Delhi Murder Case : ಒಂದೇ ಕುಟುಂಬದ ನಾಲ್ವರ ಇರಿದು ಕೊಂದ ಮಾದಕ ವ್ಯಸನಿ

ದೆಹಲಿ : ಮಾದಕ ವ್ಯಸನಿಯೋರ್ವ ಒಂದೇ ಕುಟುಂಬದ ನಾಲ್ವರನ್ನು ಇರಿದು ಕೊಲೆ (Delhi Murder Case) ಮಾಡಿರುವ ಘಟನೆ ದೆಹಲಿಯ ಪಾಲಂ ಪ್ರದೇಶದಲ್ಲಿರುವ ಮನೆಯೊಂದರಲ್ಲಿ ನಡೆದಿದೆ. ಇಬ್ಬರು ಸಹೋದರಿಯರು ಹಾಗೂ ಅವರ ತಂದೆ ಮತ್ತು ಅಜ್ಜಿಯನ್ನು ಇರಿದು ಕೊಲೆ ಮಾಡಲಾಗಿದೆ.

ದಿನೇಶ್ ಕುಮಾರ್ (42 ವರ್ಷ ), ದರ್ಶನ್ ಸೈನಿ (40 ವರ್ಷ), ಊರ್ವಶಿ (22 ವರ್ಷ) ಮತ್ತು ದೀವಾನೋ ದೇವಿ (75 ವರ್ಷ) ಮೃತಪಟ್ಟವರು. ಆರೋಪಿಯನ್ನು ಕೇಶವ್ (25 ವರ್ಷ) ಎಂದು ಗುರುತಿಸಲಾಗಿದೆ.ಮಂಗಳವಾರ ರಾತ್ರಿ 10.30ರ ಸುಮಾರಿಗೆ ಮನೆಗೆ ಬಂದ ಕೇಶವ್ ಮನೆಯಲ್ಲಿದ್ದವರನ್ನು ಚಾಕುವಿನಿಂದ ಕತ್ತುಸೀಳಿ ಕೊಲೆ ಮಾಡಿದ್ದಾನೆ.

ದೀಪಾವಳಿಯ ಸಮಯದಿಂದಲೂ ನಿರುದ್ಯೋಗಿಯಾಗಿರುವ ಕೇಶವ್ ಮಾದಕ ಸೇವನೆ ಮಾಡಿ ಕೊಲೆ ಮಾಡಿದ್ದಾರೆ ಎಂದು ವರದಿಯಾಗಿದೆ. ಆರೋಪಿ ಇತ್ತೀಚಿಗಷ್ಟೇ ಮಾದಕ ವ್ಯಸನ ಕೇಂದ್ರದಿಂದ ಬಿಡುಗಡೆಗೊಂಡಿದ್ದ. ನಾಲ್ವರ ಕತ್ತನ್ನು ಸೀಳಲು ತೀಕ್ಷ್ಣವಾದ ಮಾರಕಾಸ್ತ್ರವನ್ನು ಬಳಿಸಿದ್ದಾನೆ. ಅಲ್ಲದೇ ಹಲವರು ಬಾರಿ ಅವರನ್ನು ಚುಚ್ಚಿ ಚುಚ್ಚಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : Mangaluru blast FSL Report: ಮಂಗಳೂರು ಬಾಂಬ್‌ ಸ್ಫೋಟ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌: ಬೆಚ್ಚಿಬೀಳಿಸಿದ ಎಫ್‌ಎಸ್‌ಎಲ್‌ ವರದಿ

ಇದನ್ನೂ ಓದಿ : Mangalore blast: ಫ್ರಾನ್ಸ್‌ ಸ್ಪೂರ್ತಿ… ಮಂಗಳೂರಿನಲ್ಲಿ ಟ್ರಯಲ್‌..!

ಇದನ್ನೂ ಓದಿ : Mangaluru auto blast: ಆಟೋ ಬ್ಲಾಸ್ಟ್ ಪ್ರಕರಣ : ನಾಳೆ ಮಂಗಳೂರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ

ಇದನ್ನೂ ಓದಿ : Mangaluru blast update: ಹಿಂದೂ ವೇಷ ಧರಿಸಿ ಮಂಗಳೂರಿಗೆ ಬಂದಿದ್ದ ಶಾರೀಖ್‌ : ತನಿಖೆ ವೇಳೆ ಬಯಲಾಯ್ತು ಸ್ಪೋಟಕ ಮಾಹಿತಿ

ಘಟನೆಯ ಕುರಿತು ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆಯಲ್ಲಿ ಸ್ಥಳದಿಂದ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಮಾದಕ ದ್ರವ್ಯದ ವ್ಯಚನದ ಚಟಕ್ಕೆ ಬಿದ್ದ ಆರೋಪಿಯಿಂದಾಗಿ ನಾಲ್ವರ ಪ್ರಾಣಪಕ್ಷಿ ಹಾರಿ ಹೋಗಿದೆ.

Delhi Murder Case: A drug addict stabbed to death four members of the same family

Comments are closed.