ಕುಮಾರಧಾರ ನದಿಯಲ್ಲಿ ಮುಳುಗಿ ಯುವಕ ಸಾವು : ಸ್ನಾನಕ್ಕೆಂದು ತೆರಳಿದ್ದಾಗ ನಡೆಯಿತು ದುರ್ಘಟನೆ

0

ಕಡಬ : ಸ್ನೇಹಿತರೊಂದಿಗೆ ಸ್ನಾನಕ್ಕೆಂದು ನದಿಗೆ ಇಳಿದಿದ್ದ ಯುವಕನೋರ್ವ ನದಿಯಲ್ಲಿ ಮುಳುಗಿ ಸಾವನ್ನಪ್ಪಿರೊ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ನಡೆದಿದೆ.

Dealth 3
ಕುಮಾರಧಾರ ನದಿಯಲ್ಲಿ ಮುಳುಗಿ ಯುವಕ ಸಾವು : ಸ್ನಾನಕ್ಕೆಂದು ತೆರಳಿದ್ದಾಗ ನಡೆಯಿತು ದುರ್ಘಟನೆ 4

ಕೊಯಿಲದ ಜನತಾ ಕಾಲೋನಿಯ ನಿವಾಸಿಯಾಗಿರೋ ಯೂಸೂಫ್ ಎಂಬವರ ಪುತ್ರ ಅರ್ಫಾದ್ (22) ವರ್ಷ ತನ್ನ ಸ್ನೇಹಿತರ ಜೊತೆಯಲ್ಲಿ ಕುಮಾರಧಾರ ನದಿಗೆ ಈಜುವುದಕ್ಕೆ ತೆರಳಿದ್ದ. ಈಜುವುದಕ್ಕೆ ನದಿಗೆ ಇಳಿದಾಗ ಅರ್ಫಾದ್ ನೀರಿನಲ್ಲಿ ಮುಳುಗಡೆಯಾಗಿದ್ದ, ಸ್ನೇಹಿತರು ಈಜಿಕೊಂಡು ದಡ ಸೇರಿದ್ದಾರೆ.

Dealth 2
ಕುಮಾರಧಾರ ನದಿಯಲ್ಲಿ ಮುಳುಗಿ ಯುವಕ ಸಾವು : ಸ್ನಾನಕ್ಕೆಂದು ತೆರಳಿದ್ದಾಗ ನಡೆಯಿತು ದುರ್ಘಟನೆ 5

ನಂತರ ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಸ್ಥಳೀಯ ಈಜುಗಾರರ ನೆರವಿನೊಂದಿಗೆ ನದಿಯಲ್ಲಿ ಹುಡುಕಾಟ ನಡೆಸಲಾಯಿತು. ಶೋಧ ಕಾರ್ಯ ನಡೆಸುತ್ತಿದ್ದಂತೆಯೇ ಅರ್ಫಾದ್ ಶವ ಪತ್ತೆಯಾಗಿದೆ.

Death 2
ಕುಮಾರಧಾರ ನದಿಯಲ್ಲಿ ಮುಳುಗಿ ಯುವಕ ಸಾವು : ಸ್ನಾನಕ್ಕೆಂದು ತೆರಳಿದ್ದಾಗ ನಡೆಯಿತು ದುರ್ಘಟನೆ 6

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಅಪಾರ ಸಂಖ್ಯೆಯಲ್ಲಿ ಜನರು ನದಿಯತ್ತ ಜಮಾಯಿಸಿದ್ದರು. ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.