lover commits suicide :ಪ್ರೀತಿಸಿ ಮದುವೆಯಾಗಲು ನಿರಾಕರಿಸಿದ ಪ್ರಿಯಕರ : ಮನನೊಂದ ಪ್ರಿಯತಮೆ ವಿಷಸೇವಿಸಿ ಆತ್ಮಹತ್ಯೆ

ಶಿವಮೊಗ್ಗ : lover commits suicide : ಪ್ರೀತಿ ಮಾಯೆ ಹುಷಾರು ಅಂತಾರೆ. ಪರಸ್ಪರ ನಂಬಿಕೆ ಇದ್ದರೆ ಪ್ರೀತಿ ಜೇನಿದ್ದಂತೆ. ಆದರೆ ಇಬ್ಬರ ನಡುವೆ ಸಣ್ಣ ವೈಮನಸ್ಯ ಉಂಟಾದರೂ ಸಹ ಅದು ವಿರಸಕ್ಕೆ ನಾಂದಿ ಹಾಡುತ್ತದೆ. ಪ್ರೀತಿ – ಪ್ರೇಮದ ಹೆಸರಿನಲ್ಲಿ ಈಗಾಗಲೇ ಅನೇಕರು ತಮ್ಮ ಭವಿಷ್ಯವನ್ನೇ ಕಳೆದುಕೊಂಡಿದ್ದಾರೆ. ಜೀವವನ್ನೇ ಕಳೆದುಕೊಂಡು ಕುಟುಂಬಸ್ಥರು ಜೀವಮಾನವಿಡೀ ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದ್ದಾರೆ. ಇದೇ ಮಾತಿಗೆ ಉದಾಹರಣೆ ಎಂಬಂತಹ ಘಟನೆಯೊಂದು ಶಿವಮೊಗ್ಗ ಹಾಲುಗುಡ್ಡೆ ಸಮೀಪದ ಆನೆಕೇರಿ ಕ್ಯಾಂಪ್​ನಲ್ಲಿ ಸಂಭವಿಸಿದೆ. ಪ್ರೀತಿಸಿದ ಯುವಕ ಮದುವೆಯಾಗಲು ನಿರಾಕರಿಸಿದ್ದಕ್ಕೆ ಮನನೊಂದ ಯುವತಿಯು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.


ಆತ್ಮಹತ್ಯೆಗೆ ಶರಣಾದ ಯುವತಿಯನ್ನು ಬಾಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಆನೆಕೇರಿ ಕ್ಯಾಂಪ್​ನ 19 ವರ್ಷದ ಅನುಷಾ ಎಂದು ಗುರುತಿಸಲಾಗಿದೆ. ಈಕೆ ಮನೆಯಲ್ಲಿಯೇ ವಿಷ ಸೇವಿಸಿ ತನ್ನ ಪ್ರಿಯಕರ ಮಂಜುನಾಥನಿಗೆ ಕರೆ ಕೂಡ ಮಾಡಿದ್ದಳು ಎನ್ನಲಾಗಿದೆ. ಕೂಡಲೇ ಅನುಷಾ ಮನೆಗೆ ಬಂದ ಪ್ರಿಯಕರ ಮಂಜುನಾಥ್​ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾನೆ. ಹೆಚ್ಚಿನ ಚಿಕಿತ್ಸೆಗೆಂದು ಅನುಷಾಳನ್ನು ಶಿವಮೊಗ್ಗದ ಮೆಗ್ಗಾನ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅನುಷಾ ಮೃತಪಟ್ಟಿದ್ದಾಳೆ.


ಏನಿದು ಪ್ರಕರಣ..?
ಕೇವಲ ಎರಡು ತಿಂಗಳ ಹಿಂದೆಯಷ್ಟೇ ಅನುಷಾ ಹಾಗೂ ಮಂಜುನಾಥ್​​ ಪರಸ್ಪರ ಭೇಟಿಯಾಗಿದ್ದರು. ಅನುಷಾ ಮನೆಗೆ ಗಾರೆ ಕೆಲಸಕ್ಕೆಂದು ನವಟೂರಿನ ಮಂಜುನಾತ್​ ಆಗಮಿಸಿದ್ದ. ಕೆಲವು ದಿನಗಳಲ್ಲೇ ಅನುಷಾ ಹಾಗೂ ಮಂಜುನಾಥ್​ ನಡುವಿನ ಸ್ನೇಹವು ಪ್ರೇಮಕ್ಕೆ ಬದಲಾಗಿತ್ತು. ಆದರೆ ಮಂಜುನಾಥ್​​ ಅನುಷಾಳನ್ನು ಮದುವೆಯಾಗಲು ನಿರಾಕರಿಸಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ಇಬ್ಬರ ನಡುವೆ ಕಳೆದ ಕೆಲವು ದಿನಗಳಿಂದ ಗಲಾಟೆ ಕೂಡ ನಡೀತಾ ಇತ್ತು. ಮಂಜುನಾಥ್​ ನನ್ನನ್ನು ಮದುವೆಯಾಗುತ್ತಿಲ್ಲ ಎಂಬ ವಿಚಾರಕ್ಕೆ ಮನನೊಂದಿದ್ದ ಅನುಷಾ ಮನೆಯಲ್ಲಿ ವಿಷ ಸೇವನೆ ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಈ ಸಂಬಂಧ ರಿಪ್ಪನ್​ಪೇಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಓದಿ: Virat Kohli India vs Australia : 11 ಸಾವಿರ ಟಿ20 ರನ್ ಶಿಖರಕ್ಕೆ 98 ರನ್ ಬಾಕಿ.. ಕಾಂಗರೂಗಳ ವಿರುದ್ಧ “ವಿರಾಟ” ದಾಖಲೆಗೆ ಕಿಂಗ್ ಕೊಹ್ಲಿ ಸಜ್ಜು

ಇದನ್ನೂ ಓದಿ : Prahlad Joshi :‘ಭಾರತ್​ ಜೋಡೋ ಯಾತ್ರೆಯಿಂದ ಲಾಭವಿದೆ ಎಂಬ ಭ್ರಮೆ ಕಾಂಗ್ರೆಸ್​ನದ್ದು’ : ಪ್ರಹ್ಲಾದ್​ ಜೋಶಿ ವ್ಯಂಗ್ಯ

Lovers who refuse to marry: offended lover commits suicide by poisoning

Comments are closed.