ನಿತ್ಯಭವಿಷ್ಯ : 05-05-2020

0

ಮೇಷರಾಶಿ
ಆರ್ಥಿಕವಾಗಿ ಸಮಸ್ಯೆಗಳ ಪರಿಹಾರ, ವೃತ್ತಿರಂಗದಲ್ಲಿ ಇಚ್ಛಿತ ನಿರ್ಧಾರ ಕೈಗೂಡುತ್ತದೆ, ದೇಹಾರೋಗ್ಯದಲ್ಲಿ ಆಗಾಗ ಸುಸ್ತು ಕಾಣಿಸಲಿದೆ. ಮನೆಯಲ್ಲಿ ಶುಭಮಂಗಲ ಕಾರ್ಯಗಳಿಗಾಗಿ ಹೆಚ್ಚಿನ ಪ್ರಯತ್ನ ಮಾಡಬೇಕಾಗುತ್ತದೆಸಾಮಾಜಿಕವಾಗಿ ಮನ್ನಣೆ, ವಾಹನ, ಯಂತ್ರೋಪಕರಣಗಳಿಂದ ಖರ್ಚು-ವೆಚ್ಚಗಳು ತೋರಿಬಂದಾವು. ಹೂಡಿಕೆಗಳಲ್ಲಿ ತುಸು ಚೇತರಿಕೆ. ಸಾಂಸಾರಿಕವಾಗಿ ಸಮಸ್ಯೆಗಳಿದ್ದರೂ ಹೊಂದಾಣಿಕೆ ಅಗತ್ಯ, ದಿನಾಂತ್ಯಕ್ಕೆ ಶುಭವಾರ್ತೆ.

ವೃಷಭರಾಶಿ
ವ್ಯಾಪಾರ, ಹಣಕಾಸು ವಿಚಾರದಲ್ಲಿ ಪ್ರಗತಿ, ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ನಿರೀಕ್ಷಿತ ಸ್ಥಾನ ಸಿಗಲಿದೆ. ವೃತ್ತಿರಂಗದಲ್ಲಿ ಕಾರ್ಯ ಒತ್ತಡಗಳಿರುತ್ತವೆ. ಆರ್ಥಿಕವಾಗಿ ಆಗಾಗ ಧನಾಗಮನದಿಂದ ಕಾರ್ಯಸಿದ್ಧಿಯಾಗುತ್ತದೆ. ಹೂಡಿಕೆಗಳಲ್ಲಿ ಚೇತರಿಕೆ, ಉದ್ಯೋಗದಲ್ಲಿ ಬದಲಾವಣೆ, ವಾಹನ, ಭೂ ಖರೀದಿ, ಮನೆ ನಿರ್ಮಾಣಕ್ಕೆ ಚಾಲನೆ, ಕುಟುಂಬದಲ್ಲಿ ಶುಭಮಂಗಲ ಕಾರ್ಯದಿಂದ ಸಂತಸ, ಇಚ್ಚಿತ ಕೆಲಸಗಳು ಕೈಗೂಡಲಿವೆ.

ಮಿಥುನರಾಶಿ
ಕಾರ್ಯಕ್ಷೇತ್ರದಿಂದ ಒತ್ತಡದಿಂದ ಮನೆಯಿಂದ ದೂರವಿಬೇಕಾಗುತ್ತದೆ. ಆದಾಯಕ್ಕೆ ಹೊಸಮಾರ್ಗಗಳು ಗೋಚರ. ಅನಾವಶ್ಯಕವಾಗಿ ಹಿರಿಯರೊಡನೆ ಮನಸ್ತಾಪ, ವೃತ್ತಿರಂಗದಲ್ಲಿ ಇಚ್ಛಿತ ನಿರ್ಧಾರ ಮುಂದಿನ ಭವಿಷ್ಯಕ್ಕೆ ಪೂರಕವಾಗಲಿದೆ. ಅಧಿಕಾರಿ ವರ್ಗದವರಿಂದ ನಿರೀಕ್ಷಿತ ಸಹಕಾರ, ಪ್ರೋತ್ಸಾಹ ಲಭಿಸಲಿದೆ. ಒಮ್ಮೊಮ್ಮೆ ಸಹೋದ್ಯೋಗಿಗಳ ವರ್ತನೆಯಿಂದ ಮಾನಸಿಕವಾಗಿ ಉದ್ವೇಗತರಲಿದೆ.

ಕಟಕರಾಶಿ
ಕಾರ್ಯದೊತ್ತಡದಿಂದ ಮಾನಸಿಕ ಅಶಾಂತಿ, ಉದ್ಯೋಗದಲ್ಲಿ ಇರುವವರಿಗೆ ಹೆಚ್ಚಿನ ಮುನ್ನಡೆ. ಯಾರೋ ಮಾಡಿದ ತಪ್ಪಿಗೆ ನೀವು ಗುರಿಯಾಗಬೇಕಾದೀತು. ಕ್ರೀಡಾಳುಗಳಿಗೆ ಉತ್ತಮ ಯಶಸ್ಸು, ಪ್ರತಿಷ್ಠರ ಸಮಾಗಮ. ಸ್ನೇಹಿತರಲ್ಲಿ ಕಲಹ, ಮನಸ್ತಾಪದ ಪ್ರಸಂಗ ತೋರಿ ಬಂದೀತು. ಆರೋಗ್ಯ ಭಯ ನಿವಾರಣೆಯಾಗಲಿದೆ. ಹಣಕಾಸಿನ ವಿಚಾರಣೆಯಲ್ಲಿ ವಿವಾದ, ವೃತ್ತಿರಂಗದಲ್ಲಿ ಅಧಿಕಾರಿ ವಲಯದಿಂದ ನಿರೀಕ್ಷಿತ ಸಹಕಾರ, ವಿದ್ಯಾರ್ಥಿಗಳಿಗೆ ಉದಾಸೀನತೆ.

ಸಿಂಹರಾಶಿ
ಶುಭಕಾರ್ಯಗಳಿಗೆ ಚಿಂತನೆ, ಹಿರಿಯರ ಸಹಕಾರದಿಂದ ಕಾರ್ಯಸಿದ್ದಿ. ಧನಾಗಮನವಿದ್ದರೂ ಸಂಗ್ರಹ ಅಗತ್ಯ. ಯೋಗ್ಯ ವಯಸ್ಕರಿಗೆ ಕಂಕಣಬಲದ ಪ್ರಸ್ತಾವ, ಧನಾರ್ಜನೆಯಲ್ಲಿ ಪ್ರಗತಿ, ಭೂ ನಿವೇಶನ, ಗೃಹ ನಿರ್ಮಾಣ ಕಾರ್ಯಗಳಿಗಾಗಿ ಓಡಾಟ, ದೈವಾನುಗ್ರಹವು ಉತ್ತಮವಿದ್ದರೂ ಅನಾವಶ್ಯಕ ಮಾನಸಿಕ ಭ್ರಮೆಗಳು ಕಾಡಲಿವೆ. ದುಂದುವೆಚ್ಚಾದಿಗಳ ಮೇಲೆ ಹತೋಟಿ ಅಗತ್ಯವಿರುತ್ತದೆ. ವಿದ್ಯಾರ್ಥಿಗಳಿಗೆ ಅಪವಾಧ.

ಕನ್ಯಾರಾಶಿ
ಆರ್ಥಿಕ ಅಡಚಣೆಗಳಿಗೆ ಕಾರಣವಾಗಲಿದೆ. ಸಾಂಸಾರಿಕ ಸಮಸ್ಯೆಗಳಿಂದಾಗಿ ಮಾನಸಿಕ ಕ್ಷೋಭೆ, ಎಲ್ಲದರಲ್ಲೂ ಹುಳುಕು ಕಂಡುಹಿಡಿಯುವ ನಿಮಗೆ ಸಮಾಧಾನ ಸಿಗಲಾರದು. .ಆರ್ಥಿಕ ವಿಚಾರದಲ್ಲಿ ಆಶಾದಾಯಕ ಬೆಳವಣಿಗೆ, ಉದ್ಯೋಗ ರಂಗದಲ್ಲಿ ಮೇಲಾಧಿಕಾರಿಗಳ ಅಸಮಾಧಾನ, ಕೌಟುಂಬಿಕ ಸಮಸ್ಯೆಗಳು ಪರಿಹಾರವಾಗಲಿದೆ. ಹಿತ ಶತ್ರುಗಳಿಂದ ವಿರೋಧ, ರಾಜಕಾರಣಿಗಳಿಗೆ ಆತಂಕ, ಮಕ್ಕಳ ಆರೋಗ್ಯ, ವಿದ್ಯಾಭ್ಯಾಸಗಳ ಬಗ್ಗೆ ಕಾಳಜಿ,

ತುಲಾರಾಶಿ
ಕಾರ್ಯ ಯೋಜನೆ ನಿಧಾನಗತಿಯಲ್ಲಿ ಸಾಗಲಿದೆ, ಸ್ಥಗಿತ ಯೋಜನೆಯೊಂದಕ್ಕೆ ಚಾಲನೆದೊರೆಯಲಿದೆ. ಕಾರ್ಮಿಕ ವರ್ಗದವರಿಗೆ ಆದಾಯವು ಹೆಚ್ಚಲಿದೆ. ಕಾರ್ಮಿಕರ ಅಲಕ್ಷತೆಯಿಂದ ಮಾಲಕ ವರ್ಗದವರಿಗೆ ನಷ್ಟ ಸಂಭವ, ಗೃಹದಲ್ಲಿ ತುಸು ನೆಮ್ಮದಿ, ಶ್ರೇಯಸ್ಸು ಉಂಟಾಗುವುದು. ಕಾರ್ಯ ಕ್ಷೇತ್ರದಲ್ಲಿ ಮನೋದೃಢತೆ, ದಿಟ್ಟತನದ ಪ್ರವೃತ್ತಿಯಿಂದ ಪ್ರಗತಿಯ ಮುನ್ನಡೆಯನ್ನು ಸಾಧಿಸಲಿದ್ದೀರಿ. ಗುರಿಯತ್ತ ನಡೆಯಲು ದೃಢ ಮನಸ್ಸು ಮಾಡಿರಿ.

ವೃಶ್ಚಿಕರಾಶಿ
ಧನಾರ್ಜನೆಯ ವಿಪುಲ ಅವಕಾಶಗಳು ಸದ್ಯದಲ್ಲೇ ತೋರಿ ಬರಲಿವೆ. ಪೂರ್ವನಿಯೋಜಿತ ಕೆಲಸಕಾರ್ಯಗಳ ಮುನ್ನಡೆಗಾಗಿ ನಡೆಸುವ ಪ್ರಯತ್ನಗಳು ಫ‌ಲ ನೀಡಲಿವೆ. ಬಂಧುಮಿತ್ರರ ಸಹಕಾರ ಇಚ್ಛಿತ ಕಾರ್ಯಗಳಿಗೆ ಅನುಕೂಲವಾದೀತು. ಸಾಮಾಜಿಕ ಕೆಲಸಕಾರ್ಯಗಳಿಗಾಗಿ ಒತ್ತಡ ತೋರಿಬರಲಿದೆ. ವೃತ್ತಿರಂಗದಲ್ಲಿ ಕಲಹ, ಮಾನಸಿಕ ನೆಮ್ಮದಿಗೆ ಭಂಗ, ವಿದ್ಯಾರ್ಥಿಗಳಿಗೆ ಹೆಚ್ಚಿನ ಪರಿಶ್ರಮದಿಂದ ಉತ್ತಮ ಫ‌ಲಿತಾಂಶವಿದೆ.

ಧನುರಾಶಿ
ಅರೋಗ್ಯದ ಬಗ್ಗೆ ಕಾಳಜಿವಹಿಸಿ, ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ಅಡಚಣೆ, ಶುಭಮಂಗಲ ಕಾರ್ಯಗಳಿಗೆ ವೆಚ್ಚ. ಪತ್ನಿಯ ಆರೋಗ್ಯದ ಬಗ್ಗೆ ಎಚ್ಚರ. ಹೊಂದಾಣಿಕೆಯಿಂದ ನೆಮ್ಮದಿ. ಆರ್ಥಿಕವಾಗಿ ಸಾಲ ಮರುಪಾವತಿಯ ಬಗ್ಗೆ ಒತ್ತಡ ತಂದೀತು. ಸಾಂಸಾರಿಕವಾಗಿ ವಿಶ್ರಾಂತಿಯು ಸುಖಾಪೇಕ್ಷೆಯಾದೀತು. ವ್ಯಾಪಾರ, ವ್ಯವಹಾರಗಳಲ್ಲಿ ಸ್ನೇಹಿತರ ಸಹಾಯಹಸ್ತ ನಿಮಗೆ ನೆರವಾಗಲಿದೆ. ಭೂ, ನಿವೇಶನ, ಗೃಹ ನಿರ್ಮಾಣ ಕಾರ್ಯಗಳು, ನೂತನ ವ್ಯಾಪಾರ, ವ್ಯವಹಾರಗಳಿಗೆ ಇದು ಸಕಾಲವಲ್ಲ.

ಮಕರರಾಶಿ
ವಿಶಿಷ್ಟ ಕಾರ್ಯವೈಖರಿಯಿಂದ ಆರ್ಥಿಕ ಅಭಿವೃದ್ದಿ, ಅಪೂರ್ವ ಅವಕಾಶವೊಂದು ಎದುರಾಗಲಿದೆ. ಅನಿರೀಕ್ಷಿತ ದೇವತಾದರ್ಶನ ಭಾಗ್ಯ ಕಂಡುಬಂದೀತು. ದಾನ ಧರ್ಮದ ಬಗ್ಗೆ ಯೋಚಿಸುವಂತಾದೀತು. ಕಾರ್ಯಕ್ಷೇತ್ರದಲ್ಲಿ ವಿರೋಧಿಗಳನ್ನು ಧೈರ್ಯವಾಗಿ ಎದುರಿಸಿರಿ. ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಇರಲಿ.ಸಾಂಸಾರಿಕ ಸಮಸ್ಯೆಯೊಂದು ಪರಿಹಾರವಾಗಲಿದೆ, ಅವಿವಾಹಿತರಿಗೆ ಕಂಕಣಬಲ, ಸಾಮಾಜಿಕ ಕಾರ್ಯಗಳಲ್ಲಿ ಯಶಸ್ಸು,

ಕುಂಭರಾಶಿ
ವೃತ್ತಿರಂಗದಲ್ಲಿ ಹೊಂದಾಣಿಕೆ ಅಗತ್ಯ. ಹಿರಿಯ ಮಾತಿಗೆ ತಾಳ್ಮೆಯಿಂದ ಸಹಕರಿಸಿ. ತಂದೆ ಮಕ್ಕಳೊಳಗೆ ವಿರಸ, ದೇಹಾರೋಗ್ಯದಲ್ಲಿ ಆಗಾಗ ಏರುಪೇರು, ಅವಿವಾಹಿತರಿಗೆ ಕಂಕಣಬಲ. ದೇಹಾರೋಗ್ಯದಲ್ಲಿ ಸುಧಾರಣೆ, ಅನಿರೀಕ್ಷಿತ ಅವಕಾಶವೊಂದು ಒದಗಿಬರಲಿದೆ. ಧನಾರ್ಜನೆಯಿಂದ ಕಾರ್ಯದಲ್ಲಿ ಯಶಸ್ಸು, ಶತ್ರುಭಯ ನಿವಾರಣೆ, ಉದ್ದೇಶಿತ ಕಾರ್ಯದಲ್ಲಿ ಸಿದ್ಧಿ. ಗೃಹ, ಭೂ, ವಾಹನಾದಿಗಳಿಗಾಗಿ ಧನವ್ಯಯ ವಾಗಲಿದೆ. ಆರೋಗ್ಯದಲ್ಲಿ ಏರುಪೇರು ಕಂಡುಬರಲಿದೆ.

ಮೀನರಾಶಿ
ಶುಭಮಂಗಲ ಕಾರ್ಯಕ್ಕಾಗಿ ಪ್ರಯಾಣ, ಮಕ್ಕಳೊಂದಿಗೆ ಜಾಗೃತೆವಹಿಸಿ. ವೃತ್ತಿರಂಗದಲ್ಲಿ ಹೊಂದಾಣಿಕೆ ಅಗತ್ಯ. ಗೃಹ ನಿರ್ಮಾಣ ಕಾರ್ಯಗಳಲ್ಲಿ ಯಶಸ್ಸು, ಕೃಷಿಕರಿಗೆ ಸಂತಸ ತರಲಿದೆ. ವೃತ್ತಿರಂಗದಲ್ಲಿ ಚಿಂತನೆಗೆ ಕಾರಣವಾಗಲಿದೆ, ಆರ್ಥಿಕ ವಿಚಾರಗಳಲ್ಲಿ ಪ್ರಗತಿ. ವ್ಯಾಪಾರಿ ವರ್ಗದವರಿಗೆ ಹಳೆಯ ವಸ್ತು, ಸರಕುಗಳ ವಿಕ್ರಯದ ಅವಕಾಶದಿಂದ ಹೆಚ್ಚಿನ ಲಾಭದಾಯಕ ಆದಾಯವಿರುತ್ತದೆ. ಆರೋಗ್ಯದ ವಿಚಾರದಲ್ಲಿ ಕಾಳಜಿ ಅಗತ್ಯ.

Leave A Reply

Your email address will not be published.