ನಿತ್ಯಭವಿಷ್ಯ : 22-03-2020

0

ಮೇಷರಾಶಿ
ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ. ಯೋಗ್ಯ ವಯಸ್ಕರಿಗೆ ಬಾಳಸಂಗಾತಿಯ ಆಯ್ಕೆಯಾಗಲಿದೆ. ಉದ್ಯೋಗಸ್ಥರಿಗೆ ಮೇಲಾಧಿಕಾರಿಗಳಿಂದ ಕಿರಿಕಿರಿ, ಆರ್ಥಿಕ ಸ್ಥಿತಿಯು ಆಗಾಗ ಏರುಪೇರಾಗಬಹುದು ಗಮನ ಹರಿಸಿರಿ. ಮಾತುಕತೆಯಿಂದ ಉತ್ತಮಫಲ.

ವೃಷಭರಾಶಿ
ಆರ್ಥಿಕ ಸಹಕಾರ, ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶಗಳು ಲಭಿಸಲಿದೆ. ಗ್ರಹದಲ್ಲಿ ಆಗಾಗ ಸಮಾಧಾನಕರ ವಾತಾವರಣ ಕಂಡು ಬರುತ್ತದೆ. ಮಕ್ಕಳ ಉನ್ನತ ವ್ಯಾಸಾಂಗದ ಕುರಿತು ಚರ್ಚೆ, ವಿದ್ಯಾರ್ಥಿಗಳಿಗೆ ಮುನ್ನಡೆ, ನಿಮ್ಮ ಆತ್ಮವಿಶ್ವಾಸಕ್ಕೆ ಬಲವಿರಲಿ.

ಮಿಥುನರಾಶಿ
ಕುಟುಂಬಸ್ಥರೊಂದಿಗೆ ನೆಮ್ಮದಿಯಾಗಿರುವಿರಿ, ಯಾವುದೇ ವಿಚಾರದಲ್ಲಿ ದುಡುಕದೇ ಮುಂದುವರಿಯಿರಿ. ಮನೆಯಲ್ಲಿ ಶುಭಕಾರ್ಯಗಳ ಚಿಂತನೆಗೆ ಭಂಗವಾದೀತು. ವಾಹನ ಚಾಲನೆಯಲ್ಲಿ ಹೆಚ್ಚಿನ ಜಾಗ್ರತೆ ಇರಲಿ. ದೇವತಾ ದರ್ಶನ ಪಡೆಯುವಿರಿ, ಹೊಸಮನೆ ಕಟ್ಟುವ ವಿಚಾರದಲ್ಲಿ ಯಶಸ್ಸು.

ಕಟಕರಾಶಿ
ವೃತ್ತಿರಂಗದಲ್ಲಿ ಆಗಾಗ ಬದಲಾವಣೆಯ ಸಾಧ್ಯತೆ. ಸರ್ವ ಕಾರ್ಯಗಳಲ್ಲಿಯೂ ಯಶಸ್ಸು, ಗುರಿ ಸಾಧನೆಗಾಗಿ ನೀವು ನಡೆಸುವ ಪ್ರಯತ್ನ ಸಫ‌ಲವಾದೀತು. ಹಿತಶತ್ರುಗಳ ಬಗ್ಗೆ ಜಾಗ್ರತೆ ಇರಲಿ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಶುಭಫಲ, ದಿನಾಂತ್ಯ ಸಂತಸವಿದೆ.

ಸಿಂಹರಾಶಿ
ಪಿತ್ರಾರ್ಜಿತ ಆಸ್ತಿ ಕೈಸೇರಲಿದೆ. ಯಾವುದೇ ವಿಚಾರದಲ್ಲಿ ನಿರ್ಧಾರ ಮಾಡುವ ಮುನ್ನ ಎಚ್ಚರಿಕೆಯಿಂದ ಆಲೋಚಿಸುವುದು ಉತ್ತಮ. ಇತರರಿಗೆ ಸಲಹೆ ನೀಡುವಿರಿ, ಒಳ್ಳೆಯ ಅವಕಾಶಗಳು ಪುನಃ: ಒದಗಿ ಬರುವುದರಿಂದ ಕಳೆದುಕೊಂಡ ಅಸ್ತಿತ್ವ ಸಂಪಾದಿಸಲಿದ್ದೀರಿ. ಮನೆಯಲ್ಲಿ ನೆಮ್ಮದಿಯ ವಾತಾವರಣ.

ಕನ್ಯಾರಾಶಿ
ಉದ್ಯೋಗ ಸ್ಥಳದಲ್ಲಿ ಅಧಿಕಾರಿಗಳಿಂದ ಬೆಂಬಲ, ಯಾವುದೇ ಕೆಲಸಕಾರ್ಯಗಳನ್ನು ಮೈಮೇಲೆ ಎಳೆದುಕೊಂಡು ಹೋಗದಿರುವುದೇ ಲೇಸು. ಬ್ಯಾಂಕ್‌, ಫೈನಾನ್ಸ್‌ ಕಂಪೆನಿಯವರಿಂದ ಮಾನ ಹಾನಿಯಾಗುವ ಸಾಧ್ಯತೆ ಇದೆ. ಪ್ರೀತಿ ಪಾತ್ರರೊಂದಿಗೆ ಆನಂದದ ಕ್ಷಣ, ಸಮಸ್ಯೆಯನ್ನು ಮುಕ್ತವಾಗಿ ಹಂಚಿಕೊಳ್ಳುವುದರಿಂದ ನೆಮ್ಮದಿ.

ತುಲಾರಾಶಿ
ಆಕಸ್ಮಿಕ ಧನಾಗಮನದಿಂದ ಕಾರ್ಯಸಾಧನೆ. ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವಿರಿ. ವೃತ್ತಿರಂಗದಲ್ಲಿ ನಿಮ್ಮ ಭಾವನೆಗಳಿಗೆ ನಿರಾಸೆಯಾಗಲಿದೆ. ಸ್ವತಃ ವ್ಯವಹಾರಕ್ಕೆ ಚಿಂತನೆ, ವಿದ್ಯಾರ್ಥಿಗಳು ದೃಢ ನಿರ್ಧಾರದಿಂದಲೇ ಮುನ್ನಡೆಯಬೇಕಾದೀತು. ದಿನಾಂತ್ಯ ಶುಭವಿದೆ.

ವೃಶ್ಚಿಕರಾಶಿ
ಸಮಸ್ಯೆಗಳು ಪರಿಹಾರವಾಗಲಿದೆ, ಅವಿವಾಹಿತರಿಗೆ ಹೊಸ ಸಂಬಂಧಗಳು ಕೂಡಿ ಬರುವ ಸಮಯವಿದು. ಸಂತಸದ ದಿನ, ಸಾಂಸಾರಿಕವಾಗಿ ಶುಭವಾರ್ತೆ ಇದೆ. ವೃತ್ತಿರಂಗದಲ್ಲಿ ಆಶಾಭಂಗವಿದ್ದರೂ ನಿಮ್ಮ ಪ್ರಯತ್ನಬಲದ ಕಾರ್ಯಸಾಧನೆಯಿಂದ ನೆಮ್ಮದಿ ಇದೆ‌.

ಧನುರಾಶಿ
ಮಹತ್ತರ ಬದಲಾವಣೆಯೊಂದಿಗೆ ಆಗಲಿದೆ, ಸಾಂಸಾರಿಕವಾಗಿ ಹೊಂದಾಣಿಕೆಯ ಮನೋಭಾವನೆ ಎಲ್ಲಾ ವಿಚಾರದಲ್ಲಿ ಮುನ್ನಡೆ ತರಲಿದೆ. ನಿತ್ಯದ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ನಿಗಾವಹಿಸಲಿದ್ದೀರಿ. ಆಶಾವಾದಿಗಳಾಗಿ ಮುನ್ನಡೆಯಿರಿ. ಸರಕಾರಿ ಕೆಲಸ ಕಾರ್ಯಗಳು ಕಾರ್ಯರೂಪಕ್ಕೆ ಬರಲಿವೆ.

ಮಕರರಾಶಿ
ಕಾನೂನು ವಿಚಾರದಲ್ಲಿ ಯಶಸ್ಸು, ಎಲ್ಲಾ ವಿಚಾರದಲ್ಲಿ ಪ್ರಯತ್ನಬಲವೇ ಮುಖ್ಯವೆನಿಸುತ್ತದೆ. ವೃತ್ತಿರಂಗದಲ್ಲಿ ಬದಲಾವಣೆಯ ಸೂಚನೆ ಸಂತಸ ತರಲಿದೆ. ತಂತ್ರಗಾರಿಕೆಗೆ ಯಶಸ್ಸು, ಲೆಕ್ಕಾಚಾರಗಳಿಂದಾಗಿ ಆರ್ಥಿಕವಾಗಿ ಗಟ್ಟಿತನ ನಿಮ್ಮದಾಗಲಿದೆ. ಜಾಗ್ರತೆ ಮಾಡಿರಿ.

ಕುಂಭರಾಶಿ
ಹಣಕಾಸಿನ ಸಮಸ್ಯೆ ಪರಿಹಾರ, ಆಗಾಗ ಮಾನಸಿಕ, ಋಣಾತ್ಮಕ ಚಿಂತನೆಗಳಿಂದ ಸಮಾಧಾನ ಸಿಗಲಾರದು. ಬಂಡವಾಳದಲ್ಲಿ ನಿರೀಕ್ಷೆಗೂ ಮೀರಿದ ಲಾಭ, ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದನ್ನು ತಿಳಿಯಿರಿ. ಸಂಗಾತಿಯೊಂದಿಗೆ ಸುಂದರ ಕ್ಷಣ, ದಾಯಾದಿಗಳ ಬಗ್ಗೆ ಅತೀ ಹೆಚ್ಚಿನ ವಿಶ್ವಾಸವು ಸಮಸ್ಯೆಯನ್ನು ತಂದು ಕೊಡಲಿದೆ.

ಮೀನರಾಶಿ
ಆರೋಗ್ಯಕ್ಕಾಗಿ ದೇವರ ಮೊರೆ, ಉಳಿತಾಯದ ಹೆಚ್ಚಳಕ್ಕೆ ಹೆಚ್ಚಿನ ಗಮನ ಹರಿಸಿರಿ. ಹಿಂದಿನದೆಲ್ಲಾ ಮರೆತು ಮುಂದಿನ ಭವಿಷ್ಯದ ಬಗ್ಗೆ ಚಿಂತನೆ ನಡೆಸಿದ್ದಲ್ಲಿ ಯಶಸ್ಸು ನಿಮ್ಮದಾಗಲಿದೆ. ವೃತ್ತಿರಂಗದಲ್ಲಿ ನಿಮಗೆ ಸೂಕ್ತ ಸ್ಥಾನಮಾನ ಸಿಗಲಿದೆ. ಕಚೇರಿಯಲ್ಲಿ ನಿಮ್ಮ ಮೇಲೆಯೇ ಭರವಸೆಯನ್ನು ಹೆಚ್ಚಿಸಿಕೊಳ್ಳುವಿರಿ. ಬಂಧುಗಳ ಆಗಮನದಿಂದ ಮನೆಯಲ್ಲಿ ಸಂತಸ.

Leave A Reply

Your email address will not be published.