ಶಿವಮೊಗ್ಗ : lover commits suicide : ಪ್ರೀತಿ ಮಾಯೆ ಹುಷಾರು ಅಂತಾರೆ. ಪರಸ್ಪರ ನಂಬಿಕೆ ಇದ್ದರೆ ಪ್ರೀತಿ ಜೇನಿದ್ದಂತೆ. ಆದರೆ ಇಬ್ಬರ ನಡುವೆ ಸಣ್ಣ ವೈಮನಸ್ಯ ಉಂಟಾದರೂ ಸಹ ಅದು ವಿರಸಕ್ಕೆ ನಾಂದಿ ಹಾಡುತ್ತದೆ. ಪ್ರೀತಿ – ಪ್ರೇಮದ ಹೆಸರಿನಲ್ಲಿ ಈಗಾಗಲೇ ಅನೇಕರು ತಮ್ಮ ಭವಿಷ್ಯವನ್ನೇ ಕಳೆದುಕೊಂಡಿದ್ದಾರೆ. ಜೀವವನ್ನೇ ಕಳೆದುಕೊಂಡು ಕುಟುಂಬಸ್ಥರು ಜೀವಮಾನವಿಡೀ ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದ್ದಾರೆ. ಇದೇ ಮಾತಿಗೆ ಉದಾಹರಣೆ ಎಂಬಂತಹ ಘಟನೆಯೊಂದು ಶಿವಮೊಗ್ಗ ಹಾಲುಗುಡ್ಡೆ ಸಮೀಪದ ಆನೆಕೇರಿ ಕ್ಯಾಂಪ್ನಲ್ಲಿ ಸಂಭವಿಸಿದೆ. ಪ್ರೀತಿಸಿದ ಯುವಕ ಮದುವೆಯಾಗಲು ನಿರಾಕರಿಸಿದ್ದಕ್ಕೆ ಮನನೊಂದ ಯುವತಿಯು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಆತ್ಮಹತ್ಯೆಗೆ ಶರಣಾದ ಯುವತಿಯನ್ನು ಬಾಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಆನೆಕೇರಿ ಕ್ಯಾಂಪ್ನ 19 ವರ್ಷದ ಅನುಷಾ ಎಂದು ಗುರುತಿಸಲಾಗಿದೆ. ಈಕೆ ಮನೆಯಲ್ಲಿಯೇ ವಿಷ ಸೇವಿಸಿ ತನ್ನ ಪ್ರಿಯಕರ ಮಂಜುನಾಥನಿಗೆ ಕರೆ ಕೂಡ ಮಾಡಿದ್ದಳು ಎನ್ನಲಾಗಿದೆ. ಕೂಡಲೇ ಅನುಷಾ ಮನೆಗೆ ಬಂದ ಪ್ರಿಯಕರ ಮಂಜುನಾಥ್ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾನೆ. ಹೆಚ್ಚಿನ ಚಿಕಿತ್ಸೆಗೆಂದು ಅನುಷಾಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅನುಷಾ ಮೃತಪಟ್ಟಿದ್ದಾಳೆ.
ಏನಿದು ಪ್ರಕರಣ..?
ಕೇವಲ ಎರಡು ತಿಂಗಳ ಹಿಂದೆಯಷ್ಟೇ ಅನುಷಾ ಹಾಗೂ ಮಂಜುನಾಥ್ ಪರಸ್ಪರ ಭೇಟಿಯಾಗಿದ್ದರು. ಅನುಷಾ ಮನೆಗೆ ಗಾರೆ ಕೆಲಸಕ್ಕೆಂದು ನವಟೂರಿನ ಮಂಜುನಾತ್ ಆಗಮಿಸಿದ್ದ. ಕೆಲವು ದಿನಗಳಲ್ಲೇ ಅನುಷಾ ಹಾಗೂ ಮಂಜುನಾಥ್ ನಡುವಿನ ಸ್ನೇಹವು ಪ್ರೇಮಕ್ಕೆ ಬದಲಾಗಿತ್ತು. ಆದರೆ ಮಂಜುನಾಥ್ ಅನುಷಾಳನ್ನು ಮದುವೆಯಾಗಲು ನಿರಾಕರಿಸಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ಇಬ್ಬರ ನಡುವೆ ಕಳೆದ ಕೆಲವು ದಿನಗಳಿಂದ ಗಲಾಟೆ ಕೂಡ ನಡೀತಾ ಇತ್ತು. ಮಂಜುನಾಥ್ ನನ್ನನ್ನು ಮದುವೆಯಾಗುತ್ತಿಲ್ಲ ಎಂಬ ವಿಚಾರಕ್ಕೆ ಮನನೊಂದಿದ್ದ ಅನುಷಾ ಮನೆಯಲ್ಲಿ ವಿಷ ಸೇವನೆ ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಈ ಸಂಬಂಧ ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ: Virat Kohli India vs Australia : 11 ಸಾವಿರ ಟಿ20 ರನ್ ಶಿಖರಕ್ಕೆ 98 ರನ್ ಬಾಕಿ.. ಕಾಂಗರೂಗಳ ವಿರುದ್ಧ “ವಿರಾಟ” ದಾಖಲೆಗೆ ಕಿಂಗ್ ಕೊಹ್ಲಿ ಸಜ್ಜು
ಇದನ್ನೂ ಓದಿ : Prahlad Joshi :‘ಭಾರತ್ ಜೋಡೋ ಯಾತ್ರೆಯಿಂದ ಲಾಭವಿದೆ ಎಂಬ ಭ್ರಮೆ ಕಾಂಗ್ರೆಸ್ನದ್ದು’ : ಪ್ರಹ್ಲಾದ್ ಜೋಶಿ ವ್ಯಂಗ್ಯ
Lovers who refuse to marry: offended lover commits suicide by poisoning
Comments are closed.