lady constable death : ಪ್ರೀತಿಗೆ ಅಡ್ಡಿ ಬಂತು ಜಾತಕದಲ್ಲಿನ ದೋಷ : ಪ್ರಿಯಕರನನ್ನು ನಂಬಿ ವಿಷ ಸೇವಿಸಿದಾಕೆ ಸಾವು

ಶಿವಮೊಗ್ಗ : lady constable death : ಪ್ರೀತಿಯಲ್ಲಿ ಬಿದ್ದರು ಅಂದರೆ ಮುಗೀತು. ಅದು ನಮ್ಮಿಂದ ಏನೇನೋ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡಿ ಬಿಡುತ್ತದೆ.ಇದೇ ಮಾತಿಗೆ ಸ್ಪಷ್ಟ ಉದಾಹರಣೆ ಎಂಬಂತೆ ಶಿವಮೊಗ್ಗದಲ್ಲಿ ಮಹಿಳಾ ಪೊಲೀಸ್​​​ ತನ್ನ ಆರು ವರ್ಷದ ಪ್ರೀತಿಗೆ ಜಾತಕ ಅಡ್ಡಿ ಬಂತೆಂದು ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಯು ವರದಿಯಾಗಿದೆ. ಮೃತ ಸುಧಾ(29) ಭದ್ರಾವತಿ ತಾಲೂಕಿನ ಕಲ್ಲಹಳ್ಳಿ ನಿವಾಸಿಯಾಗಿದ್ದು ತೀರ್ಥಹಳ್ಳಿ ಠಾಣೆಯಲ್ಲಿ ಪೊಲೀಸ್​ ಪೇದೆಯಾಗಿದ್ದರು. ಮೇ 30ರಂದು ಸುಧಾ ವಿಷ ಸೇವನೆ ಮಾಡಿದ್ದು ಬಳಿಕ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸುಧಾ ಮೃತಪಟ್ಟಿದ್ದಾರೆ.


ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಪ್ರವೀಣ್​ ಮೊಕಾಶಿ ಹಾಗೂ ಸುಧಾ ಕಳೆದ ಆರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ಮದುವೆ ವಿಚಾರ ಬಂದಾಗ ಪ್ರವೀಣ್​ ಮೊಕಾಶಿ ತಾಯಿ ಲಕ್ಷ್ಮೀ ಸುಧಾರ ಜಾತಕವನ್ನು ಜ್ಯೋತಿಷಿಗಳಿಗೆ ತೋರಿಸಿದ್ದರು. ಜಾತಕ ನೋಡಿದ ಜ್ಯೋತಿಷಿಗಳು ಸುಧಾ ಜಾತಕದಲ್ಲಿ ಕುಜ ದೋಷವಿದ್ದು ಈಕೆಯೊಂದಿಗೆ ಪ್ರವೀಣ್​ ವಿವಾಹವಾದರೆ ಆತ ಸಾಯುತ್ತಾನೆ ಎಂದು ಹೇಳಿದ್ದಾರೆ. ಇದರಿಂದ ಭಯಗೊಂಡ ಲಕ್ಷ್ಮೀ ಈ ಮದುವೆ ಬೇಡವೆಂದು ಹೇಳಿದ್ದಾರೆ.


ತಾಯಿ ಹೇಳಿದ ಬಳಿಕ ಪ್ರವೀಣ್​ ಕೂಡ ಸುಧಾರನ್ನು ಭೇಟಿಯಾಗಿರಲಿಲ್ಲ. ಮೇ 31ರಂದು ಪ್ರವೀಣ್​ರ ಉಬ್ರಾಣಿಯಲ್ಲಿರುವ ಕಚೇರಿಗೆ ತೆರಳಿದ ಸುಧಾ ನೀನು ಮದುವೆಯಾಗದಿದ್ದರೆ ನಾನು ಸಾಯುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರವೀಣ್​ ಇಬ್ಬರೂ ಸಾಯೋಣ ಎಂದು ಹೇಳಿ ವಿಷದ ಬಾಟಲಿ ನೀಡಿದ್ದಾರೆ. ಸುಧಾ ಮೊದಲು ವಿಷವನ್ನು ಕುಡಿದಿದ್ದಾರೆ.


ಗಂಭೀರ ಸ್ಥಿತಿಯಲ್ಲಿದ್ದ ಸುಧಾರವನ್ನು ಮಣಿಪಾಲ್​ಗೆ ದಾಖಲಿಸಲಾಗಿತ್ತು. ಆದರೆ ಸುಧಾ ಸಾವಿಗೂ ಮುಂಚೆ ನೀಡಿರುವ ಹೇಳಿಕೆಯ ಪ್ರಕಾರ ನಾನು ಪ್ರವೀಣ್​ ವಿಷ ಸೇವಿಸಿದ್ದನ್ನು ನೋಡಿಲ್ಲ ಎಂದಿದ್ದಾರೆ.ಇದು ಎಲ್ಲರಲ್ಲೂ ಪ್ರವೀಣ್​ ನಡೆ ಬಗ್ಗೆ ಅನುಮಾನ ಮೂಡಿಸುವಂತೆ ಮಾಡಿದೆ. ಭದ್ರಾವತಿ ಓಲ್ಡ್​​ ಟೌನ್​ ಠಾಣೆಯಲ್ಲಿ ಪ್ರವೀಣ್​ ಹಾಗೂ ಆತನ ತಾಯಿ ಲಕ್ಷ್ಮೀ ವಿರುದ್ಧ ಕೇಸ್​ ದಾಖಲಾಗಿದೆ.

ಇದನ್ನು ಓದಿ : Big Exclusive : ಇದೇ ವರ್ಷ ಸುನಿಲ್ ಶೆಟ್ಟಿ ಮಗಳೊಂದಿಗೆ ಕೆ.ಎಲ್ ರಾಹುಲ್ ಮದುವೆ ?

ಇದನ್ನೂ ಓದಿ : ವಿರಾಟ್ ಕೊಹ್ಲಿ ಬಗ್ಗೆ ಶಾಹಿದ್ ಅಫ್ರಿದಿ ಬಾಯಿಂದ ಇದೆಂಥಾ ಮಾತು ?

marriage issue lady constable death in manipal hospital shivamogga

Comments are closed.