ನಿತ್ಯಭವಿಷ್ಯ :21-03-2020

0

ಮೇಷರಾಶಿ
ಕಾರ್ಯಕ್ಷೇತ್ರದಲ್ಲಿ ಯಶಸ್ಸು, ಉದ್ಯೋಗಿಗಳಿಗೆ ಬಾರೀ ಮುನ್ನಡೆ, ಆರ್ಥಿಕವಾಗಿ ಅಭಿವೃದ್ದಿ ಗೋಚರಕ್ಕೆ ಬರಲಿದೆ. ಸಾರ್ವಜನಿಕವಾಗಿ ಪ್ರತಿಷ್ಠಿತರ ಸಹಕಾರದಿಂದ, ಪ್ರಭಾವದಿಂದಾಗಿ ಹಲವಾರು ಕೆಲಸ ಕಾರ್ಯಗಳು ಈಡೇರಲಿವೆ. ಕಾರ್ಯರಂಗದಲ್ಲಿ ಹೊಸಹೊಸ ಅವಿಷ್ಕಾರಗಳು ನಿಮ್ಮಿಂದ ನಡೆಯಲಿವೆ. ಅನಿರೀಕ್ಷಿತ ಧನಲಾಭ.

ವೃಷಭರಾಶಿ
ಕೆಲಸದ ಸ್ಥಳದಲ್ಲಿ ಸಂತಸದ ವಾತಾವರಣ, ಆರ್ಥಿಕವಾಗಿ ನಿರಂತರ ಖರ್ಚು ವೆಚ್ಚಗಳಾಗಳಿದ್ದರೂ ಧನಾಗಮನ. ದೂರ ಸಂಚಾರದಿಂದ ಕಾರ್ಯಸಾಧನೆ. ಸ್ನೇಹಿತರಿಗೆ ಉಪಕಾರ ಮಾಡಲು ಹೋಗಿ ತೊಂದರೆಗೊಳಗಾಗುವಿರಿ. ದಿನಾಂತ್ಯಕ್ಕೆ ಅನಿರೀಕ್ಷಿತವಾಗಿ ಶುಭವಾರ್ತೆ ಸಂತಸವನ್ನು ತರಲಿದೆ.

ಮಿಥುನರಾಶಿ
ಇಡೀ ದಿನ ನಿಮಗೆ ನೋವನ್ನು ತರಿಸುತ್ತದೆ. ಕಾರ್ಯಗಳಲ್ಲಿ ವಿಘ್ನ ಉಂಟಾಗಲಿದೆ. ನಿರುದ್ಯೋಗಿಗಳಿಗೆ ನಿರಾಶಾದಾಯಕ ಮನೋಭಾವ. ಶ್ರಮಕ್ಕೆ ತಕ್ಕುದಾದ ಪ್ರತಿಫ‌ಲವು ಸಿಗದೆ ಮನಸಿಗೆ ಬೇಸರ. ರಾಜಕೀಯದ ಮಂದಿಗೆ ಸಮಸ್ಯಾತ್ಮಕ ದ್ವಂದಗಳು ಕಾಡಲಿವೆ. ಆರ್ಥಿಕವಾಗಿ ಬಂಧುಗಳಿಂದಾಗಿಯೂ ಧನ ಹಾನಿ ಇದೆ.

ಕಟಕರಾಶಿ
ಪ್ರಯತ್ನ ಬಲದಿಂದ ಕಾರ್ಯಸಾಧನೆ. ಆರ್ಥಿಕ ಸಮಸ್ಯೆ ನಿಮಗೆ ತಲೆನೋವು ತರಿಸುತ್ತದೆ. ಮದುವೆ ಪ್ರಸ್ತಾಪದಕ್ಕೆ ಸಂಬಂಧಿಕರಿಂದಲೇ ಅಡೆತಡೆ ಬರಲಿದೆ. ಮಕ್ಕಳ ವಿಚಾರಗಳಲ್ಲಿ ನಿರಂತಂಕವಾಗಿ ತಲೆಕೆಡಿಸಿಕೊಳ್ಳದಿರಿ. ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಅನುಕೂಲ, ನಿರುದ್ಯೋಗಿಗಳಿಗೆ ಉದ್ಯೋಗಕ್ಕಾಗಿ ಅಲೆದಾಡುವ ಸ್ಥಿತಿ ಬಂದೀತು.

ಸಿಂಹರಾಶಿ
ದೂರ ಪ್ರಯಾಣದಿಂದ ಕಾರ್ಯಸಾಧನೆ. ದೇವತಾ ಕಾರ್ಯಗಳಿಗೆ ಹೆಚ್ಚಿನ ಖರ್ಚು. ಅಧಿಕವಾಗಿ ಋಣ ಪರಿಹಾರ ನೆಮ್ಮದಿ ತರಲಿದೆ. ಪ್ರವಾಸದಿಂದ ಮನಸಿಗೆ ಸಂತಸ, ಸರಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲ. ಆರ್ಥಿಕ ಸಮಸ್ಯೆಗೆ ಪರಿಹಾರ ಗೋಚರಿಸಲಿದೆ. ದಿನಾಂತ್ಯಕ್ಕೆ ಧನಲಾಭ.

ಕನ್ಯಾರಾಶಿ
ಸ್ವಯಂಕೃತ ಅಪರಾಧಗಳಿಂದ ಬಳಲುವಿರಿ. ದಾಯಾದಿಗಳಿಂದ ಕೆಟ್ಟ ಮಾತನ್ನು ಕೇಳುವಿರಿ. ಕೆಲಸದ ಕ್ಷೇತ್ರದಲ್ಲಿ ಸಂತಸದ ವಾತಾವರಣ, ಉದ್ಯೋಗಿಗಳಿಗೆ ವರ್ಗಾವಣೆಯ ಭಾಗ್ಯವಿದೆ. ವಾಹನ ವೃತ್ತಿಯವರಿಗೆ ಅಪಘಾತದ ಭೀತಿ ಎದುರಾಗಲಿದೆ. ಸ್ನೇಹಿತರೊಂದಿಗೆ ವ್ಯವಹಾರಿಸುವಾಗ ಎಚ್ಚರಿಕೆ ಅಗತ್ಯ.

ತುಲಾರಾಶಿ
ಆದಾಯಕ್ಕಿಂತ ಖರ್ಚುವೆಚ್ಚಗಳು ಅಧಿಕವಾಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಒದಗಿಬರಲಿದೆ. ಆರೋಗ್ಯದ ಸಮಸ್ಯೆ ನಿಮ್ಮನ್ನು ಕಾಡಲಿದೆ. ಅಲರ್ಜಿ, ಸಂಧಿ ನೋವಿನ ಬಗ್ಗೆ ವೈದ್ಯರನ್ನು ಭೇಟಿಯಾಗುವಿರಿ. ವ್ಯವಹಾರಗಳಲ್ಲಿ ನಷ್ಟ. ಆತಂಕ ನಿಮ್ಮನ್ನು ಕಾಡಲಿದೆ.

ವೃಶ್ಚಿಕರಾಶಿ
ಬಾಕಿ ಉಳಿದಿದ್ದ ಕಾನೂನು ವ್ಯಾಜ್ಯದಲ್ಲಿ ಗೆಲುವು ನಿಮ್ಮದಾಗಲಿದೆ. ಹಣಕಾಸಿನ ಸಂಬಂಧಿತ ವ್ಯವಹಾರಗಳಲ್ಲಿ ಭಾರೀ ಎಚ್ಚರಿಕೆ ಅತ್ಯಗತ್ಯ. ನಿಮ್ಮ ಸ್ಥಿತಿ ಬೇರೆಯವರಿಗೆ ಹೋಲಿಸಿದರೆ ಅಭಿವೃದ್ದಿ ಉತ್ತಮ. ವ್ಯವಹಾರದ ಕಡೆಗೆ ಹೆಚ್ಚಿನ ಗಮನ ಹರಿಸಿ. ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯತ್ನ ಅಗತ್ಯ..

ಧನುಸ್ಸುರಾಶಿ
ವೃತ್ತಿರಂಗದಲ್ಲಿ ಹೆಚ್ಚಿನ ಜಾಗೃತೆ ಅತ್ಯಗತ್ಯ. ಆರೋಗ್ಯದ ಬಗ್ಗೆ ಉದಾಸೀನತೆ ಮಾಡಲೇ ಬೇಡಿ. ಬಂಧುಗಳು ನಿಮ್ಮ ವಿಶ್ವಾಸವನ್ನು ಹೆಚ್ಚಿಸಲಿದ್ದಾರೆ. ವ್ಯಾಪಾರಿಗಳಿಗೆ, ಉದ್ಯೋಗಿಗಳಿಗೆ ಹೆಚ್ಚಿನ ಧನಲಾಭ, ಹೊಸ ವ್ಯವಹಾರ ಮಾಡಲು ನಿಮ್ಮ ಮನಸ್ಸು ಯೋಚಿಸಲಿದೆ.

ಮಕರರಾಶಿ
ಶನಿಯ ಪ್ರಭಾವ ನಿಮ್ಮ ರಾಶಿಯ ಮೇಲಿದ್ದರೂ ಕೈಗೊಂಡ ಕೆಲಸಗಳು ವಿಘ್ನವಿಲ್ಲದೇ ನೆರವೇರಲಿದೆ. ನಿರುದ್ಯೋಗಿಗಳಿಗೆ ಉದ್ಯೋಗದ ಕರೆ ಬರಲಿದೆ. ವಾಹನ ಸಂಚಾರದಲ್ಲಿ ಜಾಗೃತೆ ಅತ್ಯಗತ್ಯ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ. ಸ್ನೇಹಿತರಿಗೆ ಆರ್ಥಿಕ ಸಹಾಯ ದೊರೆಯಲಿದೆ.

ಕುಂಭರಾಶಿ
ಭೂ ವ್ಯವಹಾರ ಮಾಡುವ ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಬಾರೀ ಬದಲಾವಣೆಯನ್ನು ಹೊಂದಲಿದ್ದೀರಿ. ನಿಮ್ಮನ್ನು ಕಾಡುತ್ತಿದ್ದ ಆಂತಕದ ವಾತಾವರಣ ಹಂತ ಹಂತವಾಗಿ ಕಡಿಮೆಯಾಗಲಿದೆ. ಆರ್ಥಿಕ ಚೇತರಿಕೆ ನಿಮ್ಮ ಗೋಚರಕ್ಕೆ ಬರಲಿದೆ. ದಿನಾಂತ್ಯಕ್ಕೆ ಶುಭ ಸುದ್ದಿಯೊಂದನ್ನು ಕೇಳಲಿದ್ದೀರಿ.

ಮೀನರಾಶಿ
ಆರ್ಥಿಕವಾಗಿ ಹೆಚ್ಚಿನ ಅಭಿವೃದ್ಧಿ ಗೋಚರಕ್ಕೆ ಬರಲಿದೆ. ಹೊಸ ಯೋಜನೆಯೊಂದು ನಿಮ್ಮನ್ನು ಹುಡುಕಿ ಬರಲಿದೆ. ವೃತ್ತಿರಂಗದಲ್ಲಿ ಮುಂಭಡ್ತಿ ದೊರೆಯಲಿದೆ. ಸಹೋದ್ಯೋಗಿಗಳ ಸಹಕಾರವೂ ಲಭಿಸಲಿದೆ. ಅವಿವಾಹಿತರಿಗೆ ಕಂಕಣ ಬಲ. ಅನಿರೀಕ್ಷಿತ ಸಂದೇಶವೊಂದು ನಿಮಗೆ ಸಂತಸವನ್ನು ತರಲಿದೆ. ಆರೋಗ್ಯದ ಬಗ್ಗೆ ಕಾಳಜಿ ಅತ್ಯಗತ್ಯ.

Leave A Reply

Your email address will not be published.