ನಿತ್ಯಭವಿಷ್ಯ : 31-05-2020

0

ಮೇಷರಾಶಿ
ವ್ಯಾಪಾರ ವ್ಯವಹಾರದಲ್ಲಿ ಅನಿರೀಕ್ಷಿತ ಲಾಭ, ವೃತ್ತಿ ರಂಗದಲ್ಲಿ ಇಚ್ಚಿತ ನಿರ್ಧಾರದಿಂದ ಗೆಲುವು, ಹೂಡಿಕೆಗಳಿಂದ ತುಸು ಚೇತರಿಕೆ, ಸಾಂಸಾರಿಕವಾಗಿ ಸಮಸ್ಯೆಗಳಿದ್ದರು ಹೊಂದಾಣಿಕೆ ಅಗತ್ಯ. ವಿದ್ಯಾರ್ಥಿಗಳಿಗೆ ಯಶಸ್ಸು, ಕುಟುಂಬದಲ್ಲಿ ಅಶಾಂತಿ ವಾತಾವರಣ, ಮನಸ್ಸಿನ ಮೇಲೆ ದುಷ್ಪರಿಣಾಮ, ಶ್ರಮಕ್ಕೆ ತಕ್ಕ ಫಲ ಲಭಿಸುವುದು, ಸಕಾಲಕ್ಕೆ ಭೋಜನ ಲಭಿಸುವುದಿಲ್ಲ, ಕೆಲಸ ಕಾರ್ಯಗಳಲ್ಲಿ ಒತ್ತಡ, ನಾನಾ ರೀತಿಯ ಆಲೋಚನೆ.

ವೃಷಭರಾಶಿ
ವಾಹನ ಖರೀದಿ, ಮನೆ ನಿರ್ಮಾಣ ಕಾರ್ಯ, ಕುಟುಂಬದಲ್ಲಿ ನೆಮ್ಮದಿ, ಮೇಲಾಧಿಕಾರಿಗಳಿಂದ ತೊಂದರೆ, ಚಂಚಲ ಮನಸ್ಸು, ವ್ಯಾಪಾರ ಉದ್ಯೋಗದಲ್ಲಿ ಚೇತರಿಕೆ. ಶುಭಮಂಗಲ ಕಾರ್ಯಗಳಿಂದ ನೆಮ್ಮದಿ, ಕುಟುಂಬಸ್ಥರ ಸಮ್ಮಿಲನದಿಂದ ಇಚ್ಚಿತ ಕಾರ್ಯ ನೆರವೇರಲಿದೆ. ಅಧಿಕವಾದ ಖರ್ಚು, ಆರೋಗ್ಯದಲ್ಲಿ ಸುಧಾರಣೆ, ಹಿತ ಶತ್ರುಗಳ ಬಾಧೆ, ಉದ್ಯೋಗದಲ್ಲಿ ಬಡ್ತಿ.

ಮಿಥುನರಾಶಿ
ದಾನ ಧರ್ಮದಲ್ಲಿ ಆಸಕ್ತಿ, ಆರೋಗ್ಯದಲ್ಲಿ ಸಮಸ್ಯೆ, ಯತ್ನ ಕಾರ್ಯದಲ್ಲಿ ವಿಳಂಬ, ಕೆಲವು ವಿಚಾರಗಳಲ್ಲಿ ಮನಃಸ್ತಾಪ, ಮನಸ್ಸಿಗೆ ಅಸಮಾಧಾನ, ಕಾರ್ಯದೊತ್ತಡ, ಮನೆಯಿಂದ ದೂರ ಉಳಿಯ ಬೇಕಾಗುತ್ತದೆ. ಸಹೋದ್ಯೋಗಿಯ ವರ್ತನೆಯಿಂದ ಮಾನಸಿಕ ಕಿರಿಕಿರಿ, ಧನಾರ್ಜನೆಯಿದ್ದರೂ ಅಧಿಕ ಖರ್ಚು, ಸಮಾಧಾನದಿಂದ ಮುಂದುವರಿಯಿರಿ. ಮಾತಿನ ಮೇಲೆ ಹಿಡಿತ ಅಗತ್ಯ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ, ವಿದ್ಯಾರ್ಥಿಗಳಿಗೆ ಅಲ್ಪ ಅನುಕೂಲ.

ಕಟಕರಾಶಿ
ಹಣಕಾಸು ಲಾಭ, ಕಾರ್ಯ ಒತ್ತಡದಿಂದ ಮಾನಸಿಕ ಹಿಂದೆ. ಸ್ನೇಹಿತರಲ್ಲಿ ಕಲಹ, ಆರೋಗ್ಯ ಭಯ, ಹಣಕಾಸಿನ ವಿಚಾರದಲ್ಲಿ ವಿವಾದ. ವೃತ್ತಿರಂಗದಲ್ಲಿ ಅಧಿಕಾರಿ ವಲಯದ ನಿರೀಕ್ಷಿತ ಸಹಕಾರ. ಅಧಿಕವಾದ ಖರ್ಚು, ಅಪರಿಚಿತರಿಂದ ತೊಂದರೆ, ಋಣ ಬಾಧೆ, ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ, ನಿಂದನೆ, ವ್ಯವಹಾರದಲ್ಲಿ ಅನುಕೂಲ, ನೆಮ್ಮದಿ ಬಯಸುವಿರಿ.

ಸಿಂಹರಾಶಿ
ಈ ವಾರ ತಾಳ್ಮೆಯಿಂದ ಯಶಸ್ಸು, ಸ್ನೇಹಿತರಿಂದ ತೊಂದರೆ, ಆತ್ಮೀಯರಲ್ಲಿ ಮನಃಸ್ತಾಪ, ಶುಭ ಕಾರ್ಯಗಳ ಚಿಂತನೆ ಕಾರ್ಯರೂಪಕ್ಕೆ ಬರಲಿದೆ. ಧಾರ್ಮಿಕ ಗುರುಗಳ ಭೇಟಿಯಿಂದ ಮಾನಸಿಕ ನೆಮ್ಮದಿ. ವಿದ್ಯಾರ್ಥಿಗಳಿಗೆ ಅಧಿಕ ಪ್ರಯತ್ನ ಬಲ ಅಗತ್ಯ, ಆರೋಗ್ಯದಲ್ಲಿ ಏರುಪೇರು, ಮಾತಿನ ಚಕಮಕಿ, ಅನಗತ್ಯ ವಾಗ್ವಾದ, ದಂಡ ಕಟ್ಟುವ ಸಾಧ್ಯತೆ, ಹಣಕಾಸು ಸಮಸ್ಯೆ, ನೆಮ್ಮದಿ ಇಲ್ಲದ ಜೀವನ.

ಕನ್ಯಾರಾಶಿ
ಆರ್ಥಿಕವಾಗಿ ಆಶಾದಾಯಕ ಬೆಳವಣಿಗೆ ನಡೆಯಲಿದೆ. ಮೇಲಾಧಿಕಾರಿಗಳ ಬಿಗು ವಾತಾವರಣ ಮನಸಿಗೆ ನೋವು. ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ, ಮಕ್ಕಳ ಬಗ್ಗೆ ಅಧಿಕ ಚಿಂತೆ, ಮನಸ್ಸಿನಲ್ಲಿ ನಾನಾ ಆಲೋಚನೆ, ದಾಯಾದಿಗಳ ಕಲಹ, ವಿವಾದಗಳಿಂದ ದೂರವಿರಿ, ಹಣಕಾಸು ಪರಿಸ್ಥಿತಿ ಚೇತರಿಕೆ, ಗೃಹ ನಿರ್ಮಾಣಕ್ಕೆ ಮನಸ್ಸು, ಉದ್ಯೋಗದಲ್ಲಿ ಕಿರಿಕಿರಿ. ವಿದ್ಯಾರ್ಥಿಗಳಿಗೆ ಹೆಚ್ಚಿನ ಕಾಳಜಿ ಅಗತ್ಯ.

ತುಲಾರಾಶಿ
ಚಿನ್ನಾಭರಣ ಯೋಗ, ಕಾರ್ಯ ಯೋಜನೆಗಳು ತುಸು ನಿಧಾನಗತಿಯಲ್ಲಿ ಸಾಗಲಿವೆ. ಸ್ಥಗಿತ ಯೋಜನೆಯೊಂದರ ಅನುಷ್ಟಾನಾರ್ಥ ಕಾರ್ಯಚಟುವಟಿಕೆ ಸಫಲವಾಗಲಿದೆ. ದ್ರವ್ಯ ಲಾಭ, ಹಿತೈಷಿಗಳಿಂದ ನೆರವು, ಮನೆಯಲ್ಲಿದ್ದ ತುಸು ನೆಮ್ಮದಿಯ ವಾತಾವರಣ, ದಿಟ್ಟ ಕಾರ್ಯ ಪ್ರವೃತ್ತಿಯಿಂದ ಮುನ್ನಡೆ ಸಾಧಿಸಲಿದ್ದಿರಿ. ಕೆಲಸ ಕಾರ್ಯ ನಿಮಿತ್ತ ಓಡಾಟ, ಉದ್ಯೋಗದಲ್ಲಿ ಒತ್ತಡ, ಯತ್ನ ಕಾರ್ಯದಲ್ಲಿ ಅಲ್ಪ ಯಶಸ್ಸು,

ವೃಶ್ಚಿಕರಾಶಿ
ಆದಾಯ ಕಡಿಮೆ, ಸಂಕಷ್ಟಗಳು ಹೆಚ್ಚಾಗುವುದು, ಧನಾರ್ಜನೆಗೆ ನಾನಾ ಅವಕಾಶಗಳು ತೋರಿಬರಲಿದೆ. ಉದರ ಬಾಧೆ, ಶತ್ರುಗಳ ನಾಶ, ಅನಾವಶ್ಯಕ ಮಾತಿನಿಂದ ಕಲಹ, ಸಾಮಾಜಿಕ ಕೆಲಸ ಕಾರ್ಯಗಳಿಗಾಗಿ ಒತ್ತಡ ತೋರಿಬರಲಿದೆ. ಮಿತ್ರರಿಂದ ವಿರೋಧ, ಶೀತ ಸಂಬಂಧಿತ ಸಮಸ್ಯೆ, ಗಂಟಲು ಕಿರಿಕಿರಿ-ಉಷ್ಣ ಬಾಧೆ, ನೆಮ್ಮದಿ ಇಲ್ಲದ ಜೀವನ. ವಿದ್ಯಾರ್ಥಿಗಳಿಗೆ ಹೆಚ್ಚಿನ ಪರಿಶ್ರಮದಿಂದ ಉತ್ತಮ ಫಲಿತಾಂಶ.

ಧನಸ್ಸುರಾಶಿ
ಸ್ನೇಹಿತರಿಂದ ಸಹಾಯ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಕೆಲಸದಲ್ಲಿ ಅಭಿವೃದ್ಧಿ, ಅತಿಯಾದ ನಿದ್ರೆ, ಒತ್ತಡದ ನಡುವಲ್ಲೇ ಕಾರ್ಯನಿರ್ವಹಣೆ, ಸಾಲ ಮರುಪಾವತಿಗಾಗಿ ಒತ್ತಡ, ನಂಬಿದ ಜನರಿಂದ ಅಶಾಂತಿ, ಅಕಾಲ ಭೋಜನ, ಆಕಸ್ಮಿಕ ಖರ್ಚು ಹೆಚ್ಚು, ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಹೊಸ ವ್ಯಾಪಾರ ವ್ಯವಹಾರ ಆರಂಭಿಸಲು ಸಕಾಲವಲ್ಲ. ಕಠಿಣ ಪರಿಶ್ರಮದಿಂದ ಕಾರ್ಯಸಾಧನೆಯಾಗಲಿದೆ.

ಮಕರರಾಶಿ
ಸ್ತ್ರೀ ಜೊತೆಗಿನ ವ್ಯವಹಾರದಲ್ಲಿ ಎಚ್ಚರ, ಅಪೂರ್ವ ಅವಕಾಶವೊಂದು ಎದುರಾಗುವ ಸೂಚನೆ ಲಭಿಸಲಿದೆ. ಅಧಿಕಾರಿಗಳಲ್ಲಿ ಕಲಹ, ವ್ಯರ್ಥ ಧನಹಾನಿ, ಆಲಸ್ಯ ಮನೋಭಾವ, ಧಾರ್ಮಿಕ ಕಾರ್ಯಗಳಿಂದ ಮಾನಸಿಕ ನೆಮ್ಮದಿ. ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗುವಿರಿ. ಪತಿ-ಪತ್ನಿಯರಲ್ಲಿ ಕಲಹ, ಆಕಸ್ಮಿಕ ಖರ್ಚು, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ, ಹಣಕಾಸು ಸಂಕಷ್ಟ.

ಕುಂಭರಾಶಿ
ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮನಸ್ಸಿನಲ್ಲಿ ಭಯ, ವೃತ್ತಿರಂಗದಲ್ಲಿ ಹೊಂದಾಣಿಕೆ ಅಗತ್ಯ, ಆತಂಕ, ಅಗ್ನಿ ಭಯ, ಶತ್ರುಗಳ ಬಾಧೆ, ಸುಳ್ಳು ಹೇಳುವ ಪರಿಸ್ಥಿತಿ ನಿರ್ಮಾಣ, ನಿರೀಕ್ಷಿತ ಕಾರ್ಯಗಳಲ್ಲಿ ಗೆಲುವು, ಗೃಹ, ಭೂ ವಾಹನಾದಿಗಳಿಗಾಗಿ ಧನವ್ಯಯವಾಗಲಿದೆ. ಆರೋಗ್ಯದಲ್ಲಿ ಏರುಪೇರಾಗಲಿದೆ. ಅನ್ಯ ಜನರಲ್ಲಿ ವೈಮನಸ್ಸು, ಕೆಲಸ ಕಾರ್ಯಗಳಲ್ಲಿ ಹಿನ್ನಡೆ.

ಮೀನರಾಶಿ
ಮಾತೃವಿನಿಂದ ಲಾಭ, ಪ್ರೀತಿ ಸಮಾಗಮ, ವಿದ್ಯಾರ್ಥಿಗಳಲ್ಲಿ ಪ್ರಗತಿ, ಶುಭಮಂಗಲ ಕಾರ್ಯಗಳಿಗಾಗಿ ಪ್ರಯಾಣ ಅನಿವಾರ್ಯವಾದೀತು, ಆರ್ಥಿಕ ವಿಚಾರದಲ್ಲಿ ಪ್ರಗತಿ, ಆರೋಗ್ಯ ವಿಚಾರದಲ್ಲಿ ಕಾಳಜಿ ಅಗತ್ಯ, ದ್ರವ ರೂಪದ ವಸ್ತುಗಳಿಂದ ಲಾಭ, ಹಣಕಾಸು ಲಾಭ, ಆರೋಗ್ಯದಲ್ಲಿ ವ್ಯತ್ಯಾಸ, ಶರೀರದಲ್ಲಿ ಆತಂಕ, ವಾರಾಂತ್ಯದಲ್ಲಿ ಅಶುಭ ಫಲ.

Leave A Reply

Your email address will not be published.