ಕುಮಾರಧಾರ ನದಿಯಲ್ಲಿ ಮುಳುಗಿ ಯುವಕ ಸಾವು : ಸ್ನಾನಕ್ಕೆಂದು ತೆರಳಿದ್ದಾಗ ನಡೆಯಿತು ದುರ್ಘಟನೆ

0

ಕಡಬ : ಸ್ನೇಹಿತರೊಂದಿಗೆ ಸ್ನಾನಕ್ಕೆಂದು ನದಿಗೆ ಇಳಿದಿದ್ದ ಯುವಕನೋರ್ವ ನದಿಯಲ್ಲಿ ಮುಳುಗಿ ಸಾವನ್ನಪ್ಪಿರೊ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ನಡೆದಿದೆ.

ಕೊಯಿಲದ ಜನತಾ ಕಾಲೋನಿಯ ನಿವಾಸಿಯಾಗಿರೋ ಯೂಸೂಫ್ ಎಂಬವರ ಪುತ್ರ ಅರ್ಫಾದ್ (22) ವರ್ಷ ತನ್ನ ಸ್ನೇಹಿತರ ಜೊತೆಯಲ್ಲಿ ಕುಮಾರಧಾರ ನದಿಗೆ ಈಜುವುದಕ್ಕೆ ತೆರಳಿದ್ದ. ಈಜುವುದಕ್ಕೆ ನದಿಗೆ ಇಳಿದಾಗ ಅರ್ಫಾದ್ ನೀರಿನಲ್ಲಿ ಮುಳುಗಡೆಯಾಗಿದ್ದ, ಸ್ನೇಹಿತರು ಈಜಿಕೊಂಡು ದಡ ಸೇರಿದ್ದಾರೆ.

ನಂತರ ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಸ್ಥಳೀಯ ಈಜುಗಾರರ ನೆರವಿನೊಂದಿಗೆ ನದಿಯಲ್ಲಿ ಹುಡುಕಾಟ ನಡೆಸಲಾಯಿತು. ಶೋಧ ಕಾರ್ಯ ನಡೆಸುತ್ತಿದ್ದಂತೆಯೇ ಅರ್ಫಾದ್ ಶವ ಪತ್ತೆಯಾಗಿದೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಅಪಾರ ಸಂಖ್ಯೆಯಲ್ಲಿ ಜನರು ನದಿಯತ್ತ ಜಮಾಯಿಸಿದ್ದರು. ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.