Ex-lover murder: ಉತ್ತರ ಪ್ರದೇಶದಲ್ಲಿ ರಾಕ್ಷಸಿ ಕೃತ್ಯ; ಮಾಜಿ ಪ್ರೇಯಸಿಯನ್ನು ಕೊಂದು ದೇಹವನ್ನು 6 ಭಾಗಗಳಾಗಿ ತುಂಡು ಮಾಡಿದ ದುರುಳ

ಉತ್ತರ ಪ್ರದೇಶ: Ex-lover murder: ದೆಹಲಿಯಲ್ಲಿ ನಡೆದ ಶೃದ್ಧಾ ವಾಲ್ಕರ್ ಕೊಲೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ದೇಶದ ಹಲವೆಡೆ ದಿನಕ್ಕೊಂದರಂತೆ ಭೀಕರ ಹತ್ಯೆ ಕೇಸ್ ಗಳು ವರದಿಯಾಗುತ್ತಿವೆ. ಉತ್ತರ ಪ್ರದೇಶದಲ್ಲೂ ಇಂಥದ್ದೇ ಪ್ರಕರಣವೊಂದು ನಡೆದಿದ್ದು, ಮಾಜಿ ಪ್ರೇಯಸಿಯನ್ನೇ ಕೊಂದ ಪ್ರೇಮಿ ಆಕೆಯ ದೇಹವನ್ನು 6 ತುಂಡುಗಳಾಗಿ ಕತ್ತರಿಸಿ ಹಲವೆಡೆ ಎಸೆದಿದ್ದಾನೆ. ಸದ್ಯ ಆರೋಪಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ನವೆಂಬರ್ 9ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ನವೆಂಬರ್ 15ರಂದು ಅಜಂಗಢದ ಪಶ್ಚಿಮಿ ಗ್ರಾಮದ ಕೆರೆಯಲ್ಲಿ ಕತ್ತರಿಸಿದ ಸ್ಥಿತಿಯಲ್ಲಿ ಅರೆನಗ್ನ ಯುವತಿಯ ಮೃತದೇಹ ಪತ್ತೆಯಾಗಿದೆ. ಇದರ ತನಿಖೆ ನಡೆಸಿದ ಪೊಲೀಸರು ಪ್ರಮುಖ ಆರೋಪಿ ಫ್ರಿನ್ಸ್ ಯಾದವ್ ಎಂಬಾತನನ್ನು ಬಂಧಿಸಿದ್ದಾರೆ. ರುಂಡಭಾಗ ಎಸೆದ ಸ್ಥಳ ಪರಿಶೀಲನೆಗೆ ಆರೋಪಿಯನ್ನು ಕರೆದೊಯ್ದಾಗ ಆತ ಆ ಸ್ಥಳದಲ್ಲಿ ತಾನು ಬಚ್ಚಿಟ್ಟಿದ್ದ ನಾಡ ಬಂದೂಕಿನಿಂದ ಪೊಲೀಸರ ಮೇಲೆ ಗುಂಡು ಹಾರಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು ಈ ವೇಳೆ ಆತನ ಮೇಲೆ ಪೊಲೀಸರು ಗುಂಡು ಹಾರಿಸಿದ ಪರಿಣಾಮ ಆರೋಪಿ ಗಾಯಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: List of public holidays: 2023ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಪ್ರಕಟಿಸಿ ರಾಜ್ಯ ಸರಕಾರ

ಆರೋಪಿ ಪ್ರಿನ್ಸ್ ಯಾದವ್ ಮೃತ ಯುವತಿ ಆರಾಧನಾಳನ್ನು ಪ್ರೀತಿಸುತ್ತಿದ್ದ. ಆದರೆ ಕಳೆದ ಫೆಬ್ರವರಿಯಲ್ಲಿ ಬೇರೆ ಹುಡುಗನ ಜೊತೆ ಆರಾಧನಾಳ ಮದುವೆ ನಡೆದಿತ್ತು. ಇದರಿಂದ ಪ್ರಿನ್ಸ್ ಯಾದವ್ ಕೋಪಗೊಂಡಿದ್ದಾನೆ. ಆಕೆ ಮದುವೆಯಾದ ಮೇಲೂ ತನ್ನ ಜೊತೆ ಬರುವಂತೆ ಯಾದವ್ ಆರಾಧಾನಾಳನ್ನು ಒತ್ತಾಯಿಸಿದ್ದ. ಆಕೆ ಒಪ್ಪಿರಲಿಲ್ಲ. ಹೀಗಾಗಿ ನವೆಂಬರ್ 9ರಂದು ದೇವಸ್ಥಾನಕ್ಕೆ ಬರುವಂತೆ ಆಕೆಯನ್ನು ಪುಸಲಾಯಿಸಿ ಕರೆದೊಯ್ದಿದ್ದಾನೆ. ಆತನ ಮಾತನ್ನು ನಂಬಿ ಬಂದಿದ್ದ ಆಕೆಯನ್ನು ಆತ ಕಬ್ಬಿನ ಗದ್ದೆಗೆ ಕರೆದೊಯ್ದು ಕತ್ತು ಹಿಸುಕಿ ಸಾಯಿಸಿದ್ದಾನೆ. ಈತನ ಕೃತ್ಯಕ್ಕೆ ಸಹೋದರ ಸಂಬಂಧಿ ಸರ್ವೇಶ್ ಎಂಬಾತನೂ ಸಾಥ್ ನೀಡಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Mangaluru Autorickshaw Blast: “ಐಸಿಸ್ ಸಂಪರ್ಕದಲ್ಲಿದ್ದ ಶಾರೀಖ್, ಇನ್ನಷ್ಟು ಬಾಂಬ್ ಸ್ಫೋಟಕ್ಕೆ ಯೋಜನೆಯನ್ನು ರೂಪಿಸಿದ್ದ”‌: ಸಚಿವ ಕೆ.ಸುಧಾಕರ್

ಆರಾಧಳಾನ್ನು ಕೊಂದ ಬಳಿಕವೂ ಶವ ವಿಲೇವಾರಿಯಲ್ಲೂ ಪ್ರಿನ್ಸ್ ಚಾಲಾಕಿತನ ತೋರಿಸಿದ್ದಾನೆ. ಮೃತದೇಹವನ್ನು 6 ತುಂಡುಗಳಾಗಿ ಕತ್ತರಿಸಿ ರುಂಡ ಭಾಗ ಹೊರತುಪಡಿಸಿ ಉಳಿದೆಲ್ಲಾ ಭಾಗವನ್ನು ಬಾವಿಯಲ್ಲಿ ಎಸೆದಿದ್ದಾನೆ. ಆಕೆಯ ಬಟ್ಟೆಯನ್ನೂ ಬಾವಿಯಲ್ಲಿ ಹಾಕಿದ್ದಾನೆ. ಆದರೆ ರುಂಡವನ್ನು ಮಾತ್ರ ದೂರದ ಕೆರೆಯೊಂದರಲ್ಲಿ ಬಿಸಾಕಿದ್ದಾನೆ. ಇದರಿಂದ ಆಕೆಯ ಶವ ಸಿಕ್ಕರೂ ಯಾರೂ ಗುರುತು ಹಿಡಿಯಲು ಸಾಧ್ಯವಿಲ್ಲ ಎಂಬುವುದು ಆತನ ಆಲೋಚನೆ ಆಗಿತ್ತು ಎಂದು ಅಜಂಗಢದ ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ಆರ್ಯ ತಿಳಿಸಿದ್ದಾರೆ.

ಇನ್ನು ಈ ಕೊಲೆ ಕೇಸ್ ನಲ್ಲಿ ಪ್ರಿನ್ಸ್ ಯಾದವ್ ಕುಟುಂಬಸ್ಥರೂ ಪರೋಕ್ಷವಾಗಿ ಬೆಂಬಲ ನೀಡಿರುವ ಅನುಮಾನ ವ್ಯಕ್ತವಾಗಿದೆ. ಸರ್ವೇಶ್ ಸೇರಿದಂತೆ ಸುಮನ್, ರಾಜಾರಾಂ, ಪ್ರಮೀಳಾ ಯಾದವ್,ಶೀಲಾ, ಕಲಾವತಿ, ಮಂಜು ಈ ಹೆಸರುಗಳು ಪ್ರಕರಣದಲ್ಲಿ ಕೇಳಿಬರುತ್ತಿವೆ. ಬಂಧನಕ್ಕೊಳಗಾದ ಆರೋಪಿಯಿಂದ ನಾಡ ಬಂದೂಕು ಸೇರಿದಂತೆ ಹರಿತವಾದ ಆಯುಧವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Ex-lover murder: azamgarh youth arrested for strangling ex girlfriend chopping body into 6 pieces

Comments are closed.