ನಿತ್ಯಭವಿಷ್ಯ : ಈ ರಾಶಿಯವರಿಗೆ ಬಹುದಿನದ ಕಲಸು ನನಸಾಗಲಿದೆ

ಮೇಷರಾಶಿ
ಜಾನತನದಿಂದ ವ್ಯವಹರಿಸಿ, ಗುರು ಹಿರಿಯರಲ್ಲಿ ಭಕ್ತಿ ಇರಲಿ, ಜೀವನದ ಗೊಂದಲಗಳು ಹಂತ ಹಂತವಾಗಿ ಪರಿಹಾರವಾಗಲಿದೆ, ಮನಶಾಂತಿ, ಭಯಭೀತಿ ನಿವಾರಣೆ, ಕಾರ್ಯಾನುಕೂಲ, ಶುಭದಿನ.

ವೃಷಭರಾಶಿ
ಹಿರಿಯರ ಆರೋಗ್ಯದ ಬಗ್ಗೆ ಎಚ್ಚರಿಕೆಯಿರಲಿ, ವಿದ್ಯಾರ್ಥಿಗಳಿಗೆ ಆತಂಕ, ಸಮಸ್ಯೆಗಳನ್ನು ಬುದ್ದಿವಂತಿಕೆಯಿಂದ ಪರಿಹರಿಸಿಕೊಳ್ಳಿ, ಆಕಸ್ಮಿಕ ಧನಲಾಭ, ಮಿತ್ರರಿಂದ ನಿಷ್ಠೂರ, ಅನಾರೋಗ್ಯ, ಸಾಂಸಾರಿಕವಾಗಿ ಹೊಂದಾಣಿಕೆಯಿರಲಿ, ಉದ್ಯೋಗದಲ್ಲಿ ಕಿರಿ-ಕಿರಿ.

ಮಿಥುನರಾಶಿ
ಶಾಂತಿ, ಸಹನೆಯನ್ನು ರೂಢಿಸಿಕೊಳ್ಳಿ, ಆರ್ಥಿಕ ಸಂಕಷ್ಟ ಎದುರಾಗಲಿದೆ, ಸಾಲ ಮರುಪಾವತಿ, ವಸ್ತ್ರಾಭರಣ ಪ್ರಾಪ್ತಿ, ಚಿಂತೆ ಬೇಡ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ, ಸುಖ ಭೋಜನ, ಮನಶಾಂತಿ, ಉನ್ನತ ಸ್ಥಾನಮಾನ, ಸ್ತ್ರೀ ಲಾಭ, ಶತ್ರು ಬಾಧೆ.

ಕರ್ಕಾಟಕರಾಶಿ
ಆಸೆಯನ್ನು ಸ್ವಲ್ಪ ಸಮಯ ತಡೆದುಕೊಳ್ಳಿ, ಆಕಸ್ಮಿಕ ಖರ್ಚು, ವ್ಯರ್ಥ ಧನಹಾನಿ, ವಿಲಾಸಿ ವಸ್ತುಗಳ ಖರೀದಿ ಬೇಡ, ಸದ್ಯದಲ್ಲಿಯೇ ಉತ್ತಮ ಕಾಲ ಬರಲಿದೆ, ಮನಸ್ತಾಪ, ಇಲ್ಲಸಲ್ಲದ ತಕರಾರು, ವ್ಯವಹಾರದಲ್ಲಿ ಏರುಪೇರು, ಪರಸ್ಥಳ ವಾಸ.

ಸಿಂಹರಾಶಿ
ಸರಕಾರಿ ಕೆಲಸ ಕಾರ್ಯಗಳಲ್ಲಿ ಗೆಲುವು, ಮನೆಯಲ್ಲಿ ಗೃಹಿಣಿಗೆ ಸಂಭ್ರಮ, ವ್ಯವಹಾರದಲ್ಲಿ ಚೇತರಿಕೆ, ವಿರೋಧಿಗಳಿಂದ ಕಿರುಕುಳ, ಕಾರ್ಯಸಾಧನೆಗಾಗಿ ತಿರುಗಾಟ, ಕುಟುಂಬದಲ್ಲಿ ನೆಮ್ಮದಿಯ ವಾತಾವರಣ, ಆರೋಗ್ಯ ಸುಧಾರಣೆ.

ಕನ್ಯಾರಾಶಿ
ಸರಕಾರಿ ಕಡತ ವಿಲೇವಾರಿ, ಮನಸ್ಸಿಗೆ ನಾನಾ ರೀತಿಯ ಚಿಂತೆ, ಶೈಕ್ಷಣಿಕ ಕ್ಷೇತ್ರದವರಿಗೆ ಹೆಚ್ಚಿನ ಲಾಭ, ಮೇಲಾಧಿಕಾರಿಗಳಿಂದ ಸಹಕಾರ, ಮನಸಿಗೆ ಸಮಾಧಾನ, ಅನಾರೋಗ್ಯ, ಉದ್ಯೋಗದಲ್ಲಿ ಸ್ಥಾನಮಾನ, ವ್ಯಾಪಾರದಲ್ಲಿ ಸಾಧಾರಣ ಲಾಭ.

ತುಲಾರಾಶಿ
ಶ್ರೇಯೋಭಿವೃದ್ದಿ ಕಂಡುಬರಲಿದೆ, ಸಂಚಾರದಿಂದ ದೇಹಾಯಾಸ, ಅನಾರೋಗ್ಯದ ಬಗ್ಗೆ ಎಚ್ಚರವಿರಲಿ, ಆದಾಯಕ್ಕಿಂತ ಖರ್ಚು ಜಾಸ್ತಿ, ವಿದ್ಯಾರ್ಥಿಗಳಿಗೆ ಉನ್ನತ ಸ್ಥಾನಮಾನ, ಸ್ತ್ರೀಯರಿಗೆ ತೊಂದರೆ, ದ್ರವ್ಯ ನಷ್ಟ, ಕುಟುಂಬದಲ್ಲಿ ಕಲಹ.

ವೃಶ್ಚಿಕರಾಶಿ
ಪ್ರಯತ್ನ ಬಲಕ್ಕೆ ಸೂಕ್ತ ಫಲಿತಾಂಶ ದೊರೆಯಲಿದೆ, ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯತ್ನ ಬಲ ಅಗತ್ಯ, ವ್ಯಾಪಾರಿಗಳಿಗೆ ತಾಳ್ಮೆ ಅಗತ್ಯ, ವ್ಯವಹಾರಗಳಲ್ಲಿ ಏರುಪೇರು, ಅನಾರೋಗ್ಯ, ಚಂಚಲ ಮನಸ್ಸು, ಮಹಿಳೆಯರಿಗೆ ಉದ್ಯೋಗದಲ್ಲಿ ಬಡ್ತಿ.

ಧನಸ್ಸುರಾಶಿ
ಬಹುದಿನದ ಕಲಸು ನನಸಾಗಲಿದೆ, ಸಾಂಸಾರಿಕವಾಗಿ ಸಮಸ್ಯೆಗಳನ್ನು ಬದಿಗೊತ್ತಿ, ಅವಿವಾಹಿತರಿಗೆ ಶುಭದಿನ, ಹಣಕಾಸಿನ ತೊಂದರೆ, ಅಲ್ಪ ಲಾಭ, ಅಧಿಕ ಖರ್ಚು, ನೆಮ್ಮದಿ ಇಲ್ಲದ ಜೀವನ, ಗಣ್ಯ ವ್ಯಕ್ತಿಗಳ ಭೇಟಿ, ಮಕ್ಕಳಿಂದ ನಿಂದನೆ.

ಮಕರರಾಶಿ
ಪ್ರಯತ್ನ ಬಲದಿಂದ ವಿಶೇಷ ಯಶಸ್ಸು, ಆರೋಗ್ಯಕ್ಕಾಗಿ ಚಿಂತೆ ಬಿಟ್ಟರೆ ಎಲ್ಲವೂ ಶುಭ, ವ್ಯವಹಾರದಲ್ಲಿ ಎಚ್ಚರಿಕೆಯಿರಲಿ, ಬಹುಜನರಲ್ಲಿ ವಿರೋಧ, ಕಠೋರವಾಗಿ ಮಾತನಾಡುವಿರಿ, ಪರರ ಧನ ಪ್ರಾಪ್ತಿ.

ಕುಂಭರಾಶಿ
ಷೇರು ವ್ಯವಹಾರದಲ್ಲಿ ಹೂಡಿಕೆ ಮುನ್ನ ಯೋಚಿಸಿ, ಕೋಪ, ವಿನಾಕಾರಣ ದ್ವೇಷ, ವ್ಯವಹಾರ ಸಾಲ ವಸೂಲಾತಿಯಿಂದ ನೆಮ್ಮದಿ, ಖರ್ಚು ವ್ಯಚ್ಚಗಳ ಮೇಲೆ ಹಿಡಿತವಿರಲಿ, ಮಾತಾ-ಪಿತೃಗಳ ಸೇವೆ, ಮನಶಾಂತಿ, ಮಾಡುವ ಕೆಲಸ ಕಾರ್ಯಗಳಲ್ಲಿ ಭಯ, ಆರೋಗ್ಯದಲ್ಲಿ ಏರುಪೇರು.

ಮೀನರಾಶಿ
ಮಡದಿದ ಬಹುದಿನದ ಕನಸು ನನಸಾಗಲಿದೆ, ವಿದ್ಯಾರ್ಥಿಗಳಿಗೆ ಅನುಕೂಲಕರ ದಿನ, ಯತ್ನ ಕಾರ್ಯಗಳಲ್ಲಿ ಜಯ, ಸಾಧುಸಂತರಿಗೆ ಕೈಲಾದ ಸಹಾಯ, ದ್ರವ್ಯಲಾಭ, ಹಣದ ಸಮಸ್ಯೆ, ಅವಿವಾಹಿತರಿಗೆ ಶುಭದಿನ, ಧನಲಾಭ.

Comments are closed.