actor sathish vajra died : ಸ್ಯಾಂಡಲ್​ವುಡ್​ ಯುವ ನಟ ಸತೀಶ್​ ವಜ್ರ ಬರ್ಬರ ಹತ್ಯೆ

ಬೆಂಗಳೂರು : actor sathish vajra died : ಇಡೀ ಸ್ಯಾಂಡಲ್​ವುಡ್​ ಇಂಡಸ್ಟ್ರಿಯೇ ಬೆಚ್ಚಿ ಬೀಳುವಂತಹ ಘಟನೆಯೊಂದು ಇಂದು ಬೆಳಕಿಗೆ ಬಂದಿದೆ. ಚಂದನ ವನದ ಯುವ ನಟನನ್ನು ಚಾಕುವಿನಿಂದ ಇರಿದು ಕೊಲೆಗೈಯಲಾಗಿದೆ. ಬೆಂಗಳೂರಿನ ಆರ್​. ಆರ್​ ನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕೊಲೆಯಾದ ಸ್ಯಾಂಡಲ್​ವುಡ್​ನ ಯುವ ನಟನನ್ನು ಸತೀಶ್​ ವಜ್ರ ಎಂದು ಗುರುತಿಸಲಾಗಿದೆ.


ಮೃತ ಸತೀಶ್​ ವಜ್ರ ಪ್ರೀತಿಸಿ ವಿವಾಹವಾಗಿದ್ದರು.ಆದರೆ ಇವರ ದಾಂಪತ್ಯ ಜೀವನದಲ್ಲಿ ಅದೇನಾಯ್ತೋ ಗೊತ್ತಿಲ್ಲ. ಸತೀಶ್​ ವಜ್ರ ಪತ್ನಿ ಮೂರು ತಿಂಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದು ಸತೀಶ್​ ವಜ್ರ ಮೇಲೆ ಆತನ ಪತ್ನಿಯ ಮನೆಯ ಕಡೆಯವರಿಗೆ ದ್ವೇಷ ಮೂಡುವಂತೆ ಮಾಡಿತ್ತು. ಸಹೋದರಿಯ ಸಾವಿಗೆ ಸತೀಶ್​ ವಜ್ರನೇ ಕಾರಣ ಎಂದು ಸತೀಶ್​ ವಜ್ರ ಪತ್ನಿಯ ತಮ್ಮ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಚಾಕುವಿನಿಂದ ಇರಿದು ಸತೀಶ್​ ವಜ್ರರನ್ನು ಕೊಲೆ ಮಾಡಲಾಗಿದೆ.


ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರಿನವರಾದ ಸತೀಶ್​ ವಜ್ರ ಚಂದನವನದ ಲಗೋರಿ ಎಂಬ ಸಿನಿಮಾದಲ್ಲಿ ನಟಿಸಿದ್ದರು. ಕೊಲೆಯಾದ ಸತೀಶ್​ ವಜ್ರರ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿದೆ. ಈ ಸಂಬಂಧ ಆರ್​.ಆರ್ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ.

ಇದನ್ನು ಓದಿ : ವಿರಾಟ್ ಕೊಹ್ಲಿ ಬಗ್ಗೆ ಶಾಹಿದ್ ಅಫ್ರಿದಿ ಬಾಯಿಂದ ಇದೆಂಥಾ ಮಾತು ?

ಇದನ್ನೂ ಓದಿ : England World record : 50 ಓವರ್‌ಗಳಲ್ಲಿ 498 ರನ್ : ಏಕದಿನ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ವಿಶ್ವದಾಖಲೆ

sandalwood actor sathish vajra died

Comments are closed.