grandson who killed his grandfather :ಆಸ್ತಿ ಆಸೆಗಾಗಿ ತಾತನನ್ನೇ ಕೊಂದ ಪಾಪಿ ಮೊಮ್ಮಗ ಅಂದರ್​​

ತುಮಕೂರು : grandson who killed his grandfather : ಆಸ್ತಿ ವಿಚಾರ ಅಂತಾ ಬಂದಾಗ ಅನೇಕರಿಗೆ ಸಂಬಂಧಗಳು ಮರೆತು ಹೋಗಿರುವುದನ್ನು ನಾವು ಕೇಳಿದ್ದೇವೆ. ಅನೇಕ ಕಡೆಗಳಲ್ಲಿ ಆಸ್ತಿ ಆಸೆಗಾಗಿ ರಕ್ತ ಸಂಬಂಧಿಗಳೇ ಒಬ್ಬರಿಗೊಬ್ಬರ ಪ್ರಾಣಕ್ಕೆ ಕುತ್ತು ತಂದಂತಹ ಅನೇಕ ಪ್ರಕರಣಗಳು ವರದಿಯಾಗುತ್ತಲೇ ಇರುತ್ತದೆ. ಇದೀಗ ಇದೇ ಸಾಲಿಗೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚೇಳೂರು ಗ್ರಾಮದ ಪ್ರಕರಣವೊಂದು ಸೇರಿದೆ. ಎಂಟು ತಿಂಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣವೊಂದನ್ನು ಪೊಲೀಸರು ಭೇದಿಸಿದ್ದು ಇದು ಆಸ್ತಿ ಆಸೆಗಾಗಿ ನಡೆದ ಕೃತ್ಯ ಎಂಬ ಸತ್ಯವನ್ನು ಹೊರ ಕಕ್ಕಿಸಿದ್ದಾರೆ.


ಎಂಟು ತಿಂಗಳ ಹಿಂದೆ 75 ವರ್ಷ ಪ್ರಾಯದ ಗೋವಿಂದಪ್ಪ ಎಂಬವರನ್ನು ಕೊಲೆಗೈಯಲಾಗಿದ್ದು ಈ ಪ್ರಕರಣವನ್ನು ಭೇದಿಸಿದ ಪೊಲೀಸರಿಗೆ ಕೊಲೆಗಾರ ಮೊಮ್ಮಗನೇ ಎಂದು ತಿಳಿದು ಬಂದಿದೆ. ಮೋಹನ್​​ ತಾತನನ್ನು ಕೊಲೆ ಮಾಡಿದ್ದು ಈತನ ಜೊತೆಯಲ್ಲಿ ಈ ಕೃತ್ಯಕ್ಕೆ ಸಹಕಾರ ನೀಡಿದ ಆತನ ಸ್ನೇಹಿತರಾದ ಪ್ರಜ್ವಲ್​ ಹಾಗೂ ಚೇತನ್​​ನನ್ನೂ ಪೊಲೀಸರು ಬಂಧಿಸಿದ್ದಾರೆ.


ಕೊಲೆಯಾದ ಗೋವಿಂದಪ್ಪ ನಾಲ್ಕು ಎಕರೆ ಜಮೀನನ್ನು ಹೊಂದಿದ್ದರು. ಗೋವಿಂದಪ್ಪನಿಗೆ ಓರ್ವ ಮಗ ಹಾಗೂ ಮಗಳಿದ್ದಾರೆ. ಇಬ್ಬರಿಗೂ ಸಮನಾಗಿ ಆಸ್ತಿ ಹಂಚಬೇಕು ಎನ್ನುವುದು ಗೋವಿಂದಪ್ಪನ ವಾದವಾಗಿತ್ತು. ತಂದೆಯ ಈ ನಿರ್ಧಾರಕ್ಕೆ ಪುತ್ರ ವೆಂಕಟರಮಣಪ್ಪ ಕೂಡ ಸಮ್ಮತಿ ಸೂಚಿಸಿದ್ದರು. ಆದರೆ ಯಾವುದೇ ಕಾರಣಕ್ಕೂ ಚಿಕ್ಕಮ್ಮನಿಗೆ ಆಸ್ತಿ ನೀಡಲು ಬಯಸದ ವೆಂಕಟರಮಣಪ್ಪ ಪುತ್ರ ಮೋಹನ್​ ತನ್ನ ತಂದೆಗೆ ತಿಳಿಯದಂತೆ ತಾತನ ಕೊಲೆಗೆ ಸ್ಕೆಚ್​ ಹಾಕಿದ್ದ ಎನ್ನಲಾಗಿದೆ.


ತನ್ನ ಸ್ನೇಹಿತರ ಜೊತೆ ಸೇರಿ ಪ್ಲಾನ್​ ಮಾಡಿದ್ದ ಮೋಹನ್​ ಜನವರಿ 20ರಂದು ತಾತನನ್ನು ತೋಟದ ಬಳಿಗೆ ಕರೆದೊಯ್ದಿದ್ದ ಮೋಹನ್​ ಕಬ್ಬಿಣದ ರಾಡ್​ನಿಂದ ಅವರ ತಲೆಗೆ ಹೊಡೆದು ಕೊಲೆ ಮಾಡಿದ್ದ. ಬಳಿಕ ಅಲ್ಲೇ ಹಾಳು ಬಿದ್ದ ಗುಂಡಿಯಲ್ಲಿ ಗೋವಿಂದಪ್ಪನ ಮೃತದೇಹವನ್ನು ಹೂತಾಕಿದ್ದಾರೆ. ತನ್ನ ತಂದೆ ಕಾಣೆಯಾಗಿದ್ದಾರೆಂದು ಭಾವಿಸಿದ ವೆಂಕಟರಮಣಪ್ಪ ಚೇಳೂರು ಪೊಲೀಸ್​ ಠಾಣೆಯಲ್ಲಿ ಮಿಸ್ಸಿಂಗ್​ ಕಂಪ್ಲೇಂಟ್​ ದಾಖಲಿಸಿದ್ದರು.


ಕೊಲೆಯಾದ ದಿನದಿಂದ ಮೋಹನ್​ ತನ್ನ ಸ್ನೇಹಿತರಿಗೆ ಪ್ರತಿದಿನ ಎಣ್ಣೆ ಪಾರ್ಟಿ ಕೊಡಿಸುತ್ತಿದ್ದ. ಆದರೆ ಇತ್ತೀಚಿಗೆ ತನ್ನ ಇಬ್ಬರು ಸ್ನೇಹಿತರನ್ನು ದೂರ ಮಾಡಿಕೊಂಡಿದ್ದ. ಇದರಿಂದ ಮೂವರ ನಡುವೆ ವೈಮನಸ್ಯ ಮೂಡಿತ್ತು. ಕಳೆದ ವಾರ ಎಣ್ಣೆ ಕುಡಿದ ಮತ್ತಿನಲ್ಲಿ ಚೇತನ್​ ಹಾಗೂ ಪ್ರಜ್ವಲ್​ ಕೊಲೆ ರಹಸ್ಯವನ್ನು ಬಾಯ್ಬಿಟ್ಟಿದ್ದಾರೆ. ಇದಾದ ಬಳಿಕ ಗೋವಿಂದಪ್ಪನ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ ಸಂದರ್ಭದಲ್ಲಿ ಸಂಪೂರ್ಣ ಸತ್ಯಾಂಶ ಬೆಳಕಿಗೆ ಬಂದಿದ್ದು ಮೂವರನ್ನು ಬಂಧಿಸಿದ್ದಾರೆ .

ಇದನ್ನು ಓದಿ : Janaspandana program :ಸಾಕಷ್ಟು ವಿಘ್ನಗಳ ಬಳಿಕ ನಾಳೆ ನೆರವೇರಲಿದೆ ಬಿಜೆಪಿಯ ‘ಜನಸ್ಪಂದನ’ ಕಾರ್ಯಕ್ರಮ

ಇದನ್ನೂ ಓದಿ : coconut shell : ಕಸದಿಂದ ರಸ : ತೆಂಗಿನ ಚಿಪ್ಪಿನಿಂದ ನಿರ್ಮಾಣವಾಗ್ತಿದೆ ಸುಂದರ ಪೀಠೋಪಕರಣ

Arrest of grandson who killed his grandfather for property

Comments are closed.