ನಿತ್ಯಭವಿಷ್ಯ : 26-04-2020

0

ಮೇಷರಾಶಿ
ಅಧಿಕವಾದ ಕೋಪ, ಪರರ ಮಾತಿಗೆ ಕಿವಿಗೊಡಬೇಡಿ, ಆರೋಗ್ಯದಲ್ಲಿ ಸಮಸ್ಯೆಗಳು ತೋರಿಬಂದಾವು. ಮಕ್ಕಳ ಅಭ್ಯಾಸದಲ್ಲಿ ಪ್ರಶಂಸೆಯ ಮಾತು ಕೇಳಿ ಬಂದೀತು. ಮಿತ್ರರ ಸಹಾಯದಿಂದ ಕಾರ್ಯಸಾಧನೆಯಾಗಲಿದೆ. ಕಮಿಶನ್‌ ವ್ಯಾಪಾರದಲ್ಲಿ ಲಾಭ ದೊರಕಲಿದೆ. ಶತ್ರುಗಳ ಬಾಧೆ, ದಾಂಪತ್ಯದಲ್ಲಿ ಕಲಹ, ಮಿತ್ರರೊಂದಿಗೆ ವಾಗ್ವಾದ, ಯತ್ನ ಕಾರ್ಯದಲ್ಲಿ ವಿಳಂಬ, ಆತ್ಮೀಯರಲ್ಲಿ ಮನಃಸ್ತಾಪ.

ವೃಷಭರಾಶಿ
ಸ್ತ್ರೀಯರಿಗೆ ಲಾಭ, ಮುಂಗೋಪ ಹೆಚ್ಚು, ಉತ್ತಮ ಬುದ್ಧಿಶಕ್ತಿ, ಋಣ ಬಾಧೆ, ಔಷಧೋಪಚಾರಗಳಿಗಾಗಿ ಖರ್ಚು ತೋರಿ ಬಂದೀತು. ಬಂಧುಬಳಗದಲ್ಲಿ ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸುವಂತಾದೀತು. ಆರ್ಥಿಕವಾಗಿ ಧನಸಂಪತ್ತು ಹೆಚ್ಚಾಗಲಿದೆ. ಅನಿರೀಕ್ಷಿತವಾಗಿ ಕಿರು ಸಂಚಾರವಿರುತ್ತದೆ. ಅಕಾಲ ಭೋಜನ, ಆರೋಗ್ಯದಲ್ಲಿ ತೊಂದರೆ, ಸ್ನೇಹಿತರಿಂದ ಸಹಾಯ, ಚೋರ ಭಯ.

ಮಿಥುನರಾಶಿ
ಅನಾವಶ್ಯಕ ಖರ್ಚು, ವಿದ್ಯಾರ್ಥಿಗಳಲ್ಲಿ ಗೊಂದಲ, ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ಬಾಡಿಗೆದಾರರಿಗೆ ಗೃಹ ಬದಲಿ ಸಂಭವವಿದೆ. ಮನೆಯಲ್ಲಿ ಸನ್ಮಿತ್ರರ ಶುಭವಾರ್ತೆ ಕೇಳಿಬಂದೀತು. ಅವಿವಾಹಿತರಿಗೆ ವಿವಾಹ ಪ್ರಸ್ತಾವಗಳು ಕಂಕಣಬಲಕ್ಕೆ ಪೂರಕ ವಾದೀತು. ವಿದ್ಯಾರ್ಥಿಗಳಿಗೆ ಉದಾಸೀನತೆ ಸಲ್ಲದು. ವೈರಿಗಳಿಂದ ದೂರವಿರಿ, ನಾನಾ ರೀತಿಯ ಆಲೋಚನೆ, ದುಸ್ವಪ್ನಗಳಿಂದ ನಿದ್ರಾಭಂಗ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ತಾಳ್ಮೆಯಿಂದ ಸಮಾಧಾನಕರ.

ಕಟಕರಾಶಿ
ಅನ್ಯ ಜನರಲ್ಲಿ ವೈಮನಸ್ಸು, ಅನಗತ್ಯ ಕಲಹ, ಕಾರ್ಯದಲ್ಲಿ ವಿಳಂಬ, ಕುಟುಂಬದಲ್ಲಿ ಮನಃಸ್ತಾಪ, ಜಲವೃತ್ತಿಯವರಿಗೆ ವ್ಯಾಪಾರದಲ್ಲಿ ತುಸು ಚೇತರಿಕೆ ಸಮಾಧಾನ ತರಲಿದೆ. ಹಿರಿಯರ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿರಿ. ವ್ಯಾಪಾರ ವ್ಯವಹಾರದಲ್ಲಿ ಸಮಾಧಾನ ತರಲಿದೆ. ಪತ್ನಿಯ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿರಿ. ಹಣಕಾಸು ಸಮಸ್ಯೆ, ಸಾಲ ಬಾಧೆ, ವ್ಯಾಪಾರ ವಹಿವಾಟಿನಲ್ಲಿ ಲಾಭ, ಇಲ್ಲ ಸಲ್ಲದ ತಕರಾರು, ನಿಂದನೆ.

ಸಿಂಹರಾಶಿ
ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಮಾತಿನ ಮೇಲೆ ನಿಗಾವಹಿಸಿ, ಹಿತ ಶತ್ರುಗಳ ಕಾಟ, ಧರ್ಮಕಾರ್ಯಗಳಲ್ಲಿ ಆಸಕ್ತಿ ತಂದೀತು. ಒಂದು ವರ್ಗದ ಮಧ್ಯಸ್ಥಿಕೆಯಿಂದ ಸಮಸ್ಯೆಗಳು ಪರಿಹಾರವಾಗಲಿವೆ. ಸ್ಥಿರಾಸ್ತಿ ಉತ್ತಮವಿದ್ದರೂ ವಿನಿಯೋಗ ಸರಿಇರದು. ನೆರೆಹೊರೆಯವರಿಂದ ಕಿರಿಕಿರಿ ಇದೆ. ಚಂಚಲ ಮನಸ್ಸು, ನಂಬಿದ ಜನರಿಂದ ಮೋಸ, ಹಣಕಾಸು ನಷ್ಟ ಸಾಧ್ಯತೆ, ವ್ಯವಹಾರಗಳಲ್ಲಿ ಎಚ್ಚರಿಕೆ.

ಕನ್ಯಾರಾಶಿ
ಬಂಧುಗಳ ಸಹಕಾರದಿಂದ ಕಾರ್ಯಸಿದ್ಧಿ. ಆರ್ಥಿಕವಾಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಾರದು. ನೌಕರ ವರ್ಗಕ್ಕೆ ವೇತನದಲ್ಲಿ ಹಿಂಭಡ್ತಿ ಯಾ ವರ್ಗಾವಣೆಯ ಸಂಭವವಿದೆ. ಮನೆಯವಳ ಮಾತಿಗೆ ಬೆಲೆ ಕೊಡಿರಿ. ಆಹಾರ ಸೇವನೆಯಲ್ಲಿ ವ್ಯತ್ಯಾಸ, ಆರೋಗ್ಯದಲ್ಲಿ ಏರುಪೇರು ಸಾಧ್ಯತೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಕೆಲಸ ಕಾರ್ಯಗಳಲ್ಲಿ ಮುನ್ನಡೆ, ದಾಯಾದಿಗಳ ಕಲಹ, ಮಿತ್ರರಲ್ಲಿ ಪ್ರೀತಿ ವಾತ್ಸಲ್ಯ, ಈ ವಾರ ಎಚ್ಚರಿಕೆಯಲ್ಲಿರುವುದು ಉತ್ತಮ.

ತುಲಾರಾಶಿ
ಮೌನವಾಗಿರುವುದು ಉತ್ತಮ,ಜವಾಬ್ದಾರಿಯ ಹೆಚ್ಚಳದಿಂದ ದೇಹಾಯಾಸ ತೋರಿಬರಲಿದೆ. ಮೇಲಧಿಕಾರಿಗಳ ತುಷ್ಟೀಕರಣಕ್ಕಾಗಿ ಸಲ್ಲದ ಕಾರ್ಯಪ್ರವೃತ್ತಿಯಾದೀತು. ಪ್ರವಾಸ, ಯಾತ್ರಾದಿಗಳ ಚಿಂತನೆ ನಡೆಯಲಿದೆ. ಸಂಚಾರದಲ್ಲಿ ಜಾಗ್ರತೆ. ಹಿರಿಯರ ಮಾತಿಗೆ ಗೌರವ ನೀಡಿ, ಮುಂಗೋಪ ಹೆಚ್ಚಾಗುವುದು, ತಾಳ್ಮೆಯಿಂದ ಕಾರ್ಯ ಸಿದ್ಧಿಸುವುದು, ಹಣಕಾಸು ವಿಚಾರದಲ್ಲಿ ಕಲಹ, ಸ್ನೇಹಿತರೊಂದಿಗೆ ವೈಮನಸ್ಸು, ಮಾನಸಿಕ ವ್ಯಥೆ.

ವೃಶ್ಚಿಕರಾಶಿ
ತಾತ್ಕಾಲಿಕ ಸಮಸ್ಯೆಗಳು ಬಗೆಹರಿಯುವುದು, ಚಂಚಲ ಮನಸ್ಸು, ನಿರ್ಧಾರಗಳಲ್ಲಿ ಎಚ್ಚರ, ಆಲೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ, ಶೀತ ಸಂಬಂಧಿತ ರೋಗ, ಹಿರಿಯರ ಮಾರ್ಗದರ್ಶನದಿಂದ ಲಾಭವು ತೋರಿಬರಲಿದೆ. ಅನಿರೀಕ್ಷಿತ ಅಪವಾದ ಭೀತಿ ತಂದೀತು. ವ್ಯಾಪಾರಿ ವರ್ಗಕ್ಕೆ ಪ್ರತಿಸ್ಪರ್ಧಿಗಳ ಪೀಡೆಯಿಂದ ಆರ್ಥಿಕ ಸ್ಥಿತಿಯು ಹಾಳಾದೀತು. ಕಮಿಶನ್‌ ವ್ಯವಹಾರದಲ್ಲಿ ನಷ್ಟವಿದೆ. ಆಲಸ್ಯ ಮನೋಭಾವ, ವೈಯುಕ್ತಿಕ ವಿಚಾರಗಳ ಬಗ್ಗೆ ಗಮನಹರಿಸಿ.

ಧನಸ್ಸುರಾಶಿ
ನಿರೀಕ್ಷೆಗೆ ತಕ್ಕಂತೆ ಆದಾಯ, ಮಂಗಳಕಾರ್ಯಗಳ ಮುನ್ಸೂಚನೆ ತಂದೀತು. ವೈಯಕ್ತಿಕ ಆರೋಗ್ಯದ ಬಗ್ಗೆ ಕೊರತೆ ಕಾಣಿಸಲಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸದ ಪ್ರಯತ್ನಬಲ ಯಶಸ್ಸು ತಂದು ಕೊಡಲಿದೆ. ದಾಯಾದಿಗಳಿಂದ ದೂರವಿರಿ. ಆತ್ಮೀಯರಿಂದ ಬೆಂಬಲ, ಕೃಷಿಕರಿಗೆ ಲಾಭ, ಪರಿಚಿತರಿಂದ ಮೋಸಕ್ಕೆ ಒಳಗಾಗುವಿರಿ, ನಂಬುವ ಮುನ್ನ ಯೋಚಿಸಿ, ಖರ್ಚು ವೆಚ್ಚಗಳ ಬಗ್ಗೆ ಜಾಗ್ರತೆವಹಿಸಿ, ಕೆಲಸ ಕಾರ್ಯಗಳಲ್ಲಿ ಮುನ್ನಡೆ.

ಕರರಾಶಿ
ಆರ್ಥಿಕವಾಗಿ ಎಷ್ಟು ಬಂದರೂ ಸಾಲದೆಂಬಂತಹ ಸ್ಥಿತಿ ನಿಮ್ಮದು. ಆರೋಗ್ಯದಲ್ಲಿ ಜಾಗ್ರತೆ ವಹಿಸಿರಿ. ನೌಕರ ವರ್ಗದವರಿಗೆ ಮುಂಭಡ್ತಿಯ ಯೋಗವಿದೆ. ಹಾಗೇ ಇಷ್ಟ ಸ್ಥಳಕ್ಕೆ ವರ್ಗಾವಣೆ ಇದೆ. ಸ್ವಯಂ ಸಾಮಥ್ರ್ಯದಿಂದ ಅವಕಾಶ ಲಭಿಸುವುದು, ಅಧಿಕವಾದ ಹಣ ಖರ್ಚು, ಸಣ್ಣ ಪುಟ್ಟ ತೊಂದರೆ ಎದುರಾಗುವುದು, ಕುಟುಂಬದಲ್ಲಿ ಕಲಹ, ಜಾಣ್ಮೆಯಿಂದ ಕಾರ್ಯ ಯಶಸ್ಸು, ಬುದ್ಧಿವಂತಿಕೆಯಿಂದ ಉತ್ತಮ ಫಲ,

ಕುಂಭರಾಶಿ
ವಾದ-ವಿವಾದಗಳಿಂದ ದೂರವಿರಿ, ಮಾಡಿದ ಕೆಲಸ ಕಾರ್ಯಕ್ಕೆ ಪಶ್ಚಾತ್ತಾಪ ಪಡುವಿರಿ, ಕೈಕೆಳಗಿನವರ ಸಹಕಾರದಿಂದ ಕಾರ್ಯ ಸಾಧನೆಯಾಗಿ ಸಮಾಧಾನ ತರಲಿದೆ. ದಿನಸಿ ವರ್ತಕರಿಗೆ ಉತ್ತಮ ಲಾಭವಿದೆ. ಪ್ರವಾಸದಲ್ಲಿ ತೊಡಕುಗಳು ಕಾಣಿಸಬಹುದು. ಆರೋಗ್ಯದಲ್ಲಿ ಜಾಗ್ರತೆ ಮಾಡಿರಿ. ದುಂದು ವೆಚ್ಚಗಳಿಗೆ ಕಡಿವಾಣ ಅಗತ್ಯ, ಹಣಕಾಸು ಸಂಕಷ್ಟ, ಸಾಲ ಬಾಧೆ, ಹಿರಿಯರಿಂದ ಸಲಹೆ, ಬುದ್ಧಿಮಾತು.

ಮೀನರಾಶಿ
ಹಿರಿಯರೊಂದಿಗೆ ಭಿನ್ನಮತ. ತಾಂತ್ರಿಕ ವೃತ್ತಿಯವರಿಗೆ ಶುಭವಾರ್ತೆ. ಮಂಗಲಕಾರ್ಯಗಳಿಗೆ ಸದ್ಯವೇ ಸಕಾಲವಾದೀತು. ಕಚೇರಿ ಕಾರ್ಯಗಳಲ್ಲಿ ಕೆಲಸದ ಆರಂಭವಾಗಲಿದೆ. ಶುಭಫ‌ಲವಿದೆ. ಮನಸ್ಸಿನಲ್ಲಿ ಭಯ ಭೀತಿ, ಆಕಸ್ಮಿಕ ಧನವ್ಯಯ, ಅತಿಯಾದ ಕೋಪ, ವ್ಯಾಪಾರಿಗಳಿಗೆ ಅಧಿಕ ಲಾಭ, ಮಕ್ಕಳ ಅಗತ್ಯಕ್ಕೆ ಖರ್ಚು, ಕೌಟುಂಬಿಕ ಜೀವನದಲ್ಲಿ ತೃಪ್ತಿ.

Leave A Reply

Your email address will not be published.