bangalore acid attack accused nagesh : ಯುವತಿ ಮೇಲೆ ಆಸಿಡ್​ ದಾಳಿ ಪ್ರಕರಣ : ಆಸಿಡ್​ ನಾಗೇಶ್​ ತಮಿಳುನಾಡಿನಲ್ಲಿ ಬಂಧನ

ಬೆಂಗಳೂರು :bangalore acid attack accused nagesh : ಇಡೀ ರಾಜ್ಯ ರಾಜಧಾನಿಯಲ್ಲಿ ದೊಡ್ಡ ಮಟ್ಟಿಗೆ ಸದ್ದು ಮಾಡಿದ್ದ ಯುವತಿ ಮೇಲೆ ಆಸಿಡ್​ ದಾಳಿ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಕೊನೆಗೂ ರಾಜಧಾನಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರೀತಿ ಮಾಡಲು ನಿರಾಕರಿಸಿದಳು ಎಂಬ ಕಾರಣಕ್ಕೆ ಸುಂಕದಕಟ್ಟೆಯಲ್ಲಿ ಯುವತಿಯ ಮುಖಕ್ಕೆ ಆಸಿಡ್​ ಎರಚಿ ಆರೋಪಿ ನಾಗೇಶ್​ ತಲೆಮರೆಸಿಕೊಂಡಿದ್ದ . ಕಳೆದ 16 ದಿನಗಳಿಂದ ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡಿದ್ದ ನಾಗೇಶ್​​ನನ್ನು ಪೊಲೀಸರು ಇಂದು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ.


ಯುವತಿಗೆ ಆಸಿಡ್​ ಎರಚಿದ ಪ್ರಕರಣವು ಗಂಭೀರ ಸ್ವರೂಪ ಪಡೆಯುತ್ತಿದ್ದಂತೆಯೇ ಆರೋಪಿ ನಾಗೇಶ್​ ಕಣ್ಮರೆಯಾಗಿದ್ದ. ನಾಗೇಶ್​ ಪತ್ತೆಗಾಗಿ ವಿಶೇಷ ತಂಡ ರಚಿಸಿದ ಕಾಮಾಕ್ಷಿ ಪಾಳ್ಯ ಲೇಔಟ್​ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈತನ ಹಾವ ಭಾವ ಹಾಗೂ ಚಲನವಲನಗಳು ಗಮನಿಸಿದ್ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ . ಸ್ಥಳೀಯರ ಮಾಹಿತಿ ಆಧರಿಸಿದ ಪೊಲೀಸರು ಕೊನೆಗೂ ಆರೋಪಿಯನ್ನು ಬಂಧಿಸಿದ್ದಾರೆ.


ಸುಂಕದ ಕಟ್ಟೆಯ ಮುತ್ತೂಟ್​ ಫಿನ್​ಕಾರ್ಪ್​ ಬಳಿಯಲ್ಲಿ 23 ವರ್ಷದ ಯುವತಿಯ ಮೇಲೆ ನಾಗೇಶ್​ ಆಸಿಡ್​ ದಾಳಿ ನಡೆಸಿದ್ದ. ಯುವತಿಯನ್ನು ಪ್ರೀತಿಸುವಂತೆ ನಾಗೇಶ್​ ಪದೇ ಪದೇ ಪೀಡಿಸುತ್ತಿದ್ದ ಎನ್ನಲಾಗಿದೆ. ಆದರೆ ಇದಕ್ಕೆ ಯುವತಿ ನಿರಾಕರಿಸಿದ್ದಳು. ಆದರೆ ಯುವತಿಯ ನಿರ್ಧಾರವನ್ನು ಒಪ್ಪಿಕೊಳ್ಳಲು ನಾಗೇಶ್​​ ಸಿದ್ಧನಿರಲಿಲ್ಲ. ಬರೋಬ್ಬರಿ ಏಳು ವರ್ಷಗಳಿಂದ ಈ ಹಗ್ಗಜಗ್ಗಾಟ ನಡೆಯುತ್ತಿತ್ತು ಎನ್ನಲಾಗಿದೆ. ಮದುವೆಯಾಗಲು ಸಾಧ್ಯವೇ ಇಲ್ಲ ಎಂದು ಯುವತಿ ಹೇಳಿದ್ದಕ್ಕೆ ಕೋಪಗೊಂಡ ನಾಗೇಶ್​ ಮುತ್ತೂಟ್​ ಫಿನ್​ಕಾರ್ಪ್​ ಎದುರು ಆಸಿಡ್​ ಎರಚಿ ಎಸ್ಕೇಪ್​ ಆಗಿದ್ದ.


ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಯುವತಿಯನ್ನು ಎಮರ್ಜೆನ್ಸಿ ವಾರ್ಡ್​ನಿಂದ ಬರ್ನಿಂಗ್​ ವಾರ್ಡ್​ಗೆ ಶಿಫ್ಟ್​ ಮಾಡಲಾಗಿದೆ. ಯುವತಿಯು ನೀಡಿದ ಹೇಳಿಕೆ ಆಧರಿಸಿದ ಪೊಲೀಸರು ನಾಗೇಶ್​ ಪತ್ತೆಗಾಗಿ ಬಲೆ ಬೀಸಿದ್ದರು 16 ದಿನಗಳ ಕಾರ್ಯಾಚರಣೆಯ ಬಳಿಕ ಪೊಲೀಸರು ಆಸಿಡ್​ ನಾಗೇಶ್​ನನ್ನು ಬಂಧಿಸಿಲಾಗಿದೆ .

ಇದನ್ನು ಓದಿ : MS Dhoni : ಸಿನಿಮಾ ನಿರ್ಮಾಣಕ್ಕೆ ಮುಂದಾದ್ರು ಮಹೇಂದ್ರ ಸಿಂಗ್‌ ಧೋನಿ

ಇದನ್ನೂ ಓದಿ : Hebri Mother Daughter Murder Case : ತಾಯಿ ಮತ್ತು ಮಗಳ ಕೊಲೆ ಪ್ರಕರಣ : 48 ಗಂಟೆಯೊಳಗೆ ಆರೋಪಿ ಬಂಧನ

bangalore acid attack accused nagesh arrested in tamil nadu

Comments are closed.