ನಿತ್ಯಭವಿಷ್ಯ: 12-03-2020

0

ಮೇಷರಾಶಿ
ವೃತ್ತಿರಂಗದಲ್ಲಿ ವೇತನ ಹೆಚ್ಚಳದ ಸಾಧ್ಯತೆ ತಂದೀತು. ಸ್ನೇಹಿತರಿಂದ ಸಹಾಯ, ಕೌಟುಂಬಿಕ ಪ್ರಗತಿಗೆ ನಿಮ್ಮ ಚಿಂತನೆಗೆ ಸರಿಯಾದ ಸಮಯವಿದು. ಸಾಲಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ಗಾಬರಿ, ಆತಂಕ, ವಿದ್ಯಾರ್ಥಿಗಳಿಗೆ ಪ್ರಯತ್ನ ಬಲದಿಂದ ಯಶಸ್ಸು.

ವೃಷಭರಾಶಿ
ನಿಮ್ಮ ಕನಸು ನನಸಾದೀತು. ಆದರೆ ಕಠಿನ ಪ್ರಯತ್ನಬಲ ಅಗತ್ಯವಿರುತ್ತದೆ. ಆರ್ಥಿಕ ಸ್ಥಿತಿಯು ಆಗಾಗ ಏರುಪೇರಾದೀತು. ಖರ್ಚು ವೆಚ್ಚಗಳಲ್ಲಿ ಹೆಚ್ಚಿನ ಹಿಡಿತ ಇರಲಿ. ಬಂಧುಗಳಿಂದ, ಪತ್ರಗಳಿಂದ ಸಾಲ, ಅನ್ಯರಿಂದ ಅವಮಾನ, ದುಶ್ಚಟಗಳಿಂದ ದೂರವಿರಿ.

ಮಿಥುನರಾಶಿ
ಹೆಣ್ಣು ಮಕ್ಕಳಿಂದ ಧನಾಗಮನ. ಉಲ್ಲಾಸದ ದಿನವಿದು. ಮನೆಯಲ್ಲಿ ಸಂಭ್ರಮದ ವಾತಾವರಣ ಸಮಾಧಾನ ತರುತ್ತದೆ. ಆಲಂಕಾರಿಕ ವಸ್ತುಗಳ ಖರೀದಿಗಾಗಿ ಹೆಚ್ಚಿನ ಖರ್ಚು ವೆಚ್ಚಗಳಿರುತ್ತವೆ. ಗುಪ್ತ ಸಂಬಂಧ, ಇಚ್ಛೆಗಳಿಂದ ನೋವು, ಮನೆಯಲ್ಲಿ ಮಾಟ, ಮಂತ್ರ ಆತಂಕ,

ಕಟಕರಾಶಿ
ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ನೆರೆಹೊರೆಯವರಿಂದ, ಸಹೋದರಿಯಿಂದ ಚುಚ್ಚುಮಾತು, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಸರಕಾರಿ ಕೆಲಸಗಳಿಗಾಗಿ ಓಡಾಟವಿರುತ್ತದೆ. ಮಾನಸಿಕವಾಗಿ ದುರಾಲೋಚನೆ.ಸಾಂಸಾರಿಕವಾಗಿ ಪತ್ನಿ, ಪುತ್ರರೊಡನೆ ಹೊಂದಾಣಿಕೆಯ ಮನೋಭಾವ ಇರಲಿ.

ಸಿಂಹರಾಶಿ
ನೀವು ಯೋಚಿಸಿರುವ ಕೆಲಸಕಾರ್ಯಗಳು ಹಂತ ಹಂತವಾಗಿ ನೆರವೇರುತ್ತವೆ. ಅನಾವಶ್ಯಕವಾಗಿ ಮಾನಸಿಕ ಒತ್ತಡದಿಂದ ಬಳಲಲಿದ್ದೀರಿ. ಅನಗತ್ಯ ತಿರುಗಾಟ, ಅಧಿಕ ಖರ್ಚು, ಕಮಿಷನ್ ಏಜೆನ್ಸಿ, ಹೊಸ ಉಪಕರಣಗಳ ಖರೀದಿಯಿಂದ ನಷ್ಟ. ದಿನಾಂತ್ಯ ಶುಭವಿದೆ.

ಕನ್ಯಾರಾಶಿ
ಸಾಂಸಾರಿಕ ಸಮಸ್ಯೆಗಳನ್ನು ರಾಜಿಯಿಂದ ಸರಿಪಡಿಸಿಕೊಳ್ಳಿ. ಮಹಿಳಾ ಮಿತ್ರರಿಂದ ಆರ್ಥಿಕ ಸಹಾಯ. ಒಡವೆ, ವಸ್ತ್ರ, ಆಭರಣ ಖರೀದಿಗೆ ಅಧಿಕ ಖರ್ಚು, ನೀರಾವರಿ, ವ್ಯವಸಾಯ, ಹಾಲು, ಕ್ಷೇತ್ರದವರಿಗೆ ಅಧಿಕ ಧನಾಗಮನ, ಹಿರಿಯ ಸೋದರಿ, ಅನಾರೋಗ್ಯ ಸಮಸ್ಯೆ.

ತುಲಾರಾಶಿ
ಅನಿರೀಕ್ಷಿತವಾಗಿ ಮಿತ್ರರ ಭೇಟಿ. ವೃತ್ತಿರಂಗದಲ್ಲಿ ಹಲವಾರು ಹೊಣೆಗಾರಿಕೆಯನ್ನು ವಹಿಸಬೇಕಾಗುತ್ತದೆ. ದೂರದ ಪ್ರದೇಶದಲ್ಲಿ ಉದ್ಯೋಗ, ಕನಸಿನಲ್ಲಿ ಸರ್ಪ, ಕ್ರಿಮಿ, ಆತಂಕದ ಘಟನೆಗಳು, ದಿನಾಂತ್ಯ ಶುಭವಾರ್ತೆ.

ವೃಶ್ಚಿಕರಾಶಿ
ಕೆಲಸದಲ್ಲಿ ಪೂರ್ಣ ಗಮನಹರಿಸಿದ್ದಲ್ಲಿ ಕಾರ್ಯಸಾಧನೆಯಾಗಲಿದೆ. ಸಾಮಾಜಿಕ ಕೆಲಸಕಾರ್ಯಗಳಲ್ಲಿ ಯಶಸ್ಸು ದೊರಕಲಿದೆ. ಅತಿ ಆಸೆಗೆ ಬಲಿಯಾಗಿ ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ. ಧಾರ್ಮಿಕ ಆಚರಣೆ ಪ್ರಯಾಣಕ್ಕೆ ಅಧಿಕ ಖರ್ಚು, ಸ್ವಂ ಅಪರಾಧಗಳಿಂದ ಬಂದ ಅದೃಷ್ಟ ಕೈತಪ್ಪುವುದು.

ಧನಸ್ಸುರಾಶಿ
ಆಕಸ್ಮಿಕ ಲಾಭ, ಸನ್ಮಾನ ದೊರೆಯುವುದು, ವೃತ್ತಿರಂಗ ದಲ್ಲಿ ಕಾರ್ಯ ಒತ್ತಡ. ಉದ್ಯೋಗ ಸ್ಥಳದಲ್ಲಿ ಆಕಸ್ಮಿಕ ಅವಘಡ, ಸಾಲದ ಚಿಂತೆ. ಆರ್ಥಿಕವಾಗಿ ಧನಾಗಮನವು ಸಮಸ್ಯೆ ತಂದರೂ ಕಾರ್ಯಸಾಧನೆಗೆ ಅಡ್ಡಿಯಾಗದು. ಪ್ರತಿಕೂಲ ಪರಿಸ್ಥಿತಿಯಿಂದ ಅನುಕೂಲ. 

ಮಕರರಾಶಿ
ಕೆಲಸದಲ್ಲಿ ಆಗಾಗ ನಿರುತ್ಸಾಹ ತೋರಿಬಂದೀತು. ಬಂಧು ಮಿತ್ರರ ಆಗಮನವು ಸಮಾಧಾನ ತರಲಿದೆ. ದಾಪಂತ್ಯದಲ್ಲಿ ಸಂಶಯಗಳು, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಪ್ರೀತಿ-ಪ್ರೇಮದ ವಿಷಯದಲ್ಲಿ ತೊಂದರೆ. ಹಲವರು ದುರುಪಯೋಗ ಪಡಿಸಿಕೊಳ್ಳುತ್ತಾರೆ.

ಕುಂಭರಾಶಿ
ಪ್ರಯಾಣದಿಂದ ತೊಂದರೆ, ಉದ್ಯೋಗದಲ್ಲಿ ಶತ್ರು ಕಾಟ, ಧಾರ್ಮಿಕ ವ್ಯಕ್ತಿಗಳಿಂದ, ಸ್ಥಿರಾಸ್ತಿ ವಿಚಾರವಾಗಿ ಕೋರ್ಟ್ ಅಲೆದಾಟ, ಸಾಲಗಾರರಿಂದ, ಕಾರ್ಮಿಕರಿಂದ ಅವಘಡ. ಕೌಟುಂಬಿಕ ವಿಚಾರದಿಂದ ನಿಷ್ಠುರ, ಸಹೋದ್ಯೋಗಿಗಳೊಂದಿಗೆ ಸಂಘರ್ಷ. ಸಾಂಸಾರಿಕವಾಗಿ ಸಮಾಧಾನವಿದೆ.

ಮೀನರಾಶಿ
ಮಕ್ಕಳಿಂದ ಅವಘಡ, ಹವಮಾನ ವ್ಯತ್ಯಾಸದಿಂದ ಅನಾರೊಗ್ಯ, ವೃತ್ತಿಯಲ್ಲಿ ಏರುಪೇರು. ಎಲ್ಲಾ ವಿಚಾರಗಳಲ್ಲಿ ನಿಮ್ಮ ನಿಲುವಿಗೆ ಅಂಟಿಕೊಳ್ಳುವುದು ಸರಿಯಲ್ಲ. ತಾಳ್ಮೆಯಿಂದ ಕಾರ್ಯ ಜಯ, ಸಂಬಂಧಿಕರಿಂದ ಸಹಾಯ. ಅನಿರೀಕ್ಷಿತ ಧನಲಾಭ, ದಿನಾಂತ್ಯಕ್ಕೆ ಶುಭಸುದ್ದಿಯಿಂದ ಸಂತಸ.

Leave A Reply

Your email address will not be published.