illicit relationship : ಅಕ್ರಮ ಸಂಬಂಧಕ್ಕಾಗಿ ಬಾಲಕನ ರುಂಡವನ್ನೇ ಕತ್ತರಿಸಿದ ಕಿರಾತಕನ ಬಂಧನ

ಬೆಳಗಾವಿ : illicit relationship killed boy : ಅಕ್ರಮ ಸಂಬಂಧದ ಆಸೆಗಾಗಿ ನಡೆದಿರುವ ಕೊಲೆಗಳು ಅಷ್ಟಿಷ್ಟಲ್ಲ. ಅಕ್ರಮ ಸಂಬಂಧಕ್ಕೆ ಅಡ್ಡಿ ಬಂದ ಪತಿ ಅಥವಾ ಪತ್ನಿಯನ್ನು ಕೊಲೆ ಮಾಡಿದಂತಹ ಸಾಕಷ್ಟು ನಿದರ್ಶನಗಳನ್ನು ನಾವು ಕೇಳಿದ್ದೇವೆ. ಆದರೆ ಇಲ್ಲೊಂದು ಕಡೆಯಲ್ಲಿ ಅಕ್ರಮ ಸಂಬಂಧಕ್ಕೆ ಮಹಿಳೆ ಒಪ್ಪಿಲ್ಲ ಎಂಬ ಕಾರಣಕ್ಕೆ ಹತಾಶೆಗೊಂಡ ಪಾಪಿಯೊಬ್ಬ ಬಾಲಕನ ರುಂಡವನ್ನು ಕತ್ತರಿಸಿ ಅತ್ಯಂತ ಭೀಕರವಾಗಿ ಕೊಲೆ ಮಾಡಿದ್ದು ಈ ಪ್ರಕರಣವನ್ನು ಭೇದಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹೊಸೂರು ಗ್ರಾಮದ ನದಿಯೊಂದರಲ್ಲಿ ರುಂಡವಿಲ್ಲದ ಬಾಲಕನ ಮೃತದೇಹ ಪತ್ತೆಯಾಗಿತ್ತು. ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಬೆಳಗಾವಿ ಪೊಲೀಸರು ಕೊಲೆಗಾರನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಸೆಪ್ಟೆಂಬರ್​ 15ರಂದು ನಡೆದಿದ್ದ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಸ್ವತಃ ಬೆಳಗಾವಿ ಎಸ್ಪಿ ಡಾ.ಸಂಜೀವ್​ ಪಾಟೀಲ್​ ಮಾಹಿತಿ ನೀಡಿದ್ದಾರೆ.

ಹೊಸೂರು ಗ್ರಾಮದ ಸಂಬಂಧಿಕರ ಮನೆಯಲ್ಲಿ ವಾಸವಿದ್ದ ಮಾಲಪ್ಪ ಮಾನೆ(12) ಕೊಲೆಯಾಗಿದ್ದ.ಬಾಲಕನನ್ನು ಕೊಲೆ ಮಾಡಿ ಆತನ ರುಂಡವನ್ನು ದೇಹದಿಂದ ಬೇರ್ಪಡಿಸಿ ನದಿಗೆ ಎಸೆಯಲಾಗಿತ್ತು. ಈ ಪ್ರಕರಣ ಸಂಬಂಧ ಇದೀಗ ಬೆಳಗಾವಿ ಪೊಲೀಸರು ಹೊಸೂರು ಗ್ರಾಮದ ನೂರ್​ ಅಹ್ಮದ್​​ ಕೊಣ್ಣೂರನನ್ನು ಬಂಧಿಸಿದ್ದಾರೆ .ಶಾಲೆಯಿಂದ ಮನೆಗೆ ಮರಳುತ್ತಿದ್ದ ಬಾಲಕನನ್ನು ಕಿಡ್ನಾಪ್​ ಮಾಡಿದ್ದ ನೂರ್​ ಅಹಮದ್​ ಆತನನ್ನು ಕೊಲೆ ಮಾಡಿದ್ದಾನೆ ಎಂಬ ವಿಚಾರ ತನಿಖೆಯಲ್ಲಿ ತಿಳಿದು ಬಂದಿದೆ.

ಬಾಲಕನ ಸಂಬಂಧಿ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಲು ನೂರ್ ಅಹ್ಮದ್​​ ಯತ್ನಿಸಿದ್ದ. ಆದರೆ ಇದಕ್ಕೆ ಮಹಿಳೆ ಸಹಕಾರ ನೀಡಿರಲಿಲ್ಲ. ಇದರಿಂದ ಹತಾಶೆಗೆ ಒಳಗಾದ ನೂರ್ ಅಹಮದ್​ ಕಣ್ಣೂರು ಬಾಲಕನನ್ನು ಕೊಲೆ ಮಾಡಿ ಎಸ್ಕೇಪ್​ ಆಗಿದ್ದ. ಸೋದರತ್ತೆ ಮನೆಯಲ್ಲಿ ವ್ಯಾಸಂಗ ಮಾಡುವ ಉದ್ಧೇಶಕ್ಕೆ ವಾಸವಿದ್ದ ಬಾಲಕ ಕೊಲೆಯಾಗಿ ಹೋಗಿದ್ದಾನೆ. ಎಸ್ಪಿ ಡಾ. ಸಂಜೀವ್​ ಪಾಟೀಲ್​ ಮಾರ್ಗದರ್ಶನದಲ್ಲಿ ಯಮಕನಮರಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣ ಭೇದಿಸಿದ ಪೊಲೀಸರಿಗೆ ಸೂಕ್ತ ಬಹುಮಾನ ನೀಡುವುದಾಗಿ ಎಸ್ಪಿ ಘೋಷಣೆ ಮಾಡಿದ್ದಾರೆ.

ಇದನ್ನು ಓದಿ : Dhruva sarja Rayan Raj Sarja : ರಾಯನ್ ಸರ್ಜಾನೇ ನಮ್ಮ ಮನೆ ಮಗ : ನನಗೆ ಮಗ ಬೇಡ ಎಂದ ಧ್ರುವಸರ್ಜಾ

ಇದನ್ನೂ ಓದಿ : Syed Mushtaq Ali Trophy 2022 : ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ: ಕರ್ನಾಟಕ ಸಂಭಾವ್ಯ ತಂಡದಿಂದ ಕರುಣ್, ಸಮರ್ಥ್, ಸಿದ್ಧಾರ್ಥ್ ಔಟ್

Accused who killed boy for want of illicit relationship arrested

Comments are closed.