ಮಂಗಳವಾರ, ಏಪ್ರಿಲ್ 29, 2025
Homehoroscopeನಿತ್ಯಭವಿಷ್ಯ : 15-07-2020

ನಿತ್ಯಭವಿಷ್ಯ : 15-07-2020

- Advertisement -

ಮೇಷರಾಶಿ
ಆರೋಗ್ಯದ ಬಗ್ಗೆ ಎಚ್ಚರ, ಮಕ್ಕಳ ಬಗ್ಗೆ ಕಾಳಜಿ ಅಗತ್ಯ,ಬಂಧುಮಿತ್ರರು ನಿಮಗೆ ಎಲ್ಲಾ ವಿಧದಲ್ಲಿ ಸಹಕಾರ ನೀಡಿಯಾರು. ಕೋರ್ಟು ಕಚೇರಿಗಳ ಕೆಲಸ ದಾವೆ, ಪುರಾವೆಗಳ ತೀರ್ಮಾನವು ನಿಮಗೆ ಅನುಕೂಲವಾಗಲಿದೆ. ಕೃಷಿಕರಿಗೆ ಉತ್ಸಾಹದ ವಾತಾವರಣ. ದಾಂಪತ್ಯದಲ್ಲಿ ಸಂತಸ, ಕುಟುಂಬ ಸೌಖ್ಯ.

ವೃಷಭರಾಶಿ
ಉದ್ಯೋಗದಲ್ಲಿ ಕಿರಿಕಿರಿ, ಚಂಚಲ ಮನಸ್ಸು, ಸಕಾಲಕ್ಕೆ ಭೋಜನ ಲಭಿಸುವುದಿಲ್ಲ, ವಾಹನ ಚಾಲಕರಿಗೆ ಚಾಲನೆಯಲ್ಲಿ ಹೆಚ್ಚಿನ ಗಮನ ಎದುರಿಸಬೇಕಾದೀತು. ವಿದ್ಯಾರ್ಥಿಗಳು ತಮ್ಮ ಅಭ್ಯಾಸದಲ್ಲಿ ಮುನ್ನಡೆಯನ್ನು ಸಾಧಿಸಲಿದ್ದಾರೆ. ಆರ್ಥಿಕವಾಗಿ ನಾನಾ ರೀತಿಯಲ್ಲಿ ಧನ ಸಂಗ್ರಹವಾದೀತು. ಮಾನಸಿಕ ವ್ಯಥೆ, ಹಿತ ಶತ್ರುಗಳಿಂದ ತೊಂದರೆ.

ಮಿಥುನರಾಶಿ
ಕೆಲಸ ಕಾರ್ಯಗಳಲ್ಲಿ ಜಯ, ವೃತ್ತಿರಂಗದಲ್ಲಿ ತನ್ನ ಕೈಕೆಳಗಿನ ನೌಕರ ವರ್ಗದವರ ಅಸಹಕಾರದಿಂದ ಅತಂಕವು ಹೆಚ್ಚಾದೀತು. ಆರ್ಥಿಕವಾಗಿ ಋಣಬಾಧೆಯು ಕೂಡಾ ಬಾಧಿಸಲಿದೆ. ನ್ಯಾಯಾಲಯದಲ್ಲಿ ಯಶಸ್ಸು ದೊರಕಲಿದೆ. ಚಿನ್ನಾಭರಣ ಖರೀದಿಗೆ ಮನಸ್ಸು, ಬಂಧು-ಮಿತ್ರರ ಭೇಟಿ, ಪುಣ್ಯಕ್ಷೇತ್ರ ದರ್ಶನ, ಶುಭ ಫಲ ಯೋಗ.

ಕಟಕರಾಶಿ
ಗೃಹ-ಸ್ಥಳ ಬದಲಾವಣೆಗೆ ಯೋಚನೆ, ವಾಹನದಿಂದ ನಷ್ಟ ಉಂಟಾದೀತು. ಅನೇಕ ವಿಧದ ಖರ್ಚುವೆಚ್ಚಗಳು ಆಂತಕಕ್ಕೆ ಕಾರಣವಾಗಬಹುದು. ಪ್ರಯಾಣದಲ್ಲಿ ಕಾರ್ಯಹಾನಿ ನೆಮ್ಮದಿ ಇರಲಾರದು. ಹೊಸ ಮಿತ್ರರ ಭೇಟಿಯಿಂದ ಸಂತಸ. ವಿದ್ಯೆಗಳಲ್ಲಿ ಆಸಕ್ತಿ, ವಿಪರೀತ ಹಣ ಖರ್ಚು, ರಿಯಲ್ ಎಸ್ಟೇಟ್‍ನವರಿಗೆ ನಷ್ಟ, ದೂರ ಪ್ರಯಾಣಕ್ಕೆ ಮನಸ್ಸು.

ಸಿಂಹರಾಶಿ
ಹಣಕಾಸು ಸಮಸ್ಯೆ ನಿವಾರಣೆ, ಅಂತಃ ಶತ್ರುಗಳ ಕಾಟದಿಂದ ಬರಬೇಕಾದ ಸಹಕಾರ ಸಿಗಲಾರದು. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ ಕಂಡು ಬರಲಿದೆ. ರಾಜಕೀಯ ನಿಲುವಿನಲ್ಲಿ ಪರಿವರ್ತನೆ ಕಂಡು ಬರುವುದು. ಕುಟುಂಬದಲ್ಲಿ ಅಹಿತಕರ ವಾತಾವರಣ, ವ್ಯಾಪಾರ-ವ್ಯವಹಾರದಲ್ಲಿ ಲಾಭ, ಆತ್ಮೀಯರಿಂದ ಅನುಕೂಲ, ಮಾನಸಿಕ ನೆಮ್ಮದಿ, ಋಣ, ರೋಗ ಬಾಧೆ.

ಕನ್ಯಾರಾಶಿ
ವಿದ್ಯಾರ್ಥಿಗಳಿಗೆ ಅನುಕೂಲ, ಮಹಿಳೆಯರಿಗೆ ವಸ್ತ್ರಾಭರಣ ಯೋಗ, ಖರ್ಚುವೆಚ್ಚಗಳಲ್ಲಿ ಇಮ್ಮಡಿ ವಿತರಣೆ ತಂದೀತು. ನೆರೆಹೊರೆಯವರೊಡನೆ ಪದೇಪದೇ ಕಲಹ ತಂದೀತು. ಬಂಧುಗಳು ನಿಮ್ಮ ವಿರುದ್ಧ ನಿಂತಾರು. ವ್ಯಾಪಾರ, ವ್ಯವಹಾರಗಳಲ್ಲಿ ಲಾಭವಿದೆ. ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ಆಕಸ್ಮಿಕ ಧನ ಲಾಭ, ಶುಭ ಫಲ ಯೋಗ.

ತುಲಾರಾಶಿ
ಇಲ್ಲ ಸಲ್ಲದ ಅಪವಾದ, ನಿಂದನೆ, ಸ್ತ್ರೀ ವಿಚಾರದಲ್ಲಿ ಮನಃಸ್ತಾಪ, ಕಟ್ಟಡ ನಿರ್ಮಾಣ ಕಾರ್ಯಗಳಲ್ಲಿ ಮುನ್ನಡೆ ಇದೆ. ಹಿರಿಯರಿಗೆ ತೀರ್ಥಯಾತ್ರೆ ಪ್ರವಾಸಾದಿಗಳು ನಡೆದಾವು. ಆಸ್ತಿಯ ವಿಚಾರದಲ್ಲಿ ಮಹತ್ವದ ನಿರ್ಧಾರ ಬಂದು ಪ್ರಕಟವಾಗಲಿದೆ. ಶುಭವಿದೆ. ಅಧಿಕವಾದ ಸಿಟ್ಟು, ಹಿತ ಶತ್ರುಗಳಿಂದ ಕುತಂತ್ರ, ಸಕಾಲಕ್ಕೆ ಭೋಜನ ಲಭಿಸುವುದಿಲ್ಲ.

ವೃಶ್ಚಿಕರಾಶಿ
ಹಣಕಾಸು ವಿಚಾರದಲ್ಲಿ ಮೋಸ, ನಂಬಿಕಸ್ಥರಿಂದ ದ್ರೋಹ, ಆಗಾಗ ಧನವಿನಿಯೋಗವಾದರೂ ಸಂತಸ ತರಲಿದೆ. ಶತ್ರುಗಳ ವಕ್ರ ದೃಷ್ಟಿಯಿಂದ ಧರ್ಮಕಾರ್ಯಗಳಲ್ಲಿ ಸಮಸ್ಯೆ ತಂದೀತು. ಹಳೇ ಚರ್ಮದ ಕಾಯಿಲೆ ಪುನಃ ಮರಕಳಿಸಲಿದೆ. ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಪರಿಶ್ರಮಕ್ಕೆ ತಕ್ಕ ಫಲ ಪ್ರಾಪ್ತಿ, ಉದ್ಯೋಗದಲ್ಲಿ ಬಡ್ತಿ.

ಧನಸ್ಸುರಾಶಿ
ಹೊಸ ಕಾರ್ಯ ಆರಂಭಕ್ಕೆ ಇದು ಸಕಾಲ. ಆದಾಯ ದುಡುಕು ನಿರ್ಧಾರದಿಂದ ಕುಂಠಿತಗೊಳ್ಳಲಿದೆ. ಮಾತೃ ಸೇವೆಗೆ ಧನವಿನಿಯೋಗವಾದೀತು. ಆಕಸ್ಮಿಕ ಆದಾಯಕ್ಕಾಗಿ ಆಸೆ ಪಡಬೇಡಿರಿ. ಕೃಷಿಯಲ್ಲಿ ಲಾಭ, ಅಲ್ಪ ಕಾರ್ಯ ಸಿದ್ಧಿ, ಋಣ ಬಾಧೆ, ಸ್ವಯಂಕೃತ ಅಪರಾಧದಿಂದ ತೊಂದರೆ, ಮಾನಸಿಕ ವ್ಯಥೆ.

ಮಕರರಾಶಿ
ದುಶ್ಚಟಗಳಿಗೆ ಹಣವ್ಯಯ, ಅಧಿಕಾರಿ ವರ್ಗದವರ ಸಹಕಾರದಿಂದ ಕಾರ್ಯಸಾಧನೆಯಾಗಿ ಸಮಾಧಾನ ತರುವುದು. ಉದ್ಯೋಗಿಗಳಿಗೆ ಅನಿರೀಕ್ಷಿತ ಬದಲಾವಣೆಯ ಸಂಭವಿದೆ. ಮನೆಯಲ್ಲಿ ಮನದನ್ನೆಯ ಸಹಕಾರದಿಂದ ಸಂತಸ. ಆದಾಯಕ್ಕಿಂತ ಖರ್ಚು ಹೆಚ್ಚು, ದೇವತಾ ಕಾರ್ಯಗಳಲ್ಲಿ ಭಾಗಿ, ಮಾನಸಿಕ ನೆಮ್ಮದಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.

ಕುಂಭರಾಶಿ
ಮನೆಯಲ್ಲಿ ಸಂತಸ, ಇಷ್ಟವಾದ ವಸ್ತುಗಳ ಖರೀದಿ, ಋಣ ವಿಮೋಚನೆ, ಕೆಟ್ಟ ಶಬ್ಧಗಳಿಂದ ನಿಂದನೆ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಅಡಚಣೆಗಳು ಕಂಡು ಬಂದಾವು. ಯೋಗ್ಯ ವಯಸ್ಕರಿಗೆ ಉತ್ತಮ ಸಂಬಂಧ ಕೂಡಿ ಬಂದು ಸಂತಸ ತರಲಿದೆ. ಸ್ಥಿರಾಸ್ತಿ ವಿಚಾರದಲ್ಲಿ ತೊಡಕುಗಳು ಇದ್ದಾವು. ಆರೋಗ್ಯದಲ್ಲಿ ಏರುಪೇರು.

ಮೀನರಾಶಿ
ದುಷ್ಟರಿಂದ ದೂರವಿರಿ, ಇತರರ ಮಾತಿಗೆ ಮರುಳಾಗಬೇಡಿ, ನೂತನ ದಂಪತಿಗಳಿಗೆ ಸಂತತಿಯ ಚಿಂತೆತೋರಿ ಬಂದೀತು. ವ್ಯಾಪಾರಿ ವರ್ಗದವರಿಗೆ ಉತ್ತಮ ಧನ ಆಗಮನವಿದೆ. ಯಾರಿಗೋ ಸಹಾಯಮಾಡಲು ಹೋಗಿ ಕೈಸುಟ್ಟುಕೊಳ್ಳುವುದು ಬೇಡ. ಆತ್ಮೀಯರೊಂದಿಗೆ ಕಲಹ, ವಾಹನ ಚಾಲನೆಯಲ್ಲಿ ಎಚ್ಚರ, ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular