ಉಡುಪಿ : ಅಕ್ರಮ ‌ಕಸಾಯಿಖಾನೆ ಮೇಲೆ ದಾಳಿ : 6 ಮಂದಿಯ ಬಂಧನ

ಉಡುಪಿ : ಮನೆಯಲ್ಲಿಯೇ ಅಕ್ರಮವಾಗಿ ನಡೆಯುತ್ತಿದ್ದ ಕಸಾಯಿ ಖಾನೆಯ ಮೇಲೆ ಪೊಲೀಸರು ದಾಳಿ ನಡೆಸಿ 6 ಮಂದಿಯನ್ನು ಬಂಧಿಸಿದ ಘಟನೆ ಉಡುಪಿ ಜಿಲ್ಲೆಯ ಕಾಪು ಸಮೀಪದ ಮೂಳೂರಿನಲ್ಲಿ ನಡೆದಿದೆ.

ಮೂಳೂರಿನ ಸುನ್ನಿ ಸೆಂಟರ್ ಹಿಂಭಾಗದಲ್ಲಿ ಅಬ್ಬು ಮಹಮ್ಮದ್ ಎಂಬವರ ಮನೆಯಲ್ಲಿ ಅಕ್ರಮವಾಗಿ ಕಸಾಯಿಖಾನೆಯನ್ನು ನಡೆಸ ಲಾಗುತ್ತಿತ್ತು. ಈ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ‌. ಈ ವೇಳೆಯಲ್ಲಿ ಪೊಲೀಸರು 6 ಮಂದಿಯನ್ನು ಬಂಧಿಸಿದ್ದು, ಮೂರು ಮಂದಿ  ನಾಪತ್ತೆಯಾಗಿದ್ದಾರೆ. ಅಲ್ಲದೇ ನಾಲ್ಕು ಕರುಗಳನ್ನು ರಕ್ಷಿಸಿದ್ದಾರೆ.

ಮೂಳೂರು ನಿವಾಸಿ ಅಹಮ್ಮದ್ ಮನ್ಸೂರ್, ಮಹಮ್ಮದ್ ಅಜರುದ್ದೀನ್, ಮಹಮ್ಮದ್ ಹನೀಫ್, ಮಹಮ್ಮದ್ ಇಸ್ಮಾಯಿಲ್, ಚಿಕ್ಕಮಗಳೂರು ಕೊಪ್ಪ ನಿವಾಸಿ ನವಾಜ್, ಉನರಬ್ಬ ಚಂದ್ರನಗರ ಎಂಬವರೇ ಬಂಧಿತ ಆರೋಪಿಗಳು. ಮನೆಯ ಮಾಲೀಕ ಅಬ್ಬು ಮಹಮ್ಮದ್, ಇಸ್ಮಾಯಿಲ್ ಹಾಗೂ ರಫೀಕ್ ನಾಪತ್ತೆಯಾಗಿದ್ದಾರೆ. ಬಂಧಿತರಿಂದ 30‌ ಕೆ.ಜಿ. ಮಾಂಸ ವಶ ಪಡಿಸಿಕೊಳ್ಳಲಾಗಿದ್ದು, ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

Comments are closed.