ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 24-07-2020

ನಿತ್ಯಭವಿಷ್ಯ : 24-07-2020

- Advertisement -

ಮೇಷರಾಶಿ
ಅನಿರೀಕ್ಷಿತವಾಗಿ ಅಧಿಕಾರಿ ವರ್ಗದವರಿಗೆ ಪ್ರಮೋಶನ್‌ ಆಗಲಿದೆ. ಸಾಂಸಾರಿಕವಾಗಿ ನಿಮ್ಮ ಎಷ್ಟೋ ಕೆಲಸಗಳು ನಡೆದು ಹೋಗಲಿವೆ. ದೈಹಿಕ ಹಾಗೂ ಆರ್ಥಿಕ ಸ್ಥಿತಿಗಳು ಸುಧಾರಿಸುತ್ತಾ ಹೋಗಲಿರುವುದು. ವಿದ್ಯಾಭ್ಯಾಸದಲ್ಲಿ ಅನುಕೂಲ, ಅಲಂಕಾರಿಕ ವಸ್ತುಗಳ ಮೇಲೆ ಆಸೆ, ಹಣಕಾಸು ಲಾಭ ನಿಧಾನ, ಕೆಲಸ ಕಾರ್ಯಗಳಲ್ಲಿ ಅನುಕೂಲ, ರಾಜಕೀಯ ವ್ಯಕ್ತಿಗಳಿಂದ ಪ್ರಶಂಸೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆ ವ್ಯವಹಾರದಲ್ಲಿ ಹಿನ್ನಡೆ.

ವೃಷಭರಾಶಿ
ವ್ಯಾಪಾರ-ವ್ಯವಹಾರದಲ್ಲಿ ನಿರೀಕ್ಷಿತ ಆದಾಯ, ಆತ್ಮಗೌರವಕ್ಕೆ ಧಕ್ಕೆ, ಆತ್ಮ ಸಂಕಟ ಭಯ ಭೀತಿ, ಅಧಿಕಾರಿ ಜನರು ಹಾಗೂ ಮಿತ್ರರು ನಿಮಗೆ ಸಹಕಾರ ನೀಡಲಿದ್ದಾರೆ. ನೂತನ ಕಾರ್ಯಾರಂಭಕ್ಕೆ ಇದು ಸಕಾಲ. ಶತ್ರುಗಳಿಂದ ಸಮಸ್ಯೆ ಇದೆ. ಮಿಥ್ಯಾಪವಾದ ಸಮಸ್ಯೆ ತರಲಿದೆ. ಮಕ್ಕಳಿಗೆ ಶುಭವಾರ್ತೆ ಇದೆ. ದೈಹಿಕ ಸಮಸ್ಯೆ, ಶತ್ರುಗಳಿಂದ ತೊಂದರೆ, ಕೂಲಿ ಕಾರ್ಮಿಕರ ಕೊರತೆ, ಸಾಲ ಲಭಿಸುವುದಿಲ್ಲ, ಆರೋಗ್ಯ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

ಮಿಥುನರಾಶಿ
ನೆರೆಹೊರೆಯವರಿಂದ ಕಿರಿಕಿರಿ, ಇಲ್ಲ ಸಲ್ಲದ ಅಪವಾದ, ಮೋಸದ ತಂತ್ರಕ್ಕೆ ಸಿಲುಕುವಿರಿ, ಅಲಂಕಾರಿಕ ವಸ್ತುಗಳಿಂದ ಸಮಸ್ಯೆ, ವೈವಾಹಿಕ ಮಾತುಕತೆಗಳು ಫ‌ಲಪ್ರದವಾದಾವು. ವ್ಯಾಪಾರದ ಹೂಡಿಕೆಯಲ್ಲಿ ಜಾಗ್ರತೆ ಇರಲಿ. ಆರ್ಥಿಕವಾಗಿ ನಾನಾ ರೀತಿಯಲ್ಲಿ ಖರ್ಚುಗಳು ತೋರಿ ಬಂದು ಆತಂಕಕ್ಕೆ ಕಾರಣವಾದಾವು. ಜಾಗ್ರತೆ ಮಾಡಿರಿ. ಅತಿಯಾದ ಜಿಪುಣತನ, ಪ್ರೀತಿ ಪ್ರೇಮ ವಿಶ್ವಾಸದ ಕೊರತೆ, ದುಶ್ಚಟಗಳಿಂದ ನಷ್ಟ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ಕಟಕರಾಶಿ
ಶೇರು, ಕಮಿಶನ್‌, ವ್ಯವಹಾರದಲ್ಲಿ ಲಾಭಾಂಶ ಅಧಿಕ ವಿರುತ್ತದೆ. ಕೆಲಸಗಾರರಿಗೆ ಮುಂಭಡ್ತಿ ಸೌಲಭ್ಯವು ದೊರಕಲಿದೆ. ಕೃಷಿ ಕಾರ್ಯಗಳಿಗೆ ಕಾಯುವ ಸ್ಥಿತಿ ತರಲಿದೆ. ಹಿತಶತ್ರುವಿನ ಕಾಟದಿಂದಾಗಿ ಕೆಲಸದಲ್ಲಿ ಸ್ಥಗಿತ. ಸಹೋದರಿಯ ಆರೋಗ್ಯದಲ್ಲಿ ವ್ಯತ್ಯಾಸ, ಮಿತ್ರರು ದೂರಾಗುವರು, ಗೌರವ ಸನ್ಮಾನದ ನಿರೀಕ್ಷೆ, ಮಾನಸಿಕ ನೋವು, ಸ್ಥಿರಾಸ್ತಿ-ವಾಹನದಿಂದ ನಷ್ಟ, ಅಲಂಕಾರಿ ವಸ್ತುಗಳಿಂದ ಸೌಂದರ್ಯ ಹಾಳು, ಆರೋಗ್ಯದಲ್ಲಿ ವ್ಯತ್ಯಾಸ.

ಸಿಂಹರಾಶಿ
ಉದ್ಯೋಗದಲ್ಲಿ ಹಿನ್ನಡೆ, ಗೌರವಕ್ಕೆ ಧಕ್ಕೆ, ಜವಾಬ್ದಾರಿ ಜಾರಿಕೊಳ್ಳುವಿರಿ, ಧಾರ್ಮಿಕ ಕ್ಷೇತ್ರಕ್ಕೆ ಪ್ರಯಾಣ ಮುಂದೂಡಿಕೆ, ಧಾರ್ಮಿಕ ಕಾರ್ಯಕ್ರಮದಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಕಾರ್ಯಪ್ರವೃತ್ತಿಯಲ್ಲಿ ಕಿರಿಕಿರಿ  ಯಾದೀತು. ಮಕ್ಕಳ ವಿದ್ಯಾಭ್ಯಾಸದಿಂದ ಹಿರಿಯರಿಗೆ ತೃಪ್ತಿ ತರಲಿದೆ. ಸ್ಥಗಿತಗೊಂಡ ಕಾರ್ಯ ಪುನಾರಂಭ. ಕುಟುಂಬದಲ್ಲಿ ಅಂತರ ಕಾಯ್ದುಕೊಳ್ಳುವಿರಿ, ಅನ್ಯರ ಮಾತುಗಳಿಂದ ಅಶಾಂತಿ, ಮಾನಸಿಕ ಯೋಚನೆ ಬದಲಾವಣೆ.

ಕನ್ಯಾರಾಶಿ
ಹಣಕಾಸು ವಿಚಾರದಲ್ಲಿ ಹಿನ್ನಡೆ, ಕುಟುಂಬದಿಂದ ದೂರ ಉಳಿಯುವ ಚಿಂತೆ, ಪಾಲು ಬಂಡವಾಳದಿಂದ ಅದಾಯ ಹೆಚ್ಚಲಿದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ತೆರಿಗೆ ಅಧಿಕಾರಿಗಳಿಂದ ಕ್ಲೇಶವಿದೆ. ತಾಂತ್ರಿಕ ವೃತ್ತಿ, ವ್ಯಾಪಾರ, ವೈವಾಟುಗಳು ಸ್ಥಗಿತಗೊಂಡಾವು. ಶತ್ರುಕಾಟದ ನಡುವೆ ಕಾರ್ಯಸಿದ್ಧಿ. ವಾಗ್ವಾದಗಳಲ್ಲಿ ಸೋಲು, ಅಧಿಕವಾದ ಚಿಮತೆ, ಪ್ರಯಾಣಕ್ಕೆ ಮನಸ್ಸು, ಪಿತ್ರಾರ್ಜಿತ ಆಸ್ತಿ ತಗಾದೆ, ತಂದೆಯಿಂದ ನಷ್ಟ, ಶುಭ ಕಾರ್ಯಗಳಿಗೆ ಅಧಿಕ ಖರ್ಚು.

ತುಲಾರಾಶಿ
ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಅವಕಾಶಗಳು ಕಡಿಮೆಯಾಗುವುದು, ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ, ಉದ್ಯೋಗದಲ್ಲಿ ಹಿನ್ನಡೆ, ಆಪ್ತೇಷ್ಟರಲ್ಲಿ ಮಂಗಲಕಾರ್ಯಗಳ ಸಂಭ್ರಮ ವಿದೆ. ಕೋರ್ಟುಕಚೇರಿಯಲ್ಲಿ ಅಪಚಯದ ಸಂಶಯ ಹುಟ್ಟಲಿದೆ. ಆಗಾಗ ಸ್ತ್ರೀ ಮುಖೇನ ಕಲಹ ತಂದೀತು. ದೀರ್ಘ‌ಕಾಲೀಕ ರೋಗ ಮರುಕಳಿಸಲಿದೆ. ಸೋಲು-ನಷ್ಟ ನಿರಾಸೆ, ಆರೋಗ್ಯದಲ್ಲಿ ಏರುಪೇರು, ಮಾತೃವಿನಿಂದ ಅಂತರ ಕಾಯ್ದುಕೊಳ್ಳುವಿರಿ, ಶುಭ ಕಾರ್ಯಗಳಲ್ಲಿ ಹಿನ್ನಡೆ.

ವೃಶ್ಚಿಕರಾಶಿ
ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಆತ್ಮೀಯರ ನಡವಳಿಕೆಯಿಂದ ಬೇಸರ, ಪ್ರಯಾಣದಿಂದ ಲಾಭ, ವ್ಯಾಪಾರಿ ವರ್ಗದವರಿಗೆ ಆದಾಯವು ಉತ್ತಮವಿರುತ್ತದೆ. ಋಣಮುಕ್ತರಾಗಿ ನಿಟ್ಟುಸಿರು ಬಂದೀತು. ದುಡುಕು ವರ್ತನೆಗಳು ಚಿಂತೆ ತಂದಾವು. ವೃತ್ತಿರಂಗದಲ್ಲಿ ಯಾರದೋ ತಪ್ಪಿಗೆ ನೀವು ಬಲಿಯಾಗ ಬೇಕಾದೀತು. ತಂದೆಯಿಂದ ಅನುಕೂಲ, ರಾಜಕೀಯ ವ್ಯಕ್ತಿಗಳಿಂದ ಲಾಭ, ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಜಯ, ವಾಹನ ಖರೀದಿಯ ಆಸೆ, ವ್ಯಾಮೋಹಗಳಲ್ಲಿ ನಿರಾಸಕ್ತಿ, ಶೃಂಗಾರ ಸಾಧನಗಳಿಗೆ ಅಧಿಕ ಖರ್ಚು.

ಧನಸ್ಸುರಾಶಿ
ನಂಬಿಕಸ್ಥರಿಂದ ಗೌರವಕ್ಕೆ ಧಕ್ಕೆ, ಕೆಲಸಗಾರರ ಕೊರತೆ, ಋಣ ಬಾಧೆ, ಬಾಡಿಗೆದಾರರ ಸಮಸ್ಯೆ, ರಾಜಕೀಯ ವ್ಯಕ್ತಿಗಳ ಭೇಟಿ, ತಂದೆಯಿಂದ ಅನುಕೂಲ, ಪುಣ್ಯ ಕ್ಷೇತ್ರಕ್ಕೆ ದರ್ಶನಕ್ಕೆ ಮನಸ್ಸ, ದೂರ ಪ್ರಯಾಣಕ್ಕೆ ತಯಾರಾಗುವಿರಿ. ರಿಪೇರಿಯಂತಹ ಕೆಲಸಗಾರರಿಗೆ ಕ್ಲೇಶ ಹೆಚ್ಚಾದೀತು. ವಿದ್ಯಾರ್ಜನೆಯಲ್ಲಿ ಮುನ್ನಡೆ ಇದೆ. ನಿರುದ್ಯೋಗಿಗಳಿಗೆ ಅನಿರೀಕ್ಷಿತ ಉದ್ಯೋಗ ಪ್ರಾಪ್ತಿ ಇದೆ. ಕೋರ್ಟುಕಚೇರಿಯಲ್ಲಿ ನಿಮ್ಮ ಕೆಲಸಕಾರ್ಯ ಜಯಗಳಿಸಲಿದೆ.

ಮಕರರಾಶಿ
ಪ್ರೇಮ ವಿಚಾರದಲ್ಲಿ ಹಿನ್ನಡೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಅಧಿಕವಾದ ಒತ್ತಡ, ಸಂತಾನ ದೋಷ, ಮಕ್ಕಳಿಂದ ಸೋಲು, ನಷ್ಟ, ನಿರಾಸೆ, ದೇವತಾಕಾರ್ಯಗಳು ಮನೆಯಲ್ಲಿ ನಡೆದು ಮನಸ್ಸಿಗೆ ಹಿತವೆನಿಸಲಿವೆ. ಪತ್ನಿಗೆ ಉಷ್ಣಪೀಡೆ ಕಂಡು ಬರಲಿದೆ. ಮಹಿಳಾ ಅಧಿಕಾರಿಗಳಿಗೆ ಸ್ಥಾನಪಲ್ಲಟ ಯೋಗವಿದೆ. ಹಳೇ ಬಾಕಿಯು ವಸೂಲಾಗಲಿದೆ. ಉದ್ಯೋಗದಲ್ಲಿ ತೊಂದರೆ, ಗೌರವಕ್ಕೆ ಧಕ್ಕೆ, ಆಯುಷ್ಯಕ್ಕೆ ಕಂಟಕವಾಗುವುದೆಂಬ ಆತಂಕ, ಅಹಂಭಾವದಿಂದ ದಾಂಪತ್ಯದಲ್ಲಿ ವೈಮನಸ್ಸು.

ಕುಂಭರಾಶಿ
ಮಾನಸಿಕ ವೇದನೆ, ಗುಪ್ತ ಇಚ್ಛೆಗಳಿಂದ ತೊಂದರೆ, ಮನೆ ವಾತಾವರಣದಲ್ಲಿ ಅಶಾಂತಿ, ವಾಹನದಿಂದ ತೊಂದರೆ, ಸರಕಾರಿ ಕಾರ್ಯಕರ್ತರಿಗೆ ಯೋಗ್ಯ ಪುರಸ್ಕಾರ ದೊರಕಲಿದೆ. ಯೋಗ್ಯ ವಯಸ್ಕರಿಗೆ ಮದುವೆಯ ಪ್ರಸ್ತಾವಗಳು ಕಂಕಣಬಲಕ್ಕೆ ಪೂರಕವಾದಾವು. ಕೆಲಸಕಾರ್ಯಗಳಿಗಾಗಿ ಹಣದ ತಾಪತ್ರಯ ಕಂಡು ಬರಲಿದೆ. ಕೃಷಿಕರಿಗೆ ನಷ್ಟ, ಗುರು-ದೈವ ನಿಂದನೆ ಮಾಡುವಿರಿ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಸ್ತ್ರೀಯರಿಂದ ಕಳಂಕ.

ಮೀನರಾಶಿ
ಆಕಸ್ಮಿಕ ಸೋಲು, ನಷ್ಟ, ನಿರಾಸೆ, ವಿಶ್ರಾಂತಿ ವೇತನ ಬರುವುದಕ್ಕೆ ವಿಳಂಬ, ವಾಹನ ಚಾಲನೆಯಲ್ಲಿ ಎಚ್ಚರ, ಆರ್ಥಿಕವಾಗಿ ನಾನಾ ರೀತಿಯ ಖರ್ಚು ಗಳು ತೋರಿ ಬಂದಾವು. ಆದರೂ ಅನಿರೀಕ್ಷಿತ ಧನಾಗಮನ ವಿರುತ್ತದೆ. ಮಕ್ಕಳ ಮೋಜು ಹಿರಿಯರಿಗೆ ಮಾನ ಹಾನಿಯಾದೀತು. ಸಾಂಸಾರಿಕವಾಗಿ ತುಸು ನೆಮ್ಮದಿ ಇರುತ್ತದೆ. ಬಂಧುಗಳಲ್ಲಿ ಶತ್ರುತ್ವ, ಪಿತ್ತ, ಕಫ ಬಾಧೆ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಉದ್ಯೋಗದಲ್ಲಿ ಕಿರಿಕಿರಿ, ವ್ಯವಹಾರ ಬದಲಾವಣೆಯಿಂದ ತೊಂದರೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular