ಬಸ್ ಚಾಲಕನ ನಿಗೂಢ ಸಾವು : ಬಸ್ಸಿನಲ್ಲಿ ಪತ್ತೆಯಾಯ್ತು ಮೃತದೇಹ !

0

ಕಡಬ : ಕೆಎಸ್ಆರ್ ಟಿಸಿ ಬಸ್ಸಿನಲ್ಲಿ ಚಾಲಕನೋರ್ವ ನಿಗೂಢವಾಗಿ ಸಾವನ್ನಪ್ಪಿರೊ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ನಡೆದಿದೆ.

ಬೀದರ್ ನಿವಾಸಿ ರೇವಣಪ್ಪ ಎಂಬವರೇ ಸಾವನ್ನಪ್ಪಿದ ದುರ್ದೈವಿ. ನಿತ್ಯವೂ ಬಸ್ ಕಡಬದಲ್ಲಿ ನಿಲ್ಲಿಸಿ ಬೆಳಗ್ಗೆ ಟ್ರಿಪ್ ಮಾಡಲಾಗುತ್ತಿತ್ತು. ಆದ್ರೆ ಇವತ್ತು ಬೆಳಗ್ಗೆ ಬಸ್ಸಿನಲ್ಲಿ ಕುಸಿದು ಬಿದ್ದಿರೋ ಸ್ಥಿತಿಯಲ್ಲಿ ಚಾಲಕನ ಮೃತ ದೇಹ ಪತ್ತೆಯಾಗಿದೆ. ಬೆಳಿಗ್ಗೆ ಬಸ್ಸಿಗೆ ಬಂದಿದ್ದ ವೇಳೆಯಲ್ಲಿ ಚಾಲಕನಿಗೆ ಹೃದಯಾಘಾತವಾಗಿದೆ ಅನ್ನೋ ಸಂಶಯ ವ್ಯಕ್ತವಾಗಿದೆ.

ಕಡಬ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.