ನಿತ್ಯಭವಿಷ್ಯ : 16-03-2020

0

ಮೇಷರಾಶಿ
ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಸಾಂಸಾರಿಕವಾಗಿ ತುಸು ಸಮಾಧಾನ ಸಿಗಲಿದೆ. ಉದ್ಯೋಗದಲ್ಲಿ ಬಡ್ತಿ, ಮಿತ್ರರಿಂದ ಅಪವಾದ, ವಿವಾಹ ಯೋಗ, ದಂಪತಿಗಳಿಗೆ ಸಂತಾನ ಭಾಗ್ಯವಿದೆ. ಸಾಲ ಮಾಡುವ ಸಂಭವ, ನಾನಾ ರೀತಿಯ ತೊಂದರೆ. ಸಂಚಾರದಲ್ಲಿ ಜಾಗ್ರತೆ.

ವೃಷಭರಾಶಿ
ಶರೀರದಲ್ಲಿ ಉಷ್ಣದಿಂದ ಅನಾರೋಗ್ಯ, ದೈಹಿಕ ಆರೋಗ್ಯದಲ್ಲಿ ಚೇತರಿಕೆ ಇದ್ದರೂ ಗಮನವಿರಲಿ, ಅಧಿಕಾರ ಪ್ರಾಪ್ತಿ, ಚಂಚಲ ಮನಸ್ಸು, ವಿದ್ಯಾರ್ಥಿಗಳಿಗೆ ಉತ್ಸಾಹ. ವಿವೇಚನೆ ಕಳೆದುಕೊಳ್ಳಬೇಡಿ, ಆಗಾಗ ಸಂಚಾರಗಳು ಅಡತಡೆಗಳನ್ನು ತರುತ್ತದೆ.

ಮಿಥುನರಾಶಿ
ಶುಭಮಂಗಲ ಕಾರ್ಯಗಳಿಗಾಗಿ ಓಡಾಟ, ತಂದೆ-ತಾಯಿ ಸೇವೆಯಿಂದ ಮನಃಶಾಂತಿ. ಪರರ ಕಷ್ಟಕ್ಕೆ ಸ್ಪಂದಿಸುವಿರಿ,ಕೊಟ್ಟ ಹಣ ವಾಪಾಸು ಬರಲಾರದು. ಹಿರಿಯರ ಆರೋಗ್ಯದಲ್ಲಿ ಏರುಪೇರಾಗಲಿದೆ. ಮಧ್ಯಸ್ಥಿಕೆ ವ್ಯವಹಾರದಿಂದ ಲಾಭ, ವಾಹನ ಚಾಲನೆಯಲ್ಲಿ ಹೆಚ್ಚಿನ ಜಾಗ್ರತೆ ಇರಲಿ.

ಕಟಕರಾಶಿ
ಆಕಸ್ಮಿಕ ರೂಪದಲ್ಲಿ ಧನಹಾನಿಯಾಗಲಿದೆ. ಸಾಮಾಜಿಕ ಕಾರ್ಯದಲ್ಲಿ ಭಾಗಿ, ಉದ್ಯೋಗಿಗಳಿಗೆ ವರ್ಗಾವಣೆಯಿಂದ ಕಿರಿಕಿರಿ ತರಲಿದೆ. ಪಿತ್ರಾರ್ಜಿತ ಆಸ್ತಿ ವಿವಾದ, ಪ್ರಭಾವಿ ವ್ಯಕ್ತಿಗಳ ಭೇಟಿ. ಭೂ ವ್ಯವಹಾರಗಳಲ್ಲಿ ಧನವ್ಯಯ. ವೃತ್ತಿರಂಗದಲ್ಲಿ ಸ್ಥಾನಮಾನದ ಪ್ರಭಾವ ಕಮ್ಮಿಯಾಗಲಿದೆ.

ಸಿಂಹರಾಶಿ
ವೈವಾಹಿಕ ಮಾತುಕತೆಗಳು ಫ‌ಲಪ್ರದವಾಗಲಿದೆ. ಧನನಷ್ಟ, ಅವಸರದ ತೀರ್ಮಾನ ಬೇಡ, ಸಾಂಸಾರಿಕವಾಗಿ ನೆಮ್ಮದಿಯ ದಿನಗಳಿವು. ವ್ಯಾಪಾರದಲ್ಲಿ ಅಲ್ಪ ಲಾಭ, ಉದ್ಯೋಗಸ್ಥರಿಗೆ ಮುಂಭಡ್ತಿಯ ಯೋಗ ಒದಗುವುದು.ಸ್ನೇಹಿತರ ಮಾತಿಗೆ ಗೌರವ. ಗೃಹನಿರ್ಮಾಣ ಕಾರ್ಯಗಳಿಗೆ ಧನವ್ಯಯವಾದೀತು.

ಕನ್ಯಾರಾಶಿ
ಕಾರ್ಯಗಳನ್ನು ಅರ್ಧದಲ್ಲಿಯೇ ಕೈ ಬಿಡುವಂತಾದೀತು. ಸ್ತ್ರೀಯರಿಗೆ ಜವಾಬ್ದಾರಿ, ವ್ಯಾಪಾರ ವ್ಯವಹಾರಗಳ ಲೆಕ್ಕಾಚಾರವನ್ನು ಸರಿಯಾಗಿ ಪರಿಶೀಲಿಸಿರಿ. ಮಕ್ಕಳಿಂದ ನೆಮ್ಮದಿ, ಮನಃಶಾಂತಿ, ಕಾರ್ಯಕ್ಷೇತ್ರದಲ್ಲಿ ಸಾಧನೆ. ವೈವಾಹಿಕ ಮಾತುಕತೆಗಳು ಕೈತಪ್ಪುವ ಸಾಧ್ಯತೆ.

ತುಲಾರಾಶಿ
ಆರೋಗ್ಯದಲ್ಲಿ ಎಚ್ಚರಿಕೆ ಅಗತ್ಯ, ಉತ್ತಮ ಆದಾಯ. ಪುಣ್ಯಕ್ಷೇತ್ರ ದರ್ಶನ. ಸಂಚಾರಗಳು ಆಗಾಗ ತೋರಿಬಂದರೂ ಕಾರ್ಯಾನುಕೂಲವಾಗಲಿದೆ. ಹಣಕಾಸಿನ ವಿಚಾರದಲ್ಲಿ ಲೆಕ್ಕಾಚಾರವು ಸರಿಯಾಗಿರಲಿ. ಹಳೆಯ ಸಾಲ ಹಿಂದಿರುಗುವ ಸಾಧ್ಯತೆ, ಅನಿರೀಕ್ಷಿತ ಖರ್ಚು, ವಿಶ್ವಾಸ ದ್ರೋಹ ಸಾಧ್ಯತೆ.

ವೃಶ್ಚಿಕರಾಶಿ
ದೈವಾನುಗ್ರಹದಿಂದ ಕಾರ್ಯಸಾಧನೆ. ಭಾಗ್ಯವೃದ್ಧಿ, ಕೋರ್ಟ್ ಕೆಲಸದಲ್ಲಿ ತಡೆ, ಶತ್ರು ನಾಶ, ಆರ್ಥಿಕ ಪರಿಸ್ಥಿತಿ ಉತ್ತಮ, ಅಧಿಕಾರ ಪ್ರಾಪ್ತಿ. ಹಿರಿಯರ ಸಹಕಾರ ಕಾರ್ಯಸಾಧನೆಗೆ ಸಾಧಕವಾಗುತ್ತದೆ. ದೂರ ಸಂಚಾರದಿಂದ ಅನುಕೂಲ. ಮನಸಿಗೆ ಸಂತಸ.

ಧನಸ್ಸುರಾಶಿ
ಪ್ರವಾಸದಿಂದ ಧನವ್ಯಯವಾದರೂ ಮಾನಸಿಕ ಸಮಾಧಾನವು ದೊರಕಲಿದೆ. ಸ್ವಂತ ಉದ್ಯಮಿಗಳಿಗೆ ಲಾಭ, ಸ್ತ್ರೀಲಾಭ, ವೃತ್ತಿರಂಗದಲ್ಲಿ ಕರ್ತವ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿರಿ. ಸ್ನೇಹಿತರ ಭೇಟಿ, ಹೆಚ್ಚುಶ್ರಮ ಅಲ್ಪಗಳಿಕೆ. ನಿಮ್ಮ ಪ್ರಯತ್ನ ಆತ್ಮವಿಶ್ವಾಸ ಗುರಿಯನ್ನು ಸಾಧಿಸಲು ಶಕ್ತವಾಗಲಿದೆ.

ಮಕರರಾಶಿ
ಬಂಧುಗಳಿಂದ ಆರ್ಥಿಕವಾಗಿ ಋಣ, ಧನಹಾನಿಯು ಗೋಚರಕ್ಕೆ ಬರುವುದು. ತಾಳ್ಮೆ ಕಳೆದುಕೊಳ್ಳಬೇಡಿ. ಹಿತ ಶತ್ರು ಕಾಟ, ಅಕಾಲ ಭೋಜನ, ದಾಂಪತ್ಯದಲ್ಲಿ ಕಲಹ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗದಿಂದ ಸಮಾಧಾನ. ಅವಿವಾಹಿತರಿಗೆ ಕಂಕಣಬಲ.

ಕುಂಭರಾಶಿ
ವಾಹನ ಖರೀದಿ, ವಿನಾಕರಣ ದ್ವೇಷ, ಎಲ್ಲಾ ಕೆಲಸಗಳನ್ನು ಮನಃ ಪೂರ್ವಕವಾಗಿ ಮಾಡುವಿರಿ. ಸಾಂಸಾರಿಕ ಸಂಬಂಧವನ್ನು ಗಟ್ಟಿಗೊಳಿಸಿರಿ. ಪತ್ನಿಯ ಸಲಹೆಯಿಂದ ಮುಂದುವರಿಯಿರಿ. ಸಣ್ಣಪುಟ್ಟ ನಿರಾಶೆಗಳಿಂದ ವಿಚಲಿತರಾಗದಿರಿ. ವಿದ್ಯಾರ್ಥಿಗಳಿಗೆ ಅನುಕೂಲ.

ಮೀನರಾಶಿ
ಆರೋಗ್ಯದಲ್ಲಿ ಏರುಪೇರು. ಕುಟುಂಬ ಸೌಖ್ಯ, ಕಾರ್ಯ ವಿಘಾತ, ಋಣಭಾದೆ, ಯಾವುದೇ ವಿಚಾರದಲ್ಲಿ ಋಣಾತ್ಮಕವಾಗಿ ಚಿಂತಿಸದೆ ಮುನ್ನಡೆಯಿರಿ. ಧನಾಗಮನವಿದ್ದರೂ ಅಧಿಕ ಖರ್ಚು, ವಿವಾಹ ಯೋಗ, ಮನೆಯಲ್ಲಿ ಶುಭಕಾರ್ಯ. ಇದು ತಾತ್ಕಾಲಿಕ ಸ್ಥಿತಿ. ಧೈರ್ಯವಾಗಿರಿ.

Leave A Reply

Your email address will not be published.