ನಿತ್ಯಭವಿಷ್ಯ : 10-04-2020

0

ಮೇಷರಾಶಿ
ಹೊಸದಾದ ಕೆಲಸಗಳ ಆರಂಭಕ್ಕೆ ಅವಸರಿಸದಿರಿ. ಕೃಷಿ, ಬೇಸಾಯದ ಕೆಲಸ ಕಾರ್ಯಗಳಿಗೆ ತಯಾರಿ ನಡೆಯಲಿದೆ. ಪಿತ್ರಾರ್ಜಿತ ಆಸ್ತಿಗಳಿಗೆ ವಂಚನೆಗೆ ಸಾಧ್ಯತೆ ಇದೆ. ಮಾತೃವಿನಿಂದ ಅನುಕೂಲ, ನರ ದೌರ್ಬಲ್ಯ, ಕುತ್ತಿಗೆ ನೋವು, ದೇಹದಲ್ಲಿ ಆಯಾಸ, ಆತ್ಮೀಯರಿಗಾಗಿ ಅಧಿಕ ಖರ್ಚು.

ವೃಷಭರಾಶಿ
ವಿಚಾರಶೀಲರಿಗೆ ಉತ್ತಮ ಪ್ರಶಂಸೆಯ ಕಾಲ. ಹೆಚ್ಚಿನ ಧನ ವ್ಯಯವಾಗದಂತೆ ಜಾಗ್ರತೆ ವಹಿಸಿರಿ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಿರಿ. ಹಿತಶತ್ರುಗಳ ಬಗ್ಗೆ ಜಾಗ್ರತೆ ಮಾಡಿರಿ. ಗೃಹ ಬದಲಾವಣೆ, ಉದ್ಯೋಗ ಬದಲಾವಣೆಗೆ ಚಿಂತನೆ, ಹಣಕಾಸು ವಿಚಾರವಾಗಿ ಅನುಕೂಲ, ಆಕಸ್ಮಿಕ ಬಂಧುಗಳ ಆಗಮನ.

ಮಿಥುನರಾಶಿ
ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ಆಕಸ್ಮಿಕ ಧನಾಗಮನ, ವೃತ್ತಿರಂಗದಲ್ಲಿ ತುಸು ಚೇತರಿಕೆ ಕಂಡುಬಂದರೂ ಹಿರಿಯರಿಗೆ ಉತ್ತಮ ವೈದ್ಯರಿಂದ ತಪಾಸಣೆ ಅಗತ್ಯವಿದೆ. ದಾಂಪತ್ಯದಲ್ಲಿ ಸಹನೆ ಹಾಗೂ ಹೊಂದಾಣಿಕೆ ಇರಲಿ. ವಿದ್ಯಾರ್ಥಿಗಳಿಗೆ ಶುಭವಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಕೆಲಸ ಕಾರ್ಯಗಳಲ್ಲಿ ಎಚ್ಚರಿಕೆ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ.

ಕಟಕರಾಶಿ
ಭೂ ಸಂಬಂಧ ವ್ಯವಹಾರದಲ್ಲಿ ಅನುಕೂಲವಾಗಲಿದೆ. ನಿಶ್ಚಯಿಸಿದ ಕೆಲಸ ಕಾರ್ಯದಲ್ಲಿ ಅಭಿವೃದ್ಧಿ ಕಂಡುಬರುತ್ತದೆ. ಉದರ ಸಂಬಂಧಿ ಹಾಗೂ ಮೂತ್ರ ಸಂಬಂಧಿ ಸಮಸ್ಯೆ ಬಗ್ಗೆ ಜಾಗ್ರತೆ ವಹಿಸಿರಿ. ಸ್ವಯಂಕೃತ್ಯಗಳಿಂದ ತೊಂದರೆ, ಅತಿಯಾದ ಆಸೆಗಳಿಂದ ನಷ್ಟ, ದೂರ ಪ್ರದೇಶದಲ್ಲಿ ಉದ್ಯೋಗ, ಕಿಡ್ನಿ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು.

ಸಿಂಹರಾಶಿ
ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಕೋರ್ಟ್ ಕೇಸ್‍ಗಳಲ್ಲಿ ಅಡೆತಡೆ, ರಾಜಕೀಯ ವ್ಯಕ್ತಿಗಳಿಗೆ ಹೆಚ್ಚಿನ ಜವಾಬ್ದಾರಿ ಕಂಡುಬರುತ್ತದೆ. ನಿಂತು ಹೋದ ಕೆಲಸ ಕಾರ್ಯಗಳು ದುಷ್ಟ ಜನರ ಕಿರಿಕಿರಿಯನ್ನು ಅನುಭವಿಸುವಿರಿ. ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಅಗತ್ಯವಿರುತ್ತದೆ. ದೂರ ಪ್ರಯಾಣ, ಸಹೋದರನಿಂದ ಅನುಕೂಲ.

ಕನ್ಯಾರಾಶಿ
ಸ್ಥಿರಾಸ್ತಿ-ವಾಹನ ಯೋಗ, ಶತ್ರುಗಳ ಕಾಟ, ಋಣ ಬಾಧೆ, ಸಾಮಾಜಿಕ ಕ್ಷೇತ್ರದಲ್ಲಿ ಅಪವಾದವನ್ನು ಎದುರಿಸಬೇಕಾದೀತು. ದಾಂಪತ್ಯ ಜೀವನದಲ್ಲಿ ಎಲ್ಲಾ ವಿಚಾರಗಳ ಏರುಪೇರಾಗಲಿದೆ. ಅಸಹನೆ, ಅವಮಾನ, ವಿರೋಧವು ಕಂಡುಬರುತ್ತದೆ. ಜಾಗ್ರತೆ ಮಾಡಿರಿ. ಯೋಚನೆಯಿಂದ ನಿದ್ರಾಭಂಗ, ಅಜೀರ್ಣ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ.

ತುಲಾರಾಶಿ
ಉದ್ಯೋಗ ನಿಮಿತ್ತ ಪ್ರಯಾಣ, ಅತಿಯಾದ ಹಠಮಾರಿತನ, ಎಲ್ಲಾ ವಿಚಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸಿರಿ. ವಾಹನಗಳ ಬಗ್ಗೆ ಜಾಗ್ರತೆ ವಹಿಸಿರಿ. ದಾಯಾದಿಗಳ ಕಾಟ ನಿರಂತರವಾಗಿರುತ್ತದೆ. ವೃತ್ತಿ ರಂಗದಲ್ಲಿ ಬದಲಾವಣೆಯ ಸಾಧ್ಯತೆ ಇರುತ್ತದೆ. ಸ್ವಯಂಕೃತ ಅಪರಾಧಗಳಿಂದ ತೊಂದರೆ, ಆತುರ ಸ್ವಭಾವದಿಂದ ಸಂಕಷ್ಟ, ಮಿತ್ರರೇ ಶತ್ರುವಾಗುವರು.

ವೃಶ್ಚಿಕರಾಶಿ
ಹಣಕಾಸು ಸಂಪಾದನೆಗೆ ಮನಸ್ಸು, ಮಕ್ಕಳಿಂದ ಸಮಸ್ಯೆ, ಪ್ರಯಾಣದಲ್ಲಿ ಅಡೆತಡೆ, ಶೈಕ್ಷಣಿಕವಾಗಿ ಖರ್ಚುವೆಚ್ಚಗಳು ಕಂಡುಬರುತ್ತದೆ. ಗೃಹ ನಿರ್ಮಾಣದ ಕಾರ್ಯಗಳಿಗೆ ಅಡೆತಡೆಗಳಿರುತ್ತದೆ. ಧನಾಗಮನಕ್ಕೆ ಸಮಸ್ಯೆ ಇರದು. ಮಕ್ಕಳಿಂದ ಸಹಕಾರ ದೊರೆತು ಸಂತಸವಿದೆ. ಕಾರ್ಯ ಕರ್ತವ್ಯಗಳಲ್ಲಿ ಹಿನ್ನಡೆ.

ಧನಸ್ಸುರಾಶಿ
ಬೆಂಕಿ, ವಿದ್ಯುತ್‌ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿರಿ. ನೂತನ ವೃತ್ತಿ ಕೈಗೊಳ್ಳಬಹುದು. ಉದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಭಿಸಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಲಭಿಸಲಿದೆ. ಫೈನಾನ್ಸ್ ಕ್ಷೇತ್ರದವರಿಗೆ ಲಾಭ, ವ್ಯವಹಾರಗಳಲ್ಲಿ ಲಾಭ, ಧಾರ್ಮಿಕ ಕಾರ್ಯಕ್ಕಾಗಿ ಪ್ರಯಾಣ, ಸಂಗಾತಿಯಿಂದ ಮಾನಸಿಕ ನೆಮ್ಮದಿ.

ಮಕರರಾಶಿ
ಸ್ವಯಂಕೃತ ಅಪರಾಧಗಳಿಂದ ನಷ್ಟ, ಸಾಲದ ಸುಳಿಗೆ ಸಿಲುಕುವಿರಿ, ವೃತ್ತಿರಂಗದಲ್ಲಿ ಬದಲಾವಣೆಯ ಸಂಭವ ಗೋಚರಕ್ಕೆ ಬರಲಿದೆ. ನಾನಾ ರೀತಿಯಲ್ಲಿ ಖರ್ಚು ವೆಚ್ಚಗಳಿದ್ದರೂ ಧನಾಗಮನ ಉತ್ತಮವಿರುವುದರಿಂದ ಸಮಾಧಾನವಿರುತ್ತದೆ. ಸಂಚಾರ ಉತ್ತಮವಲ್ಲ. ದಾಯಾದಿಗಳ ಕಲಹ, ಕೋರ್ಟ್ ಕೇಸ್‍ಗಳಲ್ಲಿ ಜಯ, ದೂರ ಪ್ರದೇಶದಲ್ಲಿ ಆಕಸ್ಮಿಕ ಲಾಭ.

ಕುಂಭರಾಶಿ
ಸಾಲ ತೀರಿಸುವ ಸಾಧ್ಯತೆ, ಆಹಾರ ಸೇವನೆಯಲ್ಲಿ ವ್ಯತ್ಯಾಸ, ವಿರೋಧಿಗಳನ್ನು ಸಮರ್ಥವಾಗಿ ಎದುರಿಸುವಿರಿ. ಮನೆಯಲ್ಲಿ ವಿಶ್ರಾಂತಿಯ ದಿನಗಳಿವು. ಚಿಂತಿತ ಕೆಲಸ ಕಾರ್ಯಗಳಿಗೆ ಪ್ರಯತ್ನ ಬಲದ ಅಗತ್ಯವಿದೆ. ಸಾಮಾಜಿಕವಾಗಿ ಆಸಕ್ತಿ ತಂದೀತು. ಆರೋಗ್ಯದಲ್ಲಿ ಏರುಪೇರು, ಮಕ್ಕಳಲ್ಲಿ ಭೌತಿಕ ಜ್ಞಾನ ಕುಂಠಿತ.

ಮೀನರಾಶಿ
ವಸ್ತ್ರಾಭರಣ-ಮೊಬೈಲ್ ಖರೀದಿಸುವಿರಿ, ಕಾರ್ಮಿಕರಿಗೆ, ಶ್ರಮಜೀವಿಗಳಿಗೆ ನಾನಾ ರೀತಿಯ ತೊಂದರೆಗಳು ಕಂಡುಬರಲಿದೆ. ವೈಯಕ್ತಿಕ ಆಗುಹೋಗುಗಳ ಬಗ್ಗೆ ಹೆಚ್ಚು ಚಿಂತಿಸದಿರಿ. ದೇಹಾರೋಗ್ಯದ ಬಗ್ಗೆ ಗಮನ ಅಗತ್ಯವಿದೆ. ಉದ್ಯೋಗ ಸ್ಥಳದಲ್ಲಿ ಉತ್ತಮ ಗೌರವ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಪತ್ರ ವ್ಯವಹಾರಗಳಲ್ಲಿ ಲಾಭ.

Leave A Reply

Your email address will not be published.