ನಿತ್ಯಭವಿಷ್ಯ : 24-08-2020

0

ಮೇಷರಾಶಿ
ನಿಮ್ಮ ಪರಿಶ್ರಮಕ್ಕೆ ತಕ್ಕ ವರಮಾನ, ಮನೆಯಲ್ಲಿ ನೆಮ್ಮದಿಯ ವಾತಾವರಣ, ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ, ಆಂತರಿಕ ಕಲಹ ನಿವಾರಣೆಯಾಗುವುದು, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಹೊಸ ಯೋಜನೆಗೆ ಸಕಾಲ. ಹಿತಶತ್ರುಗಳ ತೊಂದರೆ. ವೃತ್ತಿರಂಗದಲ್ಲಿ ಇಚ್ಛಿತ ನಿರ್ಧಾರ ಅನುಷ್ಠಾನ ಗೊಳ್ಳಲಿರುವ ಸೂಚನೆಯು ಕಂಡುಬರುತ್ತದೆ.

ವೃಷಭರಾಶಿ
ಮನೆಯಲ್ಲಿ ಶುಭಮಂಗಲ ಕಾರ್ಯ, ವಾಣಿಜ್ಯ, ಹಣಕಾಸಿಗೆ ವಿಷಯದಲ್ಲಿ ಪ್ತಗತಿ, ವಾಹನ, ಭೂಖರೀದಿ, ಮನೆನಿರ್ಮಾಣ ಕಾರ್ಯ ಹಾಗೂ ಶುಭಮಂಗಲ ಕಾರ್ಯಗಳಿವೆದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ, ಹಣಕಾಸಿನ ವಿಚಾರದಲ್ಲಿ ಮೋಸ, ಸಾಲಗಾರರ ಕಾಟ, ಉದ್ಯೋಗದಲ್ಲಿ ಹಿನ್ನಡೆ, ಆತ್ಮೀಯರ ಭೇಟಿ, ಮನೆ ದೇವರನ್ನು ಪ್ರಾರ್ಥಿಸಿ,,

ಮಿಥುನರಾಶಿ
ದಾಯಾದಿಗಳಿಂದ ತೊಂದರೆ, ಶತ್ರುಗಳಿಗೆ ಜಯ, ಕಾರ್ಯನಿಮಿತ್ತ ಮನೆಯಿಂದ ದೂರ ಉಳಿಯ ಬೇಕಾದ ಪರಿಸ್ಥಿತಿ ಎದುರಾಗುತ್ತದೆ. ವೃತ್ತಿರಂಗದಲ್ಲಿ ಇಚ್ಛಿತ ನಿರ್ಧಾರ ಮುಂದಿನ ಭವಿಷ್ಯಕ್ಕೆ ಪೂರಕವಾಗಲಿದೆ. ಅಧಿಕಾರಿ ವರ್ಗದವರಿಂದ ನಿರೀಕ್ಷಿತ ಸಹಕಾರ, ಪ್ರೋತ್ಸಾಹ ಲಭಿಸಲಿದೆ. ಸಮಾಧಾನದಿಂದ ಮುಂದು ವರಿಯಿರಿ. ಧನಾರ್ಜನೆಯಲ್ಲಿ ಪ್ರಗತಿ ಇದ್ದರೂ ಖರ್ಚುವೆಚ್ಚಗಳು ಅಧಿಕ ರೂಪ ದಲ್ಲಿದ್ದಾವು. ದಾಂಪತ್ಯ ಜೀವನದಲ್ಲಿ ನೆಮ್ಮದಿ, ಗಣ್ಯ ವ್ಯಕ್ತಿಗಳ ಭೇಟಿ, ಅನ್ಯ ಜನರಲ್ಲಿ ವೈಮನಸ್ಯ.

ಕಟಕರಾಶಿ
ಕಾರ್ಯದೊತ್ತಡ ಮಾನಸಿಕ ಅಶಾಂತಿಗೆ ಕಾರಣವಾದೀತು. ಸ್ನೇಹಿತರಲ್ಲಿ ಕಲಹ, ಮನಸ್ತಾಪದ ಪ್ರಸಂಗ ತೋರಿ ಬಂದೀತು. ಆರೋಗ್ಯ ಭಯ ನಿವಾರಣೆಯಾಗಲಿದೆ. ಹಣಕಾಸಿನ ವಿಚಾರಣೆಯಲ್ಲಿ ವಿವಾದಗಳು ಕಂಡು ಬರಲಿದೆ. ವೃತ್ತಿರಂಗದಲ್ಲಿ ಅಧಿಕಾರಿ ವಲಯದಿಂದ ನಿರೀಕ್ಷಿತ ಸಹಕಾರ, . ವಿದ್ಯಾರ್ಥಿಗಳಿಗೆ ಪ್ರಯತ್ನ ಬಲ ಅಗತ್ಯ. ವಾಹನದಿಂದ ತೊಂದರೆ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಸ್ಥಿರಾಸ್ತಿ ಖರೀದಿ, ಧೈರ್ಯದಿಂದ ಕೆಲಸ ಕಾರ್ಯಗಳಲ್ಲಿ ಮುನ್ನಡೆ.

ಸಿಂಹರಾಶಿ
ವಾಹನ ರಿಪೇರಿ, ಮಾನಸಿಕ ತೊಂದರೆ, ಧನಾರ್ಜನೆಯಲ್ಲಿ ಪ್ರಗತಿ, ಭೂ ನಿವೇಶನ, ಗೃಹ ನಿರ್ಮಾಣ ಕಾರ್ಯಗಳಿಗಾಗಿ ಓಡಾಟ . ಧಾರ್ಮಿಕ ಗುರುಗಳ ಭೇಟಿಯಿಂದ ಮಾನಸಿಕ ನೆಮ್ಮದಿ. ದುಂದುವೆಚ್ಚಾದಿಗಳ ಮೇಲೆ ಹತೋಟಿ ಅಗತ್ಯವಿರುತ್ತದೆ. ವಿದ್ಯಾರ್ಥಿಗಳಿಗೆ ಸಹವಾಸದೋಷದಿಂದ ಅನಗತ್ಯವಾದ ಅಪವಾದವು ಕಾಡಲಿದೆ. ಮಾತಿನಲ್ಲಿ ಹಿಡಿತವಿರಲಿ, ಮನಃ ಕ್ಲೇಷ, ಆರೋಗ್ಯದ ಕಡೆ ಗಮನ ಕೊಡಿ.

ಕನ್ಯಾರಾಶಿ
ವಾಹನ ಖರೀದಿ, ಹಣಕಾಸಿನ ಪರಿಸ್ಥಿತಿ ಉತ್ತಮವಾಗುತ್ತದೆ, ವ್ಯಾಪಾರದಲ್ಲಿ ಲಾಭ, ದೂರ ಪ್ರಯಾಣ, ವಸ್ತ್ರ ಖರೀದಿ. ಆರ್ಥಿಕ ವಿಚಾರದಲ್ಲಿ ಆಶಾದಾಯಕ ಬೆಳವಣಿಗೆ, ಉದ್ಯೋಗ ರಂಗದಲ್ಲಿ ಮೇಲಾಧಿಕಾರಿಗಳಿಂದ ಅಸಮಾಧಾನ, ಕೌಟುಂಬಿಕ ಸಮಸ್ಯೆ ಪರಿಹಾರ. ಹಿತ ಶತ್ರುಗಳಿಂದ ವಿರೋಧಿಗಳಿಗೆ ಆಮಿಷ, ಪ್ರಲೋಭನೆಯಿಂದ ರಾಜಕೀಯ ವರ್ಗದವರಿಗೆ ಆತಂಕ ತಂದೀತು. ಮಕ್ಕಳ ಆರೋಗ್ಯ, ವಿದ್ಯಾಭ್ಯಾಸಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾದೀತು

ತುಲಾರಾಶಿ
ಶೇರು ಮಾರುಕಟ್ಟೆಯಲ್ಲಿ ಲಾಭ, ಮಾನಸಿಕ ಹಿಂಸೆ, ಮಂದಗತಿಯಲ್ಲಿ ಸಾಗಲಿರುವ ಕೆಲಸ ಕಾರ್ಯಗಳು, ಸ್ಥಗಿತ ಯೋಜನೆಯೊಂದು ಸಾಕಾರ, ಗೃಹದಲ್ಲಿ ತುಸು ನೆಮ್ಮದಿ, ಶ್ರೇಯಸ್ಸು ಉಂಟಾಗುವುದು. ಕಾರ್ಯಾಂತರದಿಂದ ಮನೆಯಿಂದ ದೂರ ಉಳಿಯಬೇಕಾದ ಪರಿಸ್ಥಿತಿ ತೋರಿ ಬಂದರೂ ನಿರೀಕ್ಷಿತ ಫ‌ಲ ಲಭಿಸಲಿದೆ. ಕಾರ್ಯ ಕ್ಷೇತ್ರದಲ್ಲಿ ಪ್ರಗತಿ ಮುನ್ನಡೆಯನ್ನು ಸಾಧಿಸಲಿದ್ದೀರಿ. ಗುರಿಯತ್ತ ನಡೆಯಲು ದೃಢ ಮನಸ್ಸು ಮಾಡಿರಿ. ಅಕಾಲ ಭೋಜನ, ಚಂಚಲ ಮನಸ್ಸು, ಮಕ್ಕಳಿಂದ ತೊಂದರೆ.

ವೃಶ್ಚಿಕರಾಶಿ
ಬಂಧುಗಳಿಂದ ನಿಂದನೆ, ವಿನಾಕಾರಣ ಕಲಹ, ಧನಾರ್ಜನೆಯ ವಿಪುಲ ಅವಕಾಶಗಳು ಸದ್ಯದಲ್ಲೇ ತೋರಿ ಬರಲಿವೆ. ಬಂಧುಮಿತ್ರರ ಸಹಕಾರದಿಂದ ಇಚ್ಚಿತ ಕಾರ್ಯಗಳು ನೆರವೇರಲಿವೆ. ಸಾಮಾಜಿಕ ಕೆಲಸಕಾರ್ಯಗಳಿಗಾಗಿ ಒತ್ತಡ ತೋರಿಬರಲಿದೆ. ವೃತ್ತಿರಂಗದಲ್ಲಿ ಕೆಲಸ ಕಾರ್ಯಗಳಲ್ಲಿ ಯಶಸ್ಸು. ಗೃಹಕೃತ್ಯದಲ್ಲಿ ಅಡಚಣೆಗಳು ಮನಸ್ಸಿನ ನೆಮ್ಮದಿ ಕಡಿಮೆ ಮಾಡೀತು. ವಿದ್ಯಾರ್ಥಿಗಳಿಗೆ ಹೆಚ್ಚಿನ ಪರಿಶ್ರಮದಿಂದ ಉತ್ತಮ ಫ‌ಲಿತಾಂಶವಿದೆ.ವ್ಯವಹಾರಗಳಲ್ಲಿ ನಷ್ಟ, ವೃತ್ತಿ ಜೀವನದಲ್ಲಿ ನೆಮ್ಮದಿ ಕಾಣುವಿರಿ.

ಧನಸ್ಸುರಾಶಿ
ಗುರು ಹಿರಿಯರ ಸಲಹೆಯಂತೆ ನಡೆಯುವಿರಿ, ಒತ್ತಡದ ನಡುವೆಯೂ ಕಾರ್ಯನಿರ್ವಹಣೆಯಿಂದ ಯಶಸ್ಸು, ವಿರೋಧಿಗಳ ಜೊತೆಗೆ ಹೊಂದಾಣಿಕೆ ಅಗತ್ಯ, ಆರ್ಥಿಕವಾಗಿ ಸಾಲ ಮರುಪಾವತಿಯ ಬಗ್ಗೆ ಒತ್ತಡ ತಂದೀತು. ವ್ಯಾಪಾರ, ವ್ಯವಹಾರಗಳಲ್ಲಿ ಸ್ನೇಹಿತರ ಸಹಾಯಹಸ್ತ ನಿಮಗೆ ನೆರವಾಗಲಿದೆ. ಭೂ, ನಿವೇಶನ, ಗೃಹ ನಿರ್ಮಾಣ ಕಾರ್ಯಗಳು, ನೂತನ ವ್ಯಾಪಾರ, ವ್ಯವಹಾರಗಳಿಗೆ ಇದು ಸಕಾಲವಲ್ಲ. ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಲಭ್ಯ.

ಮಕರರಾಶಿ
ಸ್ಥಗಿತವಾಗಿದ್ದ ಕೆಲಸಗಳಿಗೆ ಚಾಲನೆ, ವಿಶಿಷ್ಟ ಕಾರ್ಯವೈಖರಿಯಿಂದ ಆರ್ಥಿಕ ಬಿಕ್ಕಟ್ಟಿ ನಿಂದ ಪಾರು, ಸಾಂಸಾರಿಕ ಸಮಸ್ಯೆಯಿಂದ ಪರಿಹಾರ, ಅವಿವಾಹಿತರ ವಿವಾಹ ಪ್ರಸ್ತಾವಗಳಿಗೆ ಕಂಕಣಬಲದ ಯೋಗವು ಒದಗಿಬರಲಿದೆ. ಸಾಮಾಜಿಕ ಸೇವಾಕಾರ್ಯಗಳಲ್ಲಿ ನಿಮ್ಮ ಕಾರ್ಯ ಸಾಧನೆ ಗುರುತಿಸಲ್ಪಡುತ್ತದೆ. ಧಾರ್ಮಿಕ ಕಾರ್ಯಾಸಕ್ತಿ ತೋರಿ ಬಂದು ಮಾನಸಿಕ ಶಾಂತಿ, ಸಮಾಧಾನ ತಂದುಕೊಟ್ಟಿàತು. ವಿಪರೀತ ಖರ್ಚು, ಹಳೇ ಮಿತ್ರರ ಭೇಟಿ, ಮಾನಸಿಕ ಒತ್ತಡದಿಂದ ಹೊರಬನ್ನಿ.

ಕುಂಭರಾಶಿ
ವಿರೋಧಿಗಳಿಂದ ದೂರವಿರಿ, ವೃತ್ತಿರಂಗದಲ್ಲಿ ಇತರರೊಂದಿಗೆ ಹೊಂದಾಣಿಕೆ ಅಗತ್ಯ. ಅವಿವಾಹಿತರ ವಿವಾಹ ಪ್ರಸ್ತಾವಗಳಿಗೆ ಕಂಕಣಬಲ ಒದಗಿಬರಲಿದೆ. ದೇಹಾರೋಗ್ಯದಲ್ಲಿ ಸುಧಾರಣೆ ಸಮಾಧಾನ, ಧನಾರ್ಜನೆಯಲ್ಲಿ ಪ್ರಗತಿ, ಶತ್ರುಭಯ ನಿವಾರಣೆ, ಉದ್ದೇಶಿತ ಕಾರ್ಯದಲ್ಲಿ ಸಿದ್ಧಿ. ಗೃಹ, ಭೂ, ವಾಹನಾದಿಗಳಿಗಾಗಿ ಧನವ್ಯಯ ವಾಗಲಿದೆ. ಆರೋಗ್ಯದಲ್ಲಿ ಏರುಪೇರು ಕಂಡುಬರಲಿದೆ. ಸಾಮಾಜಿಕ ಕ್ಷೇತ್ರಗಳಲ್ಲಿ ಮುನ್ನಡೆ, ಉತ್ಪನ್ನ ವಹಿವಾಟಿನಲ್ಲಿ ಲಾಭ.

ಮೀನರಾಶಿ
ಸ್ತ್ರೀಯರಿಗೆ ಶುಭ ಸಮಯ, ಸರ್ಕಾರಿ ಕೆಲಸದವರಿಗೆ ಭಾಗ್ಯ ಯೋಗ, ಶುಭಮಂಗಲ ಕಾರ್ಯಗಳಿಗಾಗಿ ಅಲೆದಾಟ, ವೃತ್ತಿರಂಗದಲ್ಲಿ ಮೇಲಾಧಿಕಾರಿಗಳ ಒತ್ತಡ, ಆರ್ಥಿಕ ವಿಚಾರದಲ್ಲಿ ಕಾರ್ಯದಲ್ಲಿ ಪ್ರಗತಿ ಇದೆ. ವ್ಯಾಪಾರಿ ವರ್ಗದವರಿಗೆ ಹಳೆಯ ವಸ್ತು, ಸರಕುಗಳ ವಿಕ್ರಯದ ಅವಕಾಶದಿಂದ ಹೆಚ್ಚಿನ ಲಾಭ, ಆರೋಗ್ಯದ ವಿಚಾರದಲ್ಲಿ ಕಾಳಜಿ ಅಗತ್ಯ. ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಭಾಗಿ, ಮನಃಶಾಂತಿ.

Leave A Reply

Your email address will not be published.