ನಿತ್ಯ ಭವಿಷ್ಯ : 15-10-2020

0

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್ ಋತು, ಅಧಿಕ ಮಾಸೆ, ಕೃಷ್ಣ ಪಕ್ಷದ ಚತುರ್ದಶಿ ತಿಥಿ, ಉತ್ತರಫಾಲ್ಗುಣಿ ನಕ್ಷತ್ರ, ಬ್ರಹ್ಮ ಯೋಗ, ಭದ್ರಾಂಕ್ ಕರಣ, ಅಕ್ಟೋಬರ್ 15, ಗುರುವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ ಬೆಳ್ಳಗೆ 11 ಗಂಟೆ 35 ನಿಮಿಷದಿಂದ ಮಧ್ಯಾಹ್ನ 1 ಗಂಟೆ ವರೆಗೂ ಇದೆ.

ಮೇಷರಾಶಿ
ಚಂದ್ರ ವಿಶೇಷವಾಗಿ ಸೂರ್ಯನ ಸಾರದಲ್ಲಿ ಇರುವುದರಿಂದ ಚೆನ್ನಾಗಿದೆ. ಆದರೆ ಭೂಮಿಯ ವಿಚಾರದಲ್ಲಿ ತಗಾದೆಗಳು ಇದ್ದರೆ ತೊಳಲಾಡಿ ಬಿಡುತ್ತೀರಾ ಕೋರ್ಟಿನ ವರೆಗೂ ತೆಗೆದುಕೊಂಡು ಹೋಗುತ್ತದೆ ಎಚ್ಚರಿಕೆ. ಸ್ವಂತ ವ್ಯವಹಾರದಲ್ಲಿ ಪ್ರಗತಿ, ವೈವಾಹಿಕ ವಿಚಾರಗಳಿಗಾಗಿ ಗುರುಬಲವಿದೆ. ಆದ್ದರಿಂದ ಪ್ರಯತ್ನ ಮುಂದುವರಿಸಿರಿ.

ವೃಷಭರಾಶಿ
ಮಕ್ಕಳ ವಿಚಾರದಲ್ಲಿ ಹಿರಿಯರ ವಿಚಾರದಲ್ಲಿ ಸ್ವಲ್ಪ ಕಿರಿಕಿರಿ ಇರುತ್ತದೆ. ಆತಂಕ ಗಾಬರಿ, ನಾಳೆ ಅಮಾವಾಸ್ಯೆಯಾದರೂ ಇಂದೇ ಅಮಾವಾಸ್ಯೆಯ ಪ್ರಭಾವವಿರುತ್ತದೆ ಆದ್ದರಿಂದ ಸ್ವಸ್ತಿಕ ಯಂತ್ರವನ್ನು ಮನೆಯಲ್ಲಿ ಇರಿಸಿ ಪೂಜಿಸಿ. ಸಹೋದರರಿಂದ ನೋವು, ಆಸ್ತಿ ಮತ್ತು ವಾಹನ ಯೋಗ, ಕೋರ್ಟ್ ಕೇಸು ಅಲೆದಾಟ.

ಮಿಥುನರಾಶಿ
ಸರಕಾರಿ ಮಟ್ಟದ ಹಾಗೂ ಸ್ವಂತ ವ್ಯವಹಾರಗಳಲ್ಲಿ ಇರುವವರಿಗೆ ಪ್ರಗತಿ. ಕ್ರಯವಿಕ್ರಯದಲ್ಲಿ ಲಾಭಾಂಶ ವಿರುತ್ತದೆ. ಇಚ್ಛಿತ ಕಾರ್ಯಗಳು ಅನುಭವಕ್ಕೆ ಬಂದು ಧನಪ್ರಾಪ್ತಿಯಾಗಲಿದೆ. ಭೂ ಸಂಬಂಧಿ ವ್ಯವಹಾರದಲ್ಲಿ ಜಯ.

ಕರ್ಕಾಟಕರಾಶಿ
ವಿಜಯೋತ್ಸವ ಮಾಡುವ ಕೆಲಸ ಕಾರ್ಯಗಳೆಲ್ಲ ಅದ್ಭುತ ಪ್ರಗತಿ. ಆರ್ಥಿಕವಾಗಿ ಅನುಕೂಲ, ಧರ್ಮ ಬಾಹಿರ ಕೆಲಸಕಾರ್ಯಗಳಿಂದ ದೂರವಿದ್ದಷ್ಟು ಉತ್ತಮ. ವ್ಯಾಪಾರೋದ್ಯಮಗಳು ಲಾಭಕರವಾಗಿಯೇ ಉಳಿದರೂ ಇತರ ವಿಷಯದಲ್ಲಿ ನಷ್ಟ ಕಂಡು ಬರುವುದು.

ಸಿಂಹರಾಶಿ
ಆತುರಗಾರನಿಗೆ ಬುದ್ಧಿ ಮಟ್ಟ ಹಾಗೂ ಪ್ರಯಾಣದಲ್ಲಿ ಜಾಗ್ರತೆ. ವಾಹನಗಳ ಬಿಡಿ ಭಾಗ, ವಾಹನಗಳ ವ್ಯಾಪಾರ, ಆಟೋ ಮೊಬೈಲ್ಸ್ ಇಂಡಸ್ಟ್ರಿ, ಈ ವ್ಯವಹಾರಗಳಲ್ಲಿ ತೊಡಗಿರುವವರಿಗೆ ಹೆಚ್ಚು ಒತ್ತಡವಿರುತ್ತದೆ. ಆರ್ಥಿಕ ಸ್ಥಿತಿಯು ಸುಧಾರಿಸುತ್ತಾ ಹೋಗಲಿದೆ. ವೈಯಕ್ತಿಕ ವಾಗಿ ಪತಿ, ಪತ್ನಿಯರೊಳಗೆ ಪ್ರೀತಿ, ವಿಶ್ವಾಸ ತೋರಿ ಬಂದರೂ ಕಿರಿಕಿರಿ ತಪ್ಪದು.

ಕನ್ಯಾರಾಶಿ
ಖರ್ಚು ವೆಚ್ಚಗಳು ಜಾಸ್ತಿ ಯಾವುದೋ ಭೂಮಿ ಮನೆ ಎಂದು ಇನ್ವೆಸ್ಟ್ ಮಾಡುತ್ತಿದ್ದರೆ ಒಳ್ಳೆಯದಾಗುತ್ತದೆ. ಆರ್ಥಿಕವಾಗಿ ನಾನಾ ರೀತಿಯಲ್ಲಿ ಲಾಭವು ಕೂಡಿ ಬರಲಿದೆ. ಆರೋಗ್ಯವು ಉತ್ತಮ ಸುಧಾರಣೆ ಕಾಣಲಿದೆ. ಉದ್ಯೋಗಸ್ಥರಿಗೆ ಭಡ್ತಿ ಯೋಗವಿದೆ. ದೈವಬಲ ವಿರುವುದರಿಂದ ಯಾವ ತರದ ಆತಂಕವೂ ಇರುವುದಿಲ್ಲಾ.

ತುಲಾ ರಾಶಿ
ಸರ್ಕಾರಕ್ಕೆ ಜನಕ್ಕೆ ಮೋಸ ಮಾಡಿ ದುಡ್ಡನ್ನು ದುಡಿದು ಇಟ್ಟುಕೊಂಡಿದ್ದರೆ ಅದಕ್ಕೆ ದಂಡ ತೆರಬೇಕಾಗುತ್ತದೆ. ತಂದೆಯ ಆರೋಗ್ಯದ ಕಡೆ ಗಮನ ಕೊಡಿ. ಬಂದ ಅವಕಾಶಗಳನ್ನು ಉತ್ತಮ ರೀತಿಯಲ್ಲಿ ಆರಿಸಿಕೊಂಡು ಬಳಸಿಕೊಳ್ಳಿರಿ. ಮನೆಯಲ್ಲಿ ದೇವತಾ ಕಾರ್ಯಗಳು ನಡೆಯಲಿವೆ. ಮನೆಯಲ್ಲಿ ಸ್ವಸ್ತಿಕ ಯಂತ್ರವನ್ನು ಇಟ್ಟು ಪೂಜಿಸಿ.

ವೃಶ್ಚಿಕರಾಶಿ
ಮಾಡುವ ಕೆಲಸ ಕಾರ್ಯಗಳಲ್ಲಿ ಪ್ರಗತಿಯನ್ನು ಕಾಣುವಂತಹ ಅದ್ಭುತವಾದ ದಿನ. ಎಲ್ಲಾ ವಿಧಗಳಲ್ಲಿ ಶುಭಫ‌ಲಗಳೇ ತೋರಿ ಬರಲಿವೆ. ಆರ್ಥಿಕವಾಗಿ ಲಾಭದಾಯಕ ಅಭಿವೃದ್ಧಿಯು ಇರುವುದು. ನಿರೀಕ್ಷಿತ ಕಾರ್ಯವು ವಿಘ್ನಗಳ ನಡುವೆಯೂ ನೆರವೇರಲಿರುವುದು. ಶುಭವಿದೆ.

ಧನಸ್ಸುರಾಶಿ
ಚೆನ್ನಾಗಿದೆ ಭಾಗ್ಯಾಧಿಪತಿ ಸ್ಥಾನದಲ್ಲಿ ಚಂದ್ರನ ಇರುವುದರಿಂದ ಉದ್ಯೋಗ ನಿಮಿತ್ತ ಸ್ವಂತ ಕಾರ್ಯ ಸ್ವಂತ ವ್ಯವಹಾರಗಳಲ್ಲಿ ತೊಡಗಿರುವವರಿಗೆ ಭೂಮಿಯ ವ್ಯವಹಾರ ಗಳಲ್ಲಿ ತೊಡಗಿರುವವರಿಗೆ ಅನುಕೂಲಕರವಾಗಿರುವಂತಹ ದಿನ.

ಮಕರರಾಶಿ
ಕೊಡುವುದು ತೆಗೆದುಕೊಳ್ಳುವ ವಿಚಾರದಲ್ಲಿ ಮಾತು ಕೊಟ್ಟು ಸಿಕ್ಕಿಹಾಕಿಕೊಳ್ಳುತ್ತೀರಿ ಸ್ವಲ್ಪ ಎಚ್ಚರಿಕೆ ಸ್ವಲ್ಪ ನಿಧಾನಿಸಿ. ಎಷ್ಟೋ ಸಮಯದಿಂದ ಕೈಗೂಡದ ಕೆಲಸಕಾರ್ಯಗಳು ನೆರವೇರಲಿವೆ. ಅನಿರೀಕ್ಷಿತವಾಗಿ ಶುಭ ಘಟನೆಗಳು ನಡೆಯಲಿವೆ. ಸದ್ಯದಲ್ಲೇ ಬರುವ ದೇವತಾನುಗ್ರಹವು ಅನುಕೂಲಕರವಾಗಲಿದೆ.

ಕುಂಭರಾಶಿ
ತಂದೆ ತಾಯಿಗಳ ಆರೋಗ್ಯದ ಕಡೆಗೆ ಸ್ವಲ್ಪ ಗಮನ ಕೊಡಿ. ಸ್ವಸ್ತಿಕ ಯಂತ್ರವನ್ನು ಇಟ್ಟು ನೀವು ಪೂಜಿಸಿ ಒಳ್ಳೆಯದು. ನಿಮ್ಮವರೇ ನಿಮಗೆ ಶತ್ರುಗಳು ಆದ್ದರಿಂದ ಅಷ್ಟಮಿಯ ದಿನದಂದು ಮೂರು ತಿಂಗಳಿಗೊಮ್ಮೆಯಾದರೂ ದುರ್ಗಾ ಹೋಮವನ್ನು ಮಾಡಿಸಿ.

ಮೀನರಾಶಿ
ಶತ್ರುಗಳು ಜಾಸ್ತಿ, ಗೆಲುವು ಜಾಸ್ತಿ, ಕುತಂತ್ರ ಮಾಡುತ್ತಾರೆ, ಯಾವುದೇ ವ್ಯವಹಾರವನ್ನು ಮಾಡುವುದಾದರೂ ಲೀಗಲ್ ಆಗಿಯೇ ಮಾಡಿ. ಅಧಿಕಾರಿ ವರ್ಗದವರ ಅನುಗ್ರಹವು ನಿಮ್ಮ ಮೇಲಿರುತ್ತದೆ. ಆರೋಗ್ಯದಲ್ಲಿ ಸುಧಾರಣೆಯು ತೋರಿ ಬರಲಿದೆ. ರಾಜಕೀಯದಲ್ಲಿ ಹೆಚ್ಚಿನ ಪ್ರಾಶಸ್ತ್ಯ ಹಾಗೂ ಸ್ಥಾನಮಾನವು ದೊರತು ಸಂತಸವಾಗಲಿದೆ.

Leave A Reply

Your email address will not be published.