ಮಂಗಳೂರು : ಗ್ಯಾಸ್ ಟ್ಯಾಂಕರ್ – ಕಾರು ಢಿಕ್ಕಿ : 6 ಮಂದಿ ಗಂಭೀರ ಗಾಯ

ಮಂಗಳೂರು : ಗ್ಯಾಸ್ ಟ್ಯಾಂಕರ್ ಗೆ ಕಾರು ಢಿಕ್ಕಿಯಾಗಿ ಕಾರಿನಲ್ಲಿದ್ದ 6 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳೂರು ಹೊರವಲಯದ ಪಾಣೆಮಂಗಳೂರು ಬಳಿಯಲ್ಲಿ ನಡೆದಿದೆ.

ಗಾಯಾಳುಗಳೆಲ್ಲರೂ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಸಮೀಪದ ಐಕಳ ನಿವಾಸಿಗಳು ಎಂದು ತಿಳಿದುಬಂದಿದೆ. ಸುಳ್ಯದ ನಿಂತಿಕಲ್ಲಿನಲ್ಲಿ ನಡೆದ ಕೊರಗಜ್ಜನ ಪೂಜೆಗೆ ತೆರಳಿ ವಾಪಾಸಾಗುತ್ತಿದ್ದ ವೇಳೆಯಲ್ಲಿ ಈ ಘಟನೆ ನಡೆದಿದೆ. ಕಾರಿನಲ್ಲಿ ತಮ್ಮೂರಿಗೆ ತೆರಳುತ್ತಿದ್ದ ವೇಳೆಯಲ್ಲಿ ಪಾಣೆಮಂಗಳೂರು ಬಳಿಗೆ ಬರುತ್ತಿದ್ದಂತೆಯೇ ಗ್ಯಾಸ್ ಟ್ಯಾಂಕರ್ ಚಾಲಕ ಓವರ್ ಟೇಕ್ ಮಾಡಿದ್ದಾನೆ. ಈ ವೇಳೆಯಲ್ಲಿ ಎದುರಿನಿಂದ ಬರುತ್ತಿದ್ದ ಇಕೋ ಕಾರು ಟ್ಯಾಂಕರ್ ಗೆ ಢಿಕ್ಕಿಯಾಗಿ ಈ ಘಟನೆ ಸಂಭವಿಸಿದೆ.

https://kannada.newsnext.live/sandalwood-bigboss-chaitrakotor-nagarjhun-marriage-issues-photos-viral/

ಘಟನೆ ನಡೆಯುತ್ತಿದ್ದಂತೆಯೇ ಸಂಚಾರಿ ಠಾಣೆಯ ಎಸ್ ಐ ರಾಜೇಶ್ ಹಾಗೂ ಅವರ ತಂಡ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.

https://kannada.newsnext.live/corona-virus-hike-mangalore-vv-class-close/

Comments are closed.