ನಿತ್ಯ ಭವಿಷ್ಯ :18-09-2020

0

ಮೇಷರಾಶಿ:
ಹೋಟೆಲ್, ಹೋಮ್ ಸ್ಟೇ, ಪ್ರವಾಸೋದ್ಯಮ ಇತ್ಯಾದಿ ಕ್ಷೇತ್ರಗಳಲ್ಲಿ ತೊಡಗಿರುವವರಿಗೆ ಲಾಭದಾಯಕ ದಿನವಾಗಿದೆ. ವ್ಯಾಪಾರ ಮತ್ತು ವ್ಯವಹಾರವು ಏರಿಳಿತಗಳನ್ನು ಎದುರಿಸಲಿದೆ, ಅದನ್ನು ಸಮತೋಲನಗೊಳಿಸುವುದು ಅಗತ್ಯವಾಗಿರುತ್ತದೆ. ಕ್ಷೇತ್ರದ ಸಹೋದ್ಯೋಗಿಗಳು ಮತ್ತು ಅಧಿಕಾರಿಗಳೊಂದಿಗೆ ವಾದ ಮಾಡಬೇಡಿ, ಅದು ತೊಂದರೆಯನ್ನುಂಟುಮಾಡುತ್ತದೆ.

ವೃಷಭರಾಶಿ:
ವ್ಯವಹಾರದಲ್ಲಿ ಉತ್ತಮ ಗಳಿಕೆಯ ಸಾಮರ್ಥ್ಯವಿದೆ. ಮನೆಯವರು ಸಂತೋಷದ ಜೀವನವನ್ನು ಬಯಸಿದರೆ, ನಿಮ್ಮ ಸಂಗಾತಿಯೊಂದಿಗೆ ಪ್ರಾಮಾಣಿಕವಾಗಿರಿ.ವಿವಾಹಾಪೇಕ್ಷಿಗಳು ಯೋಗ್ಯವಾದ ಸಂಗಾತಿಯ ಹುಡುಕಾಟದಲ್ಲಿದ್ದರೆ ಇಂದು ಸಿದ್ಧಿ ಪಡೆಯಲು ವಿಶೇಷ ಅವಕಾಶವಿದೆ.

ಮಿಥುನರಾಶಿ:
ಆತ್ಮೀಯರೊಬ್ಬರು ಬಿರುಸಾದ ಮಾತುಗಳಿಂದ ಆಕ್ಷೇಪಗಳನ್ನು ವ್ಯಕ್ತಪಡಿಸಬಹುದು. ತಿರುಗಿ ಏನೂ ಮಾತಾಡದೆ ಸುಮ್ಮನಿರಿ. ವಿಘ್ನ ಸಂತೋಷಗಳಿಂದ ಹಲವಾರು ರೀತಿಯ ತೊಂದರೆಗಳು ಎದುರಾಗಲಿವೆ. ಈ ಬಗ್ಗೆ ಸ್ವಲ್ಪ ಜಾಗ್ರತೆಯಿಂದಿದ್ದರೆ ಒಳಿತಿದೆ.ದೂರದ ಬಾಂಧವರೊಬ್ಬರನ್ನು ಭೇಟಿಯಾಗಲು ಹಲವು ಕಾರಣಗಳು ಕೂಡಿ ಬರಬಹುದು. ವಿಭಿನ್ನ ಅನುಭವಗಳು ಎದುರಾಗಲಿವೆ.

ಕಟಕರಾಶಿ:
ಸಮಾಜದಲ್ಲಿ ಸಕಾರಾತ್ಮವಾಗಿ ಗುರುತಿಸಿಕೊಂಡ ನೀವು ಅದರಿಂದಾಗಿಯೇ ಹೆಚ್ಚು ಹೆಚ್ಚು ಅರ್ಥಪೂರ್ಣತೆ ಪಡೆಯಲಿದ್ದೀರಿ. ಅಪರಿಚಿತ ವ್ಯಕ್ತಿಯೊಬ್ಬರು ನಿಮಗಾಗಿರುವ ದುಃಖ ದುಮ್ಮಾನಗಳಿಗೆ ಸ್ಪಂದಿಸುವುದರಿಂದ ಸಂತೋಷ ಹೊಂದಲಿದ್ದೀರಿ. ಇಂದು, ಜವಾಬ್ದಾರಿಯುತ ಕೆಲಸವು ನಿಮ್ಮ ಮೇಲೆ ಬರಬಹುದು. ಉದ್ಯಮಿಗಳು ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಜನರು ಸಂತೋಷದ ಸುದ್ದಿಗಳನ್ನು ಸ್ವೀಕರಿಸುತ್ತಾರೆ.

ಸಿಂಹರಾಶಿ:
ಜನಪ್ರಿಯತೆ, ಜನಬೆಂಬಲಗಳನ್ನು ಕ್ರೋಡೀಕರಿಸಿಕೊಳ್ಳಲು ರಾಜಕೀಯ ಕ್ಷೇತ್ರದವರಿಗೆ ಯೋಗ್ಯ ದಿನ. ಬಾಳಸಂಗಾತಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಲಿ. ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಹೊಸ ಅವಕಾಶ ಸಿಗಲಿದೆ.

ಕನ್ಯಾರಾಶಿ:
ಮನಸ್ಸಿನ ಸಂಕಲ್ಪಗಳು ಸಿದ್ಧಿಸಲಿವೆ. ಮೊದಲು ನಿಮ್ಮನ್ನು ನೀವು ಗೆದ್ದರೆ ನಂತರ ಜಗತ್ತನ್ನೇ ಗೆಲ್ಲಬಹುದು.ಭಾವನಾತ್ಮಕ ತಲ್ಲಣಗಳನ್ನು ನಿಯಂತ್ರಣ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ತೊಂದರೆ ಎದುರಾಗುವುದು ನಿಶ್ಚಿತ. ನಿಮಗೆ ಕಚೇರಿಯಲ್ಲಿ ಪ್ರಮುಖ ಕೆಲಸಗಳನ್ನು ಸಹ ನೀಡಲಾಗುವುದು, ಅದು ಪೂರ್ಣಗೊಂಡ ನಂತರ ನಿಮ್ಮ ಆದಾಯ ಹೆಚ್ಚಾಗುತ್ತದೆ.

ತುಲಾರಾಶಿ:
ಒಂದು ಸಾಲ ತೀರಿಸಲೆಂದು ಇನ್ನೊಂದು ಸಾಲ ಮಾಡಲು ಹೊರಟಿದ್ದೀರಿ. ಇದನ್ನು ನಿಯಂತ್ರಿಸಿದಲ್ಲಿ ಒಳಿತಿದೆ. ಜೀವನದಲ್ಲಿ ಹಿರಿಯರನ್ನು ಸದಾ ಕಾಲವೂ ಗೌರವದಿಂದ ಕಾಣುವ ನಿಮಗೆ ವಿಶೇಷ ಪ್ರಶಂಸೆಯ ಯೋಗವಿದೆ. ತಂದೆಯ ಸಹಾಯದಿಂದ ಕುಟುಂಬದಲ್ಲಿ ಪರಿಸ್ಥಿತಿ ಸಾಮಾನ್ಯವಾಗುವುದು ಮತ್ತು ಸಂಬಂಧಗಳು ಸಹ ಬಲಗೊಳ್ಳುತ್ತವೆ.

ವೃಶ್ಚಿಕರಾಶಿ:
ನೀವು ಇತರರಂತೆ ಸುಳ್ಳು ಆಶ್ವಾಸನೆ ಕೊಡುವಂಥವರಲ್ಲ ಎಂಬುದರಿಂದಾಗಿ ಶ್ಲಾಘನೆಯನ್ನು ಪಡೆಯಲಿದ್ದೀರಿ. ಚಿಂತೆಯಿಂದಲೇ ಆಯಾಸಗೊಂಡಿದ್ದೀರಿ. ನಿಮ್ಮ ಇಷ್ಟಾರ್ಥಗಳ ಸಾಕಾರಕ್ಕೆ ಕುಲದೇವರನ್ನು ಶ್ರದ್ಧಾಭಕ್ತಿಗಳಿಂದ ಪೂಜಿಸಿ. ಮಕ್ಕಳೊಡನೆ ಭಿನ್ನಾಭಿಪ್ರಾಯ ಬಂದರೂ ನಿಮ್ಮ ಹಿರಿಯತನವನ್ನು ಮರೆಯಬೇಡಿ.

ಧನಸ್ಸುರಾಶಿ:
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಸಮಯ ಉತ್ತಮವಾಗಿಲ್ಲ.ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಉದಾರಿಗಳೂ ಕ್ರಿಯಾಶೀಲರೂ ಆಗುವ ಮೂಲಕ ವ್ಯಕ್ತಿತ್ವ ವಿಕಸನ ಸಾಧ್ಯವಾಗಲಿದೆ. ಅನಂತಬ್ರಹ್ಮನ ಆರಾಧಾನೆಯಿಂದ ಅನೇಕ ತೊಡಕುಗಳನ್ನು ಸುಲಭವಾಗಿ ನಿವಾರಣೆ ಮಾಡಿಕೊಳ್ಳಲು ಸಾಧ್ಯವಿದೆ.

ಮಕರರಾಶಿ:
ಯಾರದೋ ಸಮಾಧಾನಕ್ಕೆ ನಿಮ್ಮ ಅಮೂಲ್ಯ ಸಮಯವನ್ನು ವ್ಯಯಿಸದಿರಿ. ಕೈಗೊಂಡ ಕಾರ್ಯ ನಿಧಾನವಾಗಬಹುದು. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ಇದ್ದರೆ ಮನೆಯೂ ನೆಮ್ಮದಿಯಾಗಿರುತ್ತದೆ ಎಂಬುದು ಅರ್ಥವಾಗಲಿದೆ.

ಕುಂಭರಾಶಿ:
ಮದುವೆ ಎಂದರೆ ಲಾಟರಿಯಂತೆ ಎಂದು ಭಾವಿಸಿ ನಿರಾಶೆ ಹೊಂದಬೇಡಿ. ಉತ್ತಮ ಸಂಗಾತಿ ಸಿಗಲು ಸಕಾಲ. ಒಂದನ್ನೇ ಕುರಿತು ದೀರ್ಘ ಪ್ರಯತ್ನ ಮಾಡಿದರೆ ಯಶಸ್ಸಿದೆ. ಬೇರೆಯವರ ಮಾತುಗಳನ್ನು ಕೇಳಿ ಪದೇಪದೆ ನಿಮ್ಮ ನಿರ್ಧಾರಗಳನ್ನು ಬದಲಾಯಿಸಬೇಡಿ. ನಿಮ್ಮ ಆರೋಗ್ಯದ ಬಗ್ಗೆ ಸಂಪೂರ್ಣ ಕಾಳಜಿ ವಹಿಸಿ.

ಮೀನರಾಶಿ:
ಮಹತ್ವದ ಕಾಗದ ಪತ್ರಗಳನ್ನು ಅಪರಿಚಿತರ ಮುಂದೆ ತೋರಿಸಬೇಡಿ. ಇದರಿಂದ ಅಪಾಯ ಬರುವುದಿಲ್ಲ. ವಿಪರೀತವಾದ ವೇಗದ ಚಾಲನೆ ಬೇಡ. ಅಪಘಾತದ ಅಪಾಯವಿದೆ. ಧಾರ್ಮಿಕ ಕಾರ್ಯಗಳಲ್ಲಿ ಸಹಕಾರದಿಂದ ಮಾನಸಿಕ ಒತ್ತಡದಿಂದ ಪರಿಹಾರ ಪಡೆಯುವಿರಿ. ನಿಮಗೆ ಪದ್ಮೋನ್ನತಿಯ ಅವಕಾಶ ಬಂದರೂ ಕೂಡಲೇ ಒಪ್ಪಿಕೊಳ್ಳದಿರಿ. ಮುಂದೆ ಇನ್ನೂ ಹೆಚ್ಚು ಒಳ್ಳೆಯದೇ ಆಗಲಿದೆ.

Leave A Reply

Your email address will not be published.