ನಿತ್ಯಭವಿಷ್ಯ : 11-03-2020

0

ಮೇಷರಾಶಿ
ವೃತ್ತಿರಂಗದಲ್ಲಿ ವೇತನ ಹೆಚ್ಚಳದ ಸಾಧ್ಯತೆ ತಂದೀತು. ಮಕ್ಕಳ ಬಗ್ಗೆ ಕಾಳಜಿವಹಿಸಿ, ಕೌಟುಂಬಿಕ ಪ್ರಗತಿಗೆ ನಿಮ್ಮ ಚಿಂತನೆಗೆ ಸರಿಯಾದ ಸಮಯವಿದು. ಪತಿ-ಪತ್ನಿಯರಲ್ಲಿ ಸಂತೋಷ, ಆರೋಗ್ಯದಲ್ಲಿ ಏರುಪೇರು. ವಿದ್ಯಾರ್ಥಿಗಳಿಗೆ ಪ್ರಯತ್ನದಿಂದ ಮುನ್ನಡೆ.

ವೃಷಭರಾಶಿ
ಆರ್ಥಿಕ ಸ್ಥಿತಿಯು ಆಗಾಗ ಏರುಪೇರಾದೀತು. ಉದ್ಯೋಗದಲ್ಲಿ ಕಿರಿಕಿರಿ, ಹಿತಶತ್ರುಗಳಿಂದ ತೊಂದರೆ. ಚಂಚಲ ಮನಸು. ಅಕಾಲಭೋಜನ, ಸಾಲದಿಂದ ಮುಕ್ತಿ, ನಿಮ್ಮ ಕನಸು ನನಸಾದೀತು. ಆದರೆ ಕಠಿನ ಪ್ರಯತ್ನಬಲ ಅಗತ್ಯ. ಖರ್ಚು ವೆಚ್ಚಗಳಲ್ಲಿ ಹಿಡಿತವಿರಲಿ.

ಮಿಥುನರಾಶಿ
ಮನೆಯಲ್ಲಿ ಸಂಭ್ರಮದ ವಾತಾವರಣ ಸಮಾಧಾನ ತರುತ್ತದೆ. ದೇವರ ದರ್ಶನ. ಉಲ್ಲಾಸದ ದಿನವಿದು. ಕಾರ್ಯಗಳಲ್ಲಿ ಜಯ, ಸ್ತ್ರೀಲಾಭ, ಸ್ತೀಯರಿಗೆ ಆಭರಣ ಪ್ರಾಪ್ತಿ, ಬಂಧುಗಳ ಭೇಟಿ, ಆಲಂಕಾರಿಕ ವಸ್ತುಗಳ ಖರೀದಿಗಾಗಿ ಹೆಚ್ಚಿನ ಖರ್ಚು ವೆಚ್ಚಗಳಿರುತ್ತವೆ.

ಕಟಕರಾಶಿ
ಆರ್ಥಿಕ ಸುಧಾರಣೆ, ಸಾಂಸಾರಿಕವಾಗಿ ಪತ್ನಿ, ಪುತ್ರರೊಡನೆ ಹೊಂದಾಣಿಕೆ. ಸ್ಥಳ ಬದಲಾವಣೆಯಿಂದ ಕಾರ್ಯಸಾಧನೆಗೆ ಪೂರಕ, ಅಧಿಕ ಖರ್ಚಿನಿಂದ ಆತಂಕ, ದೂರ ಪ್ರಯಾಣದಿಂದ ಲಾಭ, ರಿಯಲ್ ಎಸ್ಟೇಟ್‍ ವ್ಯವಹಾರದಲ್ಲಿ ಅನುಕೂಲ. ಸರಕಾರಿ ಕೆಲಸಗಳಿಗಾಗಿ ಓಡಾಟ.

ಸಿಂಹರಾಶಿ
ವ್ಯಾಪಾರದಲ್ಲಿ ಅಧಿಕ ಲಾಭ, ಋಣಭಾದೆ ಮುಕ್ತಿ. ಅನಾವಶ್ಯಕವಾಗಿ ಮಾನಸಿಕ ಒತ್ತಡದಿಂದ ಬಳಲಲಿದ್ದೀರಿ.ನೀವು ಯೋಚಿಸಿರುವ ಕೆಲಸಕಾರ್ಯಗಳು ಹಂತ ಹಂತವಾಗಿ ನೆರವೇರುತ್ತವೆ. ಪರರಿಂದ ಸಹಾಯ, ಮನಃಶಾಂತಿ, ವಿವಾಹಯೋಗ, ದಿನಾಂತ್ಯ ಶುಭವಿದೆ.

ಕನ್ಯಾರಾಶಿ
ಆರ್ಥಿಕವಾಗಿ ಗೊಂದಲದ ಸ್ಥಿತಿ ತರಲಿದೆ. ಸಾಂಸಾರಿಕ ಸಮಸ್ಯೆ ಪರಿಹರಿಸಿಕೊಳ್ಳಿ. ಮಾತಿನ ಮೇಲೆ ಹಿಡಿತವಿರಲಿ. ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ವಸ್ತ್ರಾಭರಣ ಪ್ರಾಪ್ತಿ, ಆಕಸ್ಮಿಕ ಧನಲಾಭ. ಆಗಾಗ ದೇಹ ಪರಿಸ್ಥಿತಿಯಲ್ಲಿ ಸಮಸ್ಯೆ ತಂದೀತು.

ತುಲಾರಾಶಿ
ವೃತ್ತಿರಂಗದಲ್ಲಿ ಹೆಚ್ಚಿನ ಹೊಣೆ, ಹೊಣೆಯನ್ನು ನಿಭಾಯಿಸಲು ಸೂಕ್ತ ನೆರವು. ಅಕಾಲ ಭೋಜನ, ಶತ್ರುಗಳಿಂದ ಬೋಧನೆ, ಸ್ತ್ರೀ ಸಂಬಂಧಿ ವಿಚಾರದಲ್ಲಿ ಮನಸ್ತಾಪ. ಕೋಪ ಕಡಿಮೆ ಮಾಡಿಕೊಳ್ಳಿ. ದಿನಾಂತ್ಯಕ್ಕೆ ಶುಭವಾರ್ತೆ.

ವೃಶ್ಚಿಕರಾಶಿ
ಉದ್ಯೋಗದಲ್ಲಿ ಬಡ್ತಿ. ಕೆಲಸದಲ್ಲಿ ಸ್ವಪ್ರಯತ್ನದಿಂದ ಕಾರ್ಯಸಾಧನೆಯಾಗಲಿದೆ. ಶ್ರಮಕ್ಕೆ ತಕ್ಕಫಲ. ಹಣಕಾಸಿನ ವಿಷಯದಲ್ಲಿ ದ್ರೋಹ, ಸಾಮಾಜಿಕ ಕೆಲಸಕಾರ್ಯಗಳಲ್ಲಿ ಯಶಸ್ಸು ದೊರಕಲಿದೆ. ಕೌಟುಂಬಿಕ ಸಮಸ್ಯೆಯ ಬಗ್ಗೆ ಗಮನಹರಿಸಿ.

ಧನಸ್ಸುರಾಶಿ
ವೃತ್ತಿರಂಗ ದಲ್ಲಿ ಕಾರ್ಯಒತ್ತಡ ಹೆಚ್ಚಾಗಲಿದೆ. ಆದಾಯಕ್ಕಿಂತ ಅಧಿಕ ಖರ್ಚು, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು. ಆರ್ಥಿಕವಾಗು ಧನಾಗಮನದ ಸಮಸ್ಯೆಯಿದ್ದರೂ ಕಾರ್ಯಾನುಕೂಲ. ದೇವತಾ ಕಾರ್ಯದಲ್ಲಿ ಭಾಗಿ, ಮನಃಶಾಂತಿ, ಆತಂಕ, ಪ್ರತಿಕೂಲ ಪರಿಸ್ಥಿತಿ ಧೈರ್ಯದಿಂದ ಎದುರಿಸಿ ಲಾಭವಿದೆ.

ಮಕರರಾಶಿ
ಕೃಷಿ ಕಾರ್ಯಗಳಲ್ಲಿ ಲಾಭ. ವ್ಯವಹಾರದಲ್ಲಿ ಚೇತರಿಕೆ. ದುರಭ್ಯಾಸದಿಂದ ಹಣವ್ಯಯ, ಋಣಭಾದೆ, ಕೆಲವರು ನಿಮ್ಮನ್ನು ದುರುಪಯೋಗ ಮಾಡಿಕೊಳ್ಳೋ ಸಾಧ್ಯತೆಯಿದೆ, ಬಂಧು ಮಿತ್ರರ ಆಗಮನದಿಂದ ಸಮಾಧಾನ. ಕೆಲಸದಲ್ಲಿ ಆಸಕ್ತಿ ವಹಿಸಿದ್ರೆ ಲಾಭ. ದುರಭ್ಯಾಸಕ್ಕೆ ಹಣವ್ಯಯ.

ಕುಂಭರಾಶಿ
ವಾಹನ ಅಪಘಾತ, ದುಷ್ಟರಿಂದ ದೂರವಿರಿ. ಕೌಟುಂಬಿಕ ವಿಚಾರಗಳಿಂದ ನಿಷ್ಠುರ, ವಾಹನ ಅಪಫಾತ ಭಯ, ಸಹೋದ್ಯೋಗಿಗಳೊಂದಿಗೆ ಸಂಘರ್ಷ, ಹೊಂದಾಣಿಕೆಯಿಂದ ಲಾಭ. ವಂಚಕರ ಮೋಸದ ಮಾತಿಗೆ ಬಲಿಯಾಗಬೇಡಿ.

ಮೀನರಾಶಿ
ವೃತ್ತಿಯಲ್ಲಿ ಪ್ರಗತಿ, ಅವಾಚ್ಯ ಶಬ್ದಗಳಿಂದ ನಿಂದನೆ, ಅನಾರೋಗ್ಯ ಸಮಸ್ಯೆ ಕಾಡಲಿದೆ. ತಾಳ್ಮೆ ಸಮಾಧಾನದಿಂದ ಲಾಭ, ಪ್ರಯತ್ನ ಬಲದಿಂದ ಕಾರ್ಯಸಾಧನೆ. ಋಣ ಬಾಧೆಯಿಂದ ಮುಕ್ತಿ. ದಿನಾಂತ್ಯಕ್ಕೆ ಧನಲಾಭ, ಅನಿರೀಕ್ಷಿತ ಶುಭ ಸುದ್ದಿ ನಿಮಗೆ ಖುಷಿಯನ್ನು ನೀಡಲಿದೆ.

Leave A Reply

Your email address will not be published.