ನಿತ್ಯಭವಿಷ್ಯ : 31-03-2020

0

ಮೇಷರಾಶಿ
ಸಂತಸದ ವಾತಾವರಣ, ಭೂ ವ್ಯವಹಾರಗಳಲ್ಲಿ ಲಾಭ, ಕಾರ್ಯ ಸಾಧನೆಗಾಗಿ ತಿರುಗಾಟ, ಶತ್ರುಗಳ ಬಾಧೆ, ಅಪವಾದ ನಿಂದನೆ. ವೃತ್ತಿಯಲ್ಲಿ ಕುಶಲತೆಯಿಂದ ವರ್ತಿಸಿರಿ. ಶತ್ರುಗಳನ್ನು ಗೆಲ್ಲುವಿರಿ. ವೈವಾಹಿಕ ಪ್ರಸ್ತಾಪಗಳಿಗೆ ಸದ್ಯದ ಪರಿಸ್ಥಿತಿಯು ಫ‌ಲ ನೀಡಲಾರದು. ನವದಂಪತಿಗಳಿಗೆ ಸಂತಾನಭಾಗ್ಯದ ಸೂಚನೆ ಸಂತಸ ತರಲಿದೆ.

ವೃಷಭರಾಶಿ
ನಿಮ್ಮ ಪ್ರಯತ್ನ ಬಲ, ಆತ್ಮವಿಶ್ವಾಸಗಳು ಅನಿರೀಕ್ಷಿತ ಫ‌ಲವನ್ನು ನೀಡಲಿದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅಭ್ಯಾಸಕ್ಕಾಗಿ ಅವಕಾಶಗಳು ಒದಗಿ ಬರುತ್ತದೆ. ವಿದ್ಯಾಭ್ಯಾಸದಲ್ಲಿ ಏಳಿಗೆ ಕಂಡುಬಂದಿತು. ಹೊಸ ಅವಕಾಶಗಳು ಪ್ರಾಪ್ತಿ, ಅದೃಷ್ಟದ ಬಾಗಿಲು ತೆರೆಯಲಿದೆ, ಮಕ್ಕಳಿಂದ ಸಂತಸ, ಕಾರ್ಯ ಸಾಧನೆಗಾಗಿ ತಿರುಗಾಟ

ಮಿಥುನರಾಶಿ
ವೈಯುಕ್ತಿಕ ಕೆಲಸಗಳಲ್ಲಿ ನಿಗಾವಹಿಸಿ, ದೇಹಾರೋಗ್ಯದಿಂದ ಮನಸ್ಸಿಗೆ ಸಮಾಧಾನ ದೊರಕಲಿದೆ. ನೌಕರ ವರ್ಗದವರಿಗೆ ಚೇತರಿಕೆಯು ಲಾಭದಾಯಕವಾಗಲಿದೆ. ಕೃಷಿ , ವ್ಯಾಪಾರದಲ್ಲಿ ಸರಕಾರದ ಸಹಕಾರವು ದೊರಕಲಿದೆ. ಮುನ್ನಡೆಯಿರಿ. ವ್ಯಾಪಾರದಿಂದ ಅಧಿಕ ಲಾಭ, ಬಂಧು ಮಿತ್ರರಿಂದ ಕಿರಿಕಿರಿ, ಗೌರವಕ್ಕೆ ಧಕ್ಕೆ, ನಿಂದನೆಗೆ ಗುರಿಯಾಗುವಿರಿ.

ಕಟಕರಾಶಿ
ವಿದ್ಯಾರ್ಥಿಗಳಲ್ಲಿ ಪ್ರತಿಭೆ, ಬಹಳ ಬೇಗ ವಿಷಯ ಗ್ರಹಿಸುವಿರಿ, ದೇಹಸ್ಥಿತಿಯ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿರಿ. ಮಂಗಲ ಕಾರ್ಯದ ಅವಕಾಶವು ಸ್ಪಲ್ಪದರಲ್ಲೇ ತಪ್ಪಿ ಹೋಗಬಹುದು. ಆಗಾಗ ಅತಿಥಿಗಳ ಆಗಮನವು ಮನಸ್ಸಿಗೆ ಸಮಾಧಾನ ನೀಡಲಾರದು. ಭೂವ್ಯವಹಾರದಲ್ಲಿ ಜಾಗ್ರತೆ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಈ ದಿನ ಶುಭ ಫಲ ಯೋಗ.

ಸಿಂಹರಾಶಿ
ದೇವತಾ ಕಾರ್ಯಗಳಿಗೆ ವಿಘ್ನಗಳು ಕಂಡು ಬಂದಾವು. ಮಕ್ಕಳ ಅವಿವೇಕದ ವರ್ತನೆ ಮನೆಯಲ್ಲಿ ಅಸಮಾಧಾನದ ವಾತಾವರಣ ಸೃಷ್ಟಿಸಲಿದೆ. ಕ್ರೀಡಾಳು ಗಳಿಗೆ ತಮ್ಮ ಕ್ಷೇತ್ರದಲ್ಲಿ ಅನಾವಶ್ಯಕ ತಪ್ಪು ಅಭಿಪ್ರಾಯ ತಂದೀತು. ಆತ್ಮೀಯರಿಂದ ಸಹಾಯ, ವಿವಾಹ ಯೋಗ, ಆಕಸ್ಮಿಕ ಧನ ಲಾಭ, ಪರಿಶ್ರಮಕ್ಕೆ ತಕ್ಕ ಫಲ, ಉತ್ತಮ ಲಾಭ.

ಕನ್ಯಾರಾಶಿ
ಸಂತಸದ ವಾತಾವರಣ, ಭೂ ಲಾಭ, ವಿವಾದಗಳಿಂದ ದೂರವಿರಿ, ವೃತ್ತಿರಂಗದಲ್ಲಿ ವರ್ಗಾವಣೆಯ ಭೀತಿ ಅಧಿಕಾರಿ ವರ್ಗದವರಿಗೆ ಕಾಡಲಿದೆ. ಆರ್ಥಿಕವಾಗಿ ಲಾಭವಿದ್ದರೂ ಖರ್ಚು ವೆಚ್ಚಗಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿರಿ. ವೈಯಕ್ತಿಕ ಗೌರವವನ್ನು ಕಾಪಾಡಿಕೊಳ್ಳಲು ಹೆಣಗಾಡುವಿರಿ. ವ್ಯವಹಾರಗಳಲ್ಲಿ ತಾಳ್ಮೆ ಅತ್ಯಗತ್ಯ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ.

ತುಲಾರಾಶಿ
ಕುಟುಂಬ ಸೌಖ್ಯ, ಸಾಲ ಬಾಧೆ, ಕಾರ್ಯಗಳಲ್ಲಿ ವಿಘ್ನ, ನೌಕರ ವರ್ಗದವರ ಅಚಾತುರ್ಯದಿಂದ ವೃತ್ತಿರಂಗದಲ್ಲಿ ಸಮಸ್ಯೆ ತಂದೀತು. ವಂಚಕರ ತಂತ್ರಜಾಲಕ್ಕೆ ಸಿಕ್ಕಿ ತೊಂದರೆಗೆ ಒಳಗಾಗುವ ಪ್ರಸಂಗ ಒದಗಿ ಬರುವುದು. ಬಂಧುಗಳೊಂದಿಗೆ ವಿವಾದಗಳು ಕಂಡೀತು. ಬಂಧುಗಳಿಂದ ಹಿಂಸೆ, ಕೋರ್ಟ್ ವ್ಯವಹಾರಗಳಲ್ಲಿ ಜಯ.

ವೃಶ್ಚಿಕರಾಶಿ
ಮಾನಸಿಕ ಒತ್ತಡ, ಆಗಾಗ ಗುಣಾತ್ಮಕ ಅಂಶಗಳು ಅನುಭವಕ್ಕೆ ಬರುತ್ತದೆ. ಗುರುಕೃಪೆಯಿಲ್ಲದೆ ಮಾನಸಿಕ ಅಸ್ಥಿರತೆ ಕಾಡಲಿದೆ. ವಿಶೇಷ ಕಾಳಜಿ ಇರಲಿ. ಕೋರ್ಟು ಕಚೇರಿ ಕೆಲಸ ಕಾರ್ಯದಲ್ಲಿ ಹಿನ್ನಡೆಯನ್ನು ಅನುಭವಿಸುವಿರಿ. ವಿದ್ಯೆಯಲ್ಲಿ ನಿರಾಸಕ್ತಿ, ದೃಷ್ಠಿ ದೋಷದಿಂದ ತೊಂದರೆ, ಅತಿಯಾದ ನೋವು, ಆರೋಗ್ಯದಲ್ಲಿ ವ್ಯತ್ಯಾಸ.

ಧನಸ್ಸುರಾಶಿ
ಯೋಗ್ಯ ವಯಸ್ಕರಿಗೆ ಕಂಕಣಬಲಕ್ಕೆ ಪೂರಕವಾದ ವಾತಾವರಣ ತೋರಿಬರುವುದು. ಕುಟುಂಬಿಕರ ಪ್ರೀತಿ ವಿಶ್ವಾಸವು ಸಮಾಧಾನ ತರಲಿದೆ. ವಿದ್ಯಾರ್ಥಿಗಳಿಗೆ ಪ್ರಯತ್ನ ಬಲಕ್ಕೆ ತಕ್ಕುದಾದ ಫ‌ಲವು ಇರುವುದು. ಇಷ್ಟವಾದ ವಸ್ತುಗಳ ಖರೀದಿ, ಹಿರಿಯರಿಂದ ಬೆಂಬಲ, ವ್ಯರ್ಥ ಧನಹಾನಿ, ಸಕಾಲಕ್ಕೆ ಭೋಜನ ಲಭಿಸುವುದಿಲ್ಲ.

ಮಕರರಾಶಿ
ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ, ಕಾರ್ಮಿಕರಿಗೆ ಸಮಾಧಾನದ ಪರಿಸ್ಥಿತಿಯು ನೆಮ್ಮದಿ ತರುವುದು. ರಾಜಕೀಯದವರಿಗೆ ತಮ್ಮ ಕ್ಷೇತ್ರದಲ್ಲಿ ಗೊಂದಲದ ಸ್ಥಿತಿಯು ಕಂಡುಬರುವುದು. ಯಾವುದೇ ವಿಚಾರದಲ್ಲಿ ಪರಿಶ್ರಮದಿಂದ ಪ್ರಯತ್ನಿಸಿರಿ. ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ, ಶೀತ ಸಂಬಂಧಿತ ರೋಗ, ಆಧ್ಯಾತ್ಮದತ್ತ ಒಲವು.

ಕುಂಭರಾಶಿ
ನಿಮ್ಮ ಮಾತುಗಳಿಂದ ಕಲಹ, ತಾಳ್ಮೆ ಅತ್ಯಗತ್ಯ, ನೌಕರ ವರ್ಗಕ್ಕೆ ನೆಮ್ಮದಿ ಇರದು. ಸಂಚಾರದಲ್ಲಿಅಪಘಾತದ ಭೀತಿ ತಂದೀತು. ಯೋಗ್ಯ ವಯಸ್ಕರಿಗೆ ವಿವಾಹ ಪ್ರಸ್ತಾವಕ್ಕೆ ಅಡೆತಡೆಗಳು ಕಂಡುಬಂದಾವು. ವಂಚಕರ ತಂತ್ರ ಜಾಲಕ್ಕೆ ಸಿಕ್ಕಿ ಗೊಂದಲ ಮಾಡೀತು. ಕಾರ್ಯ ಸಾಧನೆಗಾಗಿ ತಿರುಗಾಟ, ಆಕಸ್ಮಿಕ ಧನ ಲಾಭ.

ಮೀನರಾಶಿ
ಅನಾವಶ್ಯಕ ಭಾವೋದ್ರೇಕಕ್ಕೆ ಗುರಿಯಾಗುವ ಪ್ರಸಂಗ ತಂದೀತು. ಆದರೂ ದೈವಾನುಗ್ರಹ ನಿಮ್ಮನ್ನು ಮುನ್ನಡೆಯತ್ತ ಸಾಗಿಸಲಿದೆ. ಉದ್ಯೋಗ, ವ್ಯವಹಾರದಲ್ಲಿ ಸಾಕಷ್ಟು ಅಭಿವೃದ್ಧಿ ಕಂಡುಬರುವುದು. ಇತರರಿಗೆ ಸಹಾಯ ಮಾಡುವಿರಿ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ನೂತನ ಪ್ರಯತ್ನಗಳಿಂದ ಯಶಸ್ಸು, ಕೆಲಸ ಕಾರ್ಯಗಳಲ್ಲಿ ಮುನ್ನಡೆ.

Leave A Reply

Your email address will not be published.