ಕಾಲೇಜು ಎಡ್ಮಿಶನ್ ಗೆ ಬಂದಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಕೊಲೆ : ಅಣ್ಣನ ಸ್ನೇಹಿತನಿಂದಲೇ ದುಷ್ಕೃತ್ಯ

ಬೆಂಗಳೂರು : ಕಾಲೇಜಿಗೆ ಅಡ್ಮಿಷನ್ ಸಲುವಾಗಿ ಸಾವಿರಾರು ಕಿ.ಮೀ. ದೂರದಿಂದ ಬೆಂಗಳೂರಿಗೆ ಬಂದಿದ್ದ ವಿದ್ಯಾರ್ಥಿನಿಯೋರ್ವಳನ್ನು ಅಣ್ಣ ಸ್ನೇಹಿತನೇ ಅತ್ಯಾಚಾರವೆಸಗಿ, ಕೊಲೆ ಮಾಡಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ನಡೆದಿದೆ.

ಹನ್ಸೂರ್ ರೆಹಮಾನ್ (22) ಎಂಬಾತನೇ ಯುವತಿಯನ್ನು ಅತ್ಯಾಚಾರವೆಸಗಿ, ಕೊಲೆ ಮಾಡಿದ ಆರೋಪಿ. ಬೆಂಗಳೂರಿನಲ್ಲಿ ಎರಡನೇ ವರ್ಷದಲ್ಲಿ ಫಾರ್ಮಸಿ ವ್ಯಾಸಂಗ ಮಾಡುತ್ತಿದ್ದ ಆರೋಪಿ ರೆಹಮಾನ್ ಮತ್ತು ಕೊಲೆಯಾದ ಯುವತಿ ಈಶಾನ್ಯ ಭಾರತ ಮೂಲದವರಾಗಿದ್ದು, ಒಂದೇ ಊರಿನವರಾಗಿದ್ದು, ಯುವತಿಯ ಸಹೋದರ ಮತ್ತು ಆರೋಪಿ ರೆಹಮಾನ್ ಪರಸ್ಪರ ಪರಿಚಿತರು.

ನರ್ಸಿಂಗ್ ವ್ಯಾಸಂಗ ಮಾಡಲೆಂದು ನಗರದ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಎರಡು ದಿನಗಳ ಹಿಂದಷ್ಟೇ ಯುವತಿ ಬೆಂಗಳೂರಿಗೆ ಬಂದಿದ್ದಳು. ಮಂಗಳವಾರ ಪ್ರವೇಶ ಪ್ರಕ್ರಿಯೆ ಮುಗಿಸಿ ಫೀಸ್ ಕಟ್ಟಿದ್ದರು. ಇನ್ನರ್ಧ ಶುಲ್ಕವನ್ನು ಬುಧವಾರ ಪಾಧಿವತಿ ಮಾಡಬೇಕಾಗಿತ್ತು.
ಯುವತಿಗೆ ಫೋನ್ ಮಾಡಿದ ರೆಹಮಾನ್, ತನ್ನ ರೂಮಿಗೆ ಕರೆದಿದ್ದಾನೆ. ಪರಿಚಯ ಇರುವ ಕಾರಣ ಯುವತಿ ರೆಹಮಾನ್ ರೂಮಿಗೆ ಹೋಗಿದ್ದಾಳೆ. ಈ ವೇಳೆ ಆರೋಪಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುವತಿ ಮನೆ ಪ್ರವೇಶಿಸದ ಕೆಲ ಹೊತ್ತಿನಲ್ಲೇ ಆರೋಪಿ ರೆಹಮಾನ್, ತಾನು ಇದ್ದ ರೂಮಿನ ಕೆಳಗಿರುವ ಮನೆ ಬಳಿ ತೆರಳಿ ತನ್ನ ಸ್ನೇಹಿತೆ ಉಸಿರಾಡುತ್ತಿಲ್ಲ, ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದಾಳೆ ಎಂದು ತಿಳಿಸಿದ್ದಾನೆ. ನಂತರ ತನ್ನಿಬ್ಬರು ಸ್ನೇಹತರಿಗೆ ತಿಳಿಸಿ ಕರೆಸಿಕೊಂಡು ಆಟೋದಲ್ಲಿ ಸಮೀಪದ ಖಾಸಗಿ ಆಸ್ಪತ್ರೆಗೆ ಯುವತಿಯನ್ನು ಕರೆದೊಯ್ದಿದ್ದಾನೆ. ಆದರೆ, ಮಾರ್ಗ ಮಧ್ಯದಲ್ಲೇ ಯುವತಿ ಮೃತಪಟ್ಟಿದ್ದಾಳೆಂದು ಪರೀಕ್ಷಿಸಿದ ವೈದ್ಯರು ತಿಳಿಸಿದ್ದಾರೆ.

ಆಸ್ಪತ್ರೆಯಿಂದ ಬಂದ ಮಾಹಿತಿ ಆಧರಿಸಿ ಆಸ್ಪತ್ರೆಗೆ ತೆರಳಿದ ಪೊಲೀಸರು, ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಘಟನೆ ಕುರಿತು ಕೇಸ್ ದಾಖಲಿಸಿಕೊಂಡ ಪೊಲೀಸರು, ಕೊಲೆಯಾದ ಯುವತಿ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ.

ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ಲಭಿಸಲಿದೆ. ತನಿಖೆ ಮುಂದುವರೆದಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್. ಎಂ. ಪಾಟೀಲ್ ತಿಳಿಸಿದರು.

Comments are closed.