ನಿತ್ಯಭವಿಷ್ಯ : 02-06-2020

0

ಮೇಷರಾಶಿ
ಅನಿರೀಕ್ಷಿತ ಲಾಭ, ವಿದ್ಯಾರ್ಥಿಗಳಲ್ಲಿ ಪ್ರಗತಿ, ರಾಜ ವಿರೋಧ, ಸ್ತ್ರೀಯರಿಗೆ ಅನುಕೂಲ, ಮುಂಗೋಪ ಹೆಚ್ಚು, ತಾಳ್ಮೆಯಿಂದ ಕಾರ್ಯ ಯಶಸ್ಸು. ಕಾಲಮಿತಿಯಲ್ಲಿ ಕಾರ್ಯಪೂರೈಸಬೇಕಾದ ಒತ್ತಡ ತೋರಿ ಬರಲಿದೆ. ಕುಟುಂಬಸ್ಥರ ಹಿತಾಸಕ್ತಿಯನ್ನು ನೋಡಿಕೊಳ್ಳಿರಿ. ವೃತ್ತಿರಂಗದಲ್ಲಿ ಸ್ಪರ್ಧಾತ್ಮಕ ಪೈಪೋಟಿ ಇರುತ್ತದೆ. ಆರ್ಥಿಕ ಸುಧಾರಣೆ ಹಂತಹಂತವಾಗಿ ಕಂಡು ಬಂದೀತು.

ವೃಷಭರಾಶಿ
ದೂರವಾಗಿದ್ದ ಆಪ್ತರೊಂದಿಗೆ ಸೇರಿಕೊಳ್ಳುವ ಸಂಭ್ರಮ ಕಂಡು ಬರಲಿದೆ. ಗುರುಗಳಿಂದ ಹಿತನುಡಿ, ಆತ್ಮವಿಶ್ವಾಸದಿಂದ ಯಶಸ್ಸು, ಅನಾವಶ್ಯಕ ಮನಸ್ಸಿನಲ್ಲಿ ಗೊಂದಲ, ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ, ಹಣಕಾಸು ಪರಿಸ್ಥಿತಿ ಚೇತರಿಕೆ. ಕಾರ್ಯಕ್ಷೇತ್ರದಲ್ಲಿ ಹೊಸ ಅವಕಾಶ ಒದಗಿ ಬರಲಿದೆ. ಇದನ್ನು ಸದುಪಯೋಗಿಸಿಕೊಳ್ಳಿರಿ. ಆರೋಗ್ಯದಲ್ಲಿ ಹೆಚ್ಚಿನ ಗಮನಹರಿಸುವುದು ಅಗತ್ಯ.

ಮಿಥುನರಾಶಿ
ವಿದ್ಯಾರ್ಥಿಗಳು ನಿರುತ್ಸಾಹವನ್ನು ಹೊಂದಲಿದ್ದಾರೆ. ಉದ್ಯೋಗಸ್ಥರಿಗೆ ಉತ್ತಮ ಅವಕಾಶ, ಅಪವಾದ ನಿಂದನೆ, ಅವಮಾನ, ತೀರ್ಥಯಾತ್ರೆ ದರ್ಶನ, ಶತ್ರು ಧ್ವಂಸ, ಆರೋಗ್ಯದಲ್ಲಿ ಏರುಪೇರು. ಬಂಧುಗಳಿಂದ, ದಾಯಾದಿಗಳಿಂದ ಕಿರಿಕಿರಿ ತಪ್ಪಲಾರದು.ಕೌಟುಂಬಿಕ ಸಮಸ್ಯೆಗಳು ಅವರಿಂದ ಕಂಡು ಬರುವುದು.ನಿರುದ್ಯೋಗಿಗಳು ಬಂದ ಅವಕಾಶವನ್ನು ಸದುಪಯೋಗಿಸಿರಿ.

ಕಟಕರಾಶಿ
ಹೊಗಳಿಗೆ ಮಾತಿಗೆ ಮರುಳಾಗಬೇಡಿ, ಪುಣ್ಯಕ್ಷೇತ್ರ ದರ್ಶನ, ಮಾನಸಿಕ ನೆಮ್ಮದಿ, ರೋಗ ಬಾಧೆ, ನಾನಾ ವಿಚಾರಗಳಲ್ಲಿ ಆಸಕ್ತಿ.
ಮಹಿಳೆಯರಿಗೆ ಭವಿಷ್ಯದ ಕುರಿತು ಅನಿಶ್ಚಿತತೆ ಕಾಡಲಿದೆ. ಕೆಲವರ ಕುರಿತಂತೆ ನಿಮ್ಮ ಭಾವನೆಯು ಬದಲಾಗಲಿದೆ. ಯುವಕ ಯುವತಿಯರಿಗೆ ಹೊಸ ಪ್ರೀತಿ ಹುಟ್ಟಲಿದೆ. ಹಿರಿಯರ ಬೇಡಿಕೆಯನ್ನು ಈಡೇರಿಸಿರಿ.

ಸಿಂಹರಾಶಿ
ಕಾರ್ಯರಂಗದಲ್ಲಿ ಸಂಘರ್ಷದಿಂದ ದೂರವಿರಿ. ಸಾಂಸಾರಿಕವಾಗಿ ಅನೇಕ ರೀತಿಯಲ್ಲಿ ಉದ್ವೇಗ ಹಾಗೂ ದುಃಖ ಕಂಡು ಬಂದೀತು. ದಿನಸಿ ವ್ಯಾಪಾರಿಗಳಿಗೆ ಲಾಭ, ನೀವಾಡುವ ಮಾತಿನಿಂದ ಅನರ್ಥ, ಆಲಸ್ಯ ಮನೋಭಾವ, ಪರರ ಧನ ಪ್ರಾಪ್ತಿ, ಕೆಲಸ ಕಾರ್ಯಗಳಲ್ಲಿ ನಿಧಾನ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ. ಮನಸ್ಸನ್ನು ಸಿಮಿತದಲ್ಲಿಟ್ಟುಕೊಳ್ಳಿರಿ. ಆರೋಗ್ಯದ ಜಾಗ್ರತೆ ಮಾಡಿರಿ.

ಕನ್ಯಾರಾಶಿ
ಉದ್ಯೋಗದಲ್ಲಿ ಅಭಿವೃದ್ಧಿ ಕಂಡು ಬರಲಿದೆ. ಆದರೂ ಹಿತಶತ್ರುಗಳ ಬಾಧೆಯು ನಿಮ್ಮನ್ನು ಕಾಡಲಿದೆ. ಆರೋಗ್ಯದ ಬಗ್ಗೆ ಜಾಗ್ರತೆ ಮಾಡುವುದು ಅಗತ್ಯವಿದೆ. ಮಾನಸಿಕ ನೆಮ್ಮದಿ, ಉತ್ತಮ ಬುದ್ಧಿಶಕ್ತಿ, ಮಕ್ಕಳ ಬಗ್ಗೆ ಕಾಳಜಿ, ಶ್ರಮಕ್ಕೆ ತಕ್ಕ ಫಲ, ವಿವಾದಗಳಿಂದ ದೂರವಿರಿ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ. ನೀವು ಮಾಡುವ ಕೆಟ್ಟ ಸಂಸರ್ಗದಿಂದ ಫಲ ಪಡೆಯಲಿದ್ದೀರಿ.

ತುಲಾರಾಶಿ
ಕೆಲ ಕಾರ್ಯಗಳು ಅಡೆತಡೆಗಳಿಂದಲೇ ಮುಂದುವರಿಯಲಿದೆ. ಪರಿಶ್ರಮಕ್ಕೆ ತಕ್ಕ ವರಮಾನ, ಪಾಪ ಕಾರ್ಯದಲ್ಲಿ ಆಸಕ್ತಿ, ಅಪಕೀರ್ತಿ-ಅಗೌರವ, ಋಣ ವಿಮೋಚನೆ, ನಂಬಿದ ಜನರಿಂದ ಮೋಸ. ರಾಜಕೀಯ ವರ್ಗದವರಿಗೆ ಸ್ಥಾನಮಾನಕ್ಕಾಗಿ ಹೋರಾಟ ಮಾಡುವ ಪ್ರಸಂಗ ಬಂದೀತು. ಮದುವೆಯ ಬಗ್ಗೆ ಮಾತುಕತೆ ಮುನ್ನಡೆ ತರುವುದು.

ವೃಶ್ಚಿಕರಾಶಿ
ಉದ್ಯೋಗದಲ್ಲಿ ಸ್ವಲ್ಪ ಕಿರಿಕಿರಿ ಕಂಡು ಬಂದೀತು. ದೃಷ್ಠಿ ದೋಷದಿಂದ ತೊಂದರೆ, ಶರೀರದಲ್ಲಿ ನೋವು, ಕೀಲು ನೋವು ಹೆಚ್ಚಾಗುವುದು, ಮಾತೃವಿನಿಂದ ಶುಭ ಆರೈಕೆ, ಧನ ಸಹಾಯ. ಪತ್ನಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬರಲಿದೆ. ಆದರೂ ಖರ್ಚುವೆಚ್ಚಗಳಲ್ಲಿ ನಿಯಂತ್ರಣವಿರಲಿ. ಹಿರಿಯರೊಡನೆ ಮನಸ್ತಾಪಕ್ಕೆ ಕಾರಣರಾಗದಂತೆ ಜಾಗ್ರತೆ ಇರಲಿ.

ಧನುರಾಶಿ
ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದ ಸಾಧ್ಯತೆ ತಂದೀತು. ನಿರುದ್ಯೋಗಿಗಳಿಗೆ ಅವಕಾಶವು ದೊರಕುವುದು. ಕಾರ್ಯ ಸಾಧನೆ, ಆರೋಗ್ಯದಲ್ಲಿ ಚೇತರಿಕೆ, ಗೆಳೆಯರಿಂದ ಸಹಾಯ, ದ್ರವ್ಯ ಲಾಭ, ಮನೆಯಲ್ಲಿ ಸಂತಸ, ಮಾನಸಿಕ ನೆಮ್ಮದಿ.
ಸಿಕ್ಕಿದರಲ್ಲೆ ಸಮಾಧಾನಪಟ್ಟುಕೊಳ್ಳಿರಿ. ಸಾಂಸಾರಿಕವಾಗಿ ವಿಲಾಸೀ ಜೀವನಕ್ಕಾಗಿ ಹೆಚ್ಚಿನ ಧನವ್ಯಯವಾಗಲಿದೆ.

ಮಕರರಾಶಿ
ಆರೋಗ್ಯವು ಕೂಡ ಸುಧಾರಿಸಲಿದೆ. ಸಾಮಾಜಿಕವಾಗಿ ಉತ್ತಮ ಸ್ಥಾನಮಾನಾದಿಗಳು ಇದ್ದರೂ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಮಾಡುವ ಕೆಲಸದಲ್ಲಿ ಹಿಂಜರಿಕೆ, ಸಾಲ ಬಾಧೆ, ಅಪವಾದ ನಿಂದನೆ, ಹಿರಿಯರಿಗೆ ದೀರ್ಘಕಾಲದ ಅಸೌಖ್ಯ ಉಂಟಾಗುವ ಸಾಧ್ಯತೆ ಇದೆ.

ಕುಂಭರಾಶಿ
ರಾಜಕೀಯ ವ್ಯಕ್ತಿಗಳಿಗೆ ಇದು ಹೆಮ್ಮೆಯ ಕಾಲವಾಗಿದೆ. ಪಾಲುದಾರಿಕೆಯಿಂದ ಲಾಭ, ದೈವಾನುಗ್ರಹದಿಂದ ಅನುಕೂಲ, ಕೆಲಸ ಕಾರ್ಯಗಳಲ್ಲಿ ಜಯ, ವಿದ್ಯಾರ್ಥಿಗಳಲ್ಲಿ ಮುನ್ನಡೆ.ದುಡುಕು ಹಾಗೂ ಸಿಡುಕನ್ನು ಕಮ್ಮಿ ಮಾಡಿಕೊಳ್ಳಿರಿ. ಮಕ್ಕಳೊಂದಿಗೆ ವ್ಯವಹರಿಸುವಾಗ ಆದಷ್ಟು ಜಾಗ್ರತೆ ಮಾಡಿರಿ. ಅನಾವಶ್ಯಕ ಋಣಾತ್ಮಕ ಚಿಂತೆ ಮಾಡದಿರಿ.

ಮೀನರಾಶಿ
ಯಾವುದೇ ಕಾರ್ಯಗಳು ನಿಮಗೆ ಅನುಕೂಲ ರೀತಿಯಲ್ಲಿ ತೋರಿ ಬಂದರೂ ದುಡುಕದೆ ಮುನ್ನಡೆಯಿರಿ. ಸ್ವಂತ ಉದ್ಯಮಸ್ಥರಿಗೆ ಲಾಭ, ಬಂಧುಗಳಿಂದ ವಿರೋಧ, ಮಾನಸಿಕ ವ್ಯಥೆ, ಹಣಕಾಸು ವಿಚಾರದಲ್ಲಿ ಎಚ್ಚರಿಕೆ, ವ್ಯವಹಾರಿಕ ಒಪ್ಪಂದಗಳನ್ನು ಮುಂದೂಡುವುದು ಉತ್ತಮ. ಅನಾವಶ್ಯಕ ಋಣಾತ್ಮಕ ಚಿಂತನೆಗಳಿಗೆ ಗುರಿಯಾಗದೆ ದೃಢ ನಿರ್ಧಾರಕ್ಕೆ ಒತ್ತು ನೀಡಿದರೆ ಕಾರ್ಯಸಾಧನೆ ಆಗಲಿದೆ.

Leave A Reply

Your email address will not be published.