ಉಡುಪಿ : ಜ್ಯೋತಿಷ್ಯ ‌ಹೇಳುವುದಾಗಿ ನಂಬಿಸಿ 7 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಮಹಿಳೆ

ಉಡುಪಿ : ಜ್ಯೋತಿಷ್ಯ ಹೇಳುವುದಾಗಿ‌ ನಂಬಿಸಿ ಮಹಿಳೆಯೋರ್ವಳು ಸುಮಾರು 7ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ‌‌ ಹಾಗೂ ನಗದು ದೋಚಿದ ಘಟನೆ ಉಡುಪಿಯ ನಿಟ್ಟೂರು ಸಮೀಪದ ರಾಜೀವ ನಗರದಲ್ಲಿ ನಡೆದಿದೆ.

ರಾಜೀವ ನಗರದ ಲಕ್ಷ್ಮೀ ಎಂಬವರ ಮನೆಗೆ ಬಂದ 30‌ವರ್ಷ ಪ್ರಾಯದ ಮಹಿಳೆಯೋರ್ವಳು ಜ್ಯೋತಿಷ್ಯ ಹೇಳುವುದಾಗಿ ನಂಬಿಸಿದ್ದಾಳೆ‌. ಜ್ಯೋತಿಷ್ಯ‌ ಹೇಳುವಾಗ ನಿಮ್ಮ ಮನೆಗೆ ಮಾಟ ಮಾಡಿಸಿದ್ದಾರೆ‌. ಇದಕ್ಕಾಗಿ ಲಕ್ಷ್ನೀ ಪೂಜೆಯನ್ನು ಮಾಡಿಸಬೇಕು. ಮನೆಯಲ್ಲಿರುವ ಚಿನ್ನಾಭರಣ ಹಾಗೂ ನಗದನ್ನು ತರುವಂತೆ ಹೇಳಿದ್ದಾಳೆ.

ಅಪರಿಚಿತ ಮಹಿಳೆಯನ್ನು ನಂಬಿದ ಲಕ್ಷ್ಮೀ ಮನೆಯಲ್ಲಿದ್ದ 7.36 ಲಕ್ಷ ಮೌಲ್ಯದ ಚಿನ್ನಾಭರಣ, 15 ಸಾವಿರ ರೂಪಾಯಿ ನಗದು ಹಣವನ್ನು ಬಾಕ್ಸ್ ನಲ್ಲಿ ಹಾಕಿ ತಂದು ಮಹಿಳೆಗೆ ಕೊಟ್ಟಿದ್ದಾರೆ‌. ಪೂಜೆ ಮುಗಿದ ನಂತರದಲ್ಲಿ ಮಹಿಳೆ ಬಾಕ್ಸ್ ವಾಪಾಸ್ ಕೊಟ್ಟು ಹೋಗಿದ್ದಾಳೆ. ಸ್ವಲ್ಪ ಹೊತ್ತಲ್ಲಿ ಬಾಕ್ಸ್ ಓಪನ್ ಮಾಡಿ ನೋಡಿದಾಗ ಅದರಲ್ಲಿ ಚಿನ್ನಾಭರಣ ಹಾಗೂ ನಗದು ಇರಲಿಲ್ಲ. ಅಪರಿಚಿತ ಮಹಿಳೆಯಿಂದ ಮೋಸ ಹೋಗಿರುವುದು ಅರಿವಾಗುತ್ತಿದ್ದಂತೆಯೇ ಪೊಲೀಸರಿಗೆ ದೂರು ನೀಡಿದ್ದಾರೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದ್ದು, ತನಿಖೆ ಆರಂಭಿಸಿದ್ದಾರೆ‌.

Comments are closed.