ಹೂವಿನ ಗಿಡದ ಮೇಲೆ ಹಾವು; ಮಹಿಳೆ ಸಾವು!

ಅಂಕೋಲಾ: ತೋಟದ ಹೂವಿನ ಗಿಡಗಳ ನಡುವೆ ಅಡಗಿದ್ದ ವಿಷಕಾರಿ ಹಾವೊಂದು ಕಚ್ಚಿದ ಪರಿಣಾಮ, ಯಶೋಧಾ ವೈದ್ಯ (39) ಎಂಬ ಮಹಿಳೆ ಆಸ್ಪತ್ರೆಗೆ ತಲುಪುವ ಮುನ್ನವೇ ಸಾವನ್ನಪ್ಪಿರುವ ಘಟನೆ ಅಂಕೋಲಾ ತಾಲೂಕಿನ ರಾಮನಗುಳಿ ಬಳಿಯ ಕಂಡ್ರಮನೆಯಲ್ಲಿ ಡಿಸೆಂಬರ್ 15ರಂದು ನಡೆದಿದೆ.

​ಕೃಷಿ ಕುಟುಂಬದವರಾದ ಯಶೋಧಾ ವೈದ್ಯ ಅವರು ಹೂವಿನ ಗಿಡಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದರು. ಡಿಸೆಂಬರ್ 15ರಂದು ಅವರು ತಮ್ಮ ಪತಿ ಶೇಖರ ವೈದ್ಯ ಅವರೊಂದಿಗೆ ತೋಟಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ, ಗಿಡವೊಂದರ ಬುಡದಲ್ಲಿ ಅಡಗಿದ್ದ ವಿಷಜಂತು ಆ ದಂಪತಿಯ ಕಣ್ಣಿಗೆ ಕಾಣಿಸಲಿಲ್ಲ.

​ಯಶೋಧಾ ವೈದ್ಯ ಅವರ ಎಡಗಾಲಿನ ಪಾದಕ್ಕೆ ಹಾವು ಕಚ್ಚಿದ್ದು, ಕೂಡಲೇ ಪಾದವು ಊದಿಕೊಂಡು ನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ರಾಮನಗುಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು.

​ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್ ಮೂಲಕ ಅವರನ್ನು ಯಲ್ಲಾಪುರದ ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಆದರೆ, ಮಾರ್ಗ ಮಧ್ಯದಲ್ಲಿಯೇ ಯಶೋಧಾ ವೈದ್ಯ ಅವರು ಉಸಿರಾಟ ನಿಲ್ಲಿಸಿದ್ದಾರೆ. ಆಸ್ಪತ್ರೆಗೆ ತಲುಪಿದ ಬಳಿಕ ವೈದ್ಯರು ಅವರ ಸಾವನ್ನು ದೃಢಪಡಿಸಿದ್ದಾರೆ.

ಇದನ್ನೂ ಓದಿ: ಬ್ರಹ್ಮಗಂಟು ನಟಿಗೆ ಮದುವೆ

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories