wife commits suicide : ಪತಿಯಿಂದಲೇ ಪತ್ನಿಗೆ ಜಾತಿ ನಿಂದನೆ :ಮನನೊಂದ ಗೃಹಿಣಿ ಆತ್ಮಹತ್ಯೆಗೆ ಶರಣು

ತುಮಕೂರು : wife commits suicide : ಪತಿ – ಪತ್ನಿ ನಡುವೆ ಕಲಹಗಳು ಉಂಟಾಗೋದು ಸರ್ವೇ ಸಾಮಾನ್ಯ. ಆದರೆ ಈ ಜಗಳಗಳು ತೀರಾ ಮುಂದುವರಿಯುವಂತೆ ಇರಬಾರದು. ಗಂಡ – ಹೆಂಡಿರ ಜಗಳ ಉಂಡು ಮಲಗೋ ತನಕ ಎಂಬ ಮಾತಿನಂತೆ ಇಷ್ಟಕ್ಕೆ ಮಾತ್ರ ಮನಸ್ತಾಪಗಳು ಸೀಮಿತವಾಗಿದ್ದರೆ ಯಾವುದೇ ಸಮಸ್ಯೆ ಇರೋದಿಲ್ಲ . ಆದರೆ ತುಮಕೂರು ಜಿಲ್ಲೆ ತುಮಕೂರು ತಾಲೂಕಿನ ಅನುಪನಹಳ್ಳಿ ಎಂಬಲ್ಲಿ ಪತಿ – ಪತ್ನಿ ನಡುವಿನ ಕಲಹವು ಸಾವಿನಲ್ಲಿ ಅಂತ್ಯಗೊಂಡ ದಾರುಣ ಘಟನೆಯೊಂದು ವರದಿಯಾಗಿದೆ.


ಪತಿಯೊಂದಿಗಿನ ಪ್ರತಿನಿತ್ಯದ ಕಿತ್ತಾಟದಿಂದ ಬೇಸತ್ತ ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ಮಹಿಳೆಯನ್ನು 22 ವರ್ಷದ ಗೌರಮ್ಮ ಎಂದು ಗುರುತಿಸಲಾಗಿದೆ. ತುಮಕೂರು ಹೊರ ವಲಯದ ಮಂಚಗೊಂಡನಹಳ್ಳಿಯ ನಿವಾಸಿಯಾದ ಗೌರಮ್ಮ ಕಳೆದ ವರ್ಷವಷ್ಟೇ ಅನುಪನಹಳ್ಳಿಯ ನಿವಾಸಿ ರವಿತೇಜನನ್ನು ವಿವಾಹವಾಗಿದ್ದರು.


ಗೌರಮ್ಮಗೆ ಪೋಷಕರು ಇಲ್ಲದ ಕಾರಣ ಅವರ ಚಿಕ್ಕಮ್ಮನೇ ಇವರನ್ನು ಸಾಕಿ ಕೊನೆಗೆ ಮದುವೆಯನ್ನೂ ಮಾಡಿಕೊಟ್ಟಿದ್ದರು. ಪರಿಶಿಷ್ಟ ಜಾತಿಗೆ ಸೇರಿದ ಗೌರಮ್ಮನನ್ನು ತುಮಕೂರಿನ ಯಲ್ಲಾಪುರದ ಗಾರ್ಮೆಂಟ್ಸ್​​ವೊಂದರಲ್ಲಿ ಕೆಲಸ ಮಾಡುತ್ತಿದ್ದ ರವಿತೇಜ ಎಂಬಾತನ ಜೊತೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಪರಿಶಿಷ್ಟ ಜಾತಿಗೆ ಸೇರಿದ ಗೌರಮ್ಮಳನ್ನು ಮದುವೆಯಾಗಿ ಸರ್ಕಾರದಿಂದ 3 ಲಕ್ಷ ರೂಪಾಯಿ ಸೌಲಭ್ಯವನ್ನೂ ಪಡೆದಿದ್ದ ಈ ರವಿತೇಜ ಗೌರಮ್ಮನಿಗೆ ಪದೇ ಪದೇ ನೀವು ಕೆಳಗಿನ ಜಾತಿಯವಳು ಎಂದು ನಿಂದಿಸುತ್ತಿದ್ದ ಎನ್ನಲಾಗಿದೆ. ಇದರಿಂದ ಮನನೊಂದಿದ್ದ ಗೌರಮ್ಮ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಓದಿ : Pramod Muthalik : ಎಡಿಜಿಪಿಯವರೇ ನೀವು ಯಾವ ದೇಶದಲ್ಲಿದ್ದೀರಿ : ಸಾವರ್ಕರ್​ ಫೋಟೋ ಕುರಿತಂತೆ ಅಲೋಕ್​ ಕುಮಾರ್​ ಹೇಳಿಕೆಗೆ ಮುತಾಲಿಕ್​ ವ್ಯಂಗ್ಯ

ಇದನ್ನೂ ಓದಿ : Hubli Eidga Maidan : ಹುಬ್ಬಳ್ಳಿ ಈದ್ಗಾ ಮೈದಾನದ ಗಣೇಶ್ ಪೆಂಡಾಲ್ ನಿಂದ ಸಾವರ್ಕರ್ ಫ್ಲೆಕ್ಸ್, ಫೋಟೋ ಎತ್ತಂಗಡಿ

Husband castigated his wife: house wife commits suicide

Comments are closed.