ದಿನಭವಿಷ್ಯ : ದೀಪಾವಳಿಯಂದು ಈ ರಾಶಿಗೆ ಹಂಸ ರಾಜಯೋಗ, ವೈಭವ ಲಕ್ಷ್ಮೀ ರಾಜಯೋಗ

Deepavali 2025 Horoscope : ದಿನಭವಿಷ್ಯ ಇಂದು ಸೋಮವಾರ ಅಕ್ಟೋಬರ್‌ 20 2025. ದೀಪಾವಳಿಯ ದಿನದಂದು ಹಂಸ ರಾಜಯೋಗ ಮತ್ತು ವೈಭವ ಲಕ್ಷ್ಮೀ ರಾಜಯೋಗವಿದ್ದು, ಯಾವ ರಾಶಿಯ ಮೇಲೆ ಪ್ರಭಾವ ಬೀರಲಿದೆ. ಹೇಗಿದೆ ಇಂದಿನ ದಿನಭವಿಷ್ಯ ಅಂತಾ ತಿಳಿಯೋಣಾ ಬನ್ನಿ.

ಮೇಷರಾಶಿ (Aries)

ಕಚೇರಿ ಕೆಲಸದ ಸ್ಥಳದಲ್ಲಿ ನೆಮ್ಮದಿಯ ವಾತಾವರಣ, ಹಿರಿಯರಿಂದ ಮೆಚ್ಚುಗೆ. ಹೊಸ ಅವಕಾಶಗಳು ದೊರೆಯುವ ಸಾಧ್ಯತೆ. ಸಾಲವಾಗಿ ನೀಡಿದ ಹಣ ವಾಪಸ್ ಬರುವುದು, ಹೂಡಿಕೆಗೆ ಉತ್ತಮ ಸಮಯ. ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಬೋನಸ್.

ವೃಷಭರಾಶಿ (Taurus)

ಚಲನಚಿತ್ರ, ಫ್ಯಾಷನ್, ಕಲಾತ್ಮಕ ಕ್ಷೇತ್ರದಲ್ಲಿರುವವರಿಗೆ ಅತ್ಯಂತ ಶುಭ. ಸ್ವಂತ ಉದ್ಯೋಗ ಪ್ರಾರಂಭಿಸಲು ಉತ್ತಮ ಕಾಲ. ಅನಿರೀಕ್ಷಿತ ಧನಲಾಭ & ಸ್ಥಿರಾಸ್ತಿ ಖರೀದಿ ಯೋಗ. ಲಕ್ಷ್ಮೀ ಕೃಪೆಯಿಂದ ಹಣದ ಹರಿವು ಹೆಚ್ಚಳ, ವಾಹನ ಅಥವಾ ಮನೆ ಖರೀದಿಯ ಯೋಗ.

ಮಿಥುನರಾಶಿ(Gemini)

ಆರಾಮವಾಗಿರುವ ಭಾವನೆ, ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಆನಂದಿಸಲು ಸೂಕ್ತ ಮನೋಭಾವ. ವೃತ್ತಿ ಪ್ರಗತಿ ಮತ್ತು ಸಂಪತ್ತು ವೃದ್ದಿ. ವೃತ್ತಿಯಲ್ಲಿ ಪ್ರಗತಿ ಮತ್ತು ವ್ಯವಹಾರದಲ್ಲಿ ಲಾಭ ಹೆಚ್ಚಾಗುವ ಸಾಧ್ಯತೆ.

ಕರ್ಕಾಟಕರಾಶಿ (Cancer)

ಅತ್ಯಂತ ಪ್ರಭಾವಿ ಜನರ ಬೆಂಬಲದಿಂದ ನೈತಿಕ ಸ್ಥೈರ್ಯ ಹೆಚ್ಚಾಗುತ್ತದೆ. ನೆಮ್ಮದಿ ಮತ್ತು ಸೌಭಾಗ್ಯ ವೃದ್ದಿಸಲಿದೆ. ಅನಿರೀಕ್ಷಿತ ಧನ ಲಾಭದಿಂದ ಹೆಚ್ಚಿನ ನೆಮ್ಮದಿ, ಜೀವನವು ಇತರರಿಗೆ ಮಾದರಿಯಾಗುವ ಸಾಧ್ಯತೆ.

ಸಿಂಹರಾಶಿ(Leo)

ಒತ್ತಡ ನಿವಾರಿಸಲು ಕುಟುಂಬದ ಬೆಂಬಲ ಪಡೆಯಿರಿ. ಅವರ ಸಹಾಯವನ್ನು ಗೌರವಿಸಿ. ಗೌರವ ಮತ್ತು ಪ್ರೋತ್ಸಾಹ ಸಿಗಲಿದೆ. ನಿಮ್ಮ ನಾಯಕತ್ವದ ಗುಣಗಳಿಗೆ ಮೆಚ್ಚುಗೆ ದೊರೆಯುತ್ತದೆ.

ಕನ್ಯಾರಾಶಿ (Virgo)

ಸಣ್ಣ ಸಂಗತಿಗಳಿಗೆ ಖಿನ್ನತೆಗೆ ಒಳಗಾಗಬೇಡಿ. ಆಹಾರದ ಬಗ್ಗೆ ಕಾಳಜಿವಹಿಸಿ. ಅತಿಯಾದ ಭಾವನಾತ್ಮಕತೆಯಿಂದ ದೂರವಿರಿ. ಸಮತೋಲನ (Balance): ಹಣಕಾಸಿನ ವಿಚಾರದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯ. ಹಬ್ಬದ ಖರ್ಚುಗಳ ಬಗ್ಗೆ ಎಚ್ಚರ.

ತುಲಾರಾಶಿ (Libra)

ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಆರ್ಥಿಕ ಸುಧಾರಣೆ ಕಾಣಲಿದೆ. ಲಕ್ಷ್ಮೀ ಕೃಪೆಯಿಂದ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಲಿದೆ.

ವೃಶ್ಚಿಕರಾಶಿ (Scorpio)

ಭಯ ಎಂಬ ದೈತ್ಯನ ಜೊತೆ ಹೋರಾಡಲು ನಿಮ್ಮ ಆಲೋಚನೆಗಳನ್ನು ಸ್ಪಷ್ಟಪಡಿಸಿ. ಅವಕಾಶಗಳು ಮತ್ತು ಲಾಭ, ಹೊಸ ಅವಕಾಶಗಳು ದೊರೆಯುವ ಸಾಧ್ಯತೆ. ವ್ಯವಹಾರದಲ್ಲಿ ಉತ್ತಮ ಲಾಭ.

ಧನಸ್ಸುರಾಶಿ (Sagittarius)

ದೈಹಿಕವಾಗಿ ಆರೋಗ್ಯವಾಗಿರಲು ಕೆಟ್ಟ ಅಭ್ಯಾಸಗಳನ್ನು ತ್ಯಜಿಸಿ. ಯಾವುದೇ ವಿಷಯದಲ್ಲಿ ಅತಿಯಾದ ವಿಶ್ವಾಸ ಬೇಡ. ಮುಂದಿನ 6 ತಿಂಗಳು ಹೊಸ ಅವಕಾಶಗಳು ಮತ್ತು ಸಂಪತ್ತು ಲಭಿಸುವ ಸಾಧ್ಯತೆ ಇದೆ.

ಮಕರರಾಶಿ (Capricorn)

ಒತ್ತಡವನ್ನು ತೊಡೆದು ಹಾಕಬಹುದು. ದುಂದುಗಾರಿಕೆ ಮತ್ತು ಸಂಶಯಾಸ್ಪದವಾದ ಹಣಕಾಸಿನ ವ್ಯವಹಾರಗಳಿಂದ ದೂರವಿರಿ. ಲಾಭದಾಯಕ ಸ್ಥಿತಿ. ಅದೃಷ್ಟವು ಲಾಭದಾಯಕ ಸನ್ನಿವೇಶಗಳನ್ನು ಸೃಷ್ಟಿಸುತ್ತದೆ.

ಕುಂಭರಾಶಿ (Aquarius)

ಕುಟುಂಬದ ಜೊತೆ ಸಮಯ ಕಳೆಯಿರಿ. ಪ್ರತ್ಯೇಕತೆ ಮತ್ತು ಒಂಟಿತನದ ಭಾವನೆಯಿಂದ ಹೊರಬನ್ನಿ. ಸಂಪತ್ತು ಮತ್ತು ಪ್ರಗತಿ, ಲಕ್ಷ್ಮೀ ದೇವಿಯ ಕೃಪೆಯಿಂದ ವೃತ್ತಿ ಪ್ರಗತಿ, ಆರ್ಥಿಕ ಸುಧಾರಣೆ ಮತ್ತು ಸಂಪತ್ತು ಲಭಿಸಲಿದೆ.

ಮೀನರಾಶಿ (Pisces)

ನಿಮ್ಮ ಅಪಾರ ವಿಶ್ವಾಸ ಮತ್ತು ಸರಳವಾದ ಕೆಲಸದ ವೇಳಾಪಟ್ಟಿ ವಿಶ್ರಾಂತಿಗೆ ಸಾಕಷ್ಟು ಸಮಯ ನೀಡುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಣೆ. ಈ ದಿನ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.

ನಿಮ್ಮ ದಿನಭವಿಷ್ಯವನ್ನು ತಿಳಿಯಲು ನ್ಯೂಸ್‌ನೆಕ್ಸ್ಟ್‌ ಡಿಜಿಟಲ್‌ ವಾಹಿನಿಯನ್ನು ಸಬ್‌ಸ್ಕ್ರೈಬ್‌ ಮಾಡಿ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories