ಕೋಟ : ಭೀಕರ ಬೈಕ್‌ ಅಪಘಾತ, ನಾಗೇಶ್‌ ಆಚಾರ್ಯ ಸಾವು

ಕೋಟ : (Kota) ಮುಂಗಾರು ಮಳೆಯ ಅಬ್ಬರ ಜೋರಾಗುತ್ತಿದ್ದಂತೆಯೇ ರಸ್ತೆ ಅಪಘಾತಗಳ ಸಂಖ್ಯೆಯಲ್ಲಿಯೂ ಏರಿಕೆ ಕಾಣುತ್ತಿದೆ. ಫ್ಯಾಕ್ಟರಿಯೊಂದರಲ್ಲಿ ಕೆಲಸ ಮುಗಿಸಿಕೊಂಡು, ತನ್ನ ಸಂಬಂಧಿಕರ ಮನೆಗೆ ಭೇಟಿ ನೀಡಿ ಮನೆಗೆ ಹಿಂದಿರುಗುವ ವೇಳೆಯಲ್ಲಿ ವಿಧಿ ಆತನ ಬದುಕಲ್ಲಿ ಅಟ್ಟಹಾಸ ಮೆರೆದಿದ್ದಾನೆ. ಬೈಕಿನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಗೆ ಅಪರಿಚಿತ ವಾಹನ ಢಿಕ್ಕಿಯಾಗಿ ಇಹಲೋಕ ತ್ಯೆಜಿಸಿದ್ದಾರೆ.

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕಾವಡಿ ಸೌರಿಬೈಲು ನಿವಾಸಿ ನಾಗೇಶ್‌ ಆಚಾರ್ಯ (35 ವರ್ಷ) ಎಂಬವರೇ ಮೃತಪಟ್ಟ ದುರ್ದೈವಿ. ನಿನ್ನೆ ಸಂಜೆ ಸುಮಾರು 7.30ರ ಹೊತ್ತಿಗೆ ನಾಗೇಶ್‌ ಆಚಾರ್ಯ ಅವರು ಪ್ಯಾಕ್ಟರಿ ಕೆಲಸ ಮುಗಿಸಿಕೊಂಡು ಸಂಬಂಧಿಕರ ಮನೆಗೆ ಹೋಗಿ, ಅಲ್ಲಿಂದ ತನ್ನ ಮನೆಗೆ ಬೈಕಿನಲ್ಲಿ ವಾಪಸು ಹೋಗುವ ವೇಳೆಯಲ್ಲಿ ಸಾಲಿಗ್ರಾಮ ಯಡ್ತಾಡಿ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಅಪಘಾತ ಮಾಡಿದ ವ್ಯಕ್ತಿ ವಾಹನ ಸಮೇತ ಎಸ್ಕೇಪ್‌ ಆಗಿದ್ದಾನೆ.

ಕೆಲಸ ಮುಗಿಸಿಕೊಂಡು ಬೈಕಿನಲ್ಲಿ ತನ್ನ ಮನೆಯತ್ತ ಹೊರಟಿದ್ದ ರಾಜೇಶ್‌ ಎಂಬಾವರು ರಸ್ತೆಯಲ್ಲಿ ಅಪಘಾತಕ್ಕೀಡಾಗಿ ಬಿದ್ದಿದ್ದ ನಾಗೇಶ್‌ ಆಚಾರ್ಯ ಅವರನ್ನು ನೋಡಿದ್ದಾರೆ. ಕೂಡಲೇ ನಾಗೇಶ್‌ ಆಚಾರ್ಯ ಅವರನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಪರೀಕ್ಷಿಸಿದ ವೈದ್ಯರು ನಾಗೇಶ್‌ ಆಚಾರ್ಯ ಅವರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ.

ನಾಗೇಶ್‌ ಆಚಾರ್ಯ ಅವರು ತನ್ನ ಬೈಕಿನಲ್ಲಿ ತೆರಳುತ್ತಿದ್ದ ವೇಳೆಯಲ್ಲಿ ಯಡ್ತಾಡಿ ಕಡೆಯಿಂದ ಸಾಲಿಗ್ರಾಮ ಕಡೆಗೆ ಬರುವ ಯಾವುದೊಂದು ಅಪರಿಚಿತ ವಾಹನ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಢಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ನಾಗೇಶ್‌ ಆಚಾರ್ಯ ಅವರ ತಲೆ, ಹಣೆ, ಬಲಗೈಗೆ ತೀವ್ರ ಸ್ವರೂಪದ ಗಾಯವಾಗಿದೆ. ನಾಗೇಶ್‌ ಆಚಾರ್ಯ ಅವರಿಗೆ ಇತ್ತೀಚಿಗಷ್ಟೇ ಮದುವೆಯಾಗಿದ್ದು, ತಿಂಗಳ ದಾಟಿದ ಪುಟ್ಟ ಹೆಣ್ಣು ಮಗುವಿದೆ. ಈ ಕುರಿತು ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಅಪರಿಚಿತ ವಾಹನಕ್ಕಾಗಿ ಹುಡುಕಾಟವನ್ನು ಆರಂಭಿಸಿದ್ದಾರೆ. ಅಪಘಾತವಾಗಿದ್ದರೂ ಕೂಡ ಹಿಂದಿರುಗಿ ನೋಡದೇ ಎಸ್ಪೇಪ್‌ ಆಗಿರುವ ವಾಹನ ಚಾಲಕನ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ : Aadhar Card Scam : 8 ವರ್ಷದ ಮಗುವಿನ ಆಧಾರ್ ಕಾರ್ಡ್‌ನಲ್ಲಿ ಉಪ ಮುಖ್ಯಮಂತ್ರಿಯ ಫೋಟೋ

ಇದನ್ನೂ ಓದಿ : Car accident‌ : ಕಾರು ಕಂದಕಕ್ಕೆ ಉರುಳಿ 9 ಮಂದಿ ಸಾವು, ಇಬ್ಬರಿಗೆ ಗಂಭೀರ ಗಾಯ

Comments are closed.