Bangalore Crime News : ಮಗುವಿನ ಕಾಯಿಲೆ ಬಗ್ಗೆ ನೆಂಟರ ಕೊಂಕು ಮಾತು : ಹೆತ್ತ ಮಗುವನ್ನೇ ಕೊಂದ ತಾಯಿ

ಬೆಂಗಳೂರು : ರಾಜಧಾನಿಯನ್ನೇ (Bangalore Crime News)ನಡುಗಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ತನಿಖೆ ನಡೆಸಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ. ತಾಯಿಯೇ ಮಗುವನ್ನು ನಾಲ್ಕನೇ ಮಹಡಿಯಿಂದ ಎಸೆದು ಕೊಲೆ ಮಾಡಿದ್ದಳು. ಮಗು ಬುದ್ದಿಮಾಂದ್ಯವಾಗಿದ್ದ ಕಾರಣಕ್ಕೆ ತಾಯಿಯೇ ಕೊಲೆ ಮಾಡಿದ್ದಾಳೆ ಎಂದು ಆರೋಪಿಸಲಾಗಿತ್ತು. ಇದೀಗ ಪ್ರಕರಣದ ಸಮಗ್ರ ತನಿಖೆಯಾಗಿದ್ದು ಮಗುವಿಗೆ ಆಟಿಸಂ ಎಂಬ ಖಾಯಿಲೆಯಿತ್ತು ಎನ್ನಲಾಗಿದೆ. ಪ್ರತಿನಿತ್ಯ ಮಗುವನ್ನು ನೋಡಿಕೊಳ್ಳಲು ಸಾಧ್ಯವಿಲ್ಲ, ಮಗುವನ್ನು ನೋಡಿಕೊಳ್ಳುವುದೇ ಜೀವನವಾಗಿದೆ. ನನ್ನ ಜೀವನವನ್ನು ಎಂಜಾಯ್‌ ಮಾಡಲು ಆಗುತ್ತಿಲ್ಲ ಎಂಬ ಕಾರಣಕ್ಕೆ ಕೊಲೆ ಮಾಡಿದ್ದಾಳೆ ಎಂದು ದೋಷಾರೋಪ ಪಟ್ಟಿಯಲ್ಲಿ ಸಂಪಂಗಿ ರಾಮನಗರ ಪೊಲೀಸರು ಆರೋಪಿಸಿದ್ದಾರೆ.


ಇದೇ ಕಳೆದ ವರ್ಷ ಏಪ್ರಿಲ್‌ 8ರಂದು ನಡೆದಿದ್ದ ಮನಕುಲುಕುವ ಘಟನೆಗೆ ಅಂತ್ಯವನ್ನು ನೀಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಂಗಳೂರಿನಲ್ಲಿ ಹೆತ್ತ ಮಗುವನ್ನೇ ತಾಯಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಸಂಪಂಗಿರಾಮನಗರ ಪೊಲೀಸರು ದೋಷರೋಪ ಪಟ್ಟಿ ಸಲ್ಲಿಸಿದ್ದಾರೆ. ನಾಲ್ಕನೇ ಮಹಡಿ ಮೇಲಿಂದ ಹೆಣ್ಣುಮಗುವನ್ನು ಬಿಸಾಡಿದ್ದ ತಾಯಿ ಸುಷ್ಮಾ ಪ್ರಕರಣದ ಆರೋಪಿಯಾಗಿರುತ್ತಾರೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ ಎಸ್‌.ಆರ್‌.ನಗರ ಪೊಲೀಸರು ತಾಯಿಯ ಮೇಲೆ ವಿಸ್ತೃತವಾದ ಆರೋಪವನ್ನು ಮಾಡಿದ್ದಾರೆ.


ಸಂಪಂಗಿರಾಮನಗರ ಪೊಲೀಸರು ಸುಮಾರು 193 ಪುಟಗಳ ಚಾರ್ಜ್‌ಶೀಟ್‌ನ್ನು ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೇ ಮಗುವನ್ನು ಬಿಸಾಡಿದ್ದನ್ನು ಪ್ರತ್ಯಕ್ಷವಾಗಿ ಕಂಡಿರುವ ಮೂವರು ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ದಾಖಲಿಸಿಕೊಂಡು ಚಾರ್ಜ್‌ಶೀಟ್‌ನಲ್ಲಿ ಹಾಕಲಾಗಿದೆ. ಇನ್ನೂ ಈ ಕೇಸ್‌ನಲ್ಲಿ ಸುಮಾರು 34 ಸಾಕ್ಷಿಗಳ ಹೇಳಿಕೆಯನ್ನು ಪೊಲೀಸರು ದಾಖಲಿಸಿರುತ್ತಾರೆ. ಚಾರ್ಜ್‌ಶೀಟ್‌ನಲ್ಲಿ ಮಗುವಿಗೆ ಆಟಿಸಂ ಎನ್ನುವಂತಹ ಕಾಯಿಲೆಯಿಂದ ಬಳಲುತ್ತಿದ್ದು, ಇದು ಬುದ್ದಿಮಾಂದ್ಯ ಮಗುವಲ್ಲ ಎಂದು ಹೇಳಲಾಗಿದೆ.

ಇದನ್ನೂ ಓದಿ : MP Renukacharya : ಚಂದ್ರಶೇಖರ್ ಸಾವಿನ ಪ್ರಕರಣ ವಿನಯ್ ಗೂರೂಜಿ ಆಶ್ರಮದಲ್ಲಿ ತನಿಖೆ

ಇದನ್ನೂ ಓದಿ : Suicide Case : ಶಿವಮೊಗ್ಗದ ಖ್ಯಾತ ವೈದ್ಯರ ಸೊಸೆ ನೇಣಿಗೆ ಶರಣು

ಇದನ್ನೂ ಓದಿ : Bandemath swamiji suicide case : ಬಂಡೇಮಠ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ವಿಡಿಯೋ ರೆಕಾರ್ಡ್ ಮಾಡಿದ ಮೊಬೈಲ್ ಪತ್ತೆ


ಪ್ರತಿನಿತ್ಯ ಥೆರಫಿ ಮಾಡಿಸಲು ಮಗುವನ್ನು ತಾಯಿ ಸುಷ್ಮಾ ಕರೆದೊಯ್ಯುತ್ತಿದ್ದರು. ಇದೇ ಕಾರಣಕ್ಕೆ ಮಗುವಿನಿಂದ ಬೇಸತ್ತಿದ್ದರು, ಅಷ್ಟೇ ಅಲ್ಲದೇ ಕಾರ್ಯಕ್ರಮಕ್ಕೆ ಹೋದಾಗ ಸಂಬಂಧಿಕರ ಕೊಂಕು ಮಾತನ್ನು ಕೇಳಿಸಿಕೊಂಡು ಮನನೊಂದಿರುವ ತಾಯಿ ಮಗುವನ್ನುನೋಡಿಕೊಳ್ಳಲಾಗುವುದಿಲ್ಲ ಎಂದು ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಗುವನ್ನು ಎರಡು ಬಾರಿ ಕೊಲ್ಲಲು ಯತ್ನಿಸಿದ್ದು, ನಂತರ ಕಲ್ಲಿನ ಗಟ್ಟಿ ನೆಲ ಕೆಳಗಿರುವುದನ್ನು ನೋಡಿ ಮಗುವನ್ನು ಬಿಸಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿರುತ್ತದೆ.

Bangalore Crime News : Nendera’s gossip about child’s illness: A mother who killed her own child

Comments are closed.