದಾರಿಗೆ ಬರುವಾದ ಕುಂದಾಪುರದಿಂದ ಉಡುಪಿನ ಕಡೆಗೆ ಹೋಗುವ ಲಾರಿ ಬಂದು ಆಂಬುಲೆನ್ಸ್‌ ನ ಹಿಂದುಗಡೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಆಂಬುಲೆನ್ಸ್‌ ಸರ್ವಿಸ್‌ ರಸ್ತೆಯಲ್ಲಿ ಬರುತ್ತಿದ್ದ ಟಿಪ್ಪರಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಆಂಬುಲೆನ್ಸ್‌ ನಲ್ಲಿ ರೋಗಿಯ ಜೊತೆಗಿದ್ದ ಉದಯ್‌ ಕುಮಾರ್‌ ಹೆಗ್ಡೆ ಹಾಗೂ ಬಾಬಿ ಶೆಡ್ತಿ ಎನ್ನುವವರಿಗೆ ಗಂಭೀರ ಗಾಯಗಳಾಗಿವೆ. ಅಂಬುಲೆನ್ಸ್‌ ಚಾಲಕ ಐಯೂಬು ಕೋಟೇಶ್ವರ ಪ್ರಾಣಾಪಯಾದಿಂದ ಪಾರಾಗಿದ್ದು, ಘಟನೆಯ ಬಳಿಕ ಸ್ಥಳೀಯರು ಆಂಬುಲೆನ್ಸ್‌ ನಲ್ಲಿದ್ದ ರೋಗಿ ಹಾಗೂ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಕೋಟೇಶ್ವರ ಎನ್‌ ಆರ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನೂ ಓದಿ : Lathi charge by police: ಬಜರಂಗದಳ ಕಾರ್ಯಕರ್ತರ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್‌: 12 ಮಂದಿಗೆ ಗಾಯ

ಇದನ್ನೂ ಓದಿ : Mumbai crime news: ಪ್ರೇಯಸಿಯನ್ನು ಕೊಂದು ಹಾಸಿಗೆಯ ಪೆಟ್ಟಿಗೆಯಲ್ಲಿ ಶವವನ್ನು ಬಚ್ಚಿಟ್ಟು ಪರಾರಿ

Udupi bike accident: Horrible road accident in Udupi: Bike rider dies

Comments are closed.