ನಿತ್ಯಭವಿಷ್ಯ : 15-08-2020

0

ಮೇಷರಾಶಿ
ಸ್ವಂತ ಉದ್ಯಮ ವ್ಯಾಪಾರದಲ್ಲಿ ಅನುಕೂಲ, ಸಾಂಸಾರಿಕವಾಗಿ ಮನಕ್ಲೇಶ ಹೆಚ್ಚಾಗ ದಂತೆ ಜಾಗ್ರತೆ ವಹಿಸಿರಿ. ಶುಭಮಂಗಲ, ದೇವತಾ ಕಾರ್ಯಗಳಿಗೆ ಅನುಕೂಲವಾಗುತ್ತದೆ. ರಾಜಕೀಯ ವ್ಯಕ್ತಿಗಳಿಗೆ ನೆಮ್ಮದಿಯ ದಿನಗಳಿವು. ನವದಂಪತಿಗಳಿಗೆ ಶುಭವಾರ್ತೆ ಇದೆ. ಕಾರ್ಯಜಯ, ಧೈರ್ಯ, ಮುಂಗೋಪ, ಆತುರ, ಸೋಂಕು, ಅಧಿಕ ಉಷ್ಣ. ತಿಂಗಳ ದೋಷ, ಮಾನಸಿಕ ಗೊಂದಲಗಳು.

ವೃಷಭರಾಶಿ
ನಷ್ಟ ಮತ್ತು ಒತ್ತಡಗಳು, ಮಾತಿನಿಂದ ತೊಂದರೆ, ಕೌಟುಂಬಿಕ ಸಮಸ್ಯೆಗಳು, ವೃತ್ತಿರಂಗದಲ್ಲಿ ಎಚ್ಚರಿಕೆಯ ನಡೆ ಅಗತ್ಯವಿರುತ್ತದೆ. ಸರಕಾರಿ ಉದ್ಯೋಗಿಗಳಿಗೆ ಮುನ್ನಡೆ ಕಂಡು ಬಂದೀತು. ಸಹನಶೀಲರಾಗಿ ಪರರನ್ನು ಕೇಳಿಸಿಕೊಳ್ಳಿರಿ. ರಾಹು ನಿಮ್ಮನ್ನು ತುಸು ತೊಂದರೆ ಈಡುಮಾಡಬಲ್ಲನು. ಜಾಗ್ರತೆ. ಆರ್ಥಿಕ ಮೋಸ, ಚೀಟಿ ವ್ಯವಹಾರಗಳಲ್ಲಿ ತೊಂದರೆ, ಪಾಲುದಾರಿಕೆಗೆ ನಷ್ಟ, ಸಂಗಾತಿಯ ನಡವಳಿಕೆಯಿಂದ ಬೇಸರ.

ಮಿಥುನರಾಶಿ
ಸಾಲಬಾದೆ ಮತ್ತು ಶತ್ರು ಕಾಟಗಳು, ಕೆಲಸಗಾರರಿಂದ ತೊಂದರೆ, ಮಾನಸಿಕವಾಗಿ ಒಮ್ಮೊಮ್ಮೆ ಋಣಾತ್ಮಕ ಚಿಂತೆಯಿಂದ ಪೇಚಾಡುವಂತಾದೀತು. ಉದ್ಯೋಗಸ್ಥ ಮಹಿಳೆಯರಿಗೆ ಉತ್ತಮ ಅವಕಾಶಗಳಿಂದ ಅಭಿವೃದ್ಧಿ ಕಂಡು ಬರುತ್ತದೆ. ಹಣಕಾಸಿನ ವಿಚಾರದಲ್ಲಿ ಖರ್ಚುವೆಚ್ಚಗಳು ಅಧಿಕವಾದೀತು. ಸ್ವಯಂಕೃತ ಅಪರಾಧಗಳು, ಆತುರದಿಂದ ಸಮಸ್ಯೆಗಳು, ಸ್ನೇಹಿತರಿಂದ ಅನುಕೂಲ, ಶುಭಾಶಯ ಮತ್ತು ಪ್ರಸಂಸೆ, ಆರ್ಥಿಕ ಚಿಂತೆಗಳು.

ಕಟಕರಾಶಿ
ದುಃಸ್ವಪ್ನಗಳು, ಮಕ್ಕಳಿಂದ ಅನುಕೂಲ, ಆಗಾಗ ಆತಂಕ ಉಂಟಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲಾ. ಅಪರಿಚಿತರೊಡನೆ ಅನಾವಶ್ಯಕವಾಗಿ ವಾದ, ವಿವಾದಗಳಿಗೆ ಕಾರಣರಾಗದಿರಿ. ಆರ್ಥಿಕವಾಗಿ ತುಸು ಚೇತರಿಕೆ ಕಂಡು ಬಂದರೂ ಖರ್ಚುವೆಚ್ಚಗಳಲ್ಲಿ ಮಿತಿ ಇರಲಿ. ಉದ್ಯೋಗ ಪ್ರಗತಿ, ತಂದೆಯಿಂದ ಸಹಕಾರ, ರಕ್ತಸಂಬಂಧಿಗಳಿಂದ ಅನುಕೂಲ, ಆತುರದಿಂದ ಕಾರ್ಯ ಹಿನ್ನಡೆ, ವಿದ್ಯಾಭ್ಯಾಸದ ಚಿಂತೆ.

ಸಿಂಹರಾಶಿ
ಪ್ರಯಾಣದಲ್ಲಿ ಅನುಕೂಲ, ಪ್ರಯತ್ನಬಲದಿಂದ ಹಿಡಿದ ಕೆಲಸಕಾರ್ಯಗಳಲ್ಲಿ ಅಭಿವೃದ್ಧಿ ಕಂಡು ಬರುವುದು. ಅವಿವಾಹಿತರ ಮಂಗಳಕಾರ್ಯಗಳನ್ನು ಶೀಘ್ರವಾಗಿ ಮುಗಿಸುವ ಅಗತ್ಯವಿಲ್ಲ. ಸಮಯ ನೋಡಿ ಮುಂದುವರಿಸುವುದು. ತಂದೆಯಿಂದ ಯೋಗ, ಅಧಿಕ ಲಾಭ, ಆರ್ಥಿಕ ಅನುಕೂಲ, ಭೂಮಿ ಯೋಗ, ವಾಹನ ಪ್ರಾಪ್ತಿ, ವಿದ್ಯಾಭ್ಯಾಸ ಪ್ರಗತಿ, ಮಾನಸಿಕ ಗೊಂದಲಗಳು.

ಕನ್ಯಾರಾಶಿ
ಸಾಂಸಾರಿಕವಾಗಿ ಜೀವನದ ದಾರಿ ಬದಲಾಯಿಸುವ ಸಾಧ್ಯತೆಯಿದೆ. ವಿದ್ಯಾರ್ಥಿಗಳಿಗೆ ಉದಾಸೀನತೆಯು ಕಾಡಲಿದೆ. ಎದ್ದು ಕಾಣುವ ವ್ಯಕ್ತಿತ್ವದಿಂದ ಮುನ್ನಡೆ ಗಳು ಕಂಡು ಬಂದಾವು. ಆರ್ಥಿಕವಾಗಿ ಅತೀ ಜಾಗ್ರತೆ ಅಗತ್ಯ. ಆಕಸ್ಮಿಕ ಅವಘಡಗಳು, ಉದ್ಯೋಗನಷ್ಟವಿದೆ, ಬದಲಾವಣೆಯಿಂದ ತೊಂದರೆ, ದಾಯಾದಿ ಸಮಸ್ಯೆಗಳು, ಭೂ ವ್ಯವಹಾರದಿಂದ ಸಮಸ್ಯೆ, ದಾಂಪತ್ಯ ಕಲಹಗಳು, ಅವಮಾನ ಅಪವಾದ.

ತುಲಾರಾಶಿ
ಶತ್ರು ನಮನ, ಆರ್ಥಿಕ ಸ್ವಲ್ಪ ಚೇತರಿಕೆ, ವೃತ್ತಿರಂಗದಲ್ಲಿ ಉದ್ಯೋಗಿಗಳಿಗೆ ಅಚ್ಚರಿಯ ವಾರ್ತೆ ತೋರಿ ಬರುವುದು. ತೀರ್ಥಕ್ಷೇತ್ರ ದರ್ಶನದ ಭಾಗ್ಯ ಹಿರಿಯರಿಗೆ ತೋರಿ ಬರಲಿದೆ. ಕೆಲವೊಂದು ಅಶುಭಗ್ರಹಗಳ ಚಲನೆಯಿಂದ ಏರುಪೇರಾಗಲಿದೆ. ಶುಭವಾರ್ತೆ. ಪ್ರಯಾಣದಲ್ಲಿ ಕಲಹ, ತಂದೆಯ ಆರೋಗ್ಯ ವ್ಯತ್ಯಾಸ, ಮುಂಗೋಪ, ಸಹೋದ್ಯೋಗಿಗಳೊಂದಿಗೆ ಮನಸ್ತಾಪ, ಸುಸ್ತು ಅಧಿಕ, ಉಷ್ಣ ಸೋಂಕು.

ವೃಶ್ಚಿಕರಾಶಿ
ಆಕಸ್ಮಿಕ ಅವಘಡ, ಮನೆಯಲ್ಲಿ ಮಂಗಲಕಾರ್ಯಗಳ ಚಿಂತನೆಗೆ ಸದ್ಯದಲ್ಲೇ ಚಾಲನೆ ದೊರಕಲಿದೆ. ಉದ್ಯೋಗಸ್ಥ ಮಹಿಳೆಯರಿಗೆ ಸ್ಥಾನಪಲ್ಲಟವಿದೆ. ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಫ‌ಲಿತಾಂಶವನ್ನು ಪಡೆಯಲಿದ್ದಾರೆ. ಮುನ್ನಡೆಯಿರಿ. ಅನಿರೀಕ್ಷಿತ ಸೋಲು, ಕೆಲಸಗಾರರಿಂದ ತೊಂದರೆ, ಭವಿಷ್ಯದ ಚಿಂತೆ, ಮಕ್ಕಳಿಂದ ಬೇಸರದ ನಡವಳಿಕೆ, ಪೂರ್ವದ ದುರ್ಘಟನೆ ನೆನಪು, ಅವಕಾಶ ಕೈ ತಪ್ಪುವುದು.

ಧನಸ್ಸುರಾಶಿ
ಮಕ್ಕಳ ಭವಿಷ್ಯದ ಯೋಚನೆ, ದುಷ್ಟ ಕನಸುಗಳು, ಸಾರ್ವಜನಿಕ ಕ್ಷೇತ್ರದವರಿಗೆ ಉತ್ತಮ ಸ್ಥಾನಮಾನಗಳು ದೊರಕಲಿವೆ. ಆರೋಗ್ಯ ಸ್ಥಿತಿಯಲ್ಲಿ ಜಾಗ್ರತೆಯಿಂದ ಮುನ್ನಡೆಯಿರಿ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯ ನಡೆಯು ಅಗತ್ಯವಿದೆ. ದೂರ ಸಂಚಾರದಲ್ಲಿ ಜಾಗ್ರತೆ. ಸಂಗಾತಿಯಿಂದ ಹಠಮಾರಿತನ, ಪ್ರೀತಿ-ಪ್ರೇಮದಿಂದ ನೋವು.

ಮಕರರಾಶಿ
ಚಿರಾಸ್ತಿ ವ್ಯವಹಾರ ಯಶಸ್ಸು, ಶತ್ರು ದಮನ, ನಾನಾ ರೀತಿಯ ಖರ್ಚುವೆಚ್ಚಗಳಿದ್ದರೂ ಸರಿಯಾದ ಸಮಯದಲ್ಲಿ ಧನಾಗಮನವಿದ್ದು ಕಾರ್ಯಾಚರಣೆ ಸುಲಭವಾಗುತ್ತದೆ. ವೈವಾಹಿಕ ಭಾಗ್ಯಕ್ಕೆ ಕಂಕಣಬಲದ ಸಾಧ್ಯತೆ ಇದೆ. ಸಾಮಾಜಿಕ ಕ್ಷೇತ್ರದಲ್ಲಿ ವರ್ಚಸ್ಸು ಹೆಚ್ಚಲಿದೆ. ಸಂಗಾತಿ ಆರೋಗ್ಯ ವ್ಯತ್ಯಾಸ, ಮಾನಸಿಕ ಅಸ್ಥಿರತೆ, ಬಂಧುಗಳಿಂದ ನೋವು, ಪತ್ರ ವ್ಯವಹಾರಗಳಲ್ಲಿ ಸಮಸ್ಯೆ, ಸೇವಕರಿಂದ ಉತ್ತಮ ಕೆಲಸ ಕಾರ್ಯ.

ಕುಂಭರಾಶಿ
ಅನಗತ್ಯ ತಿರುಗಾಟ, ಭಾವನೆಗಳಿಗೆ ಪೆಟ್ಟು, ಉದ್ಯೋಗ ಬದಲಾವಣೆಯ ಚಿಂತೆ, ಆರೋಗ್ಯಭಾಗ್ಯದ ಬಗ್ಗೆ ಆಗಾಗ ಯೋಚಿಸುವಂತಾದೀತು. ಗುರುಬಲವು ಉತ್ತಮವಿದ್ದು ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಶ್ರೀದೇವರು ಅನುಗ್ರಹ ತೋರಿಯಾರು. ಇತರರಿಗೆ ಉಪಕಾರ ಮಾಡಲು ಹೋಗಿ ಕಷ್ಟಕ್ಕೆ ಗುರಿಯಾಗುವಿರಿ. ಕಾಲು ನೋವು, ಗ್ಯಾಸ್ಟ್ರಿಕ್, ಮಕ್ಕಳಲ್ಲಿ ಮೊಂಡುತನ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಆರ್ಥಿಕ ಬೆಳವಣಿಗೆಯ ಚಿಂತೆ.

ಮೀನರಾಶಿ
ಮನೆಯಲ್ಲಿ ಮಂಗಲ ಕಾರ್ಯದ ಚಿಂತನೆಗೆ ಸದ್ಯದಲ್ಲೇ ಚಾಲನೆ ಒದಗಲಿದೆ. ವ್ಯಾಪಾರ, ವ್ಯವಹಾರ ವಾಣಿಜೋದ್ಯಮಿಗಳಿಗೆ ಉತ್ತಮ ಅಭಿವೃದ್ಧಿ ಕಂಡು ಬರಲಿದೆ. ಇದರ ಉಪಯೋಗ ಪಡೆದುಕೊಳ್ಳಿರಿ. ಆರ್ಥಿಕ ಅನುಕೂಲ, ಕುಟುಂಬದಲ್ಲಿ ಏಳಿಗೆ, ಮಾನಸಿಕ ಒತ್ತಡಗಳು, ಭಾವನಾತ್ಮಕ ಸೋಲು, ತಂದೆಯಿಂದ ಅನುಕೂಲ, ಪ್ರಯಾಣದಲ್ಲಿ ಕಾರ್ಯಜಯ, ಮೇಲಾಧಿಕಾರಿಗಳಿಂದ ಪ್ರಶಂಸೆ.

Leave A Reply

Your email address will not be published.