ಕೊರೊನಾ ಭಯ : ಒಂದೇ ಕುಟುಂಬದ ನಾಲ್ವರು ನೇಣಿಗೆ ಶರಣು‌

ಚಾಮರಾಜನಗರ : ಕೊರೊನಾ ವೈರಸ್ ಸೋಂಕಿ ಭಯ,  ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ನಾಲ್ವರು ನೇಣು ಬಿಗಿದು ಆತ್ಮಹತ್ಯೆ ‌ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಎಚ್.ಮೂಕಹಳ್ಳಿಯಲ್ಲಿ ನಡೆದಿದೆ.

ಮಹಾದೇವ ಸ್ವಾಮಿ, ಪತ್ನಿ ಮಂಗಳಮ್ಮ ಮಕ್ಕಳಾದ ಗೀತಾ, ಶ್ರುತಿ ಎಂಬವರೇ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡವರು. ಕಳೆದ 20 ದಿನಗಳ ಹಿಂದೆಯಷ್ಟೇ ಮಹಾದೇವ ಸ್ವಾಮಿ ಅವರು ಕೋವಿಡ್ ಸೋಂಕಿಗೆ ಒಳಗಾಗಿ ಗುಣಮುಖರಾಗಿದ್ದರು.‌ ಆದರೆ ಕೊರೊನಾ ಲಾಕ್‌ಡೌನ್ ನಿಂದ ಆರ್ಥಿಕ‌ ಸಂಕಷ್ಟಕ್ಕೆ ಸಿಲುಕಿ ಸಾಮೂಹಿಕ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.

ಕೊರೊನಾ ಹೆಮ್ಮಾರಿಯಿಂದಾಗಿ ಜನರು ತತ್ತರಿಸಿದ್ದರೆ,  ಇನ್ನೊಂದೆಡೆ ಲಾಕ್ ಡೌನ್ ಆರ್ಥಿಕ ಸಂಕಷ್ಟಕ್ಕೆ ನೂಕಿದೆ. ಈ‌ ನಡುವಲ್ಲೇ ಕುಟುಂಬವೊಂದು ದಾರುಣ ಸಾವು ಕಂಡಿದ್ದು ಮಾತ್ರ ದುರಂತವೇ ಸರಿ. ಈ ಕುರಿತು ಪ್ರಕರದ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments are closed.