ಬೆಂಗಳೂರು : actor sathish vajra died : ಇಡೀ ಸ್ಯಾಂಡಲ್ವುಡ್ ಇಂಡಸ್ಟ್ರಿಯೇ ಬೆಚ್ಚಿ ಬೀಳುವಂತಹ ಘಟನೆಯೊಂದು ಇಂದು ಬೆಳಕಿಗೆ ಬಂದಿದೆ. ಚಂದನ ವನದ ಯುವ ನಟನನ್ನು ಚಾಕುವಿನಿಂದ ಇರಿದು ಕೊಲೆಗೈಯಲಾಗಿದೆ. ಬೆಂಗಳೂರಿನ ಆರ್. ಆರ್ ನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕೊಲೆಯಾದ ಸ್ಯಾಂಡಲ್ವುಡ್ನ ಯುವ ನಟನನ್ನು ಸತೀಶ್ ವಜ್ರ ಎಂದು ಗುರುತಿಸಲಾಗಿದೆ.
ಮೃತ ಸತೀಶ್ ವಜ್ರ ಪ್ರೀತಿಸಿ ವಿವಾಹವಾಗಿದ್ದರು.ಆದರೆ ಇವರ ದಾಂಪತ್ಯ ಜೀವನದಲ್ಲಿ ಅದೇನಾಯ್ತೋ ಗೊತ್ತಿಲ್ಲ. ಸತೀಶ್ ವಜ್ರ ಪತ್ನಿ ಮೂರು ತಿಂಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದು ಸತೀಶ್ ವಜ್ರ ಮೇಲೆ ಆತನ ಪತ್ನಿಯ ಮನೆಯ ಕಡೆಯವರಿಗೆ ದ್ವೇಷ ಮೂಡುವಂತೆ ಮಾಡಿತ್ತು. ಸಹೋದರಿಯ ಸಾವಿಗೆ ಸತೀಶ್ ವಜ್ರನೇ ಕಾರಣ ಎಂದು ಸತೀಶ್ ವಜ್ರ ಪತ್ನಿಯ ತಮ್ಮ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಚಾಕುವಿನಿಂದ ಇರಿದು ಸತೀಶ್ ವಜ್ರರನ್ನು ಕೊಲೆ ಮಾಡಲಾಗಿದೆ.
ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರಿನವರಾದ ಸತೀಶ್ ವಜ್ರ ಚಂದನವನದ ಲಗೋರಿ ಎಂಬ ಸಿನಿಮಾದಲ್ಲಿ ನಟಿಸಿದ್ದರು. ಕೊಲೆಯಾದ ಸತೀಶ್ ವಜ್ರರ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಈ ಸಂಬಂಧ ಆರ್.ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ.
ಇದನ್ನು ಓದಿ : ವಿರಾಟ್ ಕೊಹ್ಲಿ ಬಗ್ಗೆ ಶಾಹಿದ್ ಅಫ್ರಿದಿ ಬಾಯಿಂದ ಇದೆಂಥಾ ಮಾತು ?
ಇದನ್ನೂ ಓದಿ : England World record : 50 ಓವರ್ಗಳಲ್ಲಿ 498 ರನ್ : ಏಕದಿನ ಕ್ರಿಕೆಟ್ನಲ್ಲಿ ಇಂಗ್ಲೆಂಡ್ ವಿಶ್ವದಾಖಲೆ
sandalwood actor sathish vajra died
Comments are closed.