Manju Pavagad’s brother:ಪತ್ರಕರ್ತನ ಸೋಗಿನಲ್ಲಿ ವಂಚನೆಗೆ ಯತ್ನ:ಬಿಗ್​ಬಾಸ್​ ಖ್ಯಾತಿಯ ಮಂಜು ಪಾವಗಡನ ಸಹೋದರನಿಗೆ ಬಿತ್ತು ಗೂಸಾ

ತುಮಕೂರು : Manju Pavagad’s brother : ಬಿಗ್​ಬಾಸ್​ ಸೀಸನ್​ ಎಂಟರ ವಿಜೇತ ಮಂಜು ಪಾವಗಡ ಬಗ್ಗೆ ಎಲ್ಲರಿಗೂ ತಿಳಿದಿದೆ. ಇದೀಗ ಅವರ ಸಹೋದರ ಪ್ರದೀಪ್​ ಪಾವಗಡ ಪತ್ರಕರ್ತನ ಸೋಗಿನಲ್ಲಿ ಪಾಲಿಕೆ ಸಿಬ್ಬಂದಿಗೆ ಬ್ಲಾಕ್​ ಮೇಲ್​ ಮಾಡಲು ಹೋಗಿ ಗೂಸಾ ತಿಂದಿದ್ದಾನೆ. ತುಮಕೂರು ಪಾಲಿಕೆ ಕಚೇರಿಯಲ್ಲಿಯೇ ಪ್ರದೀಪ್​ ಪಾವಗಡನಿಗೆ ಮಧ್ಯವರ್ತಿಗಳಿಂದ ಹಿಗ್ಗಾ ಮುಗ್ಗಾ ಗೂಸಾ ಬಿದ್ದಿದೆ.


ಪಾಲಿಕೆ ಸಿಬ್ಬಂದಿ ಬಳಿಕ ಪ್ರದೀಪ್​ ಪಾವಗಡ ಬರೋಬ್ಬರಿ ನಾಲ್ಕು ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದ ಎನ್ನಲಾಗಿದೆ. ಹಣ ನೀಡದೇ ಹೋದದ್ದಕ್ಕೆ ಪಾಲಿಕೆ ಸಿಬ್ಬಂದಿಯನ್ನು ಕೂಡಿ ಹಾಕಿ ಬ್ಲಾಕ್​ ಮೇಲ್​ ಮಾಡಿದ್ದಾನೆ. ಇದು ಮಾತ್ರವಲ್ಲದೇ ಪಾಲಿಕೆ ಸಿಬ್ಬಂದಿಗೆ ಅಶ್ಲೀಲ ಪದ ಬಳಕೆ ಮಾಡಿ ತನ್ನೊಂದಿಗೆ ರಾತ್ರಿ ಪೂರಾ ಮಲಗುವಂತೆ ಡಿಮ್ಯಾಂಡ್​ ಕೂಡ ಇಟ್ಟಿದ್ದ ಎನ್ನಲಾಗಿದೆ.


ಸತ್ಯ ವಿಸ್ಮಯ ವಾರಪತ್ರಿಕೆ ಸಂಪಾದಕ ಎಂದು ಹೇಳಿಕೊಂಡಿದ್ದ ಪ್ರದೀಪ್​ ಪಾವಗಡ, ತುಮಕೂರು ಮಹಾನಗರ ಪಾಲಿಕೆ ನಲ್ಮ್​ ವಿಭಾಗದ ಸಿಬ್ಬಂದಿ ದೀಪಿಕಾಗೆ ಪರಿಚಯವಾಗಿದ್ದ . ಸಂಘ , ಸಂಸ್ಥೆಗಳ ಹೆಸರಿನಲ್ಲಿ ಸಾಲ ಪಡೆಯುವ ಸೋಗಿನಲ್ಲಿ ಪಾಲಿಕೆ ಸಿಬ್ಬಂದಿಗೆ ಈತ ಪರಿಚಯವಾಗಿದ್ದ ಎನ್ನಲಾಗಿದೆ. 10 ಲಕ್ಷ ರೂಪಾಯಿ ಸಾಲ ಪಡೆಯವ ನೆಪದಲ್ಲಿ ದೀಪಿಕಾಗಳ ಸ್ನೇಹವನ್ನು ಬೆಳೆಸಿಕೊಂಡಿದ್ದ.


ಪ್ರದೀಪ್​ ಪಾವಗಡನನ್ನು ನಂಬಿದ್ದ ದೀಪಿಕಾ ಈತನಿಗೆ 10 ಲಕ್ಷ ರೂಪಾಯಿ ಸಾಲ ನೀಡಲು ಒಪ್ಪಿಕೊಂಡಿದ್ದಳು. ದೀಪಿಕಾ ಜೊತೆ ತಾನು ಮೊಬೈಲ್​ನಲ್ಲಿ ನಡೆಸಿದ್ದ ಎಲ್ಲಾ ಸಂಭಾಷಣೆಯನ್ನು ರೆಕಾರ್ಡ್ ಮಾಡಿಕೊಂಡಿದ್ದ. ಇದೇ ಆಡಿಯೋ ಇಟ್ಟುಕೊಂಡು ದೀಪಿಕಾಗೆ ನನಗೆ 10 ಲಕ್ಷ ರೂಪಾಯಿ ನೀಡಲೇಬೇಕು ಎಂದು ಬ್ಲಾಕ್​ಮೇಲ್​ ಮಾಡಲು ಆರಂಭಿಸಿದ್ದ . ಇಲ್ಲವಾದಲ್ಲಿ ನಿನ್ನನ್ನು ಕೆಲಸದಿಂದ ವಜಾ ಮಾಡಿಸುತ್ತೇನೆಂದು ಆವಾಜ್​ ಕೂಡ ಹಾಕಿದ್ದ ಎನ್ನಲಾಗಿದೆ.


ಇದರಿಂದ ಪಾರಾಗಬೇಕು ಅಂದರೆ ನನಗೆ ನಾಲ್ಕು ಲಕ್ಷ ರೂಪಾಯಿ ಲಂಚ ನೀಡಬೇಕು. ಇಲ್ಲವಾದಲ್ಲಿ ನನ್ನ ಸುದ್ದಿ ಪತ್ರಿಕೆಯಲ್ಲಿ ನಿನ್ನ ಬಗ್ಗೆ ಬರೆಯುತ್ತೇನೆ ಎಂದು ಬೆದರಿಕೆ ಕೂಡ ಹಾಕಿದ್ದ. ಆದರೆ ಈತನಿಗೆ ಹಣ ನೀಡಲು ದೀಪಿಕಾ ನಿರಾಕರಿಸಿದ್ದಾಳೆ. ಇದರಿಂದ ಕೆರಳಿದ ಪ್ರದೀಪ್​ ಪಾವಗಡ, ಆಕೆಯನ್ನು ಪಾಲಿಕೆ ಕಚೇರಿ ಕೋಣೆಯಲ್ಲಿ ಕೂಡು ಹಾಕಿ ಬ್ಲಾಕ್ಮೇಲ್​​ ಮಾಡಿದ್ದಾನೆ, ಆದರೆ ಈ ವಿಚಾರ ಪಾಲಿಕೆ ಮಧ್ಯವರ್ತಿಗಳಿಗೆ ತಿಳಿದಿದ್ದು ಪ್ರದೀಪ್​ ಪಾವಗಡ ಹಾಗೂ ಈತನ ಜೊತೆಯಿದ್ದ ಮೂವರು ಯುವತಿಯರಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.


ಚಪ್ಪಲಿಯಿಂದೆಲ್ಲ ಮಂಜು ಪಾವಗಡ ಸಹೋದರ ಪ್ರದೀಪ್​ ಪಾವಗಡನಿಗೆ ಥಳಿಸಿದ ಪಾಲಿಕೆ ಮಧ್ಯವರ್ತಿಗಳು ಬಳಿಕ ಈತನನ್ನು ತುಮಕೂರು ನಗರ ಠಾಣಾ ಪೊಲೀಸರ ವಶಕ್ಕೆ ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ತುಮಕೂರು ನಗರ ಠಾಣಾ ಪೊಲೀಸರು ಪ್ರದೀಪ್​ ಪಾವಗಡ ಸೇರಿದಂತೆ ಮೂವರು ಯುವತಿಯರನ್ನು ಬಂಧಿಸಿದ್ದಾರೆ.

ಇದನ್ನು ಓದಿ :DKS Crying: ಮಗುವಿನ ಮಾತು ಕೇಳಿ ಕಣ್ಣೀರಿಟ್ಟ ಡಿಕೆಶಿ

ಇದನ್ನೂ ಓದಿ : Siraj replaces Jasprit Bumrah: ಗಾಯಾಳು ಜಸ್ಪ್ರೀತ್ ಬುಮ್ರಾ ಬದಲು ಟೀಮ್ ಇಂಡಿಯಾ ಸೇರಿದ ಆರ್‌ಸಿಬಿ ವೇಗಿ ಸಿರಾಜ್

Attempt to cheat in the guise of a journalist: Manju Pavagad’s brother of Big Boss fame beaten up

Comments are closed.